Modi ಪದಗ್ರಹಣಕ್ಕೆ ವಿಶ್ವ ನಾಯಕರ ಹಾಜರಿ
ದಿಲ್ಲಿಗೆ ಆಗಮಿಸಿದ ಬಾಂಗ್ಲಾ ಪ್ರಧಾನಿ, ಸೀಷೆಲ್ಸ್ ಉಪಾಧ್ಯಕ್ಷ
Team Udayavani, Jun 8, 2024, 10:00 PM IST
ನವದಹೆಲಿ: ನರೇಂದ್ರ ಮೋದಿ ಪ್ರಮಾಣ ವಚನಕ್ಕೆ ಭಾರತದ ನೆರೆಯ ರಾಷ್ಟ್ರಗಳ ಸರ್ಕಾರಿ ಮುಖ್ಯಸ್ಥರು ಆಗಮಿಸುತ್ತಿದ್ದಾರೆ. “ನೆರೆ-ಹೊರೆ ಮೊದಲು’ ನೀತಿ ಅನ್ವಯ ಭಾರತದ ನೆರೆ ಹೊರೆಯ ರಾಷ್ಟ್ರಗಳಾದ ಲಂಕಾ, ಭೂತಾನ್, ನೇಪಾಳ, ಬಾಂಗ್ಲಾದೇಶದ ನಾಯಕರಿಗೆ ವಿಶೇಷ ಆಹ್ವಾನ ನೀಡಲಾಗಿದೆ.
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹಾಗೂ ಸೀಶೆಲ್ಸ್ ಉಪಾಧ್ಯಕ್ಷ ಅಹ್ಮದ್ ಅಫಿಫ್ ಅವರು ಶನಿವಾರವೇ ಭಾರತಕ್ಕೆ ಆಗಮಿಸಿದ್ದಾರೆ. ಉಳಿದ ನಾಯಕರನ್ನು ಸ್ವಾಗತಿಸಲು ರಾಜಧಾನಿಯಲ್ಲಿ ಸಿದ್ಧತೆಗಳನ್ನು ನಡೆಸಲಾಗಿದೆ.
ಪ್ರಮುಖ ಆಹ್ವಾನಿತರು
-ರಾನಿಲ್ ವಿಕ್ರಮ್ ಸಿಂಘೆ -ಶ್ರೀಲಂಕಾ ಅಧ್ಯಕ್ಷ
– ಮೊಹಮ್ಮದ್ ಮುಯಿಝು- ಮಾಲ್ಡೀವ್ಸ್ ಅಧ್ಯಕ್ಷ
– ಪುಷ್ಪಕಮಲ್ ದಹಲ್ ಪ್ರಚಂಡ- ನೇಪಾಳ ಪ್ರಧಾನಿ
– ತ್ಶೆರಿಂಗ್ ಟೋಬ್ಗೇ- ಭೂತಾನ್ ಪ್ರಧಾನಿ
– ಪ್ರವೀಂದ್ ಕುಮಾರ್ ಜಗನ್ನಾಥ್- ಮಾರಿಷಸ್ ಪ್ರಧಾನಿ
8000 ಮಂದಿಗೆ ಆಹ್ವಾನ
ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಮುಖರು, ನೈರ್ಮಲ್ಯ ಕಾರ್ಮಿಕರು, ಸೆಂಟ್ರಲ್ ವಿಸ್ತಾ ಯೋಜನೆಯ ಕಾರ್ಮಿಕರು, ಸಿಲ್ಕ್ಯಾರಾ ರ್ಯಾಟ್ಹೋಲ್-ಮೈನರ್ಸ್ ಸೇರಿದಂತೆ ಭಾರತದ ಎಲ್ಲಾ ಕ್ಷೇತ್ರಗಳನ್ನು ಪ್ರತಿನಿಧಿಸುವ 8000 ಮಂದಿಗೆ ಆಹ್ವಾನ ನೀಡಲಾಗಿದೆ. ಈ ಪೈಕಿ ವಂದೇ ಭಾರತ್ ಮೆಟ್ರೋದ ಮೊದಲ ಮಹಿಳಾ ಚಾಲಕಿ ಸುರೇಖಾ ಯಾದವ್ ಪ್ರಮುಖರಾಗಿದ್ದಾರೆ. ಇದಲ್ಲದೆ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಕಾಪಾಡಿದ ರ್ಯಾಟ್ ಹೋನ್ ಮೈನರ್ಸ್ಗಳನ್ನೂ ಪ್ರಮಾಣ ವಚನಕ್ಕೆ ಆಹ್ವಾನಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ
Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ
Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ
Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ
Bengaluru; ಚುನಾವಣಾ ಬಾಂಡ್ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ಐಆರ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.