ಮಟ್ಟು: ಭತ್ತದ ಕೃಷಿಗೆ ಒಗ್ಗೂಡುವ ಅಪರೂಪದ ಕೂಡು ಕುಟುಂಬ

ಖರ್ಚು ವೆಚ್ಚ ಸಮದೂಗಿಸಲು ಅವಿಭಕ್ತ ಕುಟುಂಬ ಕೃಷಿಗೆ ಪೂರಕ

Team Udayavani, Jun 10, 2024, 3:58 PM IST

ಮಟ್ಟು: ಭತ್ತದ ಕೃಷಿಗೆ ಒಗ್ಗೂಡುವ ಅಪರೂಪದ ಕೂಡು ಕುಟುಂಬ

ಕಟಪಾಡಿ: ಕೋಟೆ ಗ್ರಾಮದ ಮಟ್ಟು ಆಳಿಂಜೆಯ ಗದ್ದೆಯಲ್ಲಿ ಎನಿಮೇಷನ್‌ ಸ್ಟುಡಿಯೋದ ಇಬ್ಬರು ಯುವಕರು, ಕಂಪೆನಿಯೊಂದರ ಎಚ್‌.ಆರ್‌., ಪ್ರಾಥಮಿಕ ಆರೋಗ್ಯ ಕೇಂದ್ರವೊಂದರ ಕಣ್ಣಿನ ಟೆಕ್ನೀಷಿಯನ್‌, ಸಿವಿಲ್‌ ಎಂಜಿನಿಯರ್‌,
ಕಾರ್‌ ಮೆಕ್ಯಾನಿಕ್‌, ಟೈಲರ್‌, ಚಾಲಕ, ಬ್ಯೂಟೀಷಿಯನ್‌, ವಿದ್ಯಾರ್ಥಿ, ಮಕ್ಕಳು ಜತೆ ಯಾಗಿ ತಮ್ಮ ಅಜ್ಜನ ಗದ್ದೆಯಲ್ಲಿ ಕೃಷಿ
ಚಟುವಟಿಕೆಯಲ್ಲಿ ನಿರತರಾಗಿರುವುದು ಕಂಡು ಬಂದಿತ್ತು.ಇವರೆಲ್ಲರೂ ಮಟ್ಟು ಆಳಿಂಜೆಯ ದಿ| ಮಟ್ಟು ಚಿನ್ನು ಆರ್‌. ಅಂಚನ್‌, ವನಜಾ ಚಿನ್ನು ಅಂಚನ್‌ ದಂಪತಿಯ ಅವಿಭಕ್ತ ಕುಟುಂಬದ ಸದಸ್ಯರಾಗಿದ್ದು, ಕುಟುಂಬದ ಗದ್ದೆಯಲ್ಲಿ ಭತ್ತದ ಕೃಷಿಗೆ ಒಂದೆಡೆ ಕಲೆತಿದ್ದಾರೆ.

ಕೃಷಿ ಹಬ್ಬಕ್ಕೆ ಕಲೆತ ಅವಿಭಕ್ತ ಕುಟುಂಬ
ಹಿರಿಯ ಕೃಷಿಕರಾಗಿದ್ದ ದಿ| ಮಟ್ಟು ಚಿನ್ನು ಆರ್‌. ಅಂಚನ್‌ ಅವರು ಹಾಕಿ ಕೊಟ್ಟ ಸಂಪ್ರದಾಯದಂತೆ ತನ್ನ 7 ಪುತ್ರರು, ಪುತ್ರಿಯ ಮನೆಯ ಸಮಸ್ತ ಮಂದಿ ಒಟ್ಟಾಗಿ ಒಂದು ದಿನ ತಮ್ಮ ಒಂದು ಎಕರೆ ಜಮೀನಿನಲ್ಲಿ ಸಾಂಪ್ರದಾಯಿಕ ನೇಜಿ ನಾಟಿ ಮಾಡುವುದು ಸಂಪ್ರದಾಯವಾಗಿದೆ.

ಉದ್ಯೋಗ ನಿಮಿತ್ತ ವಿವಿಧೆಡೆ ತೆರಳಿ ಸ್ವಂತ ಮನೆ ನಿರ್ಮಿಸಿಕೊಂಡಿದ್ದರೂ ಕುಟುಂಬ ಸದಸ್ಯರು ಮದುವೆ, ಹುಟ್ಟುಹಬ್ಬ, ಹಿರಿಯರ ಸಮಾರಂಭ ಸಹಿತ ಇತರ ಸಮಾರಂಭದ ನೆಪದಲ್ಲಿ ಒಟ್ಟಾಗುವಾಗಲೂ ಸಂಕಷ್ಟ ಪಡುವ ಪ್ರಸ್ತುತ ಕಾಲ ಘಟ್ಟದಲ್ಲಿ ಸಾಂಪ್ರದಾಯಿಕ ಕೃಷಿ ಚಟುವಟಿಕೆ ನಡೆಸಲು ಹಿರಿಯರು, ಕಿರಿಯರು, ಮಹಿಳೆಯರು, ಮಕ್ಕಳು ಸಮಚಿತ್ತರಾಗಿ ಗದ್ದೆಯಲ್ಲಿ ಒಂದಾ ಗುವುದು ವಿಶೇಷ ಸಂಪ್ರದಾಯವಾಗಿದೆ.

ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಗೆ ಮುಕ್ತಿ
ಈ ಬಾರಿ ಕುಟುಂಬದ ಹಿರಿಯ, ಪ್ರಗತಿಪರ ಕೃಷಿಕ ಲಕ್ಷ್ಮಣ್‌ ಮಟ್ಟು ಮುಂದಾಳತ್ವದಲ್ಲಿ ಹಸನುಗೊಳಿಸಿದ ಗದ್ದೆಯಲ್ಲಿ ಸಿದ್ಧಪಡಿಸಲಾದ ಚಾಪೆ ನೇಜಿ (ಎಂಒ4 ತಳಿ)ಯನ್ನು ನೆಡುವ ಮೂಲಕ ಸಂಪ್ರದಾಯ ಮುಂದುವರಿಸಿದ್ದಾರೆ.

ಈ ಕುಟುಂಬದ ಸದಸ್ಯರು ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದರೂ ಈ ಕೃಷಿ ಕೆಲಸಕ್ಕೆ ಕೂಡು ಕುಟುಂಬದಂತೆ ಒಗ್ಗೂಡಿಕೊಂಡು ಸುಮಾರು 25 ಮಂದಿ ಜತೆಗೂಡಿ ಬೇಸಾಯ ಕೆಲಸ ನಡೆಸಿದ್ದರು. ಕೃಷಿ ಕೂಲಿಯಾಳುಗಳ ಸಹಾಯ ಇಲ್ಲದೇ, ಉಳುಮೆ ಮಾಡಿ ಹದಗೊಳಿಸಿದ 1 ಎಕರೆ ಗದ್ದೆಯಲ್ಲಿ 12 ದಿನದ ಚಾಪೆ ನೇಜಿಯನ್ನು ಬಳಸಿಕೊಂಡು ನೇಜಿ ನಾಟಿ ಕಾರ್ಯ ಪೂರೈಸಿದ್ದಾರೆ.

3 ತಿಂಗಳ ಅನಂತರ ಕಟಾವು ನಡೆಯಲಿದ್ದು, ಸುಮಾರು 12 ಟನ್‌ ಭತ್ತ ಪಡೆಯುವ ನಿರೀಕ್ಷೆ ಇರಿಸಲಾಗಿದೆ. ಇಲ್ಲಿ ಮುಂದಿನ ಪೀಳಿಗೆಗೆ ಕೃಷಿ ಪರಿಚಯದ ಜತೆಗೆ ಕೃಷಿ ಕೂಲಿಯಾಳುಗಳ ಸಮಸ್ಯೆಗೆ ಪರಿಹಾರ, ಸ್ವಂತ ದುಡಿಮೆಯಿಂದ ಅಧಿಕ ಆದಾಯ, ಮುಂದಿನ ಯುವ ಪೀಳಿಗೆಯೂ ಕೃಷಿ ಕಾಯಕ ಮುಂದುವರಿಸುವ ಭರವಸೆ ಇಲ್ಲಿ ಮೂಡುತ್ತಿದೆ.

ಜತೆಯಾಗಿ ಕೃಷಿ ಕೆಲಸ
ನಾಟಿಯ ದಿನ ನಿಗದಿ ಪಡಿಸಿ ಚಾಪೆ ನೇಜಿ ಹಾಕಲಾಗುತ್ತದೆ. ನಾವು ಮನೆಮಂದಿ ಜತೆಯಾಗಿ ಕೃಷಿ ಹಬ್ಬದ ಮಾದರಿಯಲ್ಲಿ ಕೃಷಿ ಚಟುವಟಿಕೆ ನಿರತರಾಗುತ್ತೇವೆ. ಕೃಷಿ ಕೂಲಿಯಾಳುಗಳ ಸಮಸ್ಯೆಗೆ ಮುಕ್ತಿ. ಖರ್ಚು ವೆಚ್ಚ ಸಮದೂಗಿಸಲು ಅವಿಭಕ್ತ ಕುಟುಂಬ ಕೃಷಿಗೆ ಪೂರಕ.
*ಲಕ್ಷ್ಮಣ್‌ ಮಟ್ಟು,
ಹಿರಿಯ ಪ್ರಗತಿಪರ ಕೃಷಿಕ

*ವಿಜಯ ಆಚಾರ್ಯ ಉಚ್ಚಿಲ

ಟಾಪ್ ನ್ಯೂಸ್

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

1-eqwwewq

Maharashtra ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಸುಜಾತಾ ಸೌನಿಕ್

Agriculture ಹಿರೇಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

Agriculture ಹೀರೆಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

1-qwewq-wq-ew

T20 World Cup ಚಾಂಪಿಯನ್ಸ್ ಗೆ ಭರ್ಜರಿ ಬಹುಮಾನ ಘೋಷಿಸಿದ ಬಿಸಿಸಿಐ

prahlad-joshi

Siddaramaiah ಸರಕಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ: ಸಚಿವ ಪ್ರಹ್ಲಾದ ಜೋಶಿ

6

ಯೂಟ್ಯೂಬ್‌ನಲ್ಲಿ IAS ಪಾಠ ಮಾಡಿ, 21ರ ಹರೆಯದಲ್ಲೇ 10 ಲಕ್ಷ ರೂ. ಕಾರು ಖರೀದಿಸಿದ ವಿದ್ಯಾರ್ಥಿ

1-qwewqewq

West Bengal; ನಡು ಬೀದಿಯಲ್ಲೇ ಮಹಿಳೆಗೆ ನಿರ್ದಯವಾಗಿ ಥಳಿತ:ವಿಡಿಯೋ ವೈರಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kota

MP ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

Parkala: ಕೆರೆದಂಡೆ ನಾಲ್ಕನೇ ಬಾರಿ ಕುಸಿತ; ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

Parkala: ಕೆರೆದಂಡೆ ನಾಲ್ಕನೇ ಬಾರಿ ಕುಸಿತ; ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

Udupi “ದೊಡ್ಡ ಸಾಮಗರ ನಾಲ್ಮೊಗ’ ಗ್ರಂಥ ಲೋಕಾರ್ಪಣೆ

Udupi “ದೊಡ್ಡ ಸಾಮಗರ ನಾಲ್ಮೊಗ’ ಗ್ರಂಥ ಲೋಕಾರ್ಪಣೆ

Student ಇನ್‌ಸ್ಪಾಯರ್‌ ಅವಾರ್ಡ್‌ ಸ್ಪರ್ಧೆ: ಕಾರ್ಕಳದ ಮೂವರು ರಾಷ್ಟ್ರಮಟ್ಟಕ್ಕೆ

Student ಇನ್‌ಸ್ಪಾಯರ್‌ ಅವಾರ್ಡ್‌ ಸ್ಪರ್ಧೆ: ಕಾರ್ಕಳದ ಮೂವರು ರಾಷ್ಟ್ರಮಟ್ಟಕ್ಕೆ

Scanning Center ಭ್ರೂಣಪತ್ತೆ ತಡೆಗೆ ಅಧಿಕಾರಿಗಳು ಎಚ್ಚರದಿಂದಿರಿ

Scanning Center ಭ್ರೂಣಪತ್ತೆ ತಡೆಗೆ ಅಧಿಕಾರಿಗಳು ಎಚ್ಚರದಿಂದಿರಿ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

1-eqwwewq

Maharashtra ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಸುಜಾತಾ ಸೌನಿಕ್

Agriculture ಹಿರೇಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

Agriculture ಹೀರೆಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

1-sadasd

Harangi ಹಿನ್ನೀರಿನಲ್ಲಿ ಈಜಲು ತೆರಳಿದ್ದ ಪ್ರವಾಸಿಗ ನೀರು ಪಾಲು

1-qwewq-wq-ew

T20 World Cup ಚಾಂಪಿಯನ್ಸ್ ಗೆ ಭರ್ಜರಿ ಬಹುಮಾನ ಘೋಷಿಸಿದ ಬಿಸಿಸಿಐ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.