ಬೆಳ್ತಂಗಡಿ; ನಾಡ ಕಚೇರಿ ತಲುಪಲು 3 ಬಸ್‌ ಬದಲಿಸಬೇಕು!

ಹೊಸ ನಾಡ ಕಚೇರಿ ಬರೇ ಭರವಸೆ...

Team Udayavani, Jun 10, 2024, 1:15 PM IST

ಬೆಳ್ತಂಗಡಿ; ನಾಡ ಕಚೇರಿ ತಲುಪಲು 3 ಬಸ್‌ ಬದಲಿಸಬೇಕು!

ಉಪ್ಪಿನಂಗಡಿ: ಆಡಳಿತ ವ್ಯವಸ್ಥೆ ಎಷ್ಟರ ಮಟ್ಟಿಗೆ ಜನಹಿತವನ್ನು ಕಡೆಗಣಿಸಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಬೆಳ್ತಂಗಡಿ ತಾಲೂ ಕಿನ ಸುಮಾರು 10 ಗ್ರಾಮಗಳ ನಾಗರಿಕರು ನಾಡ ಕಚೇರಿಗೆ ಹೋಗಬೇಕು ಎಂದರೆ ಮೂರು ಬಸ್‌ ಬದಲಿಸಿ 40 ಕಿ.ಮೀ. ಪ್ರಯಾಣಿಸಬೇಕಾದ ಅನಿ ವಾರ್ಯ ಇದೆ.

81 ಗ್ರಾಮಗಳಿರುವ ಬೆಳ್ತಂಗಡಿ ತಾಲೂಕಿನಲ್ಲಿ ಮೂರು ಹೋಬಳಿಗಳಿವೆ. ವೇಣೂರು ನಾಡ ಕಚೇರಿ ವ್ಯಾಪ್ತಿಗೆ 29, ಬೆಳ್ತಂಗಡಿ ನಾಡಕ ಚೇರಿ ವ್ಯಾಪ್ತಿಗೆ 25 ಮತ್ತು ಕೊಕ್ಕಡ ನಾಡ ಕಚೇರಿ ವ್ಯಾಪ್ತಿಗೆ 27 ಗ್ರಾಮಗಳು ಬರುತ್ತವೆ. ಇದರಲ್ಲಿ ಕೊಕ್ಕಡ ನಾಡ ಕಚೇರಿಯ ಗ್ರಾಮ ವರ್ಗೀಕರಣ ಎಷ್ಟು ಅವೈಜ್ಞಾನಿಕವಾಗಿದೆ ಎಂದರೆ ನಾಡ ಕಚೇರಿ ತಲುಪಲು ತಾಲೂಕಿನ ಒಂದು ತುದಿಯವರು ಇನ್ನೊಂದು ತುದಿಗೆ ಹೋಗಬೇಕು. ಅಂದರೆ, ತೆಕ್ಕಾರು ಬಾರ್ಯ, ಇಳಂತಿಲ, ಮೊಗ್ರು, ಕರಾಯ, ತಣ್ಣೀರುಪಂತ,
ಕಣಿಯೂರು, ಪದ್ಮುಂಜ ಮೊದಲಾದ 10 ಗ್ರಾಮಗಳ ಜನರಿಗೆ ನಾಡ ಕಚೇರಿಗೆ ಹೋಗುವುದು ಹರ ಸಾಹಸವೇ ಆಗಿದೆ.

ಇತ್ತೀಚಿನ ದಿನಗಳಲ್ಲಿ ಪಹಣಿ-ಆಧಾರ್‌ ಲಿಂಕ್‌, ದಾಖಲೆ ಪತ್ರಗಳಿಗಾಗಿ ಆಗಾಗ ನಾಡ ಕಚೇರಿಗೆ ಅಲೆಯುವುದು ಮಾಮೂಲಾಗಿದೆ.
ಅದರಲ್ಲೂ ನಾಡ ಕಚೇರಿಯಲ್ಲಿ ಸರ್ವರ್‌ ಸಮಸ್ಯೆ, ಸಿಬಂದಿ ಕೊರತೆ ಮತ್ತಿತರ ಕಾರಣಗಳಿಗಾಗಿ ಒಂದೇ ಭೇಟಿಯಲ್ಲಿ ಕೆಲಸ ಮುಗಿಯುವುದಿಲ್ಲ. ಇಂಥ ಹೊತ್ತಿನಲ್ಲಿ ಸುಮಾರು 40 ಕಿ.ಮೀ ದೂರದ ನಾಡ ಕಚೇರಿಗೆ ಹೋಗಿ ಕೆಲಸ ಮಾಡಿಸುವುದು ಹರಸಾಹಸವೇ ಸರಿ!

ಒಂದು ವೇಳೆ ಕಚೇರಿಗೆ ಹೋಗುವಾಗ ದಾಖಲೆಗಳನ್ನು ಸಮರ್ಪಕವಾಗಿ ಒಯ್ಯಲು ಅಸಾಧ್ಯವಾದರೆ ಮತ್ತೊಮ್ಮೆ ತೆರಳಲು ಭಾರೀ ಕಷ್ಟಪಡಬೇಕು. ನಾಡ ಕಚೇರಿಗೆ ಹೋಗಿ ಬರುವುದೆಂದರೆ ಅಂಡಮಾನ್‌ಗೆ ಹೋಗಿ ಬಂದ ಹಾಗಾಗುತ್ತದೆ ಎನ್ನುತ್ತಾರೆ ಇಲ್ಲಿನ ಜನ.

ಪ್ರತ್ಯೇಕ ನಾಡ ಕಚೇರಿ ಬೇಡಿಕೆ
ಕೊಕ್ಕಡ ಹೋಬಳಿ ಕೇಂದ್ರ ದೂರವಾಗುತ್ತದೆ. ಈ ಭಾಗಕ್ಕೆ ಅನುಕೂಲವಾಗುವಂತೆ ಕಲ್ಲೇರಿ ಭಾಗದಲ್ಲಿ ಹೊಸ ನಾಡ ಕಚೇರಿ ಇಲ್ಲವೇ ಅದಕ್ಕೆ ಸಮನಾದ ಆಡಳಿತ ವ್ಯವಸ್ಥೆಯನ್ನು ರೂಪಿಸುವಂತೆ ಆಗ್ರಹಿಸಿ ಕಳೆದ 25 ವರ್ಷಗಳಿಂದಲೂ ಬೇಡಿಕೆ ಸಲ್ಲಿಸಲಾಗುತ್ತಿದೆ. ಜನಪ್ರತಿನಿಧಿಗಳು ಚುನಾವಣೆಯ ಸಂದರ್ಭ ಬಂದಾಗ ಕಲ್ಲೇರಿ ಭಾಗದಲ್ಲಿ ನಾಡ ಕಚೇರಿ ಆಗೇ ಬಿಟ್ಟಿತು
ಎಂಬಷ್ಟು ಧೈರ್ಯದಿಂದ ಭರವಸೆ ಕೊಡುತ್ತಾರೆ. ಆ ಬಳಿಕ ಸುಮ್ಮನಾಗುತ್ತಾರೆ.

ನೇರ ಬಸ್‌ ಸೌಕರ್ಯವಿಲ್ಲ
ಈ 11 ಗ್ರಾಮಗಳಿಗೆ ಕೊಕ್ಕಡ 40 ಕಿ.ಮೀ. ದೂರ ಮಾತ್ರವಲ್ಲ, ನೇರ ಬಸ್‌ ಸೌಕರ್ಯವಿಲ್ಲ. ನೇರ ಅಂತಲ್ಲ, ಪರ್ಯಾಯ ಬಸ್‌ ಸಂಚಾರವೂ ಕಡಿಮೆ. ಕರಾಯ, ಇಳಂತಿಲ, ಪದ್ಮುಂಜ ಮೊದಲಾದ ಗ್ರಾಮಗಳ ಜನರು ಕೊಕ್ಕಡಕ್ಕೆ ಹೋಗಬೇಕು ಎಂದರೆ ಮೊದಲು ಉಪ್ಪಿನಂಗಡಿಗೆ ಹೋಗಿ, ಅಲ್ಲಿಂದ ನೆಲ್ಯಾಡಿ ತಲುಪಿ, ಅಲ್ಲಿಂದ ಬಸ್‌ ಅಥವಾ ಜೀಪು ಹಿಡಿದು ಕೊಕ್ಕಡಕ್ಕೆ ತಲುಪ ಬೇಕು! ಇದು ಸಾಕಷ್ಟು ಸಮಯವನ್ನೂ ತೆಗೆದುಕೊಳ್ಳುತ್ತದೆ.

10ಪ್ರತ್ಯೇಕ ನಾಡಕಚೇರಿ ಬೇಡಿಕೆಇಟ್ಟ ಗ್ರಾಮಗಳು
1. ತೆಕ್ಕಾರು
2. ಕರಾಯ
3. ಬಾರ್ಯ
4. ತಣ್ಣೀರುಪಂತ
5. ಇಳಂತಿಲ
6. ಮೊಗ್ರು
7. ಪದ್ಮುಂಜ
8. ಪುತ್ತಿಲ
9. ಕಣಿಯೂರು
10. ಮೂರುಗೋಳಿ

ಗ್ರಾಮ ಪಂಚಾಯತ್‌ ಗಳ ಮನವಿ ವ್ಯರ್ಥ
ಜಾತಿ, ಆದಾಯ, ಜನನ ಮರಣ ಸೇರಿದಂತೆ ಹಲವು ಪ್ರಮಾಣ ಪತ್ರಗಳ ತುರ್ತು ಸೇವೆಯ ಅಗತ್ಯ ಇರುವುದರಿಂದ, ಭೂಮಿ, ಕೃಷಿ ವ್ಯವ ಹಾರಗಳ ಅಗತ್ಯತೆಯನ್ನು ಆಧರಿಸಿ ಕಲ್ಲೇರಿ ಭಾಗದಲ್ಲಿ ನಾಡ ಕಚೇರಿ ತೆರೆಯಬೇಕು ಎಂದು ಎಲ್ಲ ಗ್ರಾಮಗಳ ಗ್ರಾಮಸಭೆಗಳಲ್ಲಿ ಚರ್ಚೆ ನಡೆದು ನಿರ್ಣಯಗಳನ್ನು ಕಂದಾಯ ಇಲಾಖೆಗೆ ಕಳುಹಿಸಿಕೊಡಲಾಗುತ್ತಿದೆ. ಇಲಾಖಾ ಅಧಿಕಾರಿಗಳು‌ ಸ್ಥಳ ಪರಿಶೀಲನೆ ನಡೆಸಿ ವರ್ಷಗಳೇ ಕಳೆದರೂ ಬೇಡಿಕೆ ಮಾತ್ರ ಈಡೇರಿಲ್ಲ ಎಂದು ತಣ್ಣೀರುಪಂತ ಗ್ರಾ.ಪಂ ಮಾಜಿ ಅಧ್ಯಕ್ಷ
ಜಯವಿಕ್ರಮ ಕಲ್ಲಾಪು ಹೇಳುತ್ತಾರೆ.

ಈ ಬೇಡಿಕೆ ಹಲವು ವರ್ಷಗಳ ಕೂಗು. ಕಂದಾಯ ಇಲಾಖೆ ದಾಖಲೆ ಅಗತ್ಯಕ್ಕೆ ದೂರದ ಕೊಕ್ಕಡದ ಬದಲು ಕಲ್ಲೇರಿ ಭಾಗದಲ್ಲಿ ತೆರೆದರೆ ಹತ್ತಕ್ಕೂ ಮಿಕ್ಕ ಗ್ರಾಮಗಳ ಎಲ್ಲ ವರ್ಗದ ಜನರಿಗೆ ಪ್ರಯೋಜನವಾಗುತ್ತಿತ್ತು.
-ಅನಂತ ಕೃಷ್ಣ ಕುದ್ದಣ್ಣಾಯ, ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ.

*ಎಂ.ಎಸ್‌. ಭಟ್‌, ಉಪ್ಪಿನಂಗಡಿ

ಟಾಪ್ ನ್ಯೂಸ್

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

3

Puttur: ಅಪರಿಚಿತರಿಂದ ಬಾಲಕನಿಗೆ ಹಲ್ಲೆ

16

Belthangady: ಸಾರಿಗೆ ಬಸ್‌ ಢಿಕ್ಕಿ: ಪಾದಚಾರಿ ಗಂಭೀರ

17

Belthangady: ಕಾಶಿಬೆಟ್ಟು: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು

5

Maninalkur: ಶಿಥಿಲಾವಸ್ಥೆಯಲ್ಲಿ ಹಳೆ ಶಾಲಾ ಕಟ್ಟಡ; ಕ್ರಮಕ್ಕೆ ಆಗ್ರಹ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

mantrika kannada movie

Kannada Cinema; ಮಾಂತ್ರಿಕ ಆಟ ಶುರು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.