Kalki 2898 AD Trailer: ನವಯುಗ ಆರಂಭಕ್ಕೆ ಯುದ್ದದ ಮೂಲಕ ವ್ಯಾಖ್ಯಾನ ಬರೆದ ʼಭೈರವʼ
Team Udayavani, Jun 10, 2024, 7:34 PM IST
ಹೈದರಾಬಾದ್: ಪ್ಯಾನ್ ಇಂಡಿಯಾ, ಬಿಗ್ ಬಜೆಟ್ ʼಕಲ್ಕಿ 2898 ಎಡಿʼ ಚಿತ್ರದ ಬಹುನಿರೀಕ್ಷಿತ ಟ್ರೇಲರ್ ರಿಲೀಸ್ ಆಗಿದೆ.
ನಾಗ್ ಅಶ್ವಿನ್ ನಿರ್ದೇಶನದ ಸೈನ್ಸ್ ಫೀಕ್ಷನ್ ʼಕಲ್ಕಿ 2898 ಎಡಿʼ ಟ್ರೇಲರ್ ಅಮೋಘ ದೃಶ್ಯಾವಳಿ ಹಾಗೂ ವಿಎಫ್ ಎಕ್ಸ್ ನಿಂದ ಗಮನ ಸೆಳೆದಿದೆ. ಹಾಲಿವುಡ್ ರೇಂಜಿಗೆ ದೃಶ್ಯಗಳು ಮೂಡಿಬಂದಿದೆ.
ಜಗತ್ತಿನ ಮೊದಲ ಪ್ರದೇಶ, ಈ ಜಗತ್ತಿನ ಕೊನೆ ಪ್ರದೇಶ ʼಕಾಶಿʼ ಎನ್ನುವ ಮಾತಿನೊಂದಿಗೆ ʼಕಲ್ಕಿʼ ಲೋಕ ಪ್ರಾರಂಭವಾಗುತ್ತದೆ. ಜಗತ್ತಿನ ಎಲ್ಲವನ್ನು ಕಿತ್ತುಕೊಂಡರೆ ಎಲ್ಲವೂ ಇರುತ್ತದೆ ಎನ್ನುವ ಕುತೂಹಲವುಳ್ಳ ಸಂಭಾಷಣೆಯಿಂದ ಟ್ರೇಲರ್ ಶುರುವಾಗುತ್ತದೆ.
6000 ವರ್ಷಗಳ ಹಿಂದಿನ ಶಕ್ತಿ ಮತ್ತೆ ಬಂದಿದೆ ಎಂದು, ಅಳಿವು – ಉಳಿವಿನ ನಡುವೆ ಹೋರಾಡುವವರ ದೃಶ್ಯವನ್ನು ತೋರಿಸಲಾಗಿದೆ. ʼಭೈರವʼ ನಾಗಿ ಪ್ರಭಾಸ್ ಯುದ್ಧಕ್ಕೆ ಇಳಿದ್ದಾರೆ. ಎರಡು ಜಗತ್ತಿನ ನಡುವಿನ ಹೋರಾಟವನ್ನು ಸೈನ್ಸ್ ಫೀಕ್ಷನ್ ಮೂಲಕ ತೋರಿಸಲಾಗಿದೆ.
ಯುದ್ಧದಲ್ಲಿ ನಾನು ಇದುವರೆಗೆ ಒಂದನ್ನೂ ಸೋತಿಲ್ಲ. ಇದನ್ನೂ ಸಹ ಸೋಲಲ್ಲ ಎಂದು ʼಭೈರವʼ ಹೇಳಿ ಯುದ್ದದ ಅಖಾಡದಲ್ಲಿ ಮಿಂಚಿದ್ದಾರೆ.
ನವಯುಗ ಆರಂಭಗೊಳ್ಳಲಿದೆ ಎಂದು ಟ್ರೇಲರ್ ಕೊನೆಯಲ್ಲಿ ತೋರಿಸಲಾಗಿದೆ.
ದಿಶಾ ಪಟಾನಿ, ಕಮಲ್ ಹಾಸನ್ ಹಾಗೂ ದೀಪಿಕಾಳ ಜೊತೆ ಅಮಿತಾಭ್ ಅವರ ಪಾತ್ರದ ಝಲಕ್ ತೋರಿಸಲಾಗಿದೆ.
ಈಗಾಗಲೇ ವಿಭಿನ್ನ ಪ್ರಚಾರದಿಂದ ಸದ್ದು ಮಾಡಿರುವ ʼಕಲ್ಕಿ 2898 ಎಡಿʼ ಕ್ಯಾರೆಕ್ಟರ್ ಪೋಸ್ಟರ್, ಟೀಸರ್ ನಿಂದ ಗಮನ ಸೆಳೆದಿದೆ. ಪ್ರಭಾಸ್, ಅಮಿತಾಭ್, ಕಮಲ್ ಹಾಸನ್ , ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮೊದಲಾದವರು ನಟಿಸಿದ್ದಾರೆ. ಈ ಕಾರಣದಿಂದಲೂ ಚಿತ್ರ ದೊಡ್ಡಮಟ್ಟದಲ್ಲಿ ಗಮನ ಸೆಳೆದಿದೆ.
ಪ್ರೇಕ್ಷಕರು ದುಬಾರಿ ವಿಎಫ್ ಎಕ್ಸ್ ದೃಶ್ಯಗಳನ್ನು ರೋಮಂಚನಗೊಂಡಿದ್ದಾರೆ.
ವರ್ಷದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ʼಕಲ್ಕಿ 2898 ಎಡಿʼ ಇದೇ ಜೂನ್ 27 ರಂದು ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼದೇವರʼ ಸಿನಿಮಾ ನೋಡುತ್ತಿರುವಾಗ ಥಿಯೇಟರ್ನಲ್ಲೇ ಕುಸಿದು ಬಿದ್ದು ಮೃತಪಟ್ಟ Jr NTR ಅಭಿಮಾನಿ
Devara: ಹೇಗಿದೆ ಜೂ.ಎನ್ಟಿಆರ್ ʼದೇವರʼ?: ನಿರೀಕ್ಷೆ-ನಿರಾಶೆ..ಪ್ರೇಕ್ಷಕರ ಅಭಿಪ್ರಾಯವೇನು?
Spirit Movie: ಪ್ರಭಾಸ್ ʼಸ್ಪಿರಿಟ್ʼನಲ್ಲಿ ಖಡಕ್ ವಿಲನ್ ಆಗಲಿದ್ದಾರೆ ಈ ಬಿಟೌನ್ ದಂಪತಿ
Actor Siddique: ಬಂಧನದ ಭೀತಿಯಿಂದ ತಲೆಮರೆಸಿಕೊಂಡ ನಟ ಸಿದ್ದೀಕ್: ಲುಕೌಟ್ ನೋಟಿಸ್ ಜಾರಿ
ಶಂಕರ್ ನಿರ್ದೇಶನದಲ್ಲಿ ಐತಿಹಾಸಿಕ ಸಿನಿಮಾ; 2 ದಶಕದ ಬಳಿಕ ಜತೆಯಾಗಲಿದ್ದಾರೆ ಸೂರ್ಯ- ವಿಕ್ರಮ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
BJP Meeting: ದಾವಣಗೆರೆಯಲ್ಲಿ ಯತ್ನಾಳ್, ರಮೇಶ್ ಜಾರಕಿಹೊಳಿ ಇಂದು ಮಹತ್ವದ ಸಭೆ
Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ
SAFF U-17 Championship: ಭಾರತ-ಬಾಂಗ್ಲಾ ಫೈನಲ್
Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್
ICC Women’s T20 World Cup: ವನಿತಾ ಟಿ20 ವಿಶ್ವಕಪ್; ಅಂಪಾಯರ್ಸ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.