![1-lo](https://www.udayavani.com/wp-content/uploads/2024/07/1-lo-415x228.jpg)
ವಿದ್ಯುತ್ ಶಾಕ್ನಿಂದಲೇ ರೇಣುಕಾಸ್ವಾಮಿ ಸಾವು! ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗ
ಮರ್ಮಾಂಗಕ್ಕೆ ಬಲವಾದ ಹೊಡೆತ; ಸಿಗರೇಟ್ನಿಂದ ಸುಟ್ಟಿರುವುದೂ ಬಯಲು
Team Udayavani, Jun 20, 2024, 7:00 AM IST
![ವಿದ್ಯುತ್ ಶಾಕ್ನಿಂದಲೇ ರೇಣುಕಾಸ್ವಾಮಿ ಸಾವು! ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗ](https://www.udayavani.com/wp-content/uploads/2024/06/Renuka-Swamy-2-620x423.jpg)
ಬೆಂಗಳೂರು: ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಎಷ್ಟು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆಗೈದಿದೆ ಎಂಬುದಕ್ಕೆ ಆತನ ಮರಣೋತ್ತರ ಪರೀಕ್ಷಾ ವರದಿಯಲ್ಲಿ ವೈದ್ಯರು ಉಲ್ಲೇಖೀಸಿರುವ ಅಂಶಗಳೇ ಸಾಕ್ಷಿಯಾಗಿವೆ.
ವಿದ್ಯುತ್ ಶಾಕ್ ನೀಡಿದ್ದಲ್ಲದೆ ಬಲವಾದ ವಸ್ತುಗಳಿಂದ ಭೀಕರವಾಗಿ ಹಲ್ಲೆ ನಡೆಸಿದ ಪರಿಣಾಮ ರಕ್ತಸ್ರಾವವಾಗಿ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
”Death is due to shock and Hemorrhage as a result to multiple blunt injuries sustained” ಅಂದರೆ ವಿದ್ಯುತ್ ಶಾಕ್ ಹಾಗೂ ಪ್ರಬಲವಾದ ಹೊಡೆತಗಳ ಕಾರಣದಿಂದ ರಕ್ತಸ್ರಾವವಾಗಿ ಸಾವು ಸಂಭವಿಸಿದೆ ಎಂಬ ಅಂಶವನ್ನು ವೈದ್ಯರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.. ಮರಣೋತ್ತರ ಪರೀಕ್ಷೆಯ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ಕಳಿಸಿರುವ ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ.
ಕಿವಿ ಕತ್ತರಿಸಿದ ಹಂತಕರು
ಬೆನ್ನು, ಕೈ, ತೊಡೆ ಮೇಲೆ ಬೆಲ್ಟ್ ಹಾಗೂ ಇತರ ವಸ್ತುಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಮರ್ಮಾಂಗಕ್ಕೆ ಬಲವಾಗಿ ಹೊಡೆದಿದ್ದಾರೆ. ವಿದ್ಯುತ್ ಶಾಕ್ನಿಂದ ನಿಶಕ್ತಿಗೊಳಿಸಿದ್ದಾರೆ. ಸಿಗರೇಟ್ ಅಥವಾ ಇತರ ವಸ್ತುಗಳಿಂದ ದೇಹದ ನಾನಾ ಕಡೆ ಸುಟ್ಟಿದ್ದಾರೆ. ಜತೆಗೆ ಎಡಕಿವಿಯನ್ನು ಕತ್ತರಿಸಿ ದೊಣ್ಣೆಗಳಿಂದ ಕಾಲುಗಳಿಗೆ ಚೆನ್ನಾಗಿ ಬಾರಿಸಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.
ಭದ್ರತಾ ಸಿಬಂದಿ
ಹೇಳಿಕೆ ದಾಖಲು
ಹತ್ಯೆ ನಡೆದ ಪಟ್ಟಣಗೆರೆಯ ಶೆಡ್ನ ಭದ್ರತಾ ಸಿಬಂದಿ ನರೇಂದ್ರ ಸಿಂಗ್ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
![1-lo](https://www.udayavani.com/wp-content/uploads/2024/07/1-lo-415x228.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Pen Drive Case 4 ತಿಂಗಳಿಗೊಮ್ಮೆ ಎಚ್ಐವಿ ಟೆಸ್ಟ್ ಮಾಡಿಸುತ್ತಿದ್ದ ಪ್ರಜ್ವಲ್?](https://www.udayavani.com/wp-content/uploads/2024/07/HIV-150x90.jpg)
Pen Drive Case 4 ತಿಂಗಳಿಗೊಮ್ಮೆ ಎಚ್ಐವಿ ಟೆಸ್ಟ್ ಮಾಡಿಸುತ್ತಿದ್ದ ಪ್ರಜ್ವಲ್?
![Private Hospital ಡೆಂಗ್ಯೂ ಪರೀಕ್ಷೆಗೆ ಶುಲ್ಕ ನಿಗದಿ: ಸಚಿವ ದಿನೇಶ್](https://www.udayavani.com/wp-content/uploads/2024/07/dinesh-gundu-rao-150x87.jpg)
Private Hospital ಡೆಂಗ್ಯೂ ಪರೀಕ್ಷೆಗೆ ಶುಲ್ಕ ನಿಗದಿ: ಸಚಿವ ದಿನೇಶ್
![Udayavani exclusive interview of KN Rajanna](https://www.udayavani.com/wp-content/uploads/2024/07/N-Rajanna-150x83.jpg)
ಡಿಕೆಶಿ ಕಾಂಗ್ರೆಸ್ಗೆ ಕಾಲಿಡುವ ಮೊದಲೇ ನೋಟಿಸ್, ಉಚ್ಚಾಟನೆ ಎಲ್ಲಾ ನೋಡಿದ್ದೀನಿ…; ರಾಜಣ್ಣ
![CM Siddaramaiah ರೈತರಿಗೆ ನಿತ್ಯ 5 ಕೋಟಿ ರೂ. ಪ್ರೋತ್ಸಾಹ ಧನ](https://www.udayavani.com/wp-content/uploads/2024/07/SIDDA-150x84.jpg)
CM Siddaramaiah ರೈತರಿಗೆ ನಿತ್ಯ 5 ಕೋಟಿ ರೂ. ಪ್ರೋತ್ಸಾಹ ಧನ
![KMF ಹಾಲಿನ ಹೊಳೆ: ನಿತ್ಯ 1 ಕೋಟಿ ಲೀಟರ್!-ಕೆಎಂಎಫ್ ಇತಿಹಾಸದಲ್ಲೇ ದಾಖಲೆ ಕ್ಷೀರ ಸರಬರಾಜು](https://www.udayavani.com/wp-content/uploads/2024/07/kmf-6-copy-150x94.jpg)
KMF ಹಾಲಿನ ಹೊಳೆ: ನಿತ್ಯ 1 ಕೋಟಿ ಲೀಟರ್!-ಕೆಎಂಎಫ್ ಇತಿಹಾಸದಲ್ಲೇ ದಾಖಲೆ ಕ್ಷೀರ ಸರಬರಾಜು
MUST WATCH
ಹೊಸ ಸೇರ್ಪಡೆ
![Assault Case: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ](https://www.udayavani.com/wp-content/uploads/2024/07/5-2-150x90.jpg)
Assault Case: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ
![Arrested: ಕಂಪನಿಗಳ ಹೆಸರಿನಲ್ಲಿ ಬಟ್ಟೆ ಮಾರಾಟ; ಆರೋಪಿ ಬಂಧನ](https://www.udayavani.com/wp-content/uploads/2024/07/4-2-150x90.jpg)
Arrested: ಕಂಪನಿಗಳ ಹೆಸರಿನಲ್ಲಿ ಬಟ್ಟೆ ಮಾರಾಟ; ಆರೋಪಿ ಬಂಧನ
![3](https://www.udayavani.com/wp-content/uploads/2024/07/3-3-150x90.jpg)
Supplier: ಬೇಗ ಊಟ ತನ್ನಿ ಎಂದಿದ್ದಕ್ಕೆ ಆಶ್ಲೀಲ ಸನ್ನೆ ತೋರಿದ ಸಪ್ಲ್ಯೈಯರ್; ವೈರಲ್
![ನಾಪತ್ತೆಯಾಗಿದ್ದ ಕಾನ್ಸ್ಟೇಬಲ್ ಪತ್ತೆಗಾಗಿ 250 ಸಿಸಿ ಕ್ಯಾಮೆರಾ ಶೋಧಿಸಿದ್ದ ಪೊಲೀಸರು](https://www.udayavani.com/wp-content/uploads/2024/07/2-2-150x90.jpg)
ನಾಪತ್ತೆಯಾಗಿದ್ದ ಕಾನ್ಸ್ಟೇಬಲ್ ಪತ್ತೆಗಾಗಿ 250 ಸಿಸಿ ಕ್ಯಾಮೆರಾ ಶೋಧಿಸಿದ್ದ ಪೊಲೀಸರು
![New Criminal Law: 3 ಹೊಸ ಕ್ರಿಮಿನಲ್ ಕಾಯ್ದೆಯಡಿ ನಗರದಲ್ಲಿ ಮೊದಲ ದಿನ 39 ಕೇಸ್](https://www.udayavani.com/wp-content/uploads/2024/07/1-3-150x90.jpg)
New Criminal Law: 3 ಹೊಸ ಕ್ರಿಮಿನಲ್ ಕಾಯ್ದೆಯಡಿ ನಗರದಲ್ಲಿ ಮೊದಲ ದಿನ 39 ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.