T20 Worldcup: ಸೂಪರ್-8ಕ್ಕೆ ಆಸೀಸ್ ಸವಾರಿ… 5.4 ಓವರ್ಗಳಲ್ಲೇ ಜಯಭೇರಿ
Team Udayavani, Jun 12, 2024, 11:24 PM IST
ನಾರ್ತ್ ಸೌಂಡ್: ನಮೀಬಿಯಾವನ್ನು ಪವರ್ ಪ್ಲೇ ಒಳಗಾಗಿ ಮಣಿಸಿದ ಆಸ್ಟ್ರೇಲಿಯ “ಬಿ’ ವಿಭಾಗದಿಂದ ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್-8 ಹಂತಕ್ಕೆ ನೆಗೆದಿದೆ.
ಇಲ್ಲಿನ “ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ’ನಲ್ಲಿ ನಡೆದ ಏಕಪಕ್ಷೀಯ ಪಂದ್ಯದಲ್ಲಿ ಆಸ್ಟ್ರೇಲಿಯ 9 ವಿಕೆಟ್ಗಳ ಜಯ ಸಾಧಿಸಿತು. ನಮೀಬಿಯಾ 17 ಓವರ್ಗಳಲ್ಲಿ 72 ರನ್ನಿಗೆ ಕುಸಿದರೆ, ಮಿಚೆಲ್ ಮಾರ್ಷ್ ಬಳಗ ಕೇವಲ 5.4 ಓವರ್ಗಳಲ್ಲಿ ಒಂದು ವಿಕೆಟಿಗೆ 74 ರನ್ ಬಾರಿಸಿತು.
ಇದರೊಂದಿಗೆ ಆಸ್ಟ್ರೇಲಿಯ ಎಲ್ಲ 3 ಪಂದ್ಯಗಳನ್ನು ಜಯಿಸಿತು. ನಮೀಬಿಯಾ ಕೂಟದಿಂದ ಹೊರಬಿತ್ತು. “ಬಿ’ ವಿಭಾಗದಿಂದ ಈಗಾಗಲೇ ಒಮಾನ್ ಹೊರಬಿದ್ದಿದೆ. ಮುಂದಿನ ಸುತ್ತಿಗೇರುವ ಮತ್ತೂಂದು ತಂಡಕ್ಕಾಗಿ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ನಡುವೆ ಸ್ಪರ್ಧೆ ಇದೆ. ಇಲ್ಲಿ 3 ಪಂದ್ಯ ಗಳಿಂದ 5 ಅಂಕ ಗಳಿಸಿರುವ ಸ್ಕಾಟ್ಲೆಂಡ್ಗೆ ಅವಕಾಶ ಹೆಚ್ಚು. ಇಂಗ್ಲೆಂಡ್ 2 ಪಂದ್ಯಗಳಿಂದ ಕೇವಲ ಒಂದಂಕ ಹೊಂದಿದೆ.
ಆಸ್ಟ್ರೇಲಿಯವಿನ್ನು ಶನಿವಾರ ಸ್ಕಾಟ್ಲೆಂಡ್ ವಿರುದ್ಧ ಗ್ರಾಸ್ ಐಲೆಟ್ನಲ್ಲಿ ತನ್ನ ಕೊನೆಯ ಲೀಗ್ ಪಂದ್ಯ ಆಡಲಿದೆ.
ಝಂಪ 100 ವಿಕೆಟ್ ಸಾಧನೆ
ಲೆಗ್ಸ್ಪಿನ್ನರ್ ಆ್ಯಡಂ ಝಂಪ ನಮೀಬಿಯಾಕ್ಕೆ ಜಬರ್ದಸ್ತ್ ಆಘಾತವಿಕ್ಕಿದರು. ಇವರ ಸಾಧನೆ 12 ರನ್ನಿಗೆ 4 ವಿಕೆಟ್. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 100 ವಿಕೆಟ್ ಉಡಾಯಿಸಿದ ಆಸ್ಟ್ರೇಲಿಯದ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್: ನಮೀಬಿಯಾ-17 ಓವರ್ಗಳಲ್ಲಿ 72 (ಎರಾಸ್ಮಸ್ 36, ವಾನ್ ಲಿಂಜೆನ್ 10, ಝಂಪ 12ಕ್ಕೆ 4, ಸ್ಟೋಯಿನಿಸ್ 9ಕ್ಕೆ 2, ಹೇಝಲ್ವುಡ್ 18ಕ್ಕೆ 2). ಆಸ್ಟ್ರೇಲಿಯ-5.4 ಓವರ್ಗಳಲ್ಲಿ ಒಂದು ವಿಕೆಟಿಗೆ 74 (ವಾರ್ನರ್ 20, ಹೆಡ್ ಔಟಾಗದೆ 34, ಮಾರ್ಷ್ ಔಟಾಗದೆ 18, ವೀಸ್ 15ಕ್ಕೆ 1). ಪಂದ್ಯಶ್ರೇಷ್ಠ: ಆ್ಯಡಂ ಝಂಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL retention: ಚೆನ್ನೈ-ಮುಂಬೈಗೆ ಗುಡ್ ನ್ಯೂಸ್ ನೀಡಿದ ಐಪಿಎಲ್ ಹೊಸ ನಿಯಮ
Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್ ಖಾನ್
Kanpur Test: ಪಂದ್ಯ ಬಿಟ್ಟು ಹೋಟೆಲ್ ಗೆ ತೆರಳಿದ ಭಾರತೀಯ ಆಟಗಾರರು
ENGvsAUS: ಇಂಗ್ಲೆಂಡ್ ಆಟಕ್ಕೆ ಸೋತ ಆಸೀಸ್; ಸರಣಿ ಸಮಗೊಳಿಸಿದ ಬ್ರೂಕ್ ಪಡೆ
Test ವಿವಾದ : ಹಲ್ಲೆಯಾಗಿಲ್ಲ, ಬಾಂಗ್ಲಾ ಹುಲಿ ‘ಅಸ್ವಸ್ಥ’
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
BBK11: ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ʼಫೈಯರ್ ಬ್ರ್ಯಾಂಡ್ʼ ಎಂಟ್ರಿ
Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ
MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್ ಕೊಟ್ಟ ಸ್ನೇಹಮಯಿ ಕೃಷ್ಣ!
Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ
Food street ನಲ್ಲಿ ಅರೆಬಟ್ಟೆಯಲ್ಲಿ ಸುತ್ತಾಡಿದ ಯುವತಿ ವಿರುದ್ಧ ಪ್ರಕರಣ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.