T20 WC; ನೇಪಾಳ -ಲಂಕಾ ಪಂದ್ಯ ಮಳೆಯಿಂದ ರದ್ದು: ದಕ್ಷಿಣ ಆಫ್ರಿಕಾ ಸೂಪರ್ 8 ಪ್ರವೇಶ
ಅಜೇಯ ಆಸ್ಟ್ರೇಲಿಯ ಸೂಪರ್ 8ಕ್ಕೆ... ಕೆನಡಾ ವಿರುದ್ಧ ಜಯ ; ಪಾಕ್ ಆಸೆ ಜೀವಂತ
Team Udayavani, Jun 12, 2024, 10:52 AM IST
ನ್ಯೂಯಾರ್ಕ್ : ಶ್ರೀಲಂಕಾ ಮತ್ತು ನೇಪಾಳ ನಡುವಿನ ಪಂದ್ಯ ಮಳೆಯಿಂದ ವಾಶ್ಔಟ್ ಆದ ನಂತರ ಟಿ 20 ವಿಶ್ವಕಪ್ನ ಸೂಪರ್ 8 ಹಂತಕ್ಕೆ ಅಧಿಕೃತವಾಗಿ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ದಕ್ಷಿಣ ಆಫ್ರಿಕಾ ಪಾತ್ರವಾಗಿದೆ.
ಪಂದ್ಯ ರದ್ದಾದುದು ಶ್ರೀಲಂಕಾದ ಮುಂದಿನ ಹಂತ ಪ್ರವೇಶದ ಸಾಧ್ಯತೆಗಳನ್ನು ಸಂಪೂರ್ಣವಾಗಿ ಕುಗ್ಗಿಸಿದೆ, ತಂಡ ಸರಣಿಯಿಂದ ಹೊರ ಬೀಳುವ ಅಂಚಿನಲ್ಲಿ ಇದೆ.
ಗ್ರೂಪ್ ಡಿ ಯಲ್ಲಿ ಬಾಂಗ್ಲಾದೇಶದ ವಿರುದ್ಧದ ಸೋಲಿನ ನಂತರ ಶ್ರೀಲಂಕಾ ಹಾದಿ ಕಠಿನ ವಾಗಿತ್ತು. ಶ್ರೀಲಂಕಾ ಉಳಿದ ಪಂದ್ಯಗಳನ್ನು ಗೆಲ್ಲಬೇಕಿತ್ತು. ಮೂರು ಪಂದ್ಯಗಳಿಂದ ಕೇವಲ ಒಂದು ಪಾಯಿಂಟ್ ಹೊಂದಿದೆ. ಅಂತಿಮ ಪಂದ್ಯವನ್ನು ಜೂನ್ 16 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಆಡಲಿದೆ.
ಅಜೇಯ ಆಸ್ಟ್ರೇಲಿಯ ಸೂಪರ್ 8ಕ್ಕೆ
ಗ್ರೂಪ್ ಬಿ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ನಮೀಬಿಯಾ ವಿರುದ್ಧ 9 ವಿಕೆಟ್ ಭರ್ಜರಿ ಜಯ ಸಾಧಿಸಿ 3 ರಲ್ಲಿ 3 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೂಪರ್ 8 ಹಂತಕ್ಕೆ ಪ್ರವೇಶಿಸಿದೆ. ನಮೀಬಿಯಾ 17 ಓವರ್ ಗಳಲ್ಲಿ 72ಕ್ಕೆ ಆಲೌಟಾದರೆ, ಗುರಿ ಬೆನ್ನಟ್ಟಿದ ಆಸೀಸ್ 5.4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿ ಸುಲಭ ಜಯ ತನ್ನದಾಗಿಸಿಕೊಂಡಿತು. ನಮೀಬಿಯಾ ಸರಣಿಯಿಂದ ಹೊರ ಬಿದ್ದಿತು.
ಕೆನಡಾ ವಿರುದ್ಧ ಜಯ ; ಪಾಕ್ ಆಸೆ ಜೀವಂತ
ಮಂಗಳವಾರ ನಡೆದ ಎ ಗುಂಪಿನ ಗೆಲ್ಲಲೇಬೇಕಾದ ಪಂದ್ಯದಲ್ಲಿ ಪಾಕಿಸ್ಥಾನ ತಂಡವು ಕೆನಡಾ ವಿರುದ್ಧ ಏಳು ವಿಕೆಟ್ಗಳ ಜಯ ಸಾಧಿಸಿದೆ.
ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕೆನಡಾ ಆರನ್ ಜಾನ್ಸನ್ 52 ರನ್ ಗಳಿಸಿದರೂ ಪಾಕಿಸ್ಥಾನ ಏಳು ವಿಕೆಟ್ಗೆ ಸಾಧಾರಣ 106 ಕ್ಕೆ ನಿರ್ಬಂಧಿಸಿತು. ಇತರ ಬ್ಯಾಟ್ಸ್ ಮ್ಯಾನ್ ಗಳು ಪ್ರಭಾವ ಬೀರಲು ವಿಫಲರಾದರು.ಪಾಕ್ ಪರ ಮೊಹಮ್ಮದ್ ಅಮೀರ್ ಮತ್ತು ಹ್ಯಾರಿಸ್ ರೌಫ್ ತಲಾ ಎರಡು ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಪಾಕಿಸ್ಥಾನ ಮೊಹಮ್ಮದ್ ರಿಜ್ವಾನ್ ಅವರ ಅಜೇಯ 53 ಮತ್ತು ನಾಯಕ ಬಾಬರ್ ಅಜಮ್ ಅವರ 33 ರನ್ ಕೊಡುಗೆಯಿಂದ 17.3 ಓವರ್ಗಳಲ್ಲಿ ಜಯ ಸಾಧಿಸಿತು. ಕೆನಡಾ ಪರ ದಿಲೋನ್ ಹೆಲಿಗರ್ 2 ವಿಕೆಟ್ ಪಡೆದರು.
ಪಾಕ್ ಹೇಗೆ ಮುಂದಿನ ಹಂತಕ್ಕೇರಬಹುದು?
ಮುಂದಿನ ಹಂತಕ್ಕೇರಲು ಪಾಕಿಸ್ಥಾನ ತಂಡವು ಉಳಿದ ಪಂದ್ಯವನ್ನು ಗೆಲ್ಲಲೇಬೇಕು. ಜೂನ್ 16 ರಂದು ಐರ್ಲೆಂಡ್ ವಿರುದ್ದ ಪಾಕ್ ಆಡಲಿದೆ. ಅಷ್ಟೇ ಅಲ್ಲದೆ ಯುಎಸ್ಎ ಮತ್ತು ಕೆನಡಾ ತಂಡಗಳು ಗುಂಪು ಹಂತದಲ್ಲಿ ಉಳಿದ ಪಂದ್ಯದ ಫಲಿತಾಂಶವೂ ನಿರ್ಣಾಯಕವಾಗಲಿದೆ. ಸೂಪರ್ 8 ಪ್ರವೇಶದ ತವಕದಲ್ಲಿರುವ ಯುಎಸ್ಎ ತಂಡಕ್ಕಿಂತ ಹೆಚ್ಚು ರನ್ ರೇಟ್ ಪಡೆದರೆ ಪಾಕ್ ಮುಂದಿನ ಹಂತಕ್ಕೆ ಅವಕಾಶ ಪಡೆಯಬಹುದು. ಯುಎಸ್ಎ ತಂಡ ಭಾರತ ಮತ್ತು ಐರ್ಲೆಂಡ್ ವಿರುದ್ದ ಭಾರೀ ಅಂತರದ ಸೋಲು ಅನುಭವಿಸಿದರೆ ಪಾಕ್ ಗೆ ಲಕ್ ಒಲಿಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!
BBK11: ಬಿಗ್ ಬಾಸ್ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..
Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ
Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ
Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.