![ARMY,-Navy-Chiefs](https://www.udayavani.com/wp-content/uploads/2024/06/ARMY-Navy-Chiefs-415x249.jpg)
Mangaluru: ಲಾರಿಗೆ ಕಾರು ಢಿಕ್ಕಿ; ಕಾರು ಚಾಲಕ ಸಾವು
Team Udayavani, Jun 8, 2024, 8:37 PM IST
![Mangaluru: ಲಾರಿಗೆ ಕಾರು ಢಿಕ್ಕಿ; ಕಾರು ಚಾಲಕ ಸಾವು](https://www.udayavani.com/wp-content/uploads/2024/06/23-620x372.jpg)
ಮಂಗಳೂರು: ಲಾರಿಗೆ ಕಾರು ಢಿಕ್ಕಿಯಾಗಿ ಕಾರು ಚಾಲಕ ಮೃತಪಟ್ಟ ಘಟನೆ ನಗರದ ಕೆಪಿಟಿ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಅಪರಾಹ್ನ ಸಂಭವಿಸಿದೆ.
ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ಅಬ್ದುಲ್ ಗಫೂರ್ (72) ಮೃತಪಟ್ಟವರು. ಇವರು ಮಂಗಳೂರು ಕಡೆಗೆ ಕಾರಿನಲ್ಲಿ ಬರುತ್ತಿದ್ದಾಗ ಕೆಪಿಟಿ ಜಂಕ್ಷನ್ ಬಳಿ ಎದುರಿನಲ್ಲಿ ಹೋಗುತ್ತಿದ್ದ ಗೂಡ್ಸ್ ಲಾರಿಯ ಹಿಂದಿನ ಎಡಬದಿಗೆ ಕಾರು ಢಿಕ್ಕಿ ಹೊಡೆಯಿತು. ಪ್ರಜ್ಞಾಹೀನರಾಗಿದ್ದ ಅಬ್ದುಲ್ ಗಫೂರ್ ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಕಾರಿನಲ್ಲಿ ಸಹ ಪ್ರಯಾಣಿಕರಾಗಿದ್ದ ನೀಲಮ್ಮ ಅವರಿಗೆ ಸಣ್ಣಪುಟ್ಟ ಸ್ವರೂಪದ ಗಾಯಗಳಾಗಿವೆ. ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
![ARMY,-Navy-Chiefs](https://www.udayavani.com/wp-content/uploads/2024/06/ARMY-Navy-Chiefs-415x249.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.