![2](https://www.udayavani.com/wp-content/uploads/2024/06/2-21-415x249.jpg)
Manipur ಸಿಎಂ ಬೆಂಗಾವಲು ವಾಹನದ ಮೇಲೆ ಶಂಕಿತ ಉಗ್ರರ ದಾಳಿ… ಭದ್ರತಾ ಸಿಬ್ಬಂದಿಗೆ ಗಾಯ
Team Udayavani, Jun 10, 2024, 3:31 PM IST
![Manipur ಸಿಎಂ ಬೆಂಗಾವಲು ವಾಹನದ ಮೇಲೆ ದಾಳಿ… ಭದ್ರತಾ ಸಿಬ್ಬಂದಿಗೆ ಗಾಯ, ಶೋಧ ಕಾರ್ಯ](https://www.udayavani.com/wp-content/uploads/2024/06/manipura-620x349.jpg)
ಇಂಫಾಲ್: ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಬೆಂಗಾವಲು ವಾಹನದ ಮೇಲೆ ಸೋಮವಾರ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಗಾಯಗೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಕಚೇರಿಯ ಮೂಲಗಳ ಪ್ರಕಾರ, ಬೆಂಗಾವಲು ಪಡೆ ಇಂಫಾಲ್ನಿಂದ ಜಿರಿಬಾಮ್ ಜಿಲ್ಲೆಗೆ ಸೋಮವಾರ ಬೆಳಿಗ್ಗೆ 10.30 ರ ಸುಮಾರಿಗೆ ತೆರಳುತ್ತಿದ್ದದ್ದಾಗ ರಾಷ್ಟ್ರೀಯ ಹೆದ್ದಾರಿ-37 ರಲ್ಲಿ ಉಗ್ರರು ಹೊಂಚು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಯ ಸಂದರ್ಭ ಮುಖ್ಯಮಂತ್ರಿಗಳು ವಾಹನದಲ್ಲಿ ಇರಲಿಲ್ಲ ಎನ್ನಲಾಗಿದ್ದು ಓರ್ವ ಭದ್ರತಾ ಸಿಬಂದಿ ಗಾಯಗೊಂಡಿದ್ದಾರೆ.
ಜೂನ್ 6 ರಂದು ದುಷ್ಕರ್ಮಿಗಳ ಗುಂಪೊಂದು ವ್ಯಕ್ತಿಯನ್ನು ಹತ್ಯೆಗೈದ ದಿನಗಳಿಂದ ಜಿರಿಬಾಮ್ ಪ್ರದೇಶದಲ್ಲಿ ಅಶಾಂತಿ ಉಂಟಾಗಿತ್ತು ಈ ನಿಟ್ಟಿನಲ್ಲಿ ಮಂಗಳವಾರ ಜಿರಿಬಾಮ್ಗೆ ಭೇಟಿ ನೀಡಲು ಬಿರೇನ್ ಸಿಂಗ್ ಯೋಜಿಸಿದ್ದರು. ಈ ನಡುವೆ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿದೆ.
ಇದಕ್ಕೂ ಮೊದಲು, ಉಗ್ರರು ಜಿರಿಬಾಮ್ನಲ್ಲಿ ಎರಡು ಪೊಲೀಸ್ ಠಾಣೆಗಳು, ಅರಣ್ಯ ಇಲಾಖೆ ಕಚೇರಿ ಮತ್ತು 50 ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿದ್ದರು.
ಟಾಪ್ ನ್ಯೂಸ್
![2](https://www.udayavani.com/wp-content/uploads/2024/06/2-21-415x249.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.