Indian Films: ಯುಕೆ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ಗೆ ಭಾರತದ ಎರಡು ಚಿತ್ರಗಳು ನಾಮಿನೇಟ್
Team Udayavani, Jun 12, 2024, 4:23 PM IST
ನವದೆಹಲಿ: ಧನುಷ್ ಅಭಿನಯದ ʼಕ್ಯಾಪ್ಟನ್ ಮಿಲ್ಲರ್ʼ ಹಾಗೂ ಹಿಂದಿಯ ʼಭಕ್ಷಕ್ʼ ಚಿತ್ರಗಳು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸುದ್ದಿಯಾಗಿದೆ.
ಪ್ರತಿಷ್ಠಿತ ಯುಕೆ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರದ ವಿಭಾಗದಲ್ಲಿ ಭಾರತದ ತಮಿಳು ಭಾಷೆಯ ʼಕ್ಯಾಪ್ಟನ್ ಮಿಲ್ಲರ್ʼ ಹಾಗೂ ಹಿಂದಿಯ ʼಭಕ್ಷಕ್ʼ ಚಿತ್ರಗಳು ನಾಮಿನೇಟ್ ಆಗಿದೆ.
‘ಯು ಆರ್ ನಾಟ್ ಅಲೋನ್: ಫೈಟಿಂಗ್ ದಿ ವುಲ್ಫ್ ಪ್ಯಾಕ್’,(ಸ್ಪೇನ್), ‘ದಿ ಪರೇಡ್ಸ್'(ಜಪಾನ್), ‘ರೆಡ್ ಒಲ್ಲೆರೊ: ಮಬುಹೇ ಈಸ್ ಎ ಲೈʼ(ಫಿಲಿಪೈನ್ಸ್), ‘ಸಿಕ್ಸ್ಟಿ ಮಿನಿಟ್ಸ್ʼ(ಜರ್ಮನಿ), ‘ದಿ ಹಾರ್ಟ್ ಬ್ರೇಕ್ ಏಜೆನ್ಸಿ'(ಜರ್ಮನಿ) ಚಿತ್ರಗಳೊಂದಿಗೆ ಭಾರತದ ಎರಡು ಚಿತ್ರಗಳು ಪೈಪೋಟಿ ನಡೆಸಲಿವೆ.
ಈ ಬಗ್ಗೆ ʼಕ್ಯಾಪ್ಟನ್ ಮಿಲ್ಲರ್ʼ ಚಿತ್ರತಂಡ ʼಎಕ್ಸ್ʼ ನಲ್ಲಿ ಸಂತಸವನ್ನು ಹಂಚಿಕೊಂಡಿದೆ.
ಅರುಣ್ ಮಾಥೇಶ್ವರನ್ ನಿರ್ದೇಶನದ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಧನುಷ್, ಸಂದೀಪ್ ಕಿಶನ್, ಪ್ರಿಯಾಂಕಾ ಮೋಹನ್, ನಿವೇದಿತಾ ಸತೀಶ್ ಮತ್ತು ಎಡ್ವರ್ಡ್ ಸೊನ್ನೆನ್ಬ್ಲಿಕ್ ಮುಂತಾದವರು ನಟಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದ ಹೋರಾಟದ ಕಥೆ ಸಿನಿಮಾದಲ್ಲಿದೆ.
ಇನ್ನು ಭೂಮಿ ಪೆಡ್ನೇಕರ್ ಪ್ರಧಾನ ಪಾತ್ರದ ʼಭಕ್ಷಕ್ʼ ದಿಟ್ಟೆ ಪತ್ರಕರ್ತೆ ಸುತ್ತ ಸಾಗುವ ಕಥೆಯನ್ನು ಒಳಗೊಂಡಿದೆ. ಈ ಸಿನಿಮಾವನ್ನು ಪುಲ್ಕಿತ್ ನಿರ್ದೇಶನ ಮಾಡಿದ್ದಾರೆ. ಫೆ. 9 ರಂದು ನೆಟ್ ಫ್ಲಿಕ್ಸ್ ನಲ್ಲಿ ಚಿತ್ರ ತೆರೆಕಂಡಿತ್ತು.
ಪ್ರಶಸ್ತಿ ಕಾರ್ಯಕ್ರಮ ಜುಲೈ 3 ರಂದು ಲಂಡನ್ನ ಪೋರ್ಚೆಸ್ಟರ್ ಹಾಲ್ನಲ್ಲಿ ನಡೆಯಲಿದೆ.
Happy to announce #CaptainMiller has been nominated in the Prestigious National Film Awards , London for the category ” Best Foreign Language Film 2024 ” 🙏❤️@dhanushkraja @ArunMatheswaran @NimmaShivanna @sundeepkishan @gvprakash @priyankaamohan @dhilipaction @siddnunidop pic.twitter.com/rXlpDOUtRd
— Sathya Jyothi Films (@SathyaJyothi) June 11, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼದೇವರʼ ಸಿನಿಮಾ ನೋಡುತ್ತಿರುವಾಗ ಥಿಯೇಟರ್ನಲ್ಲೇ ಕುಸಿದು ಬಿದ್ದು ಮೃತಪಟ್ಟ Jr NTR ಅಭಿಮಾನಿ
Devara: ಹೇಗಿದೆ ಜೂ.ಎನ್ಟಿಆರ್ ʼದೇವರʼ?: ನಿರೀಕ್ಷೆ-ನಿರಾಶೆ..ಪ್ರೇಕ್ಷಕರ ಅಭಿಪ್ರಾಯವೇನು?
Spirit Movie: ಪ್ರಭಾಸ್ ʼಸ್ಪಿರಿಟ್ʼನಲ್ಲಿ ಖಡಕ್ ವಿಲನ್ ಆಗಲಿದ್ದಾರೆ ಈ ಬಿಟೌನ್ ದಂಪತಿ
Actor Siddique: ಬಂಧನದ ಭೀತಿಯಿಂದ ತಲೆಮರೆಸಿಕೊಂಡ ನಟ ಸಿದ್ದೀಕ್: ಲುಕೌಟ್ ನೋಟಿಸ್ ಜಾರಿ
ಶಂಕರ್ ನಿರ್ದೇಶನದಲ್ಲಿ ಐತಿಹಾಸಿಕ ಸಿನಿಮಾ; 2 ದಶಕದ ಬಳಿಕ ಜತೆಯಾಗಲಿದ್ದಾರೆ ಸೂರ್ಯ- ವಿಕ್ರಮ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Google 25th Birthday! ಗ್ಯಾರೇಜ್ನಿಂದ ಮೌಂಟ್ವಿವ್ವರೆಗೆ….ಗೂಗಲ್ ರಜತ ಸಂಭ್ರಮ
Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್ ಖಾನ್
Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್ ಬಸ್’
Israel: ಬೈರೂತ್ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ಸಾವು: ಇಸ್ರೇಲ್ ಸೇನೆ
Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.