Gangavalli Bridge ಕೂಡುರಸ್ತೆ ಕುಸಿತ; ವಾಹನ ಸವಾರರ ಪರದಾಟ
ಕಾಟಾಚಾರಕ್ಕೆ ಮಣ್ಣು ಹಾಕಿ ಹೋದ ಗುತ್ತಿಗೆ ಕಂಪನಿ
Team Udayavani, Jun 12, 2024, 5:24 PM IST
ಗೋಕರ್ಣ : ಮಳೆಗಾಲಕ್ಕೂ ಪೂರ್ವದಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ಮಾಡಲು ಗಂಗಾವಳಿ ಸೇತುವೆಯಿಂದ ಮಂಜಗುಣಿ ಮತ್ತು ಗಂಗಾವಳಿಯಲ್ಲಿ ಕೂಡುರಸ್ತೆಗೆ ಮಣ್ಣನ್ನು ಹಾಕಲಾಗಿತ್ತು. ಆದರೆ ಅದು ಈಗ ಗಂಗಾವಳಿಯಲ್ಲಿ ಕುಸಿದಿದ್ದರಿಂದ ಈಗ ಹಾಕಲಾದ ಮಣ್ಣಿನಿಂದಾಗಿ ವಾಹನ ಸಂಚರಿಸಲು ಕಷ್ಟಪಡುವಂತಾಗಿದೆ.
ಈ ಹಿಂದೆ ಹಾಕಿದ ಮಣ್ಣು ಮಳೆಯ ನೀರಿಗೆ ಕುಸಿದಿದ್ದರಿಂದಾಗಿ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ನಂತರ ಗುತ್ತಿಗೆ ಕಂಪನಿಯವರು ಹಾಕಿದ ಮಣ್ಣಿನಿಂದಗಿ ಇನ್ನಷ್ಟು ಸಮಸ್ಯೆ ಉಂಟಾಗಿದೆ. ಕೆಂಪು ಮಣ್ಣಿನಿಂದಾಗಿ ಮಳೆಗೆ ಸಂಪೂರ್ಣ ಕೊಳಚೆಯಾಗಿದ್ದು, ದ್ವಿಚಕ್ರ ವಾಹನದವರು ಕೂಡ ಸಂಚರಿಸಲು ಭಯಪಡುವಂತಾಗಿದೆ. ಇನ್ನು ರಿಕ್ಷಾ, ಕಾರಿನವರು ಕೂಡ ಸಂಚರಿಸಲು ಭಯಪಡುತ್ತಾರೆ.
ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು, ದ್ವಿಚಕ್ರ ವಾಹನ ಹಾಗೇ ಇತರೆ ವಾಹನಗಳು ಸಂಚರಿಸುತ್ತವೆ. ಸೇತುವೆಗೆ ಹಾಕಿದ ಮಣ್ಣು ಕುಸಿದಿದ್ದರೂ ಕೂಡ ತಾಲೂಕಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ನಿಜಕ್ಕೂ ವಿಪರ್ಯಾಸ. ಗಂಗಾವಳಿ ಕೂಡುರಸ್ತೆಯು ಕುಮಟಾ ತಾಲೂಕಿಗೆ ಒಳಪಟ್ಟಿದ್ದು, ಇನ್ನುವರೆಗೂ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿಲ್ಲ. ಕಂಪನಿಯವರಿಂದ ಉತ್ತಮ ಗುಣಮಟ್ಟದ ಮಣ್ಣು ಹಾಕುವಂತೆ ತಾಕತ್ತು ಮಾಡುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 7 ವರ್ಷಗಳಿಂದ ಈ ಸೇತುವೆ ಕಾಮಗಾರಿ ನಡೆದಿದ್ದು, ಸೇತುವೆ ಪೂರ್ಣಗೊಂಡರೂ ಕೂಡ ಕೂಡು ರಸ್ತೆ ಸರಿಪಡಿಸಲು ಗುತ್ತಿಗೆ ಕಂಪನಿಯವರು ವಿಫಲರಾಗಿದ್ದಾರೆ. ಆದರೆ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಕೂಡ ಸ್ವಲ್ಪವೂ ಕಾಳಜಿ ವಹಿಸದಿರುವುದು ಸಹಜವಾಗಿಯೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಅಧಿಕಾರಿಗಳು ಇತ್ತ ಗಮನಹರಿಸುತ್ತಾರೋ ಎಂದು ಕಾದುನೋಡಬೇಕಿದೆ.
ಶಾಸಕರೇ ಅವಘಡ ತಪ್ಪಿಸಿ; ಸಾರ್ವಜನಿಕ ಆಗ್ರಹ
ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ಸತತ ಎರಡನೇ ಬಾರಿಗೆ ಶಾಸಕರಾಗಿದ್ದಾರೆ. ಆದರೆ ಇವರು ಮನಸ್ಸು ಮಾಡಿದ್ದರೆ ಯಾವತ್ತಿಗೂ ಕಾಮಗಾರಿ ಪೂರ್ಣಗೊಳಿಸಬಹುದಿತ್ತು. ಆದರೆ ಕಳೆದ 7 ವರ್ಷಗಳಿಂದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದರೂ ಕೂಡ ಇದನ್ನು ಪೂರ್ಣಗೊಳಿಸಲು ಇನ್ನು ಸಾಧ್ಯವಾಗಿಲ್ಲ. ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಸೇತುವೆ ಕೂಡುರಸ್ತೆಗೆ ಹಾಕಿದ ಮಣ್ಣು ಕುಸಿದಿದ್ದರೂ ಕೂಡ ಸ್ಥಳ ಪರಿಶೀಲನೆ ಮಾಡಿಲ್ಲ. ಅಧಿಕಾರಿಗಳನ್ನು ಕಳಿಸಿಲ್ಲ. ಇನ್ನಾದರೂ ಕ್ರಮ ಕೈಗೊಳ್ಳಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಕಾಳಿ ನದಿಗೆ ಜಿಗಿದ ಮಹಿಳೆಯ ಮೃತದೇಹ ಪತ್ತೆ
Joida: ಬಸ್ ನಿಲ್ದಾಣದಲ್ಲಿ ಚಾಲಕ, ನಿರ್ವಾಹಕನಿಂದ ಪ್ರಯಾಣಿಕನಿಗೆ ಹಲ್ಲೆ
Dandeli: ಗಣೇಶನಗರದಲ್ಲಿ ವಿವಾಹಿತ ಮಹಿಳೆ ನಾಪತ್ತೆ: ದೂರು ದಾಖಲು
Sirsi: ಪಾಶ್ಚಾತ್ಯ ಅಡಿಕೆ ಆಮದು ನಿರ್ಬಂಧಕ್ಕೆ ಸಂಸದರು ಧ್ವನಿ ಎತ್ತಲಿ: ಶಾಸಕ ಭೀಮಣ್ಣ
Dandeli: ಬಸ್ ನಿಲ್ದಾಣದಲ್ಲಿ ತಂಗಿರುವ ಒಂಟಿ ಮಹಿಳೆ… ವಾರಿಸುದಾರರ ಪತ್ತೆಗೆ ಮನವಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
BJP: ಹೈಕಮಾಂಡ್ ಅನುಮತಿಸಿದರೆ ಬಸವಕಲ್ಯಾಣದಿಂದ ಬೆಂಗಳೂರಿಗೆ ಪಾದಯಾತ್ರೆ: ಶಾಸಕ ಯತ್ನಾಳ
Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ
Bengaluru; ಚುನಾವಣಾ ಬಾಂಡ್ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ಐಆರ್
Gurudath Kamath: ಖ್ಯಾತ ಫೋಟೋಗ್ರಾಫರ್ ಗುರುದತ್ ಕಾಮತ್ ನಿಧನ
Moksha Kushal: ಹಾಟ್ ಫೋಟೋಶೂಟ್ನಲ್ಲಿ ಮೋಕ್ಷಾ ಮಿಂಚು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.