ಕುಂದಾಪುರ ನಗರಕ್ಕೆ ನೆರೆ ಭೀತಿ ಸಾಧ್ಯತೆ; ಮೀನುಗಾರಿಕೆ, ಚಿಪ್ಪು ಸಂಗ್ರಹಕ್ಕೆ ಸಂಕಷ್ಟ

ಸುಮಾರು 500ಕ್ಕೂ ಹೆಚ್ಚು ಕುಟುಂಬಗಳ ಪಾಲಿಗೆ ಇದು ಜೀವನದಿ

Team Udayavani, Jun 10, 2024, 3:23 PM IST

ಕುಂದಾಪುರ ನಗರಕ್ಕೆ ನೆರೆ ಭೀತಿ ಸಾಧ್ಯತೆ; ಮೀನುಗಾರಿಕೆ, ಚಿಪ್ಪು ಸಂಗ್ರಹಕ್ಕೆ ಸಂಕಷ್ಟ

ಕುಂದಾಪುರ: ನಗರದ ಜೀವನಾಡಿಯಂತಿರುವ ಪಂಚಗಂಗಾವಳಿ ನದಿಯಲ್ಲಿ ಹೂಳು ತುಂಬಿದ್ದು ಹೀಗೇ ಬಿಟ್ಟರೆ ನಗರದೊಳಗೆ ನೀರು ನುಗ್ಗುವ ಆತಂಕ ಉಂಟಾಗಿದೆ. ಮೀನುಗಾರಿಕೆ ಹಾಗೂ ಚಿಪ್ಪು ಸಂಗ್ರಹಕ್ಕೆ ದೋಣಿ ಕೊಂಡೊಯ್ಯುವುದೇ ಕಷ್ಟವಾಗಿದೆ. ಹೂಳು ತೆಗೆದರೆ ಇವೆಲ್ಲ ಸರಾಗವಾಗಲಿದ್ದು ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಇದೆ.

ನದಿ ನಂಬಿದ ಬದುಕು
ನೂರಾರು ವರ್ಷಗಳಿಂದ ಖಾರ್ವಿಕೇರಿ ಪರಿಸರ ಹಾಗೂ ಇತರರ ಪೂರ್ವಜರು ಈ ನದಿಯನ್ನು ಅವಲಂಬಿತರಾಗಿ ತಮ್ಮ ಬದುಕನ್ನು ಕಟ್ಟಿ ಕೊಂಡಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಕುಟುಂಬಗಳ ಪಾಲಿಗೆ ಇದು ಜೀವನದಿ. ಮೀನುಗಾರಿಕೆ, ಚಿಪ್ಪು ಹೆಕ್ಕುವಂತದ್ದು, ಪಂಜರ ಮೀನು ಸಾಕಾಣಿಕೆ, ಪ್ರವಾಸಿಗರನ್ನು ಕರೆದೊಯ್ಯುವ ದೋಣಿ ಚಲಿಸುವಂತದ್ದು, ಪ್ರವಾಸೋದ್ಯಮ ಹೀಗೆ ಹಲವಾರು ಚಟುವಟಿಕೆಗಳು ನಡೆಯುತ್ತಿರುತ್ತದೆ. ಹೊಸ ಬಸ್‌ ನಿಲ್ದಾಣ ಸಮೀಪ ಸಂತೆ ನಡೆಯುತ್ತಿದ್ದಾಗ ದೋಣಿ ಮೂಲಕ ಗುಡ್ಡಮ್ಮಾಡಿ, ಕೊಲ್ಲೂರು ಭಾಗದಿಂದ ಕಾಯಿ, ಬೆಲ್ಲ ಮೊದಲಾದ ಸಾಮಾನು ಸರಂಜಾಮು ತರುತ್ತಿದ್ದ ದಾಖಲೆಗಳಿವೆ. ಕೋರ್ಟು ಎದುರಿನ ಮೈದಾನದಲ್ಲಿ ಎತ್ತಿನ ಗಾಡಿಗಳು ನಿಲ್ಲುತ್ತಿದ್ದವು.

ತೊಂದರೆ
ಹೂಳು ತುಂಬಿದ ಕಾರಣ ಮಳೆಗಾಲದಲ್ಲಿ ಕೃತಕ ನೆರೆ ಬಂದು ತಗ್ಗು ಪ್ರದೇಶದಲ್ಲಿ ಬದುಕುವ ಖಾರ್ವಿಕೇರಿಯ ಮನೆಗಳಿಗೆ
ಜೋರು ಮಳೆ ಬಂದರೆ ಈಗಾಗಲೇ ಆಗಾಗ ನೀರು ನುಗ್ಗಿ ಅವಾಂತರ ಉಂಟಾ ಗಿದೆ. ನದಿ ಪಾತ್ರ ಹೂಳಿನಿಂದ ಮುಚ್ಚಿರುವುದ
ರಿಂದ ದೋಣಿಗಳು ಯಾವುದೇ ದಿಕ್ಕಿನಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ನೀರಿನ ಇಳಿತ ಕಾಲದಲ್ಲಿಯೂ ನದಿ ಮೈದಾನದಂತೆ ಮತ್ತು ಮರುಭೂಮಿಯಂತೆ ಗೋಚರಿಸುತ್ತದೆ. ಇಲ್ಲಿ ಕಾಂಡ್ಲಾ ಗಿಡಗಳನ್ನು ಬೆಳೆದಿದ್ದು, ಅರಣ್ಯ ಇಲಾಖೆ ತೆರವುಗೊಳಿಸಲು ಬಿಡುತ್ತಿಲ್ಲ. ಕಾಂಡ್ಲಾವನ ಸೃಷ್ಟಿಯಾದರೆ ಪಂಚಗಂಗಾವಳಿ ನದಿ ಇತಿಹಾಸ ಪುಟ ಸೇರಲಿದೆ ಎಂಬ ಆತಂಕ ಜನರದ್ದು. ಬಡ ಮೀನುಗಾರರ ಜೀವನ ಸಂಕಷ್ಟ ಕ್ಕೀಡಾಗಿದೆ. ಪ್ರವಾಸೋದ್ಯಮ ಅವಕಾಶ ಕುಂಠಿತವಾಗಿವೆ. ಕುಂದಾಪುರ ದಿಂದ ಗಂಗೊಳ್ಳಿಗೆ ದೋಣಿ ಚಲನೆ ಸ್ತಬ್ಧವಾಗಿದೆ.

ಹೂಳು ತೆಗೆದರೆ
ತುಂಬಿದ ಹೂಳನ್ನು ನದಿಯಿಂದ ತೆಗೆದರೆ ನದಿ ಅವಲಂಬಿತರ ಬದುಕು ಹಸನಾಗಲಿದೆ. ಪ್ರವಾಸೋದ್ಯಮ ಸಲುವಾಗಿ ಕುಂದಾಪುರದಿಂದ ಗಂಗೊಳ್ಳಿ, ಬಬ್ಬುಕುದ್ರು, ಬಸ್ರೂರು, ಕೋಡಿ ಮೊದಲಾದೆಡೆಗೆ ದೋಣಿ ಯಾನ ನಡೆಸಬಹುದು. ಕೇವಲ 12 ನಿಮಿಷಗಳಲ್ಲಿ ಗಂಗೊಳ್ಳಿ ತಲುಪಲು ಸಾಧ್ಯವಿದೆ. ರಸ್ತೆ ಮೂಲವಾದರೆ 17 ಕಿ.ಮೀ. ದೂರ ಹೋಗಬೇಕು. ಗಂಗೊಳ್ಳಿ ಜನತೆಗೆ ಕುಂದಾಪುರಕ್ಕೆ ಆಗಮಿಸಲು ದೊಡ್ಡ ಸೇತುವೆ ನಿರ್ಮಾಣಕ್ಕಿಂತ ಸಮೀಪದ ದಾರಿ ಇದಾಗಿದೆ. ಬೋಟ್‌ ಹೌಸ್‌ ಮಾದರಿಯಲ್ಲಿ ಪ್ರವಾಸಿಗರ ಆಕರ್ಷಣೆಗೆ ಉತ್ತೇಜನ ನೀಡಬಹುದು. ಉತ್ತರಕನ್ನಡ ಮಾದರಿಯಲ್ಲಿ ಕಾಂಡ್ಲಾವನ ಪ್ರವಾಸವೂ ನಡೆಸಬಹುದು. ಪಂಜರ ಮೀನುಗಾರಿಕೆಗೆ ಸಹಾಯವಾಗಲಿದೆ. ಮೀನುಗಾರಿಕೆ ಹಾಗೂ ಚಿಪ್ಪು ಸಂಗ್ರಹದ ದೋಣಿಗಳ ಓಡಾಟ ಸಲೀಸಾಗಲಿದೆ. ಮುಖ್ಯವಾಗಿ ನಗರಕ್ಕೆ ನೆರೆ ಬರುವುದನ್ನು ತಪ್ಪಿಸಬಹುದಾಗಿದೆ.

ಮರಳುಗಾರಿಕೆ ನಡೆಯದೆ ತುಂಬಿದ ಹೂಳು
ಈ ಹಿಂದೆ ಈ ನದಿ ಪಾತ್ರದಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಯುತ್ತಿತ್ತು. ಪರಿಣಾಮ ನದಿ ಪಾತ್ರದಲ್ಲಿ ಹೂಳು ಶೇಖರಣೆಯಾಗುತ್ತಿರಲಿಲ್ಲ. ನದಿ ಆಳವಾಗಿದ್ದು ದೋಣಿಗಳು ಸರಾಗವಾಗಿ ಚಲಿಸುತ್ತಿತ್ತು. ಇತ್ತೀಚಿಗೆ ಹೊಸ ಕಾನೂನಿನ ಪರಿಣಾಮ ಯಾವುದೇ ಮರಳುಗಾರಿಕೆ ನಡೆಯುತ್ತಿಲ್ಲ. ಜತೆಗೆ ಒಂದಷ್ಟು ಅಣೆಕಟ್ಟುಗಳ ನಿರ್ಮಾಣದ ಮೂಲಕ ನದಿಯಲ್ಲಿ ಸಹಜ ಹರಿವಿನ ನೀರಿನ ಕೊರತೆಯಾಗಿದೆ. ಮರಳು, ಹೂಳು ಶೇಖರಣೆಗೊಂಡು ನದಿ ಬತ್ತಿದ ರೀತಿಯಲ್ಲಿ ಕಾಣುವಂತೆ ತುಂಬಿದೆ. ಸಮುದ್ರದ ಭರತ ಇಳಿತ ಸಂದರ್ಭವಂತೂ ಇದು ಸ್ಪಷ್ಟವಾಗಿ ಗೋಚರಿಸುತ್ತದೆ.

ಗಮನಕ್ಕೆ ತರಲಾಗುವುದು 
ಪಂಚಗಂಗಾವಳಿ ಹೂಳು ತೆಗೆಯುವ ಅವಶ್ಯವಿದೆ. ನದಿ ಬತ್ತಿದಂತೆ ಕಾಣುತ್ತದೆ. ಇದು ಸರಕಾರದ ಹಂತದಲ್ಲಿ ತೀರ್ಮಾನ ಆಗಬೇಕಾದ ಕಾರಣ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು.
-ರಶ್ಮಿ ಎಸ್‌.ಆರ್‌. ಸಹಾಯಕ ಕಮಿಷನರ್‌, ಕುಂದಾಪುರ

ಹೂಳು ತೆಗೆಯುವ ಅಗತ್ಯವಿದೆ
ಈ ಹಿಂದೆ ಸಾಂಪ್ರದಾಯಿಕ ಮರಳುಗಾರಿಕೆ ಇದ್ದಾಗ ಹೂಳು ತುಂಬುತ್ತಿರಲಿಲ್ಲ. ಮರಳುಗಾರಿಕೆ ನಿಷೇಧದ ಬಳಿಕ, ಅಣೆಕಟ್ಟು
ನಿರ್ಮಾಣವಾಗಿ ನದಿಗೆ ನೀರಿನ ಹರಿವು ಕಡಿಮೆಯಾದ ಬಳಿಕ ಹೂಳು ತುಂಬಿದೆ. ಮೀನುಗಾರಿಕೆ, ಚಿಪ್ಪುಸಂಗ್ರಹ, ನಗರದ
ನೆರೆ ಭೀತಿ ಹೋಗಲಾಡಿಸುವುದು, ಪ್ರವಾಸೋದ್ಯಮಕ್ಕೆ ಉತ್ತೇಜನ ಸೇರಿದಂತೆ ಅನೇಕ ಕಾರಣಗಳಿಗಾಗಿ ಪಂಚಗಂಗಾವಳಿಯ
ಹೂಳು ತೆಗೆಯುವ ಅಗತ್ಯವಿದೆ.
ಅಭಿನಂದನ್‌ ಶೆಟ್ಟಿ, ಉದ್ಯಮಿ, ಕುಂದಾಪುರ

* ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

1

ʼದೇವರʼ ಸಿನಿಮಾ ನೋಡುತ್ತಿರುವಾಗ ಥಿಯೇಟರ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟ Jr NTR ಅಭಿಮಾನಿ

ಭೀಕರ ರಸ್ತೆ ಅಪಘಾತ… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

Bus Overturns… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

India: ಮೊದಲು ಗಡಿ ಭಯೋತ್ಪಾದನೆ ನಿಲ್ಲಿಸಿ-ವಿಶ್ವಸಂಸ್ಥೆಯಲ್ಲಿ ಪಾಕ್‌ ಗೆ ಭಾರತದ ಚಾಟಿ

India: ಮೊದಲು ಗಡಿ ಭಯೋತ್ಪಾದನೆ ನಿಲ್ಲಿಸಿ-ವಿಶ್ವಸಂಸ್ಥೆಯಲ್ಲಿ ಪಾಕ್‌ ಗೆ ಭಾರತದ ಚಾಟಿ

Laapataa Ladies

Laapataa Ladies: ಕಾಣೆಯಾದ ಮಹಿಳೆಯರ ಆಸ್ಕರ್‌ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fishing: ಬುಲ್‌ಟ್ರಾಲ್‌ ನಿಷೇಧ ಕಟ್ಟುನಿಟ್ಟು ಮಾಡಿ: ಸಚಿವರಿಗೆ ಮನವಿ

Fishing: ಬುಲ್‌ಟ್ರಾಲ್‌ ನಿಷೇಧ ಕಟ್ಟುನಿಟ್ಟು ಮಾಡಿ: ಸಚಿವರಿಗೆ ಮನವಿ

fraudd

Gangolli: ದೋಣಿಯ ಸೊತ್ತು ಮಾರಾಟ ಮಾಡಿ 22 ಲಕ್ಷ ರೂ. ವಂಚನೆ

5(1)

Moodgall: ಈಗ ಭಾರೀ ಜನ!; ಗುಹಾಂತರ ಕೇಶವನಾಥೇಶ್ವರ ದೇವಾಲಯಕ್ಕೆ ಪ್ರವಾಸಿಗರ‌ ಸಂಖ್ಯೆ ಹೆಚ್ಚಳ

K. Lakshminarayanana: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ

K. Lakshminarayanana: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ

Gangolli: ಮೀನುಗಾರಿಕೆ ಸೊತ್ತು ಮಾರಿ ಲಕ್ಷಾಂತರ ರೂ. ವಂಚನೆ

Gangolli: ಮೀನುಗಾರಿಕೆ ಸೊತ್ತು ಮಾರಿ ಲಕ್ಷಾಂತರ ರೂ. ವಂಚನೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

12-bng

Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್‌ ಬಸ್‌’

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.