![Rahul ನಾಯಕತ್ವದಲ್ಲಿ 10 ವರ್ಷ ಬಳಿಕ ಸಂಸತ್ತಿಗೆ ಜೀವಕಳೆ: ಉದ್ಧವ್ ಪಕ್ಷ](https://www.udayavani.com/wp-content/uploads/2024/07/rahul-3-415x234.jpg)
ವ್ಯಕ್ತಿ ಬದುಕಿದ್ದರೂ ಮೃತಪಟ್ಟಿದ್ದಾರೆಂದು ಮಾಹಿತಿ ರವಾನಿಸಿದ ಪೊಲೀಸರು!
Team Udayavani, Jun 19, 2024, 6:30 AM IST
![ವ್ಯಕ್ತಿ ಬದುಕಿದ್ದರೂ ಮೃತಪಟ್ಟಿದ್ದಾರೆಂದು ಮಾಹಿತಿ ರವಾನಿಸಿದ ಪೊಲೀಸರು!](https://www.udayavani.com/wp-content/uploads/2024/06/POLICE-5-7-620x326.jpg)
ಮಂಗಳೂರು: ವ್ಯಕ್ತಿಯೋರ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಪೊಲೀಸರು ರೋಗಿಯ ಕುಟುಂಬಸ್ಥರಿಗೆ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸಿದ ಘಟನೆ ನಡೆದಿದೆ.
ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯ ಶೇಖರ ಗೌಡ (55) ಅವರು ಜೂ.15ರಂದು ತೀವ್ರ ಅನಾರೋಗ್ಯದಿಂದಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಅವರ ಜತೆ ಆಸ್ಪತ್ರೆಯಲ್ಲಿ ಸಂಬಂಧಿಕರ್ಯಾರೂ ಇರಲಿಲ್ಲ. ಮರುದಿನ ಅವರ ಸಂಬಂಧಿಕರಿಗೆ ಶೇಖರ ಗೌಡ ಮೃತಪಟ್ಟಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಿಂದ ಕರೆ ಬಂದಿತ್ತು. ಸಂಬಂಧಿಕರು ಮತ್ತು ಧರ್ಮಸ್ಥಳ ಪೊಲೀಸರು ವೆನ್ಲಾಕ್ ಆಸ್ಪತ್ರೆಗೆ ತೆರಳಿ ನೋಡಿದಾಗ ಶೇಖರ ಗೌಡ ಜೀವಂತವಾಗಿದ್ದರು.
“ಆಸ್ಪತ್ರೆಯಿಂದ ತಪ್ಪಾಗಿಲ್ಲ’
ಶೇಖರ ಗೌಡ ಜೂ.15ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸ್ಪಟ್ಟಿದ್ದರು. ಅವರ ಜತೆಯಲ್ಲಿ ವಾರಸುದಾರರು ಇರಲಿಲ್ಲವಾದ್ದರಿಂದ ನಿಯಮದಂತೆ ಆಸ್ಪತ್ರೆಯಿಂದ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ವ್ಯಕ್ತಿ ಗಂಭೀರ ಸ್ಥಿತಿಯಲ್ಲಿರುವ ಬಗ್ಗೆ ಅದರಲ್ಲಿ ಉಲ್ಲೇಖಿಸಲಾಗಿತ್ತು. ಪೊಲೀಸರು ಪರಿಶೀಲಿಸಿ ವರದಿಯನ್ನು ಇ-ಮೇಲ್ ಮೂಲಕ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕಳುಹಿಸಿದ್ದರು. ಅಲ್ಲಿಂದ ಧರ್ಮಸ್ಥಳ ಠಾಣೆಗೆ ವರದಿ ಹೋಗಿತ್ತು. ವರದಿಯಲ್ಲಿ “ಗಂಭೀರ ಸ್ಥಿತಿ’ ಎಂಬುದಾಗಿ ಉಲ್ಲೇಖಿಸಲಾಗಿತ್ತು. ಆದರೆ ಇ-ಮೇಲ್ ಮಾಡುವಾಗ ಪಾಂಡೇಶ್ವರ ಪೊಲೀಸರು ಸಬೆಕ್ಟ್ ಬರೆಯುವಲ್ಲಿ “ಮೃತಪಟ್ಟಿದ್ದಾರೆ’ ಎಂಬುದಾಗಿ ಟೈಪ್ ಮಾಡಿದ್ದರು. ಇ-ಮೇಲ್ ಓದಿದ ಧರ್ಮಸ್ಥಳ ಪೊಲೀಸರು ಶೇಖರ ಗೌಡ ಮೃತಪಟ್ಟಿದ್ದಾರೆಂದು ಭಾವಿಸಿ ಅವರ ಸಂಬಂಧಿಕರಿಗೆ ತಿಳಿಸಿದ್ದರು. ವರದಿಯ ದಾಖಲೆಗಳಲ್ಲಿ ಗಂಭೀರ/ಪ್ರಜ್ಞಾಹೀನ ಸ್ಥಿತಿ ಎಂದು ಉಲ್ಲೇಖಿಸಲಾಗಿದ್ದರೂ ಪೊಲೀಸರು ಇ-ಮೇಲ್ನ ಸಬೆಕ್ಟ್ ಕಾಲಂನಲ್ಲಿ “ಮೃತಪಟ್ಟಿರುವರು’ ಎಂದು ತಪ್ಪಾಗಿ ಉಲ್ಲೇಖಿಸಿದ್ದೇ ಗೊಂದಲಕ್ಕೆ ಕಾರಣವಾಗಿತ್ತು ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಜೆಸಿಂತಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
![Rahul ನಾಯಕತ್ವದಲ್ಲಿ 10 ವರ್ಷ ಬಳಿಕ ಸಂಸತ್ತಿಗೆ ಜೀವಕಳೆ: ಉದ್ಧವ್ ಪಕ್ಷ](https://www.udayavani.com/wp-content/uploads/2024/07/rahul-3-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Rahul ನಾಯಕತ್ವದಲ್ಲಿ 10 ವರ್ಷ ಬಳಿಕ ಸಂಸತ್ತಿಗೆ ಜೀವಕಳೆ: ಉದ್ಧವ್ ಪಕ್ಷ](https://www.udayavani.com/wp-content/uploads/2024/07/rahul-3-150x84.jpg)
Rahul ನಾಯಕತ್ವದಲ್ಲಿ 10 ವರ್ಷ ಬಳಿಕ ಸಂಸತ್ತಿಗೆ ಜೀವಕಳೆ: ಉದ್ಧವ್ ಪಕ್ಷ
![yogi](https://www.udayavani.com/wp-content/uploads/2024/07/yogi-3-150x90.jpg)
Hathras Stampede: ಹಾಥರಸ್ ಕಾಲ್ತುಳಿತ ನ್ಯಾಯಾಂಗ ತನಿಖೆಗೆ: ಯೋಗಿ
![UK Election 2024: ಇಂದು ಬ್ರಿಟನ್ನಲ್ಲಿ ಸಂಸತ್ ಚುನಾವಣೆ… ನಾಳೆ ಫಲಿತಾಂಶ](https://www.udayavani.com/wp-content/uploads/2024/07/election-150x94.jpg)
UK Election 2024: ಇಂದು ಬ್ರಿಟನ್ನಲ್ಲಿ ಸಂಸತ್ ಚುನಾವಣೆ… ನಾಳೆ ಫಲಿತಾಂಶ
![CISF Constable: ಕಂಗನಾ ಮೇಲೆ ಹಲ್ಲೆ ನಡೆಸಿದ್ದ ಸಿಬಂದಿ ಬೆಂಗಳೂರಿಗೆ ವರ್ಗ](https://www.udayavani.com/wp-content/uploads/2024/07/kangana-150x85.jpg)
CISF Constable: ಕಂಗನಾ ಮೇಲೆ ಹಲ್ಲೆ ನಡೆಸಿದ್ದ ಸಿಬಂದಿ ಬೆಂಗಳೂರಿಗೆ ವರ್ಗ
![LK Advani: ಬಿಜೆಪಿ ಹಿರಿಯ ನಾಯಕ ಎಲ್ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/07/advani-150x87.jpg)
LK Advani: ಬಿಜೆಪಿ ಹಿರಿಯ ನಾಯಕ ಎಲ್ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.