![Zimbabwe series; ಮತ್ತೆ ತಂಡದಲ್ಲಿ ಬದಲಾವಣೆ; ಟೀಂ ಇಂಡಿಯಾ ಸೇರಿದ ಮೂವರು ಯುವ ಆಟಗಾರರು](https://www.udayavani.com/wp-content/uploads/2024/07/team-india-1-415x229.jpg)
ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ
ಎಂಇಐಎಲ್ನಿಂದ ಎಂಎಂಎನ್ಎಲ್ನ ಕಟ್ಟಡ ಸಂಕೀರ್ಣಕ್ಕೆ ಸೋಲಾರ್ ಅಳವಡಿಕೆ
Team Udayavani, Jun 19, 2024, 12:03 AM IST
![ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ](https://www.udayavani.com/wp-content/uploads/2024/06/SOLAR-620x384.jpg)
ಮಣಿಪಾಲ: ಮಣಿಪಾಲ ಮೀಡಿಯಾ ನೆಟ್ವರ್ಕ್ ಲಿ.ನ (ಎಂಎಂಎನ್ಎಲ್) ಉದಯವಾಣಿ ಕಟ್ಟಡ ಸಂಕೀರ್ಣ ಬರೀ ವಿದ್ಯುತ್ ಸ್ವಾವಲಂಬನೆಯತ್ತ ಮಾತ್ರ ಹೆಜ್ಜೆ ಇಟ್ಟಿಲ್ಲ; ಜತೆಗೆ ಸುಸ್ಥಿರ ಪರಿಸರ ಪರಿಕಲ್ಪನೆ ಸಾಧ್ಯವಾಗಿಸುವತ್ತಲೂ ದಾಪುಗಾಲು ಇಟ್ಟಿದೆ. ಅಸಾಂಪ್ರದಾಯಕ ಇಂಧನ ಮೂಲವಾದ ಸೌರಶಕ್ತಿ ಇಂಧನ ಉತ್ಪಾದನಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಎಂಎಂಎನ್ಎಲ್ ಲಿ. ಕಚೇರಿ ಸಂಕೀರ್ಣಕ್ಕೆ ಅಳವಡಿಸಲಾದ 200 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಲ್ರಾಂಟ್ನ ಉದ್ಘಾಟನೆಯನ್ನು ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಪೈ ಹಾಗೂ ಮಣಿಪಾಲ್ ಟೆಕ್ನಾಲಜೀಸ್ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಗೌತಮ್ ಪೈ ಅವರು ಮಂಗಳವಾರ ನೆರವೇರಿಸಿದರು.
ಈ ಸೋಲಾರ್ ವ್ಯವಸ್ಥೆಯನ್ನು ಎಂಎಂಎನ್ಎಲ್ನ ಸೋದರ ಸಂಸ್ಥೆಯಾದ ಮಣಿಪಾಲ್ ಎನರ್ಜಿ ಆ್ಯಂಡ್ ಇನ್ಫ್ರಾಟೆಕ್ (ಎಂಇಐಎಲ್) ಅಳವಡಿಸಿದೆ.
ಸಂಕೀರ್ಣಕ್ಕೆ 200 ಕಿಲೋ ವ್ಯಾಟ್ ಸಾಮ ರ್ಥ್ಯದ 368 ಸೋಲಾರ್ ಪ್ಯಾನೆಲ್ಗಳನ್ನು ಅಳವಡಿಸಲಾಗಿದೆ. ಪ್ರತೀ ಕಿ.ವ್ಯಾಟ್ ಗೆ 51 ಸಾವಿರ ಮೆಟ್ರಿಕ್ ಟನ್ ಇಂಗಾಲ ಉತ್ಪಾದನೆ ಕಡಿಮೆಯಾಗಲಿದೆ. ಅಲ್ಲದೇ ಸುಮಾರು ಶೇ.40 ರಷ್ಟು ವಿದ್ಯುತ್ ವೆಚ್ಚ ಕಡಿತಗೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ.
ಇದು ಮಣಿಪಾಲ ಎನರ್ಜಿ ಆ್ಯಂಡ್ ಇನ್ಫ್ರಾಟೆಕ್ ನ ಪ್ರಥಮ ಸೋಲಾರ್ ಪ್ರಾಜೆಕ್ಟ್ ಆಗಿದೆ. ಇದುವರೆಗೆ ಸಿವಿಲ್ ಮತ್ತು ಎಲೆಕ್ಟ್ರಿಕಲ್ ಸಂಬಂಧಿಸಿದ ಯೋಜನೆಗಳನ್ನು ದೇಶಾದ್ಯಂತ ನಿರ್ವಹಿಸುತ್ತಿತ್ತು. ಮುಂದೆ ಬೃಹತ್ ಕಾರ್ಖಾನೆ ಗಳು, ಗೃಹೋಪಯೋಗಿ ಉದ್ದೇಶಗಳ ಸೋಲಾರ್ ಅಳವಡಿಕೆ ಉದ್ದೇಶವನ್ನು ಸಂಸ್ಥೆ ಹೊಂದಿದೆ.
ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿ.ನ ಆಡಳಿತ ನಿರ್ದೇಶಕ ಹಾಗೂ ಸಿಇಒ ವಿನೋದ್ ಕುಮಾರ್, ಮಣಿಪಾಲ್ ಟೆಕ್ನಾಲಜೀಸ್ನ ಆಡಳಿತ ನಿರ್ದೇಶಕ ಹಾಗೂ ಸಿಇಒ ಅಭಯ್ ಗುಪೆ¤, ಮಣಿಪಾಲ್ ಎನರ್ಜಿಯ ಆಡಳಿತ ನಿರ್ದೇಶಕ ಹಾಗೂ ಸಿಇಒ ಸಾಗರ್ ಮುಖೋಪಾಧ್ಯಾಯ, ಮಣಿಪಾಲ್ ಗ್ರೂಪ್ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಪ್ರಮೋದ್ ಫೆರ್ನಾಂಡಿಸ್, ಎಂಇಐಎಲ್ನ ವಿಪಿ ವಿಶ್ವನಾಥ ಚೌಹಾØಣ್ ಉಪಸ್ಥಿತರಿದ್ದರು.
ಯೋಜನೆಯ ಮುಖ್ಯಾಂಶ
-200 ಕಿ.ವ್ಯಾ ಸಾಮರ್ಥಯ
-2.88 ಲಕ್ಷ ಕಿ.ವ್ಯಾಟ್ ವಾರ್ಷಿಕ ವಿದ್ಯುತ್ ಉತ್ಪಾದನೆ
-25 ಲಕ್ಷ ರೂ. ವಾರ್ಷಿಕ ಉಳಿತಾಯ
-51 ಸಾವಿರ ಮೆ.ಟನ್- ವಾರ್ಷಿಕ ಇಂಗಾಲ ಹೊರಸೂಸುವಿಕೆಯ ಪ್ರಮಾಣ ಕಡಿತ
-ವಿದ್ಯುತ್ ಸ್ವಾವಲಂಬನೆಗೆ ಕೊಡುಗೆ
ಟಾಪ್ ನ್ಯೂಸ್
![Zimbabwe series; ಮತ್ತೆ ತಂಡದಲ್ಲಿ ಬದಲಾವಣೆ; ಟೀಂ ಇಂಡಿಯಾ ಸೇರಿದ ಮೂವರು ಯುವ ಆಟಗಾರರು](https://www.udayavani.com/wp-content/uploads/2024/07/team-india-1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Zimbabwe series; ಮತ್ತೆ ತಂಡದಲ್ಲಿ ಬದಲಾವಣೆ; ಟೀಂ ಇಂಡಿಯಾ ಸೇರಿದ ಮೂವರು ಯುವ ಆಟಗಾರರು](https://www.udayavani.com/wp-content/uploads/2024/07/team-india-1-150x83.jpg)
Zimbabwe series; ಮತ್ತೆ ತಂಡದಲ್ಲಿ ಬದಲಾವಣೆ; ಟೀಂ ಇಂಡಿಯಾ ಸೇರಿದ ಮೂವರು ಯುವ ಆಟಗಾರರು
![](https://www.udayavani.com/wp-content/uploads/2024/07/Bite-150x84.jpg)
Uttar Pradesh: ಹಾವಿನ ದ್ವೇಷ…45 ದಿನಗಳಲ್ಲಿ 5 ಬಾರಿ ಹಾವು ಕಚ್ಚಿದರೂ ಬದುಕುಳಿದ ವ್ಯಕ್ತಿ!
![1-mng-protest](https://www.udayavani.com/wp-content/uploads/2024/07/1-mng-protest-150x90.jpg)
Mangaluru: ನೀಟ್ ಅವ್ಯವಹಾರ: ಎನ್.ಎಸ್.ಯು.ಐ., ಕಾಂಗ್ರೆಸ್ ಪ್ರತಿಭಟನೆ
![Chikkamagaluru: ಬಸ್ ಹತ್ತುವ ವೇಳೆ ತುಂಡಾದ ಡೋರ್ ಲಾಕ್… ಮಹಿಳೆಗೆ ಗಾಯ](https://www.udayavani.com/wp-content/uploads/2024/07/ksrtc-150x96.jpg)
Chikkamagaluru: ಡೋರ್ ಲಾಕ್ ತುಂಡಾಗಿ ಬಸ್ಸಿನಿಂದ ಹೊರಬಿದ್ದ ಮಹಿಳೆ…
![Sirsi: ಕೇಂದ್ರ ಸಚಿವರನ್ನು ಭೇಟಿಯಾದ ಕಾಗೇರಿ: ಚತುಷ್ಪತ ರಾ.ಹೆದ್ದಾರಿ ತ್ವರಿತಕ್ಕೆ ಮನವಿ](https://www.udayavani.com/wp-content/uploads/2024/07/kageri-150x87.jpg)
Sirsi: ಕೇಂದ್ರ ಸಚಿವರನ್ನು ಭೇಟಿಯಾದ ಕಾಗೇರಿ: ಚತುಷ್ಪತ ರಾ.ಹೆದ್ದಾರಿ ತ್ವರಿತಕ್ಕೆ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.