![2](https://www.udayavani.com/wp-content/uploads/2024/06/2-21-415x249.jpg)
Boliyar case ಹೊರಗಿನವರು ಯಾರು: ಬಿಜೆಪಿ ಪ್ರಶ್ನೆ
Team Udayavani, Jun 15, 2024, 12:55 AM IST
![Boliyar case ಹೊರಗಿನವರು ಯಾರು: ಬಿಜೆಪಿ ಪ್ರಶ್ನೆ](https://www.udayavani.com/wp-content/uploads/2024/06/Boliyar-case-620x417.jpg)
ಮಂಗಳೂರು: ಬೋಳಿಯಾರ್ ಪ್ರಕರಣದಲ್ಲಿ ಗಾಯಗೊಂಡ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ದಾಳಿಯ ಸಂತ್ರಸ್ತರ ಆರೋಗ್ಯ ವಿಚಾರಿ ಸಲು ಶಾಸಕರಾದ ಯು.ಟಿ. ಖಾದರ್ ಅವರು ಬಾರದಿರುವುದು ಓಲೈಕೆ ರಾಜಕೀಯವನ್ನು ತೋರಿಸುತ್ತದೆ.
ಬೋಳಿಯಾರ್ ಮತ ಕೇಂದ್ರದ ಮತದಾರರೂ ಆಗಿರುವ ಅವರು ತಮ್ಮದೇ ಪರಿಸರದ ಸಂತ್ರಸ್ತರಿಗೆ ಸ್ಥೈರ್ಯ ತುಂಬಬೇಕಿತ್ತು. ಅದು ಬಿಟ್ಟು ಸಹಾಯಹಸ್ತ ನೀಡಲು ಬಂದವರನ್ನು “ಹೊರಗಿನವರು’ ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದು ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಪಕ್ಷ ನಾಯಕರು, ಸಂಸದರು, ಹೊರಗಿನವರೇ? ಹಿಂದೆ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದಾಗ ಕ್ಷೇತ್ರ ಬಿಟ್ಟು ಹೊರಗೆ ಹೋಗಿಲ್ಲವೆ? ಎಂದು ಪ್ರಶ್ನಿಸಿರುವ ಅವರು, ಕಾಂಗ್ರೆಸ್ನ ಸೂಚನೆಯಂತೆ ಪೊಲೀಸರು ಅಮಾಯಕರ ಮೇಲೆ ದಾಖಲಿಸಿರುವ ದೂರಿನಿಂದ ಕುಗ್ಗಿರುವ ಬಿಜೆಪಿ ಕಾರ್ಯಕರ್ತರಿಗೆ ಮಾನಸಿಕ ಸ್ಥೈರ್ಯ ನೀಡಲು ಸಂತ್ರಸ್ತರನ್ನು ಭೇಟಿ ಮಾಡದ ಯು.ಟಿ.ಖಾದರ್ ಅವರಿಗೆ ನೈತಿಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಬೋಳಿಯಾರ್ನಲ್ಲಿ ಸ್ಥಳ ಮಹಜರು ಆಸ್ಪತ್ರೆಗೆ ಸಂಸದ ಕೋಟ ಭೇಟಿ
ಉಳ್ಳಾಲ: ಬಿಜೆಪಿ ವಿಜಯೋತ್ಸವದ ಸಂದರ್ಭದಲ್ಲಿ ಬೋಳಿಯಾರ್ನಲ್ಲಿ ನಡೆದ ಚೂರಿ ಇರಿತಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲಿರುವ ನಾಲ್ವರನ್ನು ಶುಕ್ರವಾರ ಬೋಳಿಯಾರ್ನಲ್ಲಿ ಸ್ಥಳ ಮಹಜರು ನಡೆಸಿದ್ದು, ನಾಲ್ಕು ದಿನಗಳ ಕಾಲ ಆರೋಪಿಗಳನ್ನು ಪೊಲೀಸ್ ಕಸ್ಟಡಿಯಲ್ಲಿ ತನಿಖೆ ನಡೆಸಲಿದ್ದಾರೆ.
ಬೋಳಿಯಾರ್ ನಿವಾಸಿಗಳಾದ ಸರ್ವನ್, ತಾಜುದ್ದೀನ್, ಅಶ್ರಫ್,ಮತ್ತು ಮುಬಾರಕ್ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಒಟ್ಟು 20 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, 13 ಮಂದಿಯನ್ನು ಈವರೆಗೆ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕೋಟ ಶ್ರೀನಿವಾಸ ಪೂಜಾರಿ ಭೇಟಿ
ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ದೇರಳಕಟ್ಟೆ ಆಸ್ಪತ್ರೆಗೆ ಭೇಟಿ ನೀಡಿ ಚೂರಿ ಇರಿತಕ್ಕೊಳಗಾಇರುವ ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
![2](https://www.udayavani.com/wp-content/uploads/2024/06/2-21-415x249.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.