Rahul Gandhi ಯಾವ ಕ್ಷೇತ್ರ ಉಳಿಸಿಕೊಳ್ಳಲಿ ಎಂಬ ಗೊಂದಲದಲ್ಲಿರುವೆ
ಉಭಯ ಸಂಕಟ ಎದುರಾಗಿದೆ ಎಂದ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಗಾ
Team Udayavani, Jun 12, 2024, 11:16 PM IST
ತಿರುವನಂತಪುರ: “ರಾಯ್ಬರೇಲಿ ಹಾಗೂ ವಯನಾಡು ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರವನ್ನು ಆಯ್ದುಕೊಳ್ಳಲಿ? ಯಾವ ಕ್ಷೇತ್ರಕ್ಕೆ ಸಂಸದನಾಗಲಿ ಎಂಬ ಉಭಯ ಸಂಕಟದಲ್ಲಿ ನಾನು ಸಿಲುಕಿದ್ದೇನೆ. ಆದರೆ, ಎರಡೂ ಕ್ಷೇತ್ರದ ಜನತೆಗೆ ಸಂತಸವಾಗುವಂತೆಯೇ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ವಯನಾಡಿನಲ್ಲಿ 2ನೇ ಬಾರಿಗೆ ಅಭೂತಪೂರ್ವ ಜಯಗಳಿಸಿದ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ಕೇರಳದಲ್ಲಿ ರಾಹುಲ್ ರೋಡ್ಶೋ ಹಾಗೂ ಸಾರ್ವಜನಿಕ ಸಭೆ ನಡೆಸಿದ್ದಾರೆ. ಈ ವೇಳೆ ಕ್ಷೇತ್ರ ಆಯ್ಕೆ ಸಂಬಂಧಿಸಿದಂತೆ ತಮಗೆ ಎದುರಾಗಿರುವ ಗೊಂದಲವನ್ನು ಜನರಿಗೆ ತಿಳಿಸಿ, ತಮಗೆ ಮತ್ತೂಮ್ಮೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದವನ್ನೂ ಹೇಳಿದ್ದಾರೆ.
ನಾನು ದೈವಾಂಶ ಸಂಭೂತನಲ್ಲ, ಸಾಮಾನ್ಯ ವ್ಯಕ್ತಿ: ರಾಗಾ
ಇದೇ ವೇಳೆ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ ರಾಹುಲ್, “ಮೋದಿ ತಮ್ಮನ್ನು ತಾವು ದೈವಾಂಶ ಸಂಭೂತರು ಎಂದಿದ್ದರು. ಅದು ನಿಜ, ಮೋದಿ ಹಿಂದೆ ಕಾಣದ ದೇವರೊಬ್ಬರು ಇದ್ದಾರೆ. ದೇಶದ ಏರ್ಪೋರ್ಟ್ಗಳು, ವಿದ್ಯುತ್ ಸ್ಥಾವರಗಳನ್ನು ಅದಾನಿ, ಅಂಬಾನಿಗೆ ನೀಡುವಂತೆ ಆ ದೇವರೇ ಮೋದಿಗೆ ನಿರ್ದೇಶನ ನೀಡಿರಬಹುದು. ಆದರೆ ನಾನೊಬ್ಬ ಸಾಮಾನ್ಯ ಮನುಷ್ಯ. ದೇಶದ ಬಡ ಜನರೇ ನನಗೆ ದೇವರು ಎಂದು ಹೇಳಿದ್ದಾರೆ.
ವಯನಾಡ್ಗೆ ರಾಗಾ ಗುಡ್ಬೈ?: ಕೆಪಿಸಿಸಿ ಅಧ್ಯಕ್ಷ ಸುಳಿವು
ಕ್ಷೇತ್ರ ಆಯ್ಕೆ ಬಗ್ಗೆ ರಾಹುಲ್ ಸಂದಿಗ್ಧತೆಯಲ್ಲಿರುವಾಗಲೇ ಅವರು ವಯನಾಡು ಕ್ಷೇತ್ರ ತೊರೆಯಬಹುದೆಂಬ ಬಗ್ಗೆ ಅಲ್ಲಿನ ಕೆಪಿಸಿಸಿ ಮುಖ್ಯಸ್ಥ ಸುಧಾಕರನ್ ಸುಳಿವು ನೀಡಿದ್ದಾರೆ. ರಾಹುಲ್ ರಾಷ್ಟ್ರ ಮುನ್ನಡೆಸಬೇಕಾದವರು. ಅವರು ವಯನಾಡಿನಲ್ಲೇ ಉಳಿಯಬೇಕೆಂದು ನಿರೀಕ್ಷಿಸುವುದಾಗಲಿ, ಅವರು ಕ್ಷೇತ್ರ ತೊರೆಯುತ್ತಾರೆಂದು ಬೇಸರ ಪಡುವುದಾಗಲೀ, ನಾವು ಮಾಡಬಾರದು. ಎಲ್ಲರೂ ಪರಿಸ್ಥಿತಿ ಅರ್ಥೈಸಿಕೊಂಡು ಅವರಿಗೆ ಬೆಂಬಲ ನೀಡಬೇಕು ಎಂದು ಸುಧಾಕರನ್ ಜನರಿಗೆ ಕರೆ ನೀಡಿದ್ದಾರೆ. ಈ ಹೇಳಿಕೆಯು ರಾಹುಲ್ ವಯನಾಡು ತೊರೆಯುವುದು ಬಹುತೇಕ ಖಚಿತ ಎಂಬ ಅನುಮಾನ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.