T20 World Cup; ದ. ಆಫ್ರಿಕಾ-ಅಮೆರಿಕ ಎಂಟರ ಆಟ; ಇಂದಿನಿಂದ ಸೂಪರ್‌-8


Team Udayavani, Jun 19, 2024, 7:07 AM IST

t20 world cup; usa facing south africa in super 8 clash

ನಾರ್ತ್‌ ಸೌಂಡ್‌ (ಆ್ಯಂಟಿಗುವಾ): ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ದ್ವಿತೀಯ ಸುತ್ತಿನ ಸ್ಪರ್ಧೆಗೆ ಕ್ಷಣಗಣನೆ ಮೊದಲ್ಗೊಂಡಿದೆ. ಲೀಗ್‌ ಹಂತದಿಂದ ಮೇಲೇರಿ ಬಂದ 8 ತಂಡಗಳ ನಡುವಿನ “ಸೂಪರ್‌-8′ ಸಮರ ಬುಧವಾರದಿಂದ ವೆಸ್ಟ್‌ ಇಂಡೀಸ್‌ನಲ್ಲಿ ಆರಂಭಗೊಳ್ಳಲಿದೆ. ಇದೇ ಮೊದಲ ಸಲ ವಿಶ್ವಕಪ್‌ನಲ್ಲಿ ಪಾಲ್ಗೊಂಡು ದ್ವಿತೀಯ ಸುತ್ತಿಗೇರಿದ ಖುಷಿಯಲ್ಲಿರುವ ಅಮೆರಿಕ ಮತ್ತು ಬ್ಯಾಟಿಂಗ್‌ ಚಿಂತೆಯಲ್ಲಿರುವ ದಕ್ಷಿಣ ಆಫ್ರಿಕಾ ತಂಡಗಳು ಮೊದಲ ಪಂದ್ಯದಲ್ಲಿ ಎದುರಾಗಲಿವೆ.

ಬೇರೆ ಬೇರೆ ರಾಷ್ಟ್ರಗಳ ಪ್ರತಿಭಾ ನ್ವಿತ ಆಟಗಾರರನ್ನು ಹೊಂದಿರುವ ಅಮೆರಿಕ “ಎ’ ವಿಭಾಗದಲ್ಲಿ ದ್ವಿತೀಯ ಸ್ಥಾನಿಯಾಗಿ ಮೂಡಿಬಂದ ತಂಡ. ಉದ್ಘಾಟನ ಪಂದ್ಯದಲ್ಲಿ ಕೆನಡಾವನ್ನು 7 ವಿಕೆಟ್‌ಗಳಿಂದ ಮಣಿಸಿದ ಬಳಿಕ, ನೆಚ್ಚಿನ ಪಾಕಿಸ್ಥಾನವನ್ನು ಸೂಪರ್‌ ಓವರ್‌ನಲ್ಲಿ ಮಣ್ಣು ಮುಕ್ಕಿಸಿದ್ದು ಅಮೆರಿಕದ ಪರಾಕ್ರಮಕ್ಕೆ ಸಾಕ್ಷಿ.

ಲೀಗ್‌ನಲ್ಲಿ ಯುಎಸ್‌ಎಯ “ಅಗ್ರೆಸ್ಸೀವ್‌ ಬ್ರ್ಯಾಂಡ್‌ ಆಫ್ ಕ್ರಿಕೆಟ್‌’ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಆದರಿನ್ನು ತವರಿನಾಚೆ ಹೇಗೆ ಪ್ರದರ್ಶನ ನೀಡಲಿದೆ ಎಂಬುದು ಮುಖ್ಯ. ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡಿದ ಮೊನಾಂಕ್‌ ಪಟೇಲ್‌ ಪಡೆಯಿನ್ನು ವೆಸ್ಟ್‌ ಇಂಡೀಸ್‌ ಪಿಚ್‌ಗಳಿಗೆ ಹೊಂದಿಕೊಳ್ಳಬೇಕಿದೆ.

“ಸೂಪರ್‌-8 ಸವಾಲನ್ನು ನಾವು ಕಾತರದಿಂದ ಎದುರು ನೋಡು ತ್ತಿದ್ದೇವೆ. ಕಳೆದ ಎರಡು ವಾರಗಳಿಂದ ನಮ್ಮ ಆಟ ಎಲ್ಲರ ಗಮನ ಸೆಳೆದಿತ್ತು. ಐಸಿಸಿಯ ಫ‌ುಲ್‌ ಮೆಂಬರ್‌ ತಂಡಗಳನ್ನು ಸೋಲಿ ಸಲು ಇದು ಸ್ಫೂರ್ತಿ ಆಗಲಿದೆ’ ಎಂಬುದಾಗಿ ಯುಎಸ್‌ಎ ಉಪನಾಯಕ, ಬಿಗ್‌ ಹಿಟ್ಟರ್‌ ಆರನ್‌ ಜೋನ್ಸ್‌ ಹೇಳಿದ್ದಾರೆ.

ನಾಯಕ ಮೊನಾಂಕ್‌ ಪಟೇಲ್‌ ಗಾಯಾಳಾದ ಕಾರಣ ಭಾರತ ಹಾಗೂ ಐರ್ಲೆಂಡ್‌ ವಿರುದ್ಧ ಆಡಿರಲಿಲ್ಲ. ಸೂಪರ್‌-8ನಲ್ಲಿ ಮರಳಿ ತಂಡವನ್ನು ಮುನ್ನಡೆಸಲಿದ್ದಾರೆ. ಅಮೆರಿಕದ ಯಶಸ್ಸಿನಲ್ಲಿ ದೊಡ್ಡ ಪಾತ್ರ ವಹಿಸಿದ ಸೌರಭ್‌ ನೇತ್ರಾವಲ್ಕರ್‌, ನೋಸ್ತುಶ್‌ ಕೆಂಜಿಗೆ, ಹರ್ಮೀತ್‌ ಸಿಂಗ್‌, ಕೋರಿ ಆ್ಯಂಡರ್ಸನ್‌, ಸ್ಟೀವನ್‌ ಟೇಲರ್‌ ಅವರೆಲ್ಲ ಇದೇ ಲಯದಲ್ಲಿ ಸಾಗಿದರೆ ಸ್ಪರ್ಧೆ ರೋಚಕಗೊಳ್ಳಲಿದೆ.

ಇನ್ನೂ 120ರ ಗಡಿ ದಾಟಿಲ್ಲ

ದಕ್ಷಿಣ ಆಫ್ರಿಕಾ ಬೌಲಿಂಗ್‌ನಲ್ಲಿ ಮಿಂಚಿದರೂ ಬ್ಯಾಟಿಂಗ್‌ನಲ್ಲಿ ಪರದಾಡುತ್ತ ಬಂದಿದೆ. ಕ್ವಿಂಟನ್‌ ಡಿ ಕಾಕ್‌, ರೀಝ ಹೆಂಡ್ರಿಕ್ಸ್‌, ಹೆನ್ರಿಚ್‌ ಕ್ಲಾಸೆನ್‌, ಟ್ರಿಸ್ಟನ್‌ ಸ್ಟಬ್ಸ್, ಡೇವಿಡ್‌ ಮಿಲ್ಲರ್‌, ಐಡನ್‌ ಮಾರ್ಕ್‌ರಮ್‌ ಇನ್ನೂ ಫ‌ುಲ್‌ ಜೋಶ್‌ ತೋರಿಲ್ಲ. ಲೀಗ್‌ನಲ್ಲಿ 120ರ ಗಡಿಯನ್ನೇ ದಾಟಿಲ್ಲ ಎಂಬುದು ಹರಿಣಗಳ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಾಕ್ಷಿ. ನೇಪಾಲ ವಿರುದ್ಧ ಸೋಲಿನ ದವಡೆಯಿಂದ ಬಚಾವಾಗಿ ಬಂದ ತಂಡವಿದು. ಗೆಲುವಿನ ಅಂತರ ಒಂದೇ ರನ್‌! ವಿಂಡೀಸ್‌ ಟ್ರ್ಯಾಕ್‌ಗಳಲ್ಲಿ ರನ್‌ ಹರಿವು ಇರುವುದರಿಂದ ಹರಿಣಗಳ ಪಡೆಯ ಬ್ಯಾಟಿಂಗ್‌ ಕ್ಲಿಕ್‌ ಆದೀತೆಂಬ ನಿರೀಕ್ಷೆ ಇರಿಸಿ ಕೊಳ್ಳಬಹುದು.

ದಕ್ಷಿಣ ಆಫ್ರಿಕಾ ಬೌಲಿಂಗ್‌ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಕೂಟಕ್ಕೂ ಮುನ್ನ ವೇಗಿ ಆ್ಯನ್ರಿಚ್‌ ನೋರ್ಜೆ ಅವರ ಫಾರ್ಮ್ ಬಗ್ಗೆ ಅನುಮಾನವಿತ್ತು. ಆದರೆ ಅವರೀಗ ಘಾತಕವಾಗಿ ಪರಿಣಮಿಸಿದ್ದಾರೆ. ರಬಾಡ, ಶಮಿÕ, ಮಹಾರಾಜ್‌, ಜಾನ್ಸೆನ್‌ ಅವರೆಲ್ಲರ ಆಕ್ರಮಣ ಮುಂದುವರಿದರೆ ಅಮೆರಿಕದ ಹಾದಿ ಕಠಿನವಾದೀತು.

ಟಾಪ್ ನ್ಯೂಸ್

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್…  25 ಲಕ್ಷಕ್ಕೆ ಡೀಲ್

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

10

Bengaluru: ನಿಮ್ಮ ಮನೆ ಬಳಿ ಸಸಿ ನೆಡಬೇಕಾ? ಹಸಿರು ತೇರು ಸಂಪರ್ಕಿಸಿ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rewew

ICC ತಂಡದಲ್ಲಿ ಚಾಂಪಿಯನ್‌ ಭಾರತದ ಆರು ಆಟಗಾರರು: ದಕ್ಷಿಣ ಆಫ್ರಿಕಾದ ಒಬ್ಬರೂ ಇಲ್ಲ

1-asddasdsa

Storm: ವಿಂಡೀಸ್‌ನಲ್ಲೇ ಉಳಿದ ಭಾರತ ಕ್ರಿಕೆಟ್‌ ತಂಡ

badminton

Badminton ಆಡುತ್ತಿದ್ದಾಗಲೇ ಕುಸಿದು ಬಿದ್ದು  ಶಟ್ಲರ್‌ ಸಾವು

1-sikka

India ಸರಣಿಗೆ ಜಿಂಬಾಬ್ವೆ ತಂಡ : ಸಿಕಂದರ್‌ ರಝ ನಾಯಕ

jay-shah

Sri Lanka ಪ್ರವಾಸದಿಂದ ಭಾರತ ತಂಡಕ್ಕೆ ಹೊಸ ಕೋಚ್‌: ಶಾ

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್…  25 ಲಕ್ಷಕ್ಕೆ ಡೀಲ್

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

10

Bengaluru: ನಿಮ್ಮ ಮನೆ ಬಳಿ ಸಸಿ ನೆಡಬೇಕಾ? ಹಸಿರು ತೇರು ಸಂಪರ್ಕಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.