Darshan: ಸ್ಯಾಂಡಲ್‌ವುಡ್‌ಗೆ ಮತ್ತೆ ಆತಂಕ; ಚಿಗುರಿದ ಕನಸಿಗೆ ದರ್ಶನ್ ಏಟು


Team Udayavani, Jun 12, 2024, 11:31 AM IST

Darshan: ಸ್ಯಾಂಡಲ್‌ವುಡ್‌ಗೆ ಮತ್ತೆ ಆತಂಕ; ಚಿಗುರಿದ ಕನಸಿಗೆ ದರ್ಶನ್ ಏಟು

ಸಿನಿಮಾಗಳು ಗೆದ್ದ ಸಂಭ್ರಮದಲ್ಲಿ ತೇಲಾಡಬೇಕಿದ್ದ ಕನ್ನಡ ಚಿತ್ರರಂಗ ಒಂದರ ಹಿಂದೊಂದರಂತೆ ಶಾಕಿಂಗ್‌ ನ್ಯೂಸ್‌ಗಳನ್ನು ಎದುರಿಸುತ್ತಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಿನಿಮಾಗಳ ಸುದ್ದಿಯ ಬದಲು ಕನ್ನಡ ಚಿತ್ರರಂಗದ ವಿವಾದಗಳು ಸದ್ದು ಮಾಡುತ್ತವೆ. ಇದೇ ಕಾರಣದಿಂದ ಸಿನಿಮಾ ಮಂದಿ ನಿಜಕ್ಕೂ ಶಾಕ್‌ ಆಗಿದ್ದಾರೆ. ‌

ಕೆಲವು ದಿನಗಳ ಹಿಂದಷ್ಟೇ ಚಂದನ್‌-ನಿವೇದಿತಾ ಡೈವೋರ್ಸ್‌ ಸುದ್ದಿ, ಅದರ ಬೆನ್ನಿಗೆ ದೊಡ್ಮನೆಯ ಕುಡಿ ವಿನಯ್‌ ವಿಚ್ಛೇದನ… ಈಗ ಕೊಲೆ ಆರೋಪಿಯಾದ ದರ್ಶನ್‌.

ವಿಚ್ಛೇದನವೇನೋ ಅವರವರ ವೈಯಕ್ತಿಕ ವಿಚಾರವೆಂದು ಪಕ್ಕಕ್ಕಿಟ್ಟರೂ ಸದ್ಯ ದರ್ಶನ್‌ ಪ್ರಕರಣವಂತೂ ಇಡೀ ಸ್ಯಾಂಡಲ್‌ವುಡ್‌ ತಲೆತಗ್ಗಿಸುವಂತಾಗಿರುವುದು ಸುಳ್ಳಲ್ಲ. ಕೆಲವು ದಿನಗಳ ಹಿಂದಷ್ಟೇ ಗೋವಾದಲ್ಲಿ ನಿರ್ಮಾಪಕರು ಪಾರ್ಟಿ ಮಾಡಿ ಹೊಡೆದಾಡಿದ ವಿಚಾರಕ್ಕೆ ಸ್ಯಾಂಡಲ್‌ವುಡ್‌ ಬಗ್ಗೆ ಅನೇಕರು ತುತ್ಛವಾಗಿ ಮಾತನಾಡುತ್ತಿದ್ದರು.

ಈಗ ಬಹುಬೇಡಿಕೆಯ, ಅಪಾರ ಅಭಿಮಾನಿ ವರ್ಗ ಹೊಂದಿರುವ ಸ್ಟಾರ್‌ ನಟನೊಬ್ಬ ಸಣ್ಣ ವಿಚಾರಕ್ಕೆ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡುವ, ಮಾಡಿಸುವ ಹಂತಕ್ಕೆ ಹೋಗುತ್ತಾನೆ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವರ್ಷ ಕನ್ನಡ ಚಿತ್ರರಂಗದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾದರೂ ಯಾವ ಸಿನಿಮಾವೂ ಗೆದ್ದಿಲ್ಲ. ಸೆಕೆಂಡ್‌ ಹಾಫ್ ನ ಲ್ಲಾದರೂ ಸಿನಿಮಾಗಳು ಗೆಲ್ಲಬಹುದು, ಯಶಸ್ಸನ್ನು ಸಂಭ್ರಮಿಸಬಹುದು ಎಂದು ಕಾಯುತ್ತಿದ್ದ ಸಿನಿಮಾ ಮಂದಿ ಹಾಗೂ ಪ್ರೇಕ್ಷಕರಿಗೆ ಸ್ಯಾಂಡಲ್‌ವುಡ್‌ ನಟ ಶಾಕ್‌ ನೀಡಿದಂತಾಗಿದೆ. ಒಂದಷ್ಟು ದಿನವಂತೂ ಸ್ಯಾಂಡಲ್‌ವುಡ್‌ ಇದೇ ಸುದ್ದಿಯ ಗುಂಗಲ್ಲಿರುವುದಂತೂ ಸುಳ್ಳಲ್ಲ.

ರಿಲೀಸ್‌ ಸಿನಿಮಾಗಳ ಟೆನ್ಷನ್‌: ಈ ವಾರ ಕನ್ನಡ ಚಿತ್ರರಂಗದಲ್ಲಿ ಆರು ಚಿತ್ರಗಳು ಬಿಡುಗಡೆಯಾಗುತ್ತಿವೆ ಕೋಟಿ, ಲವ್‌ಲೀ, ಶಿವಮ್ಮ, ಶೆಫ್ ಚಿದಂಬರ, ಚಿ. ತು. ಸಂಘ, ಯಾವೋ ಇವೆಲ್ಲ ಚಿತ್ರಗಳು ಈ ವಾರ ಅದೃಷ್ಟ ಪರೀಕ್ಷೆಗೆ ಇಳಿದಿವೆ. ಇದರಲ್ಲಿ ಒಂದಷ್ಟು ಸಿನಿಮಾಗಳು ನಿರೀಕ್ಷೆ ಕೂಡಾ ಹುಟ್ಟು ಹಾಕಿವೆ. ಆದರೆ, ಈಗ ಆ ಸಿನಿಮಾಗಳಿಗೆ ದರ್ಶನ್‌ ಪ್ರಕರಣದ ಕರಿನೆರಳು ಬೀಳುತ್ತಾ ಎಂಬ ಚಿಂತೆಯಾಗಿದೆ.

ಮುಖ್ಯವಾಗಿ ಜನರ ಹಾಗೂ ಮಾಧ್ಯಮಗಳ ಗಮನವೆಲ್ಲಾ ಈ ಘಟನೆಯ ಮೇಲಿದೆ. ಹೀಗಿರುವಾಗ ತಮ್ಮ ಸಿನಿಮಾಗಳಿಗೆ ಸಿಗಬೇಕಾದ ಪ್ರಚಾರ,ಮಾನ್ಯತೆ ಸಿಗುತ್ತಾ ಎಂಬ ಟೆನ್ಷನ್ ಅಂತೂ ತಂಡಗಳಿಗೆ ಇವೆ. ‌

ಅತಿರೇಕದ ಅಭಿಮಾನ: ಅಭಿಮಾನಿಗಳ ಅತಿರೇಕದ ಅಭಿಮಾನ ಇವತ್ತು ಸ್ಟಾರ್‌ ನಟರನ್ನು ದಾರಿ ತಪ್ಪಿಸುತ್ತಿದೆಯಾ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ತಾವೇನು ಮಾಡಿದರೂ “ಜೈಕಾರ’ ಹಾಕುತ್ತಾರೆ ಎಂಬ ಮನಸ್ಥಿತಿಗೆ ಸ್ಟಾರ್‌ ನಟರು ಬಂದರೆ ಅದು ಮುಂದೆ ಅನೇಕ ಅನಾಹುತಗಳಿಗೆ ದಾರಿ ಮಾಡಿಕೊಡುವುದರಲ್ಲಿ ಎರಡು ಮಾತಿಲ್ಲ. ಒಳ್ಳೆಯ ಸಿನಿಮಾಗಳನ್ನು ಗೆಲ್ಲಿಸಿ ಆ ಮೂಲಕ ಸ್ಟಾರ್‌ ನಟನನ್ನು ಅಭಿಮಾನಿಗಳು ಮೆರೆಸಬೇಕೇ ವಿನಃ ಆತ ಮಾಡಿದ ತಪ್ಪುಗಳನ್ನು ಸಮಜಾಯಿಷಿಕೊಂಡಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

 

ಟಾಪ್ ನ್ಯೂಸ್

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

3-vitla

Campco ಮಾಜಿ ಅಧ್ಯಕ್ಷ ಎಲ್.ಎನ್. ಕೂಡೂರು ಇನ್ನಿಲ್ಲ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 WC; This is my luck…..: Coach Rahul Dravid

T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

2-kushtagi

Kushtagi: ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada movie Taj releasing soon

Sandalwood; ಟ್ರೇಲರ್‌ನಲ್ಲಿ ‘ತಾಜ್‌’ ಪ್ರೀತಿ; ಹೊಸಬರ ಚಿತ್ರ ತೆರೆಗೆ ಸಿದ್ಧ

No problem anyone comes in front of Martin…: Producer Uday Mehta

Martin ಮುಂದೆ ಯಾರೇ ಬರಲಿ ನೋ ಪ್ರಾಬ್ಲಂ…: ನಿರ್ಮಾಪಕ ಉದಯ್‌ ಮೆಹ್ತಾ

6

Actor Darshan: ಜೈಲಿನ ಬಳಿ ಯಾರೂ ಬರಬೇಡಿ; ಫ್ಯಾನ್ಸ್‌ಗೆ ದರ್ಶನ್‌ ಮನವಿ

nange allava song

Nange Allava Song; ಸಂಜನಾ ದಾಸ್ ಜತೆಗೆ ಹೆಜ್ಜೆ ಹಾಕಿದ ಸಂಜಿತ್ ಹೆಗ್ಡೆ

Sandalwood; ಟೀನೇಜ್ ಲವ್ ಸ್ಟೋರಿಗೆ ‘ಕಾಗದ’ ಸಾಕ್ಷಿ

Sandalwood; ಟೀನೇಜ್ ಲವ್ ಸ್ಟೋರಿಗೆ ‘ಕಾಗದ’ ಸಾಕ್ಷಿ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

4-btwl

Bantwala: ಮರ ಬಿದ್ದು ಕೋಳಿ ಫಾರಂ ಜಖಂ

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Untitled-1

Bengaluru: ಬೆಂಕಿ ಅವಘಡ; 6 ಕಾಲೇಜು ಬಸ್‌ಗಳು ಸುಟ್ಟು ಕರಕಲು

3-vitla

Campco ಮಾಜಿ ಅಧ್ಯಕ್ಷ ಎಲ್.ಎನ್. ಕೂಡೂರು ಇನ್ನಿಲ್ಲ

Bengaluru: ಟ್ರಾಫಿಕ್‌ ಜಾಮ್‌ ಪರಿಹಾರಕ್ಕೆ ಕೇಂದ್ರದ ಮೊರೆ ಹೋದ ರಾಜ್ಯ

Bengaluru: ಟ್ರಾಫಿಕ್‌ ಜಾಮ್‌ ಪರಿಹಾರಕ್ಕೆ ಕೇಂದ್ರದ ಮೊರೆ ಹೋದ ರಾಜ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.