ನಾಡದೋಣಿ ಮೀನುಗಾರರ ಕೈಹಿಡಿದ ಕೈಗಾರಿಕಾ ಸೀಮೆ ಎಣ್ಣೆ

8,030 ಪರವಾನಿಗೆದಾರರಿಗೆ ಸೀಮೆ ಎಣ್ಣೆ ಪೂರೈಕೆ; ಪ್ರತೀ ತಿಂಗಳು ಪರವಾನಿಗೆಗೆ 200 ಲೀ.ಗಳಂತೆ ಲಭ್ಯ

Team Udayavani, Jun 12, 2024, 7:15 AM IST

ನಾಡದೋಣಿ ಮೀನುಗಾರರ ಕೈಹಿಡಿದ ಕೈಗಾರಿಕಾ ಸೀಮೆ ಎಣ್ಣೆ

ಮಂಗಳೂರು: ಈ ಬಾರಿ ರಾಜ್ಯ ಸರಕಾರವು ಕೈಗಾರಿಕಾ ಸೀಮೆಎಣ್ಣೆ ಪೂರೈಸು ತ್ತಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ದೋಣಿ ಮೀನುಗಾರರು ನಿಟ್ಟು ಸಿರು ಬಿಡುವಂತಾಗಿದೆ.ಮಾಲಿನ್ಯಕಾರಕ ಎನ್ನುವ ಕಾರಣಕ್ಕೆ ಕೇಂದ್ರ ಸರಕಾರವು ರಾಜ್ಯ ಗಳಿಗೆ ನೀಡುವ ಸೀಮೆ ಎಣ್ಣೆಯನ್ನು ಕಡಿಮೆ ಮಾಡುತ್ತ ಬಂದಿತ್ತು.

ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ರಾಜ್ಯ ಸರಕಾರ ಇದಕ್ಕಾಗಿ ಕೈಗಾರಿಕೆಯಿಂದ ನೇರ ಖರೀದಿ ಮಾಡಿ ಕರಾವಳಿಯ ಮೂರು ಜಿಲ್ಲೆಗಳ 8,030 ಪರವಾನಿಗೆದಾರರಿಗೆ ರಿಯಾಯಿತಿ ದರದಲ್ಲಿ ಪ್ರತೀ ತಿಂಗಳು ಪರವಾನಿಗೆಗೆ 200 ಲೀ.ಗಳಂತೆ ಸೆಪ್ಟಂಬರ್‌ನಿಂದ ಮೇ ತಿಂಗಳ ವರೆಗೆ ನೀಡುತ್ತಿರುವುದು ಅನುಕೂಲವಾಗಿದೆ.

ಸಾಮಾನ್ಯವಾಗಿ ನಾಡದೋಣಿ ಮೀನುಗಾರರ ಚಟುವಟಿಕೆ ಚುರು ಕಾಗುವುದು ಯಾಂತ್ರೀಕೃತ ಮೀನುಗಾರಿಕೆಗೆ ರಜೆ ಘೋಷಣೆಯಾದ ಬಳಿಕ. ಅದಕ್ಕಾಗಿ ಇತರ ತಿಂಗಳುಗಳಲ್ಲಿ ಬರುವ ಸೀಮೆ ಎಣ್ಣೆಯನ್ನು ಮಿತವಾಗಿ ಬಳಸಿ, ಮಳೆಗಾಲಕ್ಕಾಗಿ ತೆಗೆದಿರಿಸುತ್ತಾರೆ.

ಎಚ್‌ಪಿಸಿಎಲ್‌ನಿಂದ ಸೀಮೆ ಎಣ್ಣೆ
ಪ್ರಸ್ತುತ ಮಂಗಳೂರಿನ ಎಚ್‌ಪಿಸಿಎಲ್‌ ಕಂಪೆನಿಯಿಂದ ಬಿಳಿ ಸೀಮೆ ಎಣ್ಣೆಯನ್ನು ಕರ್ನಾಟಕ ಮೀನು ಗಾರಿಕಾ ಅಭಿವೃದ್ಧಿ ನಿಗಮದವರು ಖರೀದಿಸಿ, ಮೂರೂ ಜಿಲ್ಲೆಗಳ ಸಾಂಪ್ರದಾಯಿಕ ಮೀನುಗಾರರ ಸೊಸೈಟಿಗಳಿಗೆ ಕಳುಹಿಸುತ್ತಿದ್ದಾರೆ.

ಹಿಂದೆ ಸಬ್ಸಿಡಿ ರಹಿತ ಪಡಿತರ ಸೀಮೆ ಎಣ್ಣೆಯನ್ನು ಕೇಂದ್ರ ಸರಕಾರ ಲೀಟರ್‌ಗೆ 35 ರೂ.ನಂತೆ ಕೊಡುತ್ತಿತ್ತು. 4 ಸಾವಿರ ಮೀನುಗಾರಿಕಾ ಪರ ವಾನಿಗೆ ಮಾತ್ರವೇ ಇಲಾಖೆಯಲ್ಲಿ ತೋರಿಸಲ್ಪಟ್ಟಿರುವ ಕಾರಣ ಹೆಚ್ಚುವರಿ 4,030 ಪರವಾನಿಗೆಗಳಿಗೂ ಸೀಮೆ ಎಣ್ಣೆ ಹಂಚುವ ಒತ್ತಡ ಇಲಾಖೆಗೆ ಇತ್ತು. ಈಗ ದರ ತುಸು ಹೆಚ್ಚಾದರೂ ಸೀಮೆ ಎಣ್ಣೆ ಪ್ರತೀ ತಿಂಗಳೂ ಸಿಗುತ್ತಿದೆ. ಹಿಂದೆ 35 ರೂ. ಇದ್ದರೆ ಈಗ 56.75 ರೂ.ನಂತೆ ಮೀನುಗಾರರಿಗೆ ಪೂರೈಕೆ ಮಾಡ ಲಾಗುತ್ತಿದೆ. ಮಾರುಕಟ್ಟೆ ದರ ದಿಂದ ಸರಕಾರ ನೀಡುವ 35 ರೂ. ಸಬ್ಸಿಡಿ ಕಳೆದು ಈ ದರದಲ್ಲಿ ನೀಡ ಲಾಗು ತ್ತಿದೆ. ರಾಜ್ಯ ಸರಕಾರದ ಈ ಯೋಜನೆ ಯನ್ನು ಮೀನುಗಾರಿಕಾ ಅಭಿವೃದ್ಧಿ ನಿಯಮ ಅನುಷ್ಠಾನ ಮಾಡುತ್ತಿದೆ.

ಬ್ಯಾಟರಿ ಎಂಜಿನ್‌ ಬಂದಿಲ್ಲ
ಸೀಮೆ ಎಣ್ಣೆ ಪರಿಸರಕ್ಕೆ ಮಾಲಿನ್ಯಕಾರಿ ಎಂಬ ಕಾರಣಕ್ಕೆ ದೋಣಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಕೇಂದ್ರ ಸರಕಾರ ಹಿಂದೆ ಹೇಳಿದೆ. ಆದರೆ ಪರ್ಯಾಯ ವ್ಯವಸ್ಥೆ ಮಾಡದೇ ಏಕಾಏಕಿ ನಿಲ್ಲಿಸಿದ್ದು ಸರಿಯಲ್ಲ ಎಂದು ಪರ್ಯಾಯವಾಗಿ ಬ್ಯಾಟರಿ ಎಂಜಿನ್‌ ಇನ್ನೂ ಬಂದಿಲ್ಲ ಎನ್ನುತ್ತಾರೆ ಸಾಂಪ್ರದಾಯಿಕ ದೋಣಿ ಮೀನುಗಾರರು.

ರಾಜ್ಯ ಸರಕಾರದ ಯೋಜನೆಯಿಂದ ಸೀಮೆ ಎಣ್ಣೆ ನಿರಂತರ ಸಿಗುತ್ತಿದೆ. ಮತ್ಸ é ಕ್ಷಾಮ ಇರುವ ಸಂದರ್ಭ ದೂರ ಹೋಗುವುದು ವೆಚ್ಚ ದಾಯಕ. ಹಾಗಾಗಿ ಮಳೆಗಾಲದಲ್ಲಿ ಇತರ ಮೀನುಗಾರಿಕೆ ನಿಂತಾಗ ನಮಗೆ ಸ್ವಲ್ಪ ಲಾಭವಾಗುತ್ತದೆ.
-ಅಶ್ವತ್ಥ್ ಕಾಂಚನ್‌, ಅಧ್ಯಕ್ಷರು,
ದ.ಕ. ಮೂಲ ಮೀನುಗಾರರ ಸಂಘ

-ವೇಣು ವಿನೋದ್‌ ಕೆ.ಎಸ್‌

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.