ರೋಣ: ಹಸಿರು ಪೈರಿಗೆ ಜಿಂಕೆಗಳ ದಾಂಗುಡಿ; ರೈತ ಕಂಗಾಲು
Team Udayavani, Jun 10, 2024, 10:25 AM IST
ಉದಯವಾಣಿ ಸಮಾಚಾರ
ರೋಣ: ಹಚ್ಚ ಹಸಿರಿನ ಪೈರನ್ನೇ ಗುರಿಯಾಗಿಸಿಕೊಂಡು ಸಾಮೂಹಿಕ ವಾಗಿ ಲಗ್ಗೆ ಇಡುವ ಜಿಂಕೆಗಳ ಹಾವಳಿಯಿಂದ ಮಳೆಯಾಶ್ರಿತ ಕೃಷಿ ಮಾಡುವ ರೈತರು ನಲುಗಿ ಹೋಗಿದ್ದಾರೆ. ಅಸಮರ್ಪಕ ಮಳೆ ಹಾಗೂ ಬರದಿಂದ ತತ್ತರಿಸಿರುವ ಕೃಷಿಕರು ಮಳೆಗಾಗಿ ಹಾತೊರೆಯುತ್ತಿದ್ದಾರೆ. ಮೂರ್ನಾಲ್ಕು ವರ್ಷಗಳ ಸಂಕಷ್ಟಗಳು ನೀಗುತ್ತವೆ ಎಂಬ ಆಶಾಭಾವದೊಂದಿಗೆ ಸಾಲ ಮಾಡಿ ದುಬಾರಿ ಮೊತ್ತದ ಹೆಸರು ಬೀಜಗಳನ್ನು ಖರೀದಿಸಿ ಬಿತ್ತಿದ್ದಾರೆ. ಇದೀಗ ಬೀಜಗಳು ಮೊಳಕೆಯೊಡೆದು ಸಸಿಯಾಗುತ್ತಿದ್ದಂತೆಯೇ ಸಸಿಗಳು ಜಿಂಕೆಗಳ ಹೊಟ್ಟೆ ಸೇರುತ್ತಿದ್ದು, ಜಿಂಕೆ ಹಾವಳಿ ತಲೆನೋವಾಗಿ ಪರಿಣಮಿಸಿದೆ.
30ರಿಂದ 40ರಷ್ಟಿರುವ ಜಿಂಕೆಗಳ ಗುಂಪು ಕೇವಲ ಅರ್ಧ ಗಂಟೆಯಲ್ಲಿ ಎರಡೂ¾ರು ಎಕರೆ ಪ್ರದೇಶದಲ್ಲಿನ ಬೆಳೆ ನಾಶಪಡಿಸುತ್ತವೆ. ವರ್ಷದಿಂದ ವರ್ಷಕ್ಕೆ ಜಿಂಕೆಗಳ ಸಂತತಿ ಹೆಚ್ಚುತ್ತಲೇ ಇದೆ. ಬೆಳೆ ರಕ್ಷಣೆಗಾಗಿ ಜಿಂಕೆಗಳನ್ನು ಚದುರಿಸಲು ಹೋದರೆ ಅರಣ್ಯ ಇಲಾಖೆಯವರು ಬೇಟೆಯಾಡುವ ಕಾರಣ ನೀಡಿ ರೈತರನ್ನು ಜೈಲಿಗೆ ತಳ್ಳುತ್ತಾರೆನ್ನುವ ಭಯ ಕಾಡುತ್ತಿದೆ.
ರೈತರ ಬೆಳೆ ಪ್ರತಿ ವರ್ಷ ಹಾಳಾಗುತ್ತಿದ್ದರೂ ಸರ್ಕಾರ ಮಾತ್ರ ಈ ವಿಷಯ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ರೈತರ
ಅಳಲು.
ಪುಡಿಗಾಸಿನ ಪರಿಹಾರ: ರೈತರು ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆಹಾನಿಗೆ ಅರಣ್ಯ ಇಲಾಖೆ ಕೊಡುವ ಪುಡಿಗಾಸು ಪರಿಹಾರ ರೈತರಿಗೆ ಯಾವುದಕ್ಕೂ ಸರಿಯಾಗಲ್ಲ. ಸತತ ಬರಗಾಲ, ನೆರೆ ಹಾವಳಿಯಿಂದ ಬೆಂದು ಹೋಗಿರುವ ರೋಣ ತಾಲೂಕಿನ ರೈತರು ಈ ಬಾರಿ ಸುರಿದ ಉತ್ತಮ ಮಳೆಯಿಂದ ಬದುಕು ಕಟ್ಟಿಕೊಳ್ಳುವ ಆಶಾಭಾವನೆಯಲ್ಲಿದ್ದಾರೆ. ಆದರೆ ಮೊಳೆಕೆಯ
ಲ್ಲಿರುವ ಪೈರುಗಳಿಗೆ ಜಿಂಕೆಗಳ ಹಾವಳಿ ಮತ್ತೆ ರೈತರ ಆಸೆಗೆ ತಣ್ಣೀರೆರಚುತ್ತಿದೆ.
ಜಿಂಕೆ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ಬೆಳಿಗ್ಗೆಯಿಂದ ಸಂಜೆವರೆಗೆ ಕಾಯುತ್ತೇವೆ. ಆದರೆ ಸಂಜೆ ಮನೆಗೆ ತೆರಳಿದಾಗ ಜಿಂಕೆಗಳು ಜಮೀನಿಗೆ ನುಗ್ಗಿ ಪೈರು ತಿಂದು ಹಾಕುತ್ತವೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ನೀಡಬೇಕು.
*ಮಲ್ಲಣ್ಣ ಗಡಗಿ, ರೈತ
ಈ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಿಂಕೆಗಳಿರುವುದು ಗಮನಕ್ಕೆ ಬಂದಿದೆ. ಜಿಂಕೆ ಹಾವಳಿಯಿಂದ ಬೆಳೆಗಳು ಹಾಳಾದ
ಜಮೀನಿಗೆ ಹೋಗಿ ಸರ್ವೇ ಮಾಡಿ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲಾಗುವುದು.
*ಮಂಜುನಾಥ ಮೇಗಲಮನಿ,
ತಾಲೂಕು ವಲಯ ಅರಣ್ಯಾಧಿಕಾರಿ, ರೋಣ
ಅರಣ್ಯ ಇಲಾಖೆ ಅಂಕಿ-ಅಂಶಗಳ ಪ್ರಕಾರ ರೋಣ ತಾಲೂಕಿನಾದ್ಯಂತ 3000ಕ್ಕೂ ಹೆಚ್ಚು ಜಿಂಕೆಗಳಿವೆ. ಇವು ಕೃಷಿಕರ ಜಮೀನುಗಳಲ್ಲಿ ಬೆಳೆ ತಿಂದು ಹಾಕುತ್ತಿವೆ. ತಾಲೂಕಿನಲ್ಲಿ ಜಿಂಕೆಗಳ ಹಾವಳಿ ವ್ಯಾಪಕವಾಗಿದೆ. ಬೆಳವಣಿಗೆ ಹಂತದ ಪೈರಿನ ಮೇಲೆ ಜಿಂಕೆಗಳು ಸಾಮೂಹಿಕವಾಗಿ ದಾಂಗುಡಿ ಇಡುತ್ತ ಬೇರು ಸಹಿತ ಬೆಳೆ ನಾಶಪಡಿಸುತ್ತಿವೆ.
*ಬಾವಾಸಾಬ್ ಬೆಟಗೇರಿ, ರೋಣ, ರೈತ
*ಯಚ್ಚರಗೌಡ ಗೋವಿಂದಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಯಿಲಗೋಳ ಆರೋಗ್ಯ ಕೇಂದ್ರಕ್ಕಿಲ್ಲ ರಸ್ತೆ: ಬೀದಿದೀಪಗಳ ವ್ಯವಸ್ಥೆಯೂ ಇಲ್ಲ
Gadag: ತಂಗಿಯನ್ನು ಬರ್ಬರವಾಗಿ ಕೊಲೆಗೈದು ಪೊಲೀಸರಿಗೆ ಶರಣಾದ ಅಣ್ಣ
Vachana Darshan: ಆರ್ಎಸ್ಎಸ್ನಿಂದ ಲಿಂಗಾಯತರಲ್ಲಿ ಒಡಕು ಮೂಡಿಸುವ ಹುನ್ನಾರ: ಡಾ.ಜಾಮದಾರ
Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು
ಕಳಸಾ-ಬಂಡೂರಿ: ಮಹದಾಯಿ ಜಾರಿಗೆ ಕರವೇ ಪಾದಯಾತ್ರೆ ಆರಂಭ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.