ಚಿತ್ರರಂಗ ಬಿಡುವುದಿಲ್ಲ, ಇದು ಸಣ್ಣ ವಿರಾಮವಷ್ಟೇ: ನಿಖಿಲ್
Team Udayavani, Jun 8, 2024, 7:36 PM IST
ಬೆಂಗಳೂರು: ನಟ ನಿಖಿಲ್ ಕುಮಾರಸ್ವಾಮಿ ಅವರು ಶುಕ್ರವಾರ ಮಾತನಾಡುತ್ತಾ, ನಾನು ಇನ್ನು ಮುಂದೆ ಸಿನೆಮಾ ಮಾಡುವುದಿಲ್ಲ. ಇನ್ನೇನಿದ್ದರೂ ಪೂರ್ಣಕಾಲಿಕ ರಾಜಕಾರಣಿ ಎಂಬಂತೆ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದವು. ಈಗ ಸ್ಪಷ್ಟನೆ ನೀಡಿರುವ ನಿಖಿಲ್, “ನಾನು ಚಿತ್ರರಂಗದಿಂದ ದೂರ ಹೋಗುವುದಿಲ್ಲ. ಇದು ಸಣ್ಣ ವಿರಾಮವಷ್ಟೇ’ ಎಂದಿದ್ದಾರೆ.
ಶನಿವಾರ ಮಾತನಾಡಿದ ಅವರು, ರಾಜಕಾರಣದ ಹಿನ್ನೆಲೆಯಿಂದ ನಾನು ಬಂದಿದ್ದರೂ ನನಗೆ ಜಾಸ್ತಿ ಪ್ರೀತಿ ಕೊಟ್ಟದ್ದು ಕನ್ನಡ ಚಿತ್ರರಂಗದ ಅಭಿಮಾನಿಗಳು. ನಾನು ಮಾಡಿದ್ದು ಕೆಲವೇ ಸಿನೆಮಾ ಆದರೂ ಜನರು ಪ್ರೋತ್ಸಾಹಿಸಿದ್ದಾರೆ. ಆದರೆ ಈಗ ಪಕ್ಷ ಸಂಘಟನೆ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಬೇಕಿದೆ. ಯಾವ ಹಳ್ಳಿಗೆ ಹೋದರೂ ನಟ ಎಂದೇ ನನ್ನನ್ನು ಗುರುತಿಸುತ್ತಾರೆ. ಸದ್ಯ ಪಕ್ಷ ಸಂಘಟನೆಗಾಗಿ ಸಣ್ಣ ವಿರಾಮವಷ್ಟೇ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.