Heatwave: ದಿಲ್ಲಿ ಸುತ್ತ ಉಷ್ಣಮಾರುತ: 15 ಸಾವು; 12 ಮಂದಿಗೆ ಐಸಿಯು ಚಿಕಿತ್ಸೆ
ದಿಲ್ಲಿಯಲ್ಲಿ 5, ನೋಯ್ಡಾದಲ್ಲಿ 10 ಸಾವು
Team Udayavani, Jun 19, 2024, 5:16 PM IST
ಹೊಸದಿಲ್ಲಿ: ಕಳೆದ 2 -3 ದಿನಗಳ ಅವಧಿಯಲ್ಲಿ ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಹಾಗೂ ಅದರ ಸುತ್ತಮುತ್ತಲ ಸ್ಥಳಗಳಲ್ಲಿ ಉಷ್ಣಮಾರುತದ ಹೊಡೆತಕ್ಕೆ 15 ಮಂದಿ ಮೃತಪಟ್ಟಿದ್ದಾರೆ. ಇದರ ಜತೆಗೆ 12 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ. ಈ ಮಧ್ಯೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಅವರು ಬುಧವಾರ ಅಧಿಕಾರಿಗಳ ಸಭೆಯನ್ನು ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಕಳೆದ ಎರಡು ದಿನದಲ್ಲಿ ಸರಕಾರಿ ಸ್ವಾಮ್ಯದ ಆರ್ಎಂಎಲ್ ಹಾಸ್ಪಿಟಲ್ಗೆ 22 ರೋಗಿಗಳು ದಾಖಲಾಗಿದ್ದು, ಐವರು ಮೃತ ಪಟ್ಟಿದ್ದಾರೆ ಮತ್ತು 12ರಿಂದ 13 ಜನರಿಗೆ ವೆಂಟಿಲೇಟರ್ ನೆರವು ಒದಗಿಸಲಾಗಿದೆ. ಅದೇ ರೀತಿ ಸಫªರ್ಗಂಜ್ ಹಾಸ್ಪಿಟಲ್ನಲ್ಲೂ 60 ಉಷ್ಣಾಘಾತ ಪ್ರಕರಣಗಳು ವರದಿಯಾಗಿವೆ.
ಈ ಪೈಕಿ 42 ಜನರು ಆಸ್ಪತ್ರೆಗೆ ದಾಖಲಾದರೆ 6 ಜನರು ಮೃತಪಟ್ಟಿದ್ದಾರೆ. ಇನ್ನು ಎಲ್ಜೆಪಿ ಹಾಸ್ಪಿಟಲ್ನಲ್ಲಿ ಉಷ್ಣಾಘಾತ ಕಾರಣದಿಂದ ನಾಲ್ವರು ರೋಗಿಗಳು ಸಾವಿಗೀಡಾಗಿದ್ದಾರೆ. ಸರ್ ಗಂಗಾ ರಾಮ್ ಹಾಸ್ಪಿಟಲ್ ಹೊರರೋಗಿಗಳ ವಿಭಾಗದಲ್ಲಿ ನಿತ್ಯ 30ರಿಂದ 35 ಉಷ್ಣಾಘಾತ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಸಿಗಾಳಿ ಹೊಡೆತದ ಪರಿಣಾಮ ಆಸ್ಪತ್ರೆಗಳಿಗೆ ದಾಖಲಾದವರ ಪೈಕಿ ಹೆಚ್ಚಿನವರು ಕಾರ್ಮಿಕರಾಗಿದ್ದಾರೆ.
ಬಿಸಿ ಗಾಳಿಯ ತೀವ್ರತೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ದಿಲ್ಲಿ ಮತ್ತು ಸುತ್ತಮುತ್ತ ಪ್ರದೇಶಗಳ ಸರಕಾರಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಬುಧವಾರ ಆದೇಶ ಹೊರಡಿಸಿದೆ.
12 ವರ್ಷಗಳಲ್ಲೇ ಜೂ. 18ರಂದು ದಿಲ್ಲಿಯಲ್ಲಿ ಗರಿಷ್ಠ “ಬಿಸಿ ರಾತ್ರಿ’
12 ವರ್ಷಗಳಲ್ಲೇ ಜೂ. 18ರಂದು ದಿಲ್ಲಿಯು ಗರಿಷ್ಠ “ಬಿಸಿ ರಾತ್ರಿ’ಗೆ ಸಾಕ್ಷಿಯಾಗಿದ್ದು, 35.2 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆಯ ದಾಖಲೆಗಳ ಪ್ರಕಾರ ಇದು ಸಾಮಾನ್ಯಕ್ಕಿಂತ 8 ಡಿಗ್ರಿ ಸೆ. ಹೆಚ್ಚು. ದಿನದಲ್ಲಿ ಗರಿಷ್ಠ 43.6 ಡಿ.ಸೆ. ತಾಪದಾಖಲಾಗಿದ್ದರೆ ಈ ಋತುವಿನ ಸಾಮಾನ್ಯ ಉಷ್ಣಾಂಶಕ್ಕಿಂತ 4.8ಕ್ಕಿಂತ ಹೆಚ್ಚು ಎಂದು ತಿಳಿಸಿದೆ.
11 ರಾಜ್ಯಗಳಲ್ಲಿ ಸರಾಸರಿ 45 ಡಿ.ಸೆ. ತಾಪ
ಹೊಸದಿಲ್ಲಿ: ಭಾರತದ ಉತ್ತರ ಹಾಗೂ ಪೂರ್ವ ದಿಕ್ಕಿನ ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಪಂಜಾಬ್, ಹರಿಯಾಣ, ಹೊಸದಿಲ್ಲಿ, ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಹಿಮಾಚಲ ಪ್ರದೇಶ, ಒಡಿಶಾ, ಝಾರ್ಖಂಡ್, ಜಮ್ಮು, ಬಿಹಾರ ರಾಜ್ಯಗಳಲ್ಲಿ ಸರಾಸರಿ 43-45 ಡಿ.ಸೆ. ತಾಪಮಾನ ದಾಖಲಾಗಿದೆ. ಹರಿಯಾಣದ ನೂಹ್ನಲ್ಲಿ 45.3 ಡಿಗ್ರಿ ಸೆ., ಗುರುಗ್ರಾಮ, ಫರೀದಾಬಾದ್ನಲ್ಲಿ 45 ಡಿಗ್ರಿ ಸೆ. ತಾಪಮಾನ ದಾಖಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್
Leader of the Opposition; ಚೊಚ್ಚಲ ಭಾಷಣದಲ್ಲೇ ಅಬ್ಬರ! ; ರಾಹುಲ್ ವಿರುದ್ಧ ಕ್ರಮ?
Bhojshala; ಪೂಜೆ ಅವಕಾಶಕ್ಕಾಗಿ ಜೈನರ ಅರ್ಜಿ
MP ಎಂಜಿನಿಯರ್ ರಶೀದ್ ಪ್ರಮಾಣ ವಚನ ಸ್ವೀಕಾರಕ್ಕೆ ಕೊನೆಗೂ ಎನ್ಐಎ ಅಸ್ತು
IMD; ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Arrested: ನಕಲಿ ಎ.ಕೆ.47 ಗನ್ ಬಳಸಿದ್ದ ರೀಲ್ ಶೋಕಿಲಾಲ ಬಂಧನ
ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್
Golden Star Ganesh: ಕ್ಷಮಿಸಿ, ಮುಂದಿನ ಸಲ ಸಿಗೋಣ..
Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು
Horoscope: ಅಕಸ್ಮಾತ್ ಧನಾಗಮ ಯೋಗ ನಿಮ್ಮದಾಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.