Udayavani campaign; ಬ್ರಹ್ಮಾವರ-ಇಲ್ಲಿ ನೇತಾಡ್ಕೊಂಡು ಹೋಗಲೂ ಬಸ್‌ ಇಲ್ಲ!


Team Udayavani, Jun 15, 2024, 5:32 PM IST

Udayavani campaign; ಬ್ರಹ್ಮಾವರ-ಇಲ್ಲಿ ನೇತಾಡ್ಕೊಂಡು ಹೋಗಲೂ ಬಸ್‌ ಇಲ್ಲ!

ಬ್ರಹ್ಮಾವರ: ಇಲ್ಲಿನ ರಸ್ತೆ ಡಾಮರೀಕರಣಗೊಂಡಿದೆ. ಕಿರಿದಾದ ರಸ್ತೆಗಳು ವಿಸ್ತರಣೆಗೊಂಡಿವೆ. ಖಾಸಗಿ ವಾಹನಗಳು, ಟೆಂಪೊ, ಟಿಪ್ಪರ್‌ಗಳು ಭರದಿಂದ ಸಂಚರಿಸುತ್ತಿವೆ. ಆದರೆ, ಇವರು ಮಾತ್ರ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದಂತೆ ನಡೆದೇ ಸಾಗುತ್ತಿದ್ದಾರೆ. ಯಾಕೆಂದರೆ ಡಬಲ್‌ ರೋಡ್‌ ಆದರೂ ಇಲ್ಲಿ ಬಸ್ಸೇ ಸಂಚರಿಸುವುದಿಲ್ಲ.

ಬ್ರಹ್ಮಾವರ ಗ್ರಾಮಾಂತರದ ಹಲವು ಕಡೆ ಇಂದಿಗೂ ಸಾವಿರಾರು ವಿದ್ಯಾರ್ಥಿಗಳ, ನಿತ್ಯ ನೌಕರಿಗೆ ತೆರಳುವವರ ದುಸ್ಥಿತಿ ಇದು.
ಹೆಚ್ಚು ದೂರದ ಸಂಗತಿ ಬಿಡಿ, ಬ್ರಹ್ಮಾವರಕ್ಕೆ ತಾಗಿಕೊಂಡಿರುವ ಮಟಪಾಡಿ ಜನತೆಯ ಪರಿ ಸ್ಥಿತಿ ನೋಡಿದರೆ ಸಾಕು. ಮಟಪಾಡಿ, ಬಲ್ಜಿ, ಕುದ್ರುಗಳ ಜನರು ದಶಕಗಳಿಂದ ನಡೆದೇ ಸಾಗುತ್ತಿದ್ದಾರೆ ಎಂದರೆ ನೀವು ನಂಬಲೇ ಬೇಕು. ಮೊದಲಾದರೆ ಕಿರಿದಾದ ಹದಗೆಟ್ಟ ರಸ್ತೆ ಇತ್ತು, ಈಗ ಎರಡು ಘನ ವಾಹನಗಳು ಆರಾಮವಾಗಿ ಸಂಚರಿಸಬಹುದಾದ ಕಾಂಕ್ರೀಟ್‌, ಫೇವರ್‌ ಫಿನಿಶ್‌ ರಸ್ತೆ. ಆದರೆ ಬಸ್‌ ಮಾತ್ರ ಸಂಚರಿಸುವುದಿಲ್ಲ. ಮಟಪಾಡಿ ಮೂಲಕ ನೀಲಾವರ ಸಂಪರ್ಕವಿದೆ.

ಒಂದಾನೊಂದು ಕಾಲದಲ್ಲಿ ಈ ಮಾರ್ಗದಲ್ಲಿ ಬಸ್‌ ಸಂಚರಿಸಿತ್ತಂತೆ, ಕೆಲವೇ ದಿನಗಳಲ್ಲಿ ಅದೂ ಸ್ಥಗಿತಗೊಂಡಿತು ಎಂದು ಜನರು ನೆನಪಿಸುತ್ತಾರೆ. ಕುಂಜಾಲಿನಿಂದ ನೀಲಾವರ, ಕೂರಾಡಿಯಿಂದ ಗುಡ್ಡೆಯಂಗಡಿ ಮೂಲಕ ಮಂದಾರ್ತಿ ವರೆಗೆ ರಸ್ತೆ
ಅಭಿವೃದ್ದಿಗೊಂಡಿದೆ. ಈ ಭಾಗದಲ್ಲಿ ಬಸ್‌ ಸೌಕರ್ಯ ಕಲ್ಪಿಸಬೇಕೆನ್ನುವುದು ಬಹುಜನರ ಬೇಡಿಕೆ. ಕುಂಜಾಲಿನಿಂದ ಆರೂರು, ಕೊಳಲಗಿರಿ ಮೂಲಕ ಮಣಿಪಾಲ ಸಂಪರ್ಕ ಅತಿ ಸಮೀಪ. ಆದರೆ ಬಸ್‌ ಸೌಲಭ್ಯವೇ ಇಲ್ಲ. ಗ್ರಾಮಾಂತರದ ಕರ್ಜೆ-ಪೆರ್ಡೂರು, ನಂಚಾರು-ಆವರ್ಸೆ ಮಾರ್ಗಗಳಲ್ಲಿಯೂ ಬಸ್‌ ಮರೀಚಿಕೆ.

ಬೆಳಗ್ಗೆ-ಸಂಜೆ ಉಸಿರಾಡೋದೂ ಕಷ್ಟ!
ಬ್ರಹ್ಮಾವರ ನಗರವನ್ನು ಸಂಪರ್ಕಿಸುವ ಮುಖ್ಯ ರಸ್ತೆಗಳಾದ ಪೇತ್ರಿ-ಹೆಬ್ರಿ, ಬಾರಕೂರು-ಮಂದಾರ್ತಿ ಮಾರ್ಗದ ಬಸ್‌ಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಉಸಿರಾಡಲೂ ಆಗದ ಸ್ಥಿತಿ. ಹಾರಾಡಿ ಹೊನ್ನಾಳ ಬಸ್‌ನಲ್ಲಿಯೂ ಇದೇ ದುಸ್ಥಿತಿ. ಕನಿಷ್ಠ ಬೆಳಗ್ಗೆ, ಸಂಜೆಯಾದರೂ ಹೆಚ್ಚುವರಿ ಬಸ್‌ ಕಲ್ಪಿಸಬೇಕೆನ್ನುವುದು ಜನರ ಆಶಯ.

ಕೋವಿಡ್‌ ಸಮಯದಲ್ಲಿ ಹೋದ ಬಸ್‌ ಇಂದಿಗೂ ಮರಳಿ ಬಂದಿಲ್ಲ
ಕೊರೊನಾ ನಂತರ ಉಡುಪಿಯಿಂದ ಬ್ರಹ್ಮಾವರ ಪೇತ್ರಿ ಮಾರ್ಗವಾಗಿ ಸಂಚರಿಸುವ ಬಹುತೇಕ ಬಸ್‌ಗಳು ಕಡಿಮೆ ಆಗಿವೆ. ಬೆಳಗ್ಗೆ ಎಲ್ಲ ಬಸ್‌ಗಳಲ್ಲಿ ಕರ್ಜೆ ಪೇತ್ರಿ ಪರಿಸರದ ಮಕ್ಕಳು ಬಸ್‌ ಬಾಗಿಲಲ್ಲಿ ನಿಂತು ಹೋಗುವ ಪರಿಸ್ಥಿತಿ. ಬೇರೆ ಎಲ್ಲ ಮಾರ್ಗಗಳಲ್ಲಿ ನರ್ಮ್ ಬಸ್‌ ಸಂಚರಿಸಿರುತ್ತಿದ್ದರೂ ಈ ರೂಟ್‌ನಲ್ಲಿ ಸೌಲಭ್ಯವಿಲ್ಲ. ಬೆಳಗ್ಗೆ 7.50ಕ್ಕೆ ಕರ್ಜೆ ಪರಿಸರದಲ್ಲಿ ಬಸ್‌ ತಪ್ಪಿ ಹೋದರೆ ಮತ್ತೆ 8.50ಕ್ಕೆ ಬರುವುದು. ಮಧ್ಯ ಇದ್ದ ಬಸ್‌ ಟ್ರಿಪ್‌ ಕಟ್‌. 9.10ಕ್ಕೆ ಇದ್ದ ಬಸ್‌ ಈಗಿಲ್ಲ. ಉಡುಪಿಯಿಂದ ಪೇತ್ರಿಗೆ ಸಂಚರಿಸಲು ಇದ್ದ ರಾತ್ರಿ ಟ್ರಿಪ್‌ ಖೋತಾ. ರವಿವಾರ ಬಹುತೇಕ ಬಸ್‌ಗಳು ಈ ರೂಟ್‌ನಲ್ಲಿ ಟ್ರಿಪ್‌ ಕಟ್‌ ಮಾಡುವುದರಿಂದ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಉಡುಪಿ, ಮಣಿಪಾಲಕ್ಕೆ ನೇರ ರಸ್ತೆ ಇದೆ, ಆದರೆ…
ಗ್ರಾಮಾಂತರ ಪ್ರದೇಶದವರು ಉಡುಪಿ, ಮಣಿಪಾಲಕ್ಕೆ ತೆರಳಲು ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುವುದೇ ಬೇಕಿಲ್ಲ. ಕೂರಾಡಿ-ನೀಲಾವರ, ಆರೂರು-ಬೆಳ್ಮಾರು, ಕೊಳಲಗಿರಿ-ಶೀಂಭ್ರ ಸೇತುವೆ ನಿರ್ಮಾಣದಿಂದ ಕನಿಷ್ಠ ಸಮಯದಲ್ಲಿ ನಗರ ಸಂಪರ್ಕಿಸಬಹುದು. ಆದರೆ ಈ ಮಾರ್ಗದಲ್ಲಿ ಒಂದೇ ಒಂದು ಬಸ್‌ ಓಡಾಡದೇ ಇರುವುದು ವಿಪರ್ಯಾಸ. ಹೊಸ ಬಸ್‌ ಸಂಚಾರದಿಂದ ನಿತ್ಯ ನೌಕರಿಗೆ ತೆರಳುವವರು, ವಿದ್ಯಾರ್ಥಿಗಳ ಸಹಿತ ಸಾವಿರಾರು ಮಂದಿಗೆ ಅನುಕೂಲ ಆಗಲಿದೆ. ಇನ್ನು ಎಳ್ಳಂಪಳ್ಳಿ, ಕೂರಾಡಿ, ನಾಲ್ಕೂರು, ಮುದ್ದೂರು, ಕೆಂಜೂರು, ಕೆ.ಜಿ. ರೋಡ್‌, ಹಾವಂಜೆ, ಕುಕ್ಕೆಹಳ್ಳಿ ಮೊದಲಾದೆಡೆ ಬಸ್‌
ಸೌಕರ್ಯ ಸಾಲದು.

ಬಸ್‌ಗಳಿಗೆ ರವಿವಾರ ಕಡ್ಡಾಯ ರಜೆ!
ಗ್ರಾಮಾಂತರದ ಬಹುತೇಕ ಪ್ರದೇಶಗಳಲ್ಲಿ ರವಿವಾರ ಜನರಿಗೆ ಇದ್ದಂತೆ ಬಸ್‌ಗಳಿಗೂ ರಜೆ ಕಡ್ಡಾಯ. ಜನ ಸಂಚಾರ ಕಡಿಮೆ ಇರುವುದರಿಂದ ಆರ್ಥಿಕ ದೃಷ್ಟಿಯಿಂದ ಮಾಲಕರು ಬಸ್‌ ಓಡಿಸುವುದೇ ಇಲ್ಲ. ಆ ದಿವಸ ತಿರುಗಾಟಕ್ಕೆ ಹೊರಟ ಉಳಿದವರ ಕಥೆ ಚಿಂತಾಜನಕ.

ಶಾಲೆಯಲ್ಲೂ ಗಮನ ಸೆಳೆದ ಅಭಿಯಾನ 
ಉಡುಪಿ: ಇಲ್ಲಿನ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯ ಬ್ಲ್ಯಾಕ್‌ ಬೋರ್ಡ್‌ನಲ್ಲಿ ನಿತ್ಯವೂ ವಿದ್ಯಾರ್ಥಿಗಳು ಆಯಾ ದಿನ ಪ್ರಮುಖ ಸುದ್ದಿಗಳನ್ನು ಬರೆಯುತ್ತಾರೆ. ಜೂ.14ರಂದು ವಿದ್ಯಾರ್ಥಿಗಳ ಹೆಚ್ಚು ಗಮನ ಸೆಳೆದ ಸುದ್ದಿ ಎಂದರೆ ಉಡುಪಿ ನಗರದಲ್ಲಿಯೇ ಶಾಲಾ ಕಾಲೇಜಿಗೆ ಬರಲು ವಿದ್ಯಾರ್ಥಿಗಳಿಗೆ ಬಸ್‌ ಸೇವೆ ಸರಿಯಾಗಿಲ್ಲ ಎಂಬುದು. ಉದಯವಾಣಿ ಸುದಿನದಲ್ಲಿ ಪ್ರಕಟಗೊಂಡ “ಉಡುಪಿ ನಗರದೊಳಗೆ ಬಸ್‌ ಸರ್ಕಸ್‌’ ಎಂಬ ವರದಿಯನ್ನು ವಿದ್ಯಾರ್ಥಿಗಳು ಮೊದಲ ಆದ್ಯತೆಯಾಗಿ ಬರೆದಿದ್ದರು.

ಪೆರ್ಡೂರು, ಹಿರಿಯಡಕ ಬಲು ಹತ್ತಿರ
ಬ್ರಹ್ಮಾವರದಿಂದ ಪೇತ್ರಿ, ಕುಕ್ಕೆಹಳ್ಳಿ ಮೂಲಕ ಪೆರ್ಡೂರು ಹಾಗೂ ಹಿರಿಯಡ್ಕ ಬಲು ಹತ್ತಿರದಲ್ಲಿದೆ. ಬ್ರಹ್ಮಾವರದಿಂದ ನೇರ ಪೆರ್ಡೂರಿಗೆ ಸೀಮಿತ ಬಸ್‌ ಸಂಚಾರವಿದ್ದರೆ, ಹಿರಿಯಡ್ಕಕ್ಕೆ ಇಲ್ಲವೇ ಇಲ್ಲ. ಅನುಕೂಲ ಕಲ್ಪಿಸಬೇಕೆನ್ನುವುದು ಜನರ ಬೇಡಿಕೆ.

*ಪ್ರವೀಣ್‌ ಬ್ರಹ್ಮಾವರ

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಡಾಮಕ್ಕಿ ಗ್ರಾ.ಪಂ. ಆಸ್ತಿಗೆ ಹಾನಿ: ದೂರು ದಾಖಲು

ಮಡಾಮಕ್ಕಿ ಗ್ರಾ.ಪಂ. ಆಸ್ತಿಗೆ ಹಾನಿ: ದೂರು ದಾಖಲು

11

Missing Case: ಪತಿ ನಾಪತ್ತೆ; ಪತ್ನಿಯ ದೂರು

Gangolli: ಸ್ಕೂಟರ್‌ಗೆ ಕಾರು ಢಿಕ್ಕಿ ; ಮೂವರಿಗೆ ಗಾಯ

Gangolli: ಸ್ಕೂಟರ್‌ಗೆ ಕಾರು ಢಿಕ್ಕಿ ; ಮೂವರಿಗೆ ಗಾಯ

9

Kota: ಶಿರಿಯಾರ; ಅಕ್ರಮ ಗಣಿಗಾರಿಕೆಗೆ ದಾಳಿ

POlice

Gangolli: ಅಕ್ರಮ ಕೆಂಪು ಕಲ್ಲು ಸಾಗಾಟ; ಪ್ರಕರಣ ದಾಖಲು

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.