T20 World Cup: ಲಂಕಾ ವಿರುದ್ಧ ತಿಣುಕಾಡಿ ಗೆದ್ದ ಬಾಂಗ್ಲಾ
Team Udayavani, Jun 8, 2024, 10:05 PM IST
ಡಲ್ಲಾಸ್: ಸಣ್ಣ ಮೊತ್ತದ ರೋಚಕ ಹಣಾಹಣಿಯೊಂದರಲ್ಲಿ ಬಾಂಗ್ಲಾದೇಶ 2 ವಿಕೆಟ್ಗಳಿಂದ ಶ್ರೀಲಂಕಾವನ್ನು ಮಣಿಸಿದೆ. ಡಿ’ ವಿಭಾಗದ ಎರಡೂ ಪಂದ್ಯಗಳನ್ನು ಸೋತ ಶ್ರೀಲಂಕಾ ಪಾತಾಳಕ್ಕೆ ಕುಸಿದಿದೆ.
ಯುವ ಲೆಗ್ ಸ್ಪಿನ್ನರ್ ರಿಶಾದ್ ಹುಸೇನ್, ಮಧ್ಯಮ ವೇಗಿಗಳಾದ ಮುಸ್ತಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್ ಸೇರಿಕೊಂಡು ಲಂಕೆಯನ್ನು 124ಕ್ಕೆ (9 ವಿಕೆಟ್) ನಿಯಂತ್ರಿಸಿದರು. ಜವಾಬಿತ್ತ ಬಾಂಗ್ಲಾ ಸಾಕಷ್ಟು ಪರದಾಟ ನಡೆಸಿ 19 ಓವರ್ಗಳಲ್ಲಿ 8 ವಿಕೆಟಿಗೆ 125 ರನ್ ಮಾಡಿತು.
ಲಂಕೆಯ ಆರಂಭ ಉತ್ತಮ ಮಟ್ಟದಲ್ಲಿತ್ತು. 9ನೇ ಓವರ್ ವೇಳೆ 2 ವಿಕೆಟಿಗೆ 70 ರನ್ ಮಾಡಿ ಸವಾಲಿನ ಮೊತ್ತದತ್ತ ಮುಖ ಮಾಡಿತ್ತು. ಆದರೆ 54 ರನ್ ಅಂತರದಲ್ಲಿ 7 ವಿಕೆಟ್ ಕಳೆದುಕೊಂಡಿತು. ಪತುಮ್ ನಿಸ್ಸಂಕ 47, ಧನಂಜಯ ಡಿ ಸಿಲ್ವ 21 ರನ್ ಮಾಡಿದರು.
ರಿಷಾದ್ ಅವರ ಗೂಗ್ಲಿ ಹಾಗೂ ಲೆಗ್ ಬ್ರೇಕ್ ಎಸೆತಗಳು, ಮುಸ್ತಫಿಜುರ್ ಅವರ ನಿಧಾನ ಗತಿಯ ಆಫ್ ಕಟರ್ ನಿಭಾಯಿಸುವಲ್ಲಿ ಲಂಕಾ ಆಟಗಾರರು ಸಂಪೂರ್ಣ ವಿಫಲರಾದರು. 22ಕ್ಕೆ 3 ವಿಕೆಟ್ ಕಿತ್ತ ರಿಶಾದ್ಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.
ಬಾಂಗ್ಲಾ 28ಕ್ಕೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತು. ಆದರೆ ಲಿಟನ್ ದಾಸ್ (36), ತೌಹಿದ್ ಹೃದಯ್ (40) 63 ರನ್ ಜತೆಯಾಟ ನಡೆಸಿ ತಂಡವನ್ನು ಮೇಲೆತ್ತಿದರು.
ಈ ಜೋಡಿ ಬೇರ್ಪಟ್ಟ ಬಳಿಕ ಲಂಕಾ ಬೌಲರ್ ಮತ್ತೆ ಮೇಲುಗೈ ಸಾಧಿಸಿದರು. 113ಕ್ಕೆ 8 ವಿಕೆಟ್ ಬಿತ್ತು. ಪಂದ್ಯದ ಕೌತುಕ ಇನ್ನಷ್ಟು ಹೆಚ್ಚಿತು. ಆದರೆ ಮಹಮದುಲ್ಲ (ಅಜೇಯ 16) ಬಾಂಗ್ಲಾವನ್ನು ದಡ ಸೇರಿಸುವಲ್ಲಿ ಯಶಸ್ವಿಯಾದರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-9 ವಿಕೆಟಿಗೆ 124 (ನಿಸ್ಸಂಕ 47, ಧನಂಜಯ 21, ಅಸಲಂಕ 19, ಮುಸ್ತಫಿಜುರ್ 17ಕ್ಕೆ 3, ರಿಶಾದ್ 22ಕ್ಕೆ 3, ಟಸ್ಕಿನ್ 25ಕ್ಕೆ 2). ಬಾಂಗ್ಲಾದೇಶ-19 ಓವರ್ಗಳಲ್ಲಿ 8 ವಿಕೆಟಿಗೆ 125 (ಹೃದಯ್ 40, ದಾಸ್ 36, ಮಹಮದುಲ್ಲ ಔಟಾಗದೆ 16, ತುಷಾರ 18ಕ್ಕೆ 4, ಹಸರಂಗ 32ಕ್ಕೆ 2).
ಪಂದ್ಯಶ್ರೇಷ್ಠ: ರಿಶಾದ್ ಹುಸೇನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.