Thekkatte: ಅಂಗಡಿಗಳಿಂದ ಸರಣಿ ಕಳ್ಳತನ


Team Udayavani, Jun 13, 2024, 11:04 PM IST

Thekkatte: ಅಂಗಡಿಗಳಿಂದ ಸರಣಿ ಕಳ್ಳತನ

ತೆಕ್ಕಟ್ಟೆ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಪ್ರಮುಖ ಭಾಗದಲ್ಲಿರುವ ವೈನ್ಸ್‌ ಶಾಪ್‌ನಲ್ಲಿ, ಮಲ್ಯಾಡಿ ರಸ್ತೆಯ ಸಮೀಪದಲ್ಲಿರುವ ದಿನಸಿ ಅಂಗಡಿಯಲ್ಲಿ ಹಾಗೂ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಸಹಿತ ಸರಣಿ ಕಳ್ಳತನವಾದ ಘಟನೆ ಜೂ. 13ರ ಬೆಳಗ್ಗಿನ ಜಾವ ಸುಮಾರು 3.49ರ ವೇಳೆಗೆ ಸಂಭವಿಸಿದೆ.

ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಮಾಲಕತ್ವದ ಶ್ರೀ ಗಣೇಶ್‌ ವೈನ್ಸ್‌ನ ರೋಲಿಂಗ್‌ ಶಟರ್‌ ಮುರಿದು ಒಳ ಪ್ರವೇಶಿಸಿದ ಕಳ್ಳರು ಕ್ಯಾಶ್‌ ಟೇಬಲನ್ನು ಜಾಲಾಡಿದ್ದು, ಅನಂತರ ದೇವರ ಡಬ್ಬದಲ್ಲಿದ್ದ 700 ರೂ. ನಗದು ಹಾಗೂ 6 ಸಾವಿರ ರೂ.ಗೂ ಅಧಿಕ ಮೌಲ್ಯದ ಮದ್ಯದ ಬಾಟಲಿಗಳನ್ನು ಕದ್ದೊಯ್ದಿದ್ದಾರೆ.

ಮಲ್ಯಾಡಿ ಸಂಪರ್ಕ ರಸ್ತೆಯ ಸಮೀಪದಲ್ಲಿರುವ ಸಂತೋಷ್‌ ಶೆಟ್ಟಿ ಮಾಲಕತ್ವದ ದಿನಸಿ ಅಂಗಡಿಗೆ ಬೆಳಗ್ಗಿನ ಜಾವ 3.15ರ ಸುಮಾರಿಗೆ ಬೀಗ ಮುರಿದು ನುಗ್ಗಿದ ಕಳ್ಳರು ಕ್ಯಾಶ್‌ ಟೇಬಲ್‌ನಲ್ಲಿದ್ದ 2 ಸಾವಿರ ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ. ತಿಂಡಿ ತಿನಿಸಿನ ಪೊಟ್ಟಣದ ಮೇಲೆ ಎರಡು ಕಲ್ಲು ಇರಿಸಿ ಅನಂತರ ಚಾಕಲೇಟ್‌ ಡಬ್ಬವನ್ನು ಪಕ್ಕದ ಮನೆಯ ಅಂಗಳಕ್ಕೆ ಎಸೆದು ಹೋಗಿದ್ದಾರೆ.

ಸಮೀಪದ ಜನವಸತಿ ಪ್ರದೇಶದಲ್ಲಿರುವ ಮೂಡು ತೆಕ್ಕಟ್ಟೆ ಅಣ್ಣಪ್ಪ ಆಚಾರ್ಯ ಅವರ ಮನೆಯ ಮುಂಭಾಗದಲ್ಲಿ ಬೀಗ ಹಾಕದೇ ನಿಲ್ಲಿಸಿದ್ದ  ಹೋಂಡಾ ಆ್ಯಕ್ಟಿವಾ ವಾಹನವನ್ನೂ ಕದ್ದೊಯ್ದಿದ್ದಾರೆ ಎಂದು ಶ್ರವಣ್‌ ಆಚಾರ್ಯ ತಿಳಿಸಿದ್ದಾರೆ.

ಸಿಸಿ ಕೆಮರಾದಲ್ಲಿ ಸೆರೆ:

ಬೆಳಗ್ಗಿನ ಜಾವ 3.49ರ ಸುಮಾರಿಗೆ ರಾ.ಹೆ. 66ರ ಪ್ರಮುಖ ಭಾಗದಲ್ಲಿರುವ ಶ್ರೀಗಣೇಶ್‌ ವೈನ್ಸ್‌ ಒಳಪ್ರವೇಶಿಸಿದ ಮೂವರು ಕಳ್ಳರ ತಂಡವು ಮೊಬೈಲ್‌ ಟಾರ್ಚ್‌ ಬಳಸಿಕೊಂಡು ಮುಖಕ್ಕೆ ಕರವಸ್ತ್ರ ಮುಚ್ಚಿಕೊಂಡು ಕೈಯಲ್ಲಿ ಸೂð ಡ್ರೈವರ್‌ ಹಿಡಿದು, ಕ್ಯಾಶ್‌ ಟೇಬಲ್‌ ಹಾಗೂ ಸಂಪೂರ್ಣ ವೈನ್‌ಶಾಪನ್ನು ಜಾಲಾಡಿದ್ದಾರೆ. ಓರ್ವ ಅಂಗಡಿಯ ಹೊರಗಡೆ ನಿಂತು ವೀಕ್ಷಿಸುತ್ತಿರುವ ದೃಶ್ಯಗಳು ಸಿಸಿ ಕೆಮರಾದಲ್ಲಿ ಸೆರೆಯಾಗಿವೆ.

ಗ್ರಾಹಕರ ಸೋಗಿನಲ್ಲಿ ಬಂದಿದ್ದರೇ ಕಳ್ಳರು ?:

ಈ ನಡುವೆ ಶ್ರೀ ಗಣೇಶ್‌ ವೈನ್ಸ್‌ಗೆ ರಾತ್ರಿ ಗಂಟೆ 10.30ರ ಸುಮಾರಿಗೆ ಓರ್ವ ವ್ಯಕ್ತಿ ಗ್ರಾಹಕರ ಸೋಗಿನಲ್ಲಿ ಮದ್ಯ ಖರೀದಿಸಿ, ಫೋನ್‌ ಪೇ ಮೂಲಕ ಹಣ ಪಾವತಿಸಿದ್ದು, ಆತನ ಮೇಲೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಫೋನ್‌ ಪೇ ಹಾಗೂ ಮೊಬೈಲ್‌ನ ಜಾಡು ಹಿಡಿದು ಕಳ್ಳರ ಹೆಡೆಮುರಿ ಕಟ್ಟಲು ಬಲೆ ಬೀಸಿದ್ದಾರೆ.

ಶ್ವಾನದಳ, ಬೆರಳಚ್ಚು ತಜ್ಞರ ಭೇಟಿ:

ಘಟನೆ ಸಂಭವಿಸುತ್ತಿದ್ದಂತೆ ಜಿಲ್ಲಾ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡವು ಭೇಟಿ ನೀಡಿ ಪರಿಶೀಲಿಸಿದೆ. ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ ಎನ್‌.ಎಂ., ಕೋಟ ಪೊಲೀಸ್‌ ಪಿಎಸ್‌ಐ ಸುಧಾ ಪ್ರಭು, ಎಎಸ್‌ಐ ಗೋಪಾಲ ಪೂಜಾರಿ, ಸಿಬಂದಿ ರಾಘವೇಂದ್ರ, ವಿಜೇಂದ್ರ ಹಾಗೂ ಪ್ರಸನ್ನ, ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

ಆತಂಕ ಮೂಡಿಸಿದ ಸರಣಿ ಕಳ್ಳತನ:

ಇಲ್ಲಿನ ರಾ.ಹೆ. 66ರ ಸಮೀಪ ಶಾನುಭಾಗ್‌ ಕಾಂಪ್ಲೆಕ್ಸ್‌ನಲ್ಲಿರುವ ಚಿನ್ನದ ಅಂಗಡಿಗೆ ಮುಸುಕುಧಾರಿ ತಂಡವೊಂದು ನುಗ್ಗಿ ಕಳವಿಗೆ ಯತ್ನಿಸಿದ ಘಟನೆ 2023ರ ಡಿ. 29ರಂದು ನಡೆದಿತ್ತು. ಆ ಕುರಿತು ಯಾವುದೇ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಜ. 1ರಂದು ಉದಯವಾಣಿ ಚಿತ್ರಸಹಿತ ವಿಸ್ತೃತವಾದ ವರದಿ ಪ್ರಕಟಿಸಿತ್ತು. ಬಳಿಕ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ. ಆದೇಶದಂತೆ ಪ್ರಕರಣ ದಾಖಲಿಸಿ, ತನಿಖೆ ಚುರುಕುಗೊಳಿಸಿದ ಕೋಟ ಪೊಲೀಸರ ತಂಡ 3 ತಿಂಗಳ ಬಳಿಕ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಸರಣಿ ಕಳ್ಳತನ ಪ್ರಕರಣವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಟಾಪ್ ನ್ಯೂಸ್

1

T20 world cup: ವಿಶ್ವಕಪ್‌ ದಿಗ್ವಿಜಯ… ಅಂದು – ಇಂದು 

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

prahlad joshi

Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

3-vitla

Campco ಮಾಜಿ ಅಧ್ಯಕ್ಷ ಎಲ್.ಎನ್. ಕೂಡೂರು ಇನ್ನಿಲ್ಲ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain ಕೋಟೇಶ್ವರ: ಭಾರೀ ಮಳೆಗೆ ಬಾವಿ ಕುಸಿತ

Heavy Rain ಕೋಟೇಶ್ವರ: ಭಾರೀ ಮಳೆಗೆ ಬಾವಿ ಕುಸಿತ

Shankaranarayana: ಕಾರಿನಲ್ಲಿ ಬಂದು ದನ ಕಳ್ಳತನ; ಸಿಸಿ ಕೆಮರಾದಲ್ಲಿ ದಾಖಲು

Shankaranarayana ದನ ಕಳ್ಳತನ ಪ್ರಕರಣ; ಆರೋಪಿಗಳ ಬಂಧನ

Kamalashile: ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ

Kamalashile: ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ

Fish ಪದಾರ್ಥ ಮಾಡಿಟ್ಟು ಹೋಗು ಎಂದು ಪತ್ನಿಗೆ ಸೌದೆಯಿಂದ ಗಂಭೀರ ಹಲ್ಲೆ

Fish ಪದಾರ್ಥ ಮಾಡಿಟ್ಟು ಹೋಗು ಎಂದು ಪತ್ನಿಗೆ ಸೌದೆಯಿಂದ ಗಂಭೀರ ಹಲ್ಲೆ

Albady: ಕುಡಿಯುವ ನೀರಿನ ಪೈಪ್‌ಲೈನ್‌ ಹೊಂಡಕ್ಕೆ ಸಿಲುಕಿದ ಗೂಡ್ಸ್‌ ವಾಹನ

Albady: ಕುಡಿಯುವ ನೀರಿನ ಪೈಪ್‌ಲೈನ್‌ ಹೊಂಡಕ್ಕೆ ಸಿಲುಕಿದ ಗೂಡ್ಸ್‌ ವಾಹನ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

1

T20 world cup: ವಿಶ್ವಕಪ್‌ ದಿಗ್ವಿಜಯ… ಅಂದು – ಇಂದು 

shivamogga

Shimoga; ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗೆ ಸಚಿವ ಕುಮಾರಸ್ವಾಮಿ ಭೇಟಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

5-kushtagi

Kushtagi: ಕಳೆದೆರೆಡು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಕೋತಿ ಸೆರೆ

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.