Gokarna;ಗಂಗಾವಳಿ ಸೇತುವೆ ಕೂಡು ರಸ್ತೆಗೆ ಹಾಕಲಾದ ಮಣ್ಣು ಕುಸಿತ: ಆತಂಕ


Team Udayavani, Jun 9, 2024, 7:17 PM IST

1-sadsad

ಗೋಕರ್ಣ : ಇಲಿಯ ಸಮೀಪದ ಗಂಗಾವಳಿ – ಮಂಜಗುಣಿ ಸೇತುವೆಯ ಗಂಗಾವಳಿ ಕೂಡುರಸ್ತೆಗೆ ಹಾಕಲಾದ ಮಣ್ಣು ಭಾನುವಾರ ಕುಸಿದಿದ್ದು, ದೊಡ್ಡ ವಾಹನ ಸಂಚರಿಸಲಾಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಮಂಜಗುಣಿ – ಗಂಗಾವಳಿ ನಡುವಿನ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರು, ಎರಡು ಕಡೆಯು ಕೂಡ ರಸ್ತೆ ನಿರ್ಮಿಸಲಿಲ್ಲ. ಇದರಿಂದ ಆರು ವರ್ಷಗಳಿಂದ ಜನರು ಪರಿತಪಿಸುವಂಥಾಗಿತ್ತು. ಸಾರ್ವಜನಿಕರ ಮತ್ತು ಸ್ಥಳೀಯರ ಒತ್ತಾಯದ ಮೇರೆಗೆ ಮಳೆಗಾಲ ಸಮೀಪಿಸುತ್ತಿದ್ದಂತೆ ರಸ್ತೆಯ ಎರಡು ಕಡೆಗಳಲ್ಲಿಯೂ ಮಣ್ಣು ಹಾಕಿ ತಾತ್ಕಾಲಿಕವಾಗಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಆದರೆ ಭಾನುವಾರ ಗಂಗಾವಳಿ ಭಾಗದ ಸೇತುವೆ ಕೂಡುರಸ್ತೆ ಕುಸಿದಿದ್ದು, ಯಾವುದೇ ಸಂದರ್ಭದಲ್ಲಿ ಹಾನಿ ಉಂಟಾಗುವ ಸಾಧ್ಯತೆ ಇದೆ.

ಇಲ್ಲಿ ವಾಹನ ಸಂಚಾರ ನಡೆಯುತ್ತಿದೆ ಎಂದು ಗೊತ್ತಿದ್ದರೂ ಕೂಡ ಗುತ್ತಿಗೆ ಪಡೆದ ಡಿಆರ್‌ಎನ್ ಕಂಪನಿಯವರು ಆಗಮಿಸಿ ಕೇವಲ ಮಧ್ಯದಲ್ಲಿ ಮಾತ್ರ ದ್ವಿಚಕ್ರ ವಾಹನ ಹಾಗೂ ಸಣ್ಣ ವಾಹನ ಸಂಚಾರಿಕ್ಕೆ ಅವಕಾಶ ಮಾಡಿ ದೊಡ್ಡ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಾರೆ.

ಗಂಗಾವಳಿಯಲ್ಲಿ ನಿರ್ಮಿಸಲಾಗಿದ್ದ ಪಂಡರ್ ಪಾಸ್ ಗೆ ಮಣ್ಣು ತುಂಬಲಾಗಿತ್ತು. ಆದರೆ ನೀರು ಹಾಕಿ ಅದನ್ನು ಸರಿ ಮಾಡದೆ ಕೇವಲ ಮಣ್ಣನ್ನು ಹಾಕಿ ಸಂಚಾರಿಕ್ಕೆ ಬಿಟ್ಟಿರುವುದರಿಂದ ಈಗ ಮಳೆ ಆರಂಭವಾಗುತ್ತಿದ್ದಂತೆ ಅದು ಕುಸಿಯಲು ಪ್ರಮುಖ ಕಾರಣವಾಗಿದೆ. ಹೀಗಾಗಿ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ಮುಂದಾಗುವ ಅನಾಹುತವನ್ನು ತಪ್ಪಿಸಬೇಕಾಗಿದೆ. ಇಲ್ಲದಿದ್ದರೆ ಈಗಿರುವ ಮಣ್ಣು ಕೂಡ ಯಾವುದೇ ಹಂತದಲ್ಲಿ ಕುಸಿಯುವ ಸಾಧ್ಯತೆ ಇದೆ. ಒಂದೊಮ್ಮೆ ಹಾಗೆ ಕುಸಿದ ಸಮಯದಲ್ಲಿ ವಾಹನಗಳಿದ್ದರೆ ಪ್ರಾಣಹಾನಿಯಾಗುವ ಸಾಧ್ಯತೆ ಇದೆ. ಆದರೆ ಗುತ್ತಿಗೆ ಪಡೆದ ಕಂಪನಿಯವರು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಸ್ಥಳೀಯರು ಹಾಗೂ ವಾಹನ ಸಂಚಾರ ಮಾಡುವವರು ಇಲ್ಲಿ ಪ್ರಯಾಣಿಸಲು ಭಯಗೊಂಡಿದ್ದು, ತ್ವರಿತ ಗತಿಯಲ್ಲಿ ಈ ಕೂಡುರಸ್ತೆ ಸರಿಪಡಿಸಬೇಕಾಗಿದೆ.

”ಮಳೆಗಾಲ ಆರಂಭದಲ್ಲಿಯೇ ರಸ್ತೆಗೆ ಹಾಕಲಾದ ಮಣ್ಣು ಕುಸಿಯಲಾಂಭಿಸಿದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಪ್ರಣಹಾನಿಯಾಗುವ ಸಾಧ್ಯತೆಯಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ, ತಾಲೂಕು ಆಡಳಿತ, ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು. ಒಂದೊಮ್ಮೆ ಯಾರಿಗಾದರೂ ತೊಂದರೆ ಉಂಟಾದರೆ ಅದಕ್ಕೆ ಇಲಾಖೆ ಹೊಣೆಯಾಗಲಿದೆ.”

-ಸದಾನಂದ ಎಸ್ ನಾಯ್ಕ ಅಧ್ಯಕ್ಷರು, ಶ್ರೀ ಅರುಣೋದಯ ಯುವಕ ಸಂಘ ಗಂಗಾವಳಿ

ಟಾಪ್ ನ್ಯೂಸ್

leopard

leopard: ಮೂಲ್ಕಿ ಕೊಯ್ನಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?

yathanal-jarakiholi

BJP Meeting: ದಾವಣಗೆರೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಇಂದು ಮಹತ್ವದ ಸಭೆ

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-dandeli

Dandeli: ಕಾಳಿ ನದಿಗೆ ಜಿಗಿದ ಮಹಿಳೆಯ ಮೃತದೇಹ ಪತ್ತೆ

7

Joida: ಬಸ್ ನಿಲ್ದಾಣದಲ್ಲಿ ಚಾಲಕ, ನಿರ್ವಾಹಕನಿಂದ ಪ್ರಯಾಣಿಕನಿಗೆ ಹಲ್ಲೆ

6

Dandeli: ಗಣೇಶನಗರದಲ್ಲಿ ವಿವಾಹಿತ ಮಹಿಳೆ ನಾಪತ್ತೆ: ದೂರು ದಾಖಲು

Bheemanna-Naik

Sirsi: ಪಾಶ್ಚಾತ್ಯ ಅಡಿಕೆ ಆಮದು ನಿರ್ಬಂಧಕ್ಕೆ ಸಂಸದರು ಧ್ವನಿ ಎತ್ತಲಿ: ಶಾಸಕ ಭೀಮಣ್ಣ‌

Dandeli: ಬಸ್ ನಿಲ್ದಾಣದಲ್ಲಿ ತಂಗಿರುವ ಒಂಟಿ ಮಹಿಳೆ… ವಾರಿಸುದಾರರ ಪತ್ತೆಗೆ ಮನವಿ

Dandeli: ಬಸ್ ನಿಲ್ದಾಣದಲ್ಲಿ ತಂಗಿರುವ ಒಂಟಿ ಮಹಿಳೆ… ವಾರಿಸುದಾರರ ಪತ್ತೆಗೆ ಮನವಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

leopard

leopard: ಮೂಲ್ಕಿ ಕೊಯ್ನಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?

yathanal-jarakiholi

BJP Meeting: ದಾವಣಗೆರೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಇಂದು ಮಹತ್ವದ ಸಭೆ

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.