![16](https://www.udayavani.com/wp-content/uploads/2024/07/16-415x249.jpg)
Kasaragod ಪ್ರಿಯಕರನ ಜತೆಗೆ ಹೋಗಿದ್ದ ಮಹಿಳೆ ಪೊಲೀಸರ ಉಪದೇಶದಿಂದ ಮತ್ತೆ ಪತಿಮನೆಗೆ
Team Udayavani, Jun 18, 2024, 11:36 PM IST
![Kasaragod ಪ್ರಿಯಕರನ ಜತೆಗೆ ಹೋಗಿದ್ದ ಮಹಿಳೆ ಪೊಲೀಸರ ಉಪದೇಶದಿಂದ ಮತ್ತೆ ಪತಿಮನೆಗೆ](https://www.udayavani.com/wp-content/uploads/2024/06/POlice-1-620x389.jpg)
ಕಾಸರಗೋಡು: ನಾಲ್ಕು ವರ್ಷದ ಪುತ್ರ ಹಾಗೂ ಪತಿಯನ್ನು ಬಿಟ್ಟು ತನಗಿಂತ ಎರಡು ವರ್ಷ ಚಿಕ್ಕವನಾದ ಪ್ರಿಯತಮನೊಂದಿಗೆ ಪರಾರಿಯಾಗಿದ್ದ ಮಹಿಳೆ, ಪೊಲೀಸರು ನೀಡಿದ ಉಪದೇಶದಿಂದ ಮನಸ್ಸು ಬದಲಾಯಿಕೊಂಡು ಪತಿ ಹಾಗೂ ಪುತ್ರನ ಜತೆಗೆ ತೆರಳಿದ್ದಾರೆ.
ಕರಿಂದಳಂ ಚಾವಕ್ಕಳುಯದ 26ರ ಹರೆಯದ ಮಹಿಳೆ ಪಯ್ಯನ್ನೂರು ನಿವಾಸಿಯಾದ 24ರ ಹರೆಯದ ಯುವಕನ ಜತೆ ರವಿವಾರ ಪರಾರಿಯಾಗಿದ್ದರು. ಯುವಕ ಕೇಬಲ್ ಟಿವಿ ಕಾರ್ಮಿಕನಾಗಿದ್ದಾನೆ. ಪತ್ನಿ ನಾಪತ್ತೆಯಾದ ಬಗ್ಗೆ ನೀಡಿದ ದೂರಿನಂತೆ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದರು.
ತನಿಖೆಯ ಅಂಗವಾಗಿ ಪೊಲೀಸರು ಪ್ರಿಯತಮನ ಮನೆಗೆ ಹೋಗಿ ನೋಡಿದಾಗ ಜೋಡಿ ಅಲ್ಲಿರಲಿಲ್ಲ. ಇವರ ಫೋನ್ ಸ್ವಿಚ್ ಆಫ್ ಆಗಿತ್ತು. ಮನೆಯಿಂದ ಲಭಿಸಿದ ಫೋನ್ ನಂಬರ್ ಅನ್ನು ಸಂಪರ್ಕಿಸಿದಾಗ ಪರಶ್ಶಿನಕಡವಿನಲ್ಲಿ ಇರುವುದಾಗಿ ತಿಳಿಸಿದ್ದರು. ಇವರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿ, ಉಪದೇಶ ನೀಡಿದ್ದರಿಂದ ಇಬ್ಬರೂ ಮನಸ್ಸು ಬದಲಾಯಿಸಿಕೊಂಡರು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಮಹಿಳೆ ಪತಿ ಹಾಗೂ ಪುತ್ರನ ಜತೆ ತೆರಳುವುದಾಗಿ ಹೇಳಿದರು.
ಟಾಪ್ ನ್ಯೂಸ್
![16](https://www.udayavani.com/wp-content/uploads/2024/07/16-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![16](https://www.udayavani.com/wp-content/uploads/2024/07/16-150x90.jpg)
ಮದುವೆ ಆಗಲು ನಿರಾಕರಿಸಿದ್ದಕ್ಕೆ ಪ್ರಿಯಕರನ ಖಾಸಗಿ ಅಂಗವನ್ನೇ ಕತ್ತರಿಸಿದ ಪ್ರಿಯತಮೆ.!
![ವಿದೇಶ ಪ್ರವಾಸಿ ಕಥನ ಭಾಗ-1:| ಉಡುಪಿಯಿಂದ ಮರಳು ನಾಡಿನ ರಾಜಧಾನಿಯತ್ತ ಪಯಣ](https://www.udayavani.com/wp-content/uploads/2024/07/Abhudhabi-150x94.jpg)
ವಿದೇಶ ಪ್ರವಾಸಿ ಕಥನ ಭಾಗ-1:| ಉಡುಪಿಯಿಂದ ಮರಳು ನಾಡಿನ ರಾಜಧಾನಿಯತ್ತ ಪಯಣ
![vijaya-sankeshwar1](https://www.udayavani.com/wp-content/uploads/2024/07/vijaya-sankeshwar1-150x102.jpg)
ಮಾಟಮಂತ್ರದ ಕಾಟ: ಕುಟುಂಬದ ವಿರುದ್ಧವೇ ದೂರು ನೀಡಲು ಮುಂದಾದ ಉದ್ಯಮಿ ವಿಜಯ ಸಂಕೇಶ್ವರ ಪುತ್ರಿ
![ಮೊದಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ – ಭುವನ್ ದಂಪತಿ: ಕೊಡವ ಶೈಲಿಯಲ್ಲಿ ಫೋಟೋಶೂಟ್](https://www.udayavani.com/wp-content/uploads/2024/07/15-150x90.jpg)
ಮೊದಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ – ಭುವನ್ ದಂಪತಿ: ಕೊಡವ ಶೈಲಿಯಲ್ಲಿ ಫೋಟೋಶೂಟ್
![Conversion: ಮತಾಂತರದಿಂದ ಬಹುಸಂಖ್ಯಾತರು…ಅಲ್ಪಸಂಖ್ಯಾತರಾಗಬಹುದು; ಅಲಹಾಬಾದ್ ಕೋರ್ಟ್](https://www.udayavani.com/wp-content/uploads/2024/07/Court-2-150x86.jpg)
Conversion: ಮತಾಂತರದಿಂದ ಬಹುಸಂಖ್ಯಾತರು…ಅಲ್ಪಸಂಖ್ಯಾತರಾಗಬಹುದು; ಅಲಹಾಬಾದ್ ಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.