![akhilesh](https://www.udayavani.com/wp-content/uploads/2024/07/akhilesh-415x291.jpg)
ನಾನು ಅಪಹರಣ ಮಾಡಿಸಿಲ್ಲ, ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ: ಭವಾನಿ ರೇವಣ್ಣ
Team Udayavani, Jun 8, 2024, 8:07 PM IST
![ನಾನು ಅಪಹರಣ ಮಾಡಿಸಿಲ್ಲ, ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ: ಭವಾನಿ ರೇವಣ್ಣ](https://www.udayavani.com/wp-content/uploads/2024/06/17-620x372.jpg)
ಬೆಂಗಳೂರು: ಕೆ.ಆರ್.ನಗರದ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ಮುಂದೆ ತನಿಖೆಗಾಗಿ ಹಾಜರಾಗಿರುವ ಭವಾನಿ ರೇವಣ್ಣ ಅವರು, “ನಾನು ಯಾರನ್ನೂ ಅಪಹರಣ ಮಾಡಿಸಿಲ್ಲ. ಎಲ್ಲರೂ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆಂದು ತಿಳಿದು ಬಂದಿದೆ.
ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿ ಭವಾನಿ ಮಹತ್ವದ ಮಾಹಿತಿಯನ್ನೇನೂ ನೀಡಿಲ್ಲ. ಅಪಹರಣದ ಬಗ್ಗೆ ತನಗೇನೂ ಗೊತ್ತಿಲ್ಲ ಎಂದಷ್ಟೇ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರು ಆರೋಪಿಗಳ ನಡುವಿನ ಆಡಿಯೊ ಸಂಭಾಷಣೆಯನ್ನು ಕೇಳಿಸಿ ವಿಚಾರಿಸಿದಾಗ, “ನಾನು ಯಾರನ್ನೂ ಕರೆದುಕೊಂಡು ಬರಲು ಹೇಳಿಲ್ಲ. ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ನನ್ನ ಮೇಲೆ ಬಂದಿರುವ ಆರೋಪಗಳೆಲ್ಲ ಸುಳ್ಳು’ ಎಂದೇ ವಾದಿಸಿದ್ದಾರೆ ಎನ್ನಲಾಗಿದೆ. ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಸಂತ್ರಸ್ತೆ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದುದು ನಿಜ. ಆದರೆ, ಅಪಹರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಭವಾನಿ ಹೇಳಿದ್ದಾರೆ ಎನ್ನಲಾಗಿದೆ.
ಆಡಿಯೋ ಮುಂದಿಟ್ಟು ಪ್ರಶ್ನಿಸಿದ ಎಸ್ಐಟಿ :
“ಇನ್ನು 150-200 ರೂಪಾಯಿಯ ಸೀರೆ ಕೊಡಿಸಿದರಾಯಿತು, ಕರೆದುಕೊಂಡು ಬಾ. ಅಥವಾ 2 ವರ್ಷ ಶಿಕ್ಷೆ ಆಗುತ್ತದೆ ಅಂತ ಹೇಳು ಬರುತ್ತಾಳೆ’ ಎಂದು ಚಾಲಕನೊಂದಿಗೆ ಭವಾನಿ ಮಾತನಾಡಿದ್ದಾರೆ ಎನ್ನಲಾದ ಆಡಿಯೊವೊಂದನ್ನು ಸಾಕ್ಷ್ಯವಾಗಿಟ್ಟುಕೊಂಡು ಎಸ್ಐಟಿ ಪ್ರಶ್ನಿಸಿತ್ತು ಎನ್ನಲಾಗಿದೆ. ಭವಾನಿ ಹೇಳಿಕೆ ದಾಖಲಿಸಿಕೊಂಡಿರುವ ಎಸ್ಐಟಿಯು ಅಗತ್ಯಬಿದ್ದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಅದಕ್ಕೆ ಭವಾನಿ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
![akhilesh](https://www.udayavani.com/wp-content/uploads/2024/07/akhilesh-415x291.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![CID ಸೂರಜ್ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ](https://www.udayavani.com/wp-content/uploads/2024/06/suraj-revanna-5-150x85.jpg)
CID ಸೂರಜ್ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ
![“ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ](https://www.udayavani.com/wp-content/uploads/2024/06/Parameshwar-7-150x96.jpg)
Minister Parameshwara; “ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ
![Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ](https://www.udayavani.com/wp-content/uploads/2024/06/SHIVA-150x90.jpg)
Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ
![1-asdsad](https://www.udayavani.com/wp-content/uploads/2024/06/1-asdsad-6-150x92.jpg)
Election; ಧಾರವಾಡ ಕೆಎಂಎಫ್ ಗೆ 9 ಮಂದಿ ನಿರ್ದೇಶಕರ ಆಯ್ಕೆ
![prahlad-joshi](https://www.udayavani.com/wp-content/uploads/2024/06/prahlad-joshi-2-150x86.jpg)
Siddaramaiah ಸರಕಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ: ಸಚಿವ ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.