Fraud Case ಸಂಸ್ಕರಿಸಿದ ಗೇರು ಬೀಜ ಖರೀದಿ ಹಣ ನೀಡದೆ ವಂಚನೆ
Team Udayavani, Jun 7, 2024, 9:58 PM IST
ಸಿದ್ದಾಪುರ: ಅಂಪಾರು ಗ್ರಾಮದ ಶ್ರೀರಾಮ್ ಕ್ಯಾಶ್ಯೂಸ್ ಸಂಸ್ಥೆಯಲ್ಲಿ ಸಂಸ್ಕರಿಸಿದ ಗೇರು ಬೀಜ ಖರೀದಿಸಿದ ಹಣ ನೀಡದೆ ವಂಚಿಸಿದ ಮುಂಬಯಿ ಮಹಾವೀರ ಟ್ರೇಡಿಂಗ್ ಕಂಪೆನಿಯ ಬಗ್ಗೆ ಶ್ರೀರಾಮ್ ಕ್ಯಾಶ್ಯೂಸ್ ಸಂಸ್ಥೆಯ ಆಡಳಿತ ಪಾಲುದಾರೆ ದಿವ್ಯಾ ಡಿ. ಪ್ರಭು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮುಂಬಯಿಯಮಹಾವೀರ ಟ್ರೇಡಿಂಗ್ ಕಂಪೆನಿಯ ಆರೋಪಿಗಳಾದ ಭಾರತಿ ನೀಲೇಶ್ ಸಾವ್ಲಾ, ಅವರ ಪತಿ ನೀಲೇಶ್ ನಿರಂಜನ್ ಸಾವ್ಲಾ ಮತ್ತು ಸಂಬಂಧಿ ಪಿಯುಷ್ ಗೋಗ್ರಿ ಅವರು ಅಂಪಾರು ಶ್ರೀರಾಮ್ ಕ್ಯಾಶ್ಯೂಸ್ ಸಂಸ್ಥೆಯಲ್ಲಿ ಸಂಸ್ಕರಿಸಿದ ಗೇರು ಬೀಜ ಖರೀದಿ ಮಾಡಿದ ಹಣ 42,22,890 ರೂ. ನೀಡದೆ ವಂಚಿಸಿದ್ದಾರೆ.
ಆರೋಪಿಗಳು 27,76,830 ರೂ. ಮತ್ತು 15 ಲಕ್ಷ ರೂ. ಮೊತ್ತದ ಚೆಕ್ ನೀಡಿದ್ದರೂ, ಖಾತೆಯಲ್ಲಿ ಹಣ ಇಲ್ಲದೆ ನೀಡಿದ ಚೆಕ್ ಬೌನ್ಸ್ ಆಗಿದೆ. ಮಂಗಳೂರಿನ ನೀತೀಶ್ ಕೆ. ಟಕ್ಕರ್ ಅವರು ದಲ್ಲಾಳಿಯಾಗಿ ವ್ಯವಹಾರ ಕುದುರಿಸಿದ್ದರು ಎಂದು ದಿವ್ಯಾ ಡಿ. ಪ್ರಭು ಅವರು ದೂರಿನಲ್ಲಿ ತಿಳಿಸಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೇರು ಬೀಜ ಖರೀದಿಸಿ 1.71 ಕೋಟಿ ರೂ. ಹಣ ನೀಡದೆ ವಂಚನೆ
ಸಿದ್ದಾಪುರ: ಬೆಳ್ವೆ ಗ್ರಾಮದ ವನಸಿರಿ ಕ್ಯಾಶ್ಯೂಸ್ ಸಂಸ್ಥೆಯಲ್ಲಿ ಸಂಸ್ಕರಿಸಿದ ಗೇರು ಬೀಜ ಖರೀದಿಸಿದ ಹಣ ನೀಡದೆ ವಂಚಿಸಿದ ಮುಂಬಯಿಯ ಮಹಾವೀರ ಟ್ರೇಡಿಂಗ್ ಕಂಪೆನಿಯ ಬಗ್ಗೆ ವನಸಿರಿ ಕ್ಯಾಶ್ಯೂಸ್ ಸಂಸ್ಥೆಯ ಆಡಳಿತ ಪಾಲುದಾರ ನರೇಶ್ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮುಂಬಯಿಯ ಮಹಾವೀರ ಟ್ರೇಡಿಂಗ್ ಕಂಪೆನಿಯ ಆರೋಪಿಗಳಾದ ಭಾರತಿ ನೀಲೇಶ್ ಸಾವ್ಲಾ, ಅವರ ಪತಿ ನೀಲೇಶ್ ನಿರಂಜನ್ ಸಾವ್ಲಾ ಮತ್ತು ಸಂಬಂಧಿ ಪಿಯುಷ್ ಗೋಗ್ರಿ ಅವರು ಬೆಳ್ವೆ ಗ್ರಾಮದ ವನಸಿರಿ ಕ್ಯಾಶ್ಯೂಸ್ ಸಂಸ್ಥೆಯಲ್ಲಿ ಸಂಸ್ಕರಿಸಿದ ಗೇರು ಬೀಜ ಖರೀದಿ ಮಾಡಿದ ಹಣ 1,71,41,948 ರೂ. ನೀಡದೆ ವಂಚಿಸಿದ್ದಾರೆ. ಮಂಗಳೂರಿನ ನೀತೀಶ್ ಕೆ. ಟಕ್ಕರ್ ಅವರು ದಲ್ಲಾಳಿಯಾಗಿ ವ್ಯವಹಾರ ಕುದುರಿಸಿದ್ದರು ಎಂದು ನರೇಶ್ ಶೆಟ್ಟಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ರಸ್ತೆ ಮಾರ್ಜಿನ್ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.
Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ
Udupi: ತಾಯಿ ಮರಣ ಪ್ರಮಾಣ ಶೂನ್ಯಗೊಳಿಸಲು ಒತ್ತು ನೀಡಿ
Udupi: ಗೀತಾರ್ಥ ಚಿಂತನೆ-48: ಕರ್ಮ ಬಿಡುವಂತಿಲ್ಲ, ಫಲ ಬಿಡಬಹುದು
Fishing: ಬುಲ್ಟ್ರಾಲ್ ನಿಷೇಧ ಕಟ್ಟುನಿಟ್ಟು ಮಾಡಿ: ಸಚಿವರಿಗೆ ಮನವಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.