T20 World Cup; ಡೆಡ್‌ಬಾಲ್‌ ನಿಯಮದಿಂದ ಬಾಂಗ್ಲಾಕ್ಕೆ ತಪ್ಪಿತು 4 ರನ್‌!


Team Udayavani, Jun 11, 2024, 8:37 PM IST

T20 World Cup; Bangladesh lost 4 runs due to the deadball rule!

ನ್ಯೂಯಾರ್ಕ್‌: ಸೋಮವಾರ ದ.ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಬಾಂಗ್ಲಾದೇಶ ವಿವಾದಾತ್ಮಕವಾಗಿ ಸೋತುಹೋಯಿತು.

ರನ್‌ ಬೆನ್ನತ್ತುತ್ತಿದ್ದ ಬಾಂಗ್ಲಾ ಇನಿಂಗ್ಸ್‌ನ 17ನೇ ಓವರ್‌, 2ನೇ ಎಸೆತದಲ್ಲಿ ಮಹ್ಮದುಲ್ಲ ಎಲ್ಬಿಡಬ್ಲ್ಯೂ ಔಟ್‌ ಎಂದು ಅಂಪೈರ್‌ ತೀರ್ಪಿತ್ತರು. ಅದೇ ವೇಳೆ ಚೆಂಡು ಬೌಂಡರಿ ಗೆರೆ ದಾಟಿತ್ತು. ಡಿಆರ್‌ಎಸ್‌ನಲ್ಲಿ ನಾಟೌಟ್‌ ತೀರ್ಪು ಬಂತು. ಆದರೆ ಅಂಪೈರ್‌ ಬೌಂಡರಿಯನ್ನು ಪರಿಗಣಿಸಿ 4 ರನ್‌ ನೀಡಲಿಲ್ಲ. ಇದಕ್ಕೆ ಕಾರಣ ಡೆಡ್‌ಬಾಲ್‌ ನಿಯಮ. ಇದು ಭಾರೀ ಚರ್ಚೆ-ವಿವಾದಕ್ಕೆ ಕಾರಣವಾಗಿದೆ.

ಏನಿದು ಗೊಂದಲ?: ಒಟ್ಟು 114 ರನ್‌ ಗಳಿಸುವ ಗುರಿ ಪಡೆದಿದ್ದ ಬಾಂಗ್ಲಾ ಕೊನೆಯ 4 ಓವರ್‌ಗಳಿದ್ದಾಗ 27 ರನ್‌ ಗಳಿಸಬೇಕಿತ್ತು. ಆಟ್ನೀಲ್‌ ಬಾರ್ಟ್‌ಮನ್‌ ಎಸೆದ 17ನೇ ಓವರ್‌ 2ನೇ ಎಸೆತ ಕ್ರೀಸ್‌ನಲ್ಲಿದ್ದ ಮಹ್ಮದುಲ್ಲ ಪ್ಯಾಡ್‌ಗೆ ಬಡಿಯಿತು. ಅಂಪೈರ್‌ ಎಲ್ಬಿಡಬ್ಲೂ ತೀರ್ಪು ನೀಡಿದರು. ಡಿಆರ್‌ಎಸ್‌ನಲ್ಲಿ ನಾಟೌಟ್‌ ತೀರ್ಪು ಬಂತು. ಅನಂತರ ಚೆಂಡನ್ನು ಲೆಕ್ಕಕ್ಕೇ ಸೇರಿಸಿದ್ದರೂ, ರನ್‌ ಯಾಕೆ ಸೇರಿಕೊಳ್ಳಲಿಲ್ಲ ಎಂಬ ಪ್ರಶ್ನೆ ಹುಟ್ಟಿತು.

ನಿಯಮಗಳ ಪ್ರಕಾರ, ಅಂಪೈರ್‌ ಔಟ್‌ ತೀರ್ಪು ಕೊಟ್ಟ ನಂತರ ಚೆಂಡನ್ನು ಡೆಡ್‌ಬಾಲ್‌ ಎಂದು ಪರಿಗಣಿಸಲಾಗುತ್ತದೆ. ಅಂದರೆ ತೀರ್ಪು ಕೊಟ್ಟ ನಂತರ ಏನೇ ನಡೆದರೂ ಅದು ಗಣನೆಗೆ ಬರುವುದಿಲ್ಲ. ತೀರ್ಪು ಕೊಟ್ಟ ಮೇಲೆ ಚೆಂಡು ಬೌಂಡರಿ ಗೆರೆ ದಾಟಿದ್ದರಿಂದ, ನಂತರದ ಬೆಳವಣಿಗೆಗಳು “ಡೆಡ್‌’ ಆದವು. ರನ್ನು ಬಾಂಗ್ಲಾ ತಂಡದ ಖಾತೆಗೆ ಹೋಗಲಿಲ್ಲ. ಡಿಆರ್‌ಎಸ್‌ ವೇಳೆ ನಾಟೌಟ್‌ ತೀರ್ಪು ಬಂದರೂ, ಬಾಂಗ್ಲಾಕ್ಕೆ ರನ್‌ ಮಾತ್ರ ಸಿಗಲಿಲ್ಲ. ವಿಚಿತ್ರವೆಂದರೆ ಬಾಂಗ್ಲಾ ತಂಡದ ಸೋಲಿನ ಅಂತರ ಕೇವಲ 4 ರನ್‌ಗಳು. ಈ ರನ್‌ ಸಿಕ್ಕಿದ್ದರೆ ಅದು ಗೆಲ್ಲುತ್ತಿತ್ತು ಅಭಿಮಾನಿಗಳು ವಾದಿಸುತ್ತಿದ್ದಾರೆ.

ಟಾಪ್ ನ್ಯೂಸ್

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

042174

WFI: ಕುಸ್ತಿಪಟುಗಳಿಗೆ ಡಬ್ಲ್ಯುಎಫ್ಐ ತಡೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

0888

Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.