Bengaluru: ವಾಟ್ಸಾಪ್ ಚಾಟ್ನಲ್ಲಿ ಡಿಯರ್ ಸಂದೇಶ; ಪತಿ ಬೈದಿದ್ದಕ್ಕೆ ಪತ್ನಿ ಕಾಣೆ
Team Udayavani, Jun 10, 2024, 11:48 AM IST
ಬೆಂಗಳೂರು: ಮೊಬೈಲ್ ವಾಟ್ಸ್ ಆ್ಯಪ್ ಚಾಟಿಂಗ್ನಲ್ಲಿ ಗುಡ್ ಮಾರ್ನಿಂಗ್ ಡಿಯರ್ ಎಂಬ ಸಂದೇಶದ ವಿಚಾರಕ್ಕೆ ದಂಪತಿ ನಡುವೆ ಗಲಾಟೆಯಾಗಿದ್ದು, ಪತ್ನಿ ಮನೆ ಬಿಟ್ಟು ಹೋಗಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಹಾಲಕ್ಷ್ಮೀ ಲೇಔಟ್ನವ್ವಿ ಜೂನ್ 4ರಂದು ಘಟನೆ ನಡೆದಿದ್ದು, ಮನೆ ಬಿಟ್ಟು ಹೋಗಿರುವ 35 ವರ್ಷದ ಪತ್ನಿ ಯನ್ನು ಹುಡುಕಿ ಕೊಡುವಂತೆ 43 ವರ್ಷದ ಪತಿ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ಪತಿ ಜೂ.4ರಂದು ಬೆಳಗ್ಗೆ 10.30ಕ್ಕೆ ಮನೆಯಲ್ಲಿ ತಿಂಡಿ ತಿನ್ನುತ್ತಿದ್ದರು. ಈ ವೇಳೆ ಪತ್ನಿಯ ಮೊಬೈಲ್ಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸ್ಆ್ಯಪ್ ಸಂದೇಶ ಬಂದಿದ್ದು, ಈ ವೇಳೆ ವಾಟ್ಸ್ಆ್ಯಪ್ ಚಾಟ್ನಲ್ಲಿ ಆ ವ್ಯಕ್ತಿಗೆ ಪತ್ನಿ ಗುಡ್ ಮಾರ್ನಿಂಗ್ ಡಿಯರ್ ಎಂಬ ಸಂದೇಶ ಕಳುಹಿಸಿರುವುದು ಕಂಡು ಬಂದಿದೆ. ಅದನ್ನು ಗಮನಿಸಿದ ಪತಿ, ಪತ್ನಿಯನ್ನು ಕುರಿತು ನಗುತ್ತಲೇ ಈ ರೀತಿ ಸಂದೇಶ ಏಕೆ ಮಾಡುತ್ತೀಯಾ? ಸರ್ ಅಥವಾ ಅಣ್ಣ ಎಂದು ಪ್ರತಿಕ್ರಿಯೆ ನೀಡುವಂತೆ ಸಲಹೆ ನೀಡಿದ್ದಾರೆ.
ಅದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಕೆಲಸದಾಕೆಗೆ ಊಟ ಕೊಡಲು ಹೇಳಿ ಹೋದ ಪತ್ನಿ! ಆ ನಂತರ ದೂರುದಾರ ಪತಿ ಪತ್ನಿಗೆ ಬೇಜಾರು ಮಾಡಿಕೊಳ್ಳಬೇಡ. ಯೋಚಿಸು ಎಂದು ಹೇಳಿ, ಬೆಡ್ ರೂಮ್ಗೆ ಹೋಗಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಅಡುಗೆ ಕೆಲಸದ ಮಹಿಳೆ ಬಂದು, ಬೆಡ್ ರೂಮ್ ಬಾಗಿಲು ತಟ್ಟಿದ್ದಾರೆ. ಬಾಗಿಲು ತೆರೆದು ಏನೆಂದು ಪ್ರಶ್ನೆ ಮಾಡಿದಾಗ, ಅಕ್ಕ ನಿಮ್ಮಿಬ್ಬರಿಗೂ ಊಟ ಕೊಡಲು ಹೇಳಿ ಹೋಗಿದ್ದಾರೆ ಎಂದಿದ್ದಾರೆ. ಎಲ್ಲಿಗೆ ಹೋದಳು? ಎಂದು ಕೇಳಿದಾಗ, ನನಗೆ ಗೊತ್ತಿಲ್ಲ ಎಂದು ಮನೆಗೆಲಸದ ಮಹಿಳೆ ಹೇಳಿರುವುದಾಗಿ ದೂರುದಾರ ಪತಿ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ದ್ವಿಚಕ್ರ ವಾಹನದ ಜತೆ ಪತ್ನಿ ಪರಾರಿ: ಮನೆಯಲ್ಲಿ ಪತ್ನಿ ಕಾಣದಿದ್ದಾಗ ಗಾಬರಿಗೊಂಡ ಪತಿ, ಕೂಡಲೇ ಪತ್ನಿಯ ಎರಡು ಮೊಬೈಲ್ ನಂಬರ್ಗಳಿಗೆ ಕರೆ ಮಾಡಿದ್ದಾರೆ. ಆದರೆ, ಎರಡು ನಂಬರ್ಗಳು ಸ್ವಿಚ್ಡ್ ಆಫ್ ಆಗಿದೆ. ಬಳಿಕ ಮನೆಯನ್ನು ಪರಿಶೀಲಿಸಿದಾಗ ಪತ್ನಿಯ ಮನೆಯಿಂದ ಹೊರಡುವ ಮುನ್ನ ಒಡವೆಗಳನ್ನು ಬೀರುವಿನಲ್ಲಿ ಇರಿಸಿರುವುದು ಕಂಡು ಬಂದಿದೆ. ಮನೆಯ ಹೊರೆಗೆ ಬಂದು ನೋಡಿದಾಗ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ. ಈ ವೇಳೆ ಎಲ್ಲ ಕಡೆ ಹುಡುಕಾಡಿದರೂ ಪತ್ನಿ ಪತ್ತೆಯಾಗಿಲ್ಲ. ಹೀಗಾಗಿ ಪತಿ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal Hospitals; ಹಿರಿಯ ನಾಗರಿಕರಿಗೆ ಆಲ್ಝೈಮರ್ಸ್ ಕಾಯಿಲೆಯ ಕುರಿತು ತಜ್ಞರೊಂದಿಗೆ ಚರ್ಚೆ
Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್ ಬಸ್’
Bengaluru: ಸಾಲ ತೀರಿಸಲು ಸರ ಕದಿಯುತ್ತಿದ್ದ ಇಬ್ಬರ ಬಂಧನ
Bengaluru: ಇಬ್ಬರು ಡ್ರಗ್ಸ್ ಪೆಡ್ಲರ್ ಸೆರೆ: 51 ಕೆ.ಜಿ. ಗಾಂಜಾ ಜಪ್ತಿ
Bengaluru: ಮೋಜಿನ ಜೀವನಕ್ಕೆ ಸರ ಕದೀತಿದ್ದ ಯುವಕನ ಸೆರೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.