INDWvsSAW; ಇಂದು ದ್ವಿತೀಯ ಏಕದಿನ: ಸರಣಿ ಗೆಲುವಿಗೆ ವನಿತೆಯರ ಸ್ಕೆಚ್‌


Team Udayavani, Jun 19, 2024, 6:30 AM IST

INDWvsSAW; ಇಂದು ದ್ವಿತೀಯ ಏಕದಿನ: ಸರಣಿ ಗೆಲುವಿಗೆ ವನಿತೆಯರ ಸ್ಕೆಚ್‌

ಬೆಂಗಳೂರು: ಪ್ರವಾಸಿ ದಕ್ಷಿಣ ಆಫ್ರಿಕಾ ಎದು ರಿನ ಮೊದಲ ಪಂದ್ಯವನ್ನು ಅಧಿ ಕಾರಯು ತವಾಗಿ ಗೆದ್ದಿರುವ ಭಾರತದ ವನಿತೆಯರೀಗ ಸರಣಿ ವಶಪಡಿಸಿಕೊಳ್ಳಲು ಸ್ಕೆಚ್‌ ಹಾಕಿ ದ್ದಾರೆ. ಬುಧವಾರ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ದ್ವಿತೀಯ ಮುಖಾಮುಖೀ ಏರ್ಪ ಡಲಿದ್ದು, ಇದನ್ನು ಗೆದ್ದರೆ ಹರ್ಮನ್‌ಪ್ರೀತ್‌ ಕೌರ್‌ ಬಳಗ ಇನ್ನಷ್ಟು ಎತ್ತರ ತಲುಪಲಿದೆ.

ಮೊದಲ ಪಂದ್ಯದಲ್ಲಿ ಭಾರತದ ಗೆಲುವಿನ ಅಂತರ ಬರೋಬ್ಬರಿ 143 ರನ್‌. ಆದರೂ ಬ್ಯಾಟಿಂಗ್‌ ಸರದಿಯಲ್ಲಿ ಸಮಸ್ಯೆ ಇದೆ. ಇಲ್ಲಿ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಏಕಾಂಗಿ ಯಾಗಿ ಹೋರಾಡಿ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದರು. ಮಂಧನಾ ಗಳಿಕೆ 117 ರನ್‌. ದಕ್ಷಿಣ ಆಫ್ರಿಕಾ ಮಂಧನಾ ಸ್ಕೋರ್‌ಗಿಂತ ಕೇವಲ 5 ರನ್‌ ಹೆಚ್ಚು ಗಳಿಸಿ ಶರಣಾಗಿತ್ತು. ಎರಡೂ ವಿಭಾಗಗಳಲ್ಲಿ ಲಾರಾ ವೋಲ್ವಾರ್ಟ್‌ ಬಳಗ ವೈಫ‌ಲ್ಯ ಅನುಭವಿಸಿದ ಕಾರಣ ಒತ್ತಡ ಹೆಚ್ಚಿದೆ.

ಮಿಂಚಿದ ಮಂಧನಾ

ಸ್ಮತಿ ಮಂಧನಾ 47ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿ ಕೊಳ್ಳದೆ ಹೋಗಿದ್ದರೆ ಭಾರತಕ್ಕೆ ದೊಡ್ಡ ಮೊತ್ತ ಸಾಧ್ಯವಿರಲಿಲ್ಲ. ಶಫಾಲಿ ವರ್ಮ, ಡಿ. ಹೇಮಲತಾ, ಹರ್ಮನ್‌ಪ್ರೀತ್‌ ಕೌರ್‌, ಜೆಮಿಮಾ ರೋಡ್ರಿಗಸ್‌, ರಿಚಾ ಘೋಷ್‌- ಈ ಐವರು ಸ್ಟಾರ್‌ ಆಟಗಾರ್ತಿಯರಿಂದ 50 ರನ್‌ ಕೂಡ ಸಂದಾಯವಾಗಲಿಲ್ಲ. ದ್ವಿತೀಯ ಪಂದ್ಯದಲ್ಲಿ ಇವರೆಲ್ಲ ಕ್ರೀಸ್‌ ಆಕ್ರಮಿಸಿಕೊಳ್ಳುವುದು ಅಗತ್ಯ.

ಶಫಾಲಿ ವರ್ಮ ತೀವ್ರ ರನ್‌ ಬರಗಾಲದಲ್ಲಿದ್ದಾರೆ. ಇವರ ಕೊನೆಯ ಏಕದಿನ ಅರ್ಧ ಶತಕ ದಾಖಲಾದದ್ದು 2022ರಲ್ಲಿ. ಶ್ರೀಲಂಕಾ ವಿರುದ್ಧ ಪಲ್ಲೆಕೆಲೆಯಲ್ಲಿ ಅಜೇಯ 71 ರನ್‌ ಹೊಡೆದ ಬಳಿಕ ಎರಡಂಕೆಯ ಗಡಿ ತಲುಪಿಲ್ಲ. ಕೊನೆಯ 6 ಪಂದ್ಯಗಳಲ್ಲಿ ಶಫ‌ಲಿ ಗಳಿಕೆ ಹೀಗಿದೆ: 1, 8, 0, 4, 1 ಮತ್ತು 7 ರನ್‌.

ಹರ್ಮನ್‌ಪ್ರೀತ್‌ ಕೌರ್‌ ಕೂಡ ನಾಯಕಿಯ ಆಟ ಆಡುತ್ತಿಲ್ಲ. ಕಳೆ 5 ಪಂದ್ಯಗಳಲ್ಲಿ ಇವರು ಹತ್ತರ ಗಡಿ ದಾಟಿದ್ದು 2 ಸಲ ಮಾತ್ರ.

ಪೂಜಾ ವಸ್ತ್ರಾಕರ್‌ ಅನುಮಾನ

ಬೆನ್ನುನೋವಿನಿಂದಾಗಿ ಬಾಂಗ್ಲಾದೇಶ ಎದುರಿನ ಟಿ20 ಸರಣಿಯಿಂದ ಹೊರಗುಳಿದಿದ್ದ ಜೆಮಿಮಾ ರೋಡ್ರಿಗಸ್‌ ಮೊದಲ ಪಂದ್ಯದಲ್ಲಿ ಪರಿಣಾಮ ಬೀರಿಲ್ಲ. ಕೀಪರ್‌ ರಿಚಾ ಘೋಷ್‌ 3 ರನ್ನಿಗೆ ಆಟ ಮುಗಿಸಿದ್ದರು. ಕೊನೆಯಲ್ಲಿ ಮಂಧನಾಗೆ ಬೆಂಬಲ ನೀಡಿದ್ದು ಆಲ್‌ರೌಂಡರ್‌ಗಳಾದ ದೀಪ್ತಿ ಶರ್ಮ ಮತ್ತು ಪೂಜಾ ವಸ್ತ್ರಾಕರ್‌ ಎಂಬುದನ್ನು ಮರೆಯುವಂತಿಲ್ಲ. ಸದ್ಯ ಪೂಜಾ ಫಿಟ್‌ನೆಸ್‌ ಸಮಸ್ಯೆಯಲ್ಲಿದ್ದಾರೆ. ಬುಧವಾರ ಆಡದೇ ಹೋದರೆ ಅರುಂಧತಿ ರೆಡ್ಡಿ ಅವಕಾಶ ಪಡೆಯಲಿದ್ದಾರೆ.

ಸ್ಪಿನ್‌ ತ್ರಿವಳಿಗಳ ದಾಳಿ

ಭಾರತದ ಬೌಲಿಂಗ್‌ ಘಾತಕವಾಗಿತ್ತು. ಆಶಾ ಶೋಭನಾ (21ಕ್ಕೆ 4) ಭರ್ಜರಿ ಪದಾರ್ಪಣೆ ಮಾಡಿದ್ದರು. ಮತ್ತಿಬ್ಬರು ಸ್ಪಿನ್ನರ್‌ಗಳಾದ ದೀಪ್ತಿ, ರಾಧಾ ಯಾದವ್‌ ಪಾತ್ರವೂ ದೊಡ್ಡದಿತ್ತು.

ಟಾಪ್ ನ್ಯೂಸ್

Pavoor ಉಳಿಯ ಅಕ್ರಮ ಮರಳುಗಾರಿಕೆ ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ

Pavoor ಉಳಿಯ ಅಕ್ರಮ ಮರಳುಗಾರಿಕೆ ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ

ಎಂ.ಟಿ.ಪಿ.ಕಿಟ್‌ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ

Mangaluru ಎಂ.ಟಿ.ಪಿ.ಕಿಟ್‌ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ

Toll Plaza ಹೆದ್ದಾರಿ ಬದಿ ತಾತ್ಕಾಲಿಕ ಅಂಗಡಿ ತೆರವು: ಜು.20ರ ಗಡುವು ನೀಡಿದ ಅಧಿಕಾರಿ

Toll Plaza ಹೆದ್ದಾರಿ ಬದಿ ತಾತ್ಕಾಲಿಕ ಅಂಗಡಿ ತೆರವು: ಜು.20ರ ಗಡುವು ನೀಡಿದ ಅಧಿಕಾರಿ

ಹುಲ್ಕಡಿಕೆ: ಬೈಂದೂರು ತಾ.ಪಂ. ಇಒ ಭೇಟಿ

Kundapura ಹುಲ್ಕಡಿಕೆ: ಬೈಂದೂರು ತಾ.ಪಂ. ಇಒ ಭೇಟಿ

Rain-M

Heavy Rain: ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ಜು.6 ರಂದು ರಜೆ

1—dsdsadas

Doctors ಭೇಟಿ ಬಿಟ್ಟು ವಾಂಖೇಡೆಗೆ ಬಂದ ರೋಹಿತ್‌ ತಾಯಿ; Video Viral

TN-BSP-Armstrong

Tamil Nadu: ಬಿಎಸ್‌ಪಿ ಮುಖ್ಯಸ್ಥ ಆರ್ಮ್‌ಸ್ಟ್ರಾಂಗ್ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ghgg

T20 World Cup ವಿಜಯೋತ್ಸವವೆಲ್ಲ ಮುಗಿದ ಬಳಿಕ ಕೊಹ್ಲಿ-ಕೋಚ್‌ ಆತ್ಮೀಯ ಅಪ್ಪುಗೆ

1—dsdsadas

Doctors ಭೇಟಿ ಬಿಟ್ಟು ವಾಂಖೇಡೆಗೆ ಬಂದ ರೋಹಿತ್‌ ತಾಯಿ; Video Viral

1-asdsdasdas

Maharashtra ವಿಧಾನಸಭೆಯಲ್ಲಿ ನಾಲ್ವರು ವಿಶ್ವಕಪ್ ಹೀರೋಗಳಿಗೆ ಗೌರವ ಸಮ್ಮಾನ

1-dasdas-das

India-South Africa; ವನಿತೆಯರ ಟಿ20 ಸರಣಿ ಇಂದಿನಿಂದ

Rohan Bopanna

Wimbledon tennis match: ಬೋಪಣ್ಣ-ಎಬ್ಡೆನ್‌ ಮುನ್ನಡೆ

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

Pavoor ಉಳಿಯ ಅಕ್ರಮ ಮರಳುಗಾರಿಕೆ ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ

Pavoor ಉಳಿಯ ಅಕ್ರಮ ಮರಳುಗಾರಿಕೆ ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ

ಎಂ.ಟಿ.ಪಿ.ಕಿಟ್‌ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ

Mangaluru ಎಂ.ಟಿ.ಪಿ.ಕಿಟ್‌ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ

1-ghgg

T20 World Cup ವಿಜಯೋತ್ಸವವೆಲ್ಲ ಮುಗಿದ ಬಳಿಕ ಕೊಹ್ಲಿ-ಕೋಚ್‌ ಆತ್ಮೀಯ ಅಪ್ಪುಗೆ

Toll Plaza ಹೆದ್ದಾರಿ ಬದಿ ತಾತ್ಕಾಲಿಕ ಅಂಗಡಿ ತೆರವು: ಜು.20ರ ಗಡುವು ನೀಡಿದ ಅಧಿಕಾರಿ

Toll Plaza ಹೆದ್ದಾರಿ ಬದಿ ತಾತ್ಕಾಲಿಕ ಅಂಗಡಿ ತೆರವು: ಜು.20ರ ಗಡುವು ನೀಡಿದ ಅಧಿಕಾರಿ

ಹುಲ್ಕಡಿಕೆ: ಬೈಂದೂರು ತಾ.ಪಂ. ಇಒ ಭೇಟಿ

Kundapura ಹುಲ್ಕಡಿಕೆ: ಬೈಂದೂರು ತಾ.ಪಂ. ಇಒ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.