Kushtagi: ಸಿಡಿಲು ಬಡಿದು ಹೊಲದಲ್ಲಿದ್ದ ಮಹಿಳೆ ಮೃತ್ಯು
Team Udayavani, Jun 6, 2024, 8:19 PM IST
ಕುಷ್ಟಗಿ:ತಾಲೂಕಿನ ಜೆ.ರಾಂಪೂರ ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ದುರ್ಮರಣಕ್ಕೀಡಾದ ಘಟನೆ ಗುರುವಾರ ಸಂಜೆ ನಡೆದಿದೆ. ರತ್ಮಮ್ಮ ದೊಡ್ಡಪ್ಪ ಓತಗೇರಿ (42) ಮೃತ ದುರ್ದೈವಿ.
ರತ್ಮಮ್ಮ ತನ್ನ ಅಕ್ಕ ದೇವಮ್ಮ ಅವರೊಂದಿಗೆ ಜಮೀನಿನ ದೇವರಿಗೆ ಕಾಯಿ ಒಡೆಯಲೆಂದು ಹೋಗಿದ್ದು, ಪೂಜೆ ಸಲ್ಲಿಸಿದ ಬಳಿಕ ದೇವಮ್ಮ ಮಳೆ ಮುನ್ಸೂಚನೆಯಿಂದ ಬೇಗನೆ ಮನೆಗೆ ಬಂದಿದ್ದರು.
ರತ್ನಮ್ಮ ಜಮೀನಿನಲ್ಲೇ ಉಳಿದಿದ್ದು ಮಳೆಯಿಂದ ರಕ್ಷಣೆಗೆಂದು ಮರವೊಂದರ ಬುಡದಲ್ಲಿ ನಿಂತಿದ್ದಾಗ ಸಿಡಿಲೆರಗಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಅಕಾಲಿಕ ಸಾವಿನಿಂದ ಕುಟುಂಬ ವರ್ಗ ಕಂಗಾಲಾಗಿದೆ.
ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ದೌಡಾಯಿಸಿದ್ದು, ತಾವರಗೇರಾ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಆರಂಭಿಕ ಮುಂಗಾರು ಸಂದರ್ಭದಲ್ಲಿ ಇದು ಮೂರನೇ ಪ್ರಕರಣ ಇದಾಗಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ ರವಿ ಅಂಗಡಿ ಭೇಟಿ ನೀಡಿ ಮೃತಳ ಕುಟುಂಬಕ್ಕೆ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಲ್ಲಿ 5 ಲಕ್ಷ ರೂ. ಪರಿಹಾರದ ಚಕ್ ಹಸ್ತಾಂತರಿಸಿದರು. ತಾವರಗೇರಾ ಪಿಎಸೈ ಸುಜತಾ ನಾಯಕ ಸೇರಿದಂತೆ ಕಂದಾಯ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ಕಂದಾಯ ಉಪ ವಿಭಾಗ ಗಂಗಾವತಿ ಬದಲಿಗೆ ಕುಷ್ಟಗಿ ಸೂಕ್ತ: ದೊಡ್ಡನಗೌಡ ಪಾಟೀಲ
Tragedy: ಗಣೇಶನ ಮೂರ್ತಿ ವಿಸರ್ಜಿಸಿ ಬರುವಾಗ ರಸ್ತೆ ಅಪಘಾತ… ಯುವಕ ಮೃತ್ಯು
Gangavathi: ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಮಾರಾಮಾರಿ… ಓರ್ವನಿಗೆ ಚಾಕು ಇರಿತ
“ಸ್ಮಾರ್ಟ್’ ಆದ ಲಿಂಗದಹಳ್ಳಿ ಸರ್ಕಾರಿ ಶಾಲೆ”- ವಿದ್ಯಾರ್ಥಿಗಳ ಸಂಖ್ಯೆ 400ಕ್ಕೆ ಏರಿಕೆ
D. K. Shivakumar: ನೀರು ಕಡಿಮೆಯಾದಾಗ ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರೆಸ್ಟ್ಗೇಟ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
BJP Meeting: ದಾವಣಗೆರೆಯಲ್ಲಿ ಯತ್ನಾಳ್, ರಮೇಶ್ ಜಾರಕಿಹೊಳಿ ಇಂದು ಮಹತ್ವದ ಸಭೆ
Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ
SAFF U-17 Championship: ಭಾರತ-ಬಾಂಗ್ಲಾ ಫೈನಲ್
Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್
ICC Women’s T20 World Cup: ವನಿತಾ ಟಿ20 ವಿಶ್ವಕಪ್; ಅಂಪಾಯರ್ಸ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.