Vaishno Devi ಕ್ಷೇತ್ರದಲ್ಲಿ ಇನ್ನು ಮುಂದೆ ಭಕ್ತರಿಗೆ ಸಸಿ ಪ್ರಸಾದ: ಅಂಶುಲ್
Team Udayavani, Jun 6, 2024, 12:11 AM IST
ಜಮ್ಮು: ದೇವಸ್ಥಾನಗಳಲ್ಲಿ ಸಿಹಿ ಪದಾರ್ಥ ಇಲ್ಲವೇ ಅನ್ನವನ್ನು ಪ್ರಸಾದವಾಗಿ ನೀಡುವುದು ಸಾಮಾನ್ಯ. ಆದರೆ, ಜಮ್ಮುವಿನ ಪ್ರಸಿದ್ಧ ತೀರ್ಥಕ್ಷೇತ್ರ ವೈಷ್ಣೋ ದೇವಿ ಮಂದಿರದಲ್ಲಿ ಇನ್ನು ಮುಂದೆ ಭಕ್ತರಿಗೆ ಸಸಿಗಳನ್ನು ಪ್ರಸಾದವಾಗಿ ನೀಡಲಾಗುತ್ತದೆ.
ಈ ಕುರಿತು ತೀರ್ಥ ಕ್ಷೇತ್ರದ ಆಡಳಿತ ಮಂಡಳಿ ನಿರ್ಧರಿಸಿದ್ದು, ಮಂಡಳಿ ಆರಂಭಿಸಿದ ವೈಷ್ಣವಿ ವಾಟಿಕಾ ನರ್ಸರಿಯಿಂದ ಭಕ್ತರಿಗೆ ಸಸಿಗಳನ್ನು ಪ್ರಸಾದವಾಗಿ ನೀಡಲಾಗುತ್ತದೆ. ಜೂನ್ 5 ವಿಶ್ವ ಪರಿಸರ ದಿನದಂದು ಕಾತ್ರಾ ಬೇಸ್ ಕ್ಯಾಂಪ್ನಲ್ಲಿ ನರ್ಸರಿ ಉದ್ಘಾಟನೆಗೊಂಡಿದೆ.
ಈ ನೂತನ ನರ್ಸರಿಯಲ್ಲಿ 40 ವಿವಿಧ ತಳಿಯ ಸಸ್ಯಗಳಿದ್ದು, ಪರಿಸರ ಜಾಗೃತಿಗಾಗಿ ಭಕ್ತರಿಗೆ ಸಸಿಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ ಎಂದು ಮಂಡಳಿಯ ಅಧಿಕಾರಿ ಅಂಶುಲ್ ಗಾರ್ಗ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.