![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 17, 2024, 12:00 AM IST
ಲಾಡರ್ಹಿಲ್ (ಫ್ಲೋರಿಡಾ): “ಎ’ ವಿಭಾಗದ ಔಪಚಾರಿಕ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಪಾಕಿಸ್ಥಾನ ವಿರುದ್ಧ 3 ವಿಕೆಟ್ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಐರ್ಲೆಂಡ್ 9 ವಿಕೆಟಿಗೆ 106 ರನ್ ಮಾಡಿತು. ಗುರಿ ಬೆನ್ನಟ್ಟಿದ ಪಾಕ್ ತಿಣುಕಾಡಿತು. ನಾಯಕ ಬಾಬರ್ ಅಜಂ, ಕೊನೆಯ ಹಂತದಲ್ಲಿ ಅಫ್ರಿದಿ ದ್ವಯರು ಬ್ಯಾಟಿಂಗ್ ಮಾಡಿ ಗೆಲುವಿನ ದಡ ಸೇರಿಸಿದರು. ಬಾಬರ್ ಔಟಾಗದೆ 32 ರನ್ ಗಳಿಸಿದರು. ಇದರಿಂದಾಗಿ ಭಾರತದ ದಿಗ್ಗಜ ಬ್ಯಾಟ್ಸ್ ಮ್ಯಾನ್ , ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿದ್ದ ದಾಖಲೆ ತನ್ನದಾಗಿಸಿಕೊಂಡರು.
ಟಿ 20 ವಿಶ್ವಕಪ್ ಪಂದ್ಯಗಳಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ತನ್ನದಾಗಿಸಿಕೊಂಡರು. ಬಾಬರ್ 17 ಇನ್ನಿಂಗ್ಸ್ ಗಳಲ್ಲಿ 549 ರನ್ ಗಳಿಸಿದ್ದಾರೆ. ಧೋನಿ 29 ಇನ್ನಿಂಗ್ಸ್ ಗಳಲ್ಲಿ 529 ರನ್ ಗಳಿಸಿದ್ದರು. ಕೇನ್ ವಿಲಿಯಮ್ಸನ್ 19 ಇನ್ನಿಂಗ್ಸ್ ಗಳಲ್ಲಿ 527, ಜಯವರ್ಧನೆ 11 ಇನ್ನಿಂಗ್ಸ್ ಗಳಲ್ಲಿ 360 , ಗ್ರೇಮ್ ಸ್ಮಿತ್ 16 ಇನ್ನಿಂಗ್ಸ್ ಗಳಲ್ಲಿ 352 ರನ್ ಗಳಿಸಿದ್ದಾರೆ.
62 ಕ್ಕೆ 6 ವಿಕೆಟ್ ಕಳೆದು ಕೊಂಡು ಪಾಕ್ ಸಂಕಷ್ಟಕ್ಕೆ ಸಿಲುಕಿತು. ಅಬ್ಬಾಸ್ ಅಫ್ರಿದಿ 17 ರನ್, ಶಾಹೀನ್ ಅಫ್ರಿದಿ ಔಟಾಗದೆ 13 ರನ್ ಗಳಿಸಿ ಗೆಲುವು ತಂದು ಕೊಟ್ಟರು. 18.5 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿತು.
ಐರ್ಲೆಂಡ್ನ ಅಗ್ರ ಕ್ರಮಾಂಕದ ಬ್ಯಾಟರ್ ಭಾರೀ ವೈಫಲ್ಯ ಅನುಭವಿಸಿದರು. 32 ರನ್ ಆಗುವಷ್ಟರಲ್ಲಿ 6 ವಿಕೆಟ್ ಬಿತ್ತು. ಕೆಳ ಸರದಿಯ ಆಟಗಾರಾದ ಗ್ಯಾರೆತ್ ಡೆಲಾನಿ (ಸರ್ವಾಧಿಕ 31), ಜೋಶುವ ಲಿಟ್ಲ (ಔಟಾಗದೆ 22), ಮಾರ್ಕ್ ಅಡೈರ್ (15) ನಿಂತು ಆಡಿದ ಕಾರಣ ತಂಡದ ಮೊತ್ತ ನೂರರ ಗಡಿ ದಾಟಿತು.
ಅಂತಿಮ ವಿಕೆಟಿಗೆ ಜತೆಗೂಡಿದ ಜೋಶುವ ಲಿಟ್ಲ ಮತ್ತು ಬೆಂಜಮಿನ್ ವೈಟ್ (20 ಎಸೆತಗಳಿಂದ ಅಜೇಯ 5) 26 ರನ್ ಪೇರಿಸುವಲ್ಲಿ ಯಶಸ್ವಿಯಾದರು.
ಪಾಕಿಸ್ಥಾನ ಪರ ಇಮಾದ್ ವಾಸಿಮ್ 8ಕ್ಕೆ 3, ಶಾಹೀನ್ ಅಫ್ರಿದಿ 22ಕ್ಕೆ 3, ಮೊಹಮ್ಮದ್ ಆಮಿರ್ 11ಕ್ಕೆ 2 ವಿಕೆಟ್ ಉರುಳಿಸಿದರು. ಎರಡೂ ತಂಡಗಳು ಈಗಾಗಲೇ ಕೂಟದಿಂದ ನಿರ್ಗಮಿಸಿವೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.