Yoga Day: ಮಹಿಳೆಯರ ಆರೋಗ್ಯ, ಸ್ವಾವಲಂಬಿ ಬದುಕಿಗೆ ಪೂರಕ ಯೋಗ


Team Udayavani, Jun 21, 2024, 5:45 AM IST

28

“ಮಹಿಳಾ ಸಶಕ್ತೀಕರಣಕ್ಕೆ ಯೋಗ’ ಎಂಬ ಧ್ಯೇಯದೊಂದಿಗೆ ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಯೋಗದ ಶಬ್ದದ ಅರ್ಥವೇ ಮಾನವ ಪ್ರಜ್ಞೆ ಮತ್ತು ಪರ ಮಾತ್ಮನ ಅರಿವು. ಸಶಕ್ತೀಕರಣವೆಂದರೆ ಸ್ವಸಾ ಮರ್ಥ್ಯದ ಅರಿವು ಹಾಗೂ ಪ್ರಜ್ಞಾಪೂರ್ವಕವಾಗಿ ನಿರ್ಧಾರ ತೆಗೆದುಕೊಂಡು, ತಾನು ಅಭಿವೃದ್ಧಿ ಯಾಗುವುದರೊಂದಿಗೆ ಸರ್ವರ ಶ್ರೇಯಸ್ಸಿಗೆ ಶ್ರಮಿಸುವುದಾಗಿದೆ. ಮಹಿಳೆ ವಿಶೇಷವಾಗಿ ತನ್ನ ಹಾಗೂ ತನ್ನ ಪರಿವಾರದ ಕಾಳಜಿಯನ್ನು ಮನೆಯ ಲ್ಲಿಯೂ, ಸಮಾಜದಲ್ಲಿಯೂ ನಿರ್ವಹಿಸಿದರೆ ಎಲ್ಲರ ಬಾಳು ನೆಮ್ಮದಿ, ಸಾಮರಸ್ಯ, ಶಾಂತಿಯಿಂದ ಕೂಡಿರಬಹುದು. ಸ್ವತಂತ್ರ, ಸ್ವಾವಲಂಬಿ ಬದುಕು ಕಟ್ಟಲು ಯೋಗವು ಒಂದು ದಾರಿಯಾಗಬೇಕು. ಯೋಗ ಶಿಕ್ಷಕಿಯಾಗಿ, ಚಿಕಿತ್ಸಕಿಯಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಯೋಗದ ಸೊÌàದ್ಯೋಗ ಹಾಗೂ ಯೋಗ ಸಂಬಂಧಿ ಉದ್ಯಮವನ್ನು ಮಹಿಳೆ ಯರು ನಡೆಸಬಹುದು. ವೈಯಕ್ತಿಕ ಆರೋಗ್ಯ, ಸಂಸಾರದ ಆರೋಗ್ಯ ಹಾಗೂ ಸಾಮಾಜಿಕ ಆರೋಗ್ಯ ಕಾಪಾಡಲು ಯೋಗ ಒಂದು ಉಪ ಯುಕ್ತ ವಿದ್ಯೆಯಾಗಿದೆ.

ಮಹಿಳೆಯರ ಸಾಧನೆ, ಯಶೋಗಾಥೆ, ಇತರ ರಿಗೆ ಪ್ರೇರಣಾದಾಯಕವಾದ ಮಹಿಳೆಯರನ್ನು ಗುರುತಿಸುವುದೇ ಮಹಿಳಾ ಸಶಕ್ತೀಕರಣ. ಪ್ರತೀ ಮನೆಯಲ್ಲಿಯೂ ಪ್ರತೀ ಮಹಿಳೆಯೂ ಇತರರಿಗೆ ಪ್ರೇರಣೆ, ಮನೆಯಲ್ಲಿ ಮಹಿಳೆಯೊಬ್ಬರು ಕಲಿತರೆ ನಿರ್ಧಾರಕರು, ಪ್ರಧಾನ ಚಿಂತಕರು. ಮನೆಯ ಮಹಿಳೆ ಆರೋಗ್ಯವಾಗಿದ್ದರೆ, ಇಡೀ ಕುಟುಂಬಕ್ಕೆ ನೆಮ್ಮದಿ. ಮಹಿಳೆಯರ ಆರೋಗ್ಯವೆಂದರೆ ಕೇವಲ ದೈಹಿಕ ಕ್ಷಮತೆ ಮಾತ್ರವಲ್ಲದೆ, ಮಾನಸಿಕ ಸ್ಥಿತಿ, ತಾಳ್ಮೆ, ಸಹನೆ, ಪ್ರಶಾಂತತೆ, ಎಲ್ಲವನ್ನು ಸಮಭಾ ವದಿಂದ ಸರಿದೂಗಿಸುವ ಬುದ್ಧಿವಂತಿಕೆ, ಭವಿಷ್ಯತ್ತಿನ ಚಿಂತನೆ ಇವೆಲ್ಲವೂ ಆರೋಗ್ಯದ ಭಾಗವೇ ಆಗುತ್ತದೆ. ಇನ್ನು ಆಧ್ಯಾತ್ಮಿಕ ಚಿಂತನೆ ಮತ್ತು ಆಚರಣೆ ಮನೆಯ ಸಮೃದ್ಧಿಗೆ ಪೂರಕವಾದಂತೆ.

ಮಹಿಳೆಯರಿಗೆ ಯೋಗದ ಪ್ರಯೋಜನಗಳನ್ನು ಹಲವಾರು ಶಾಸ್ತ್ರೀಯ ಗ್ರಂಥಗಳಲ್ಲಿ ವಿಮರ್ಶಿ ಸಲಾಗಿದೆ. ಯೋಗ ಯಾವ ಯಾವ ಹಂತದಲ್ಲಿ ಮಹಿಳೆಯರಿಗೆ ಪ್ರಯೋಜನವಾಗಬಲ್ಲದು ಎಂದು ತಿಳಿಯೋಣ.

ಸಾಧಕಿಯರಿಗೆ ಯೋಗ: ಸಮಾಜದಲ್ಲಿ ಸಾಧಕ ರಾಗಿ ಗುರುತಿಸಲ್ಪಡುವವರ ಹಿಂದೆ ಇರುತ್ತದೆ ದಿನನಿತ್ಯದ ಬದುಕಿನ ಜೀವನ ಶೈಲಿ. “ತಪಸ್ಸಿನ’ ರೀತಿಯಲ್ಲಿ ತಮ್ಮ ಕಾರ್ಯದಲ್ಲಿ ತೊಡಗಿಸಿ ಕೊಂಡಾಗ ಮಾತ್ರ ಅವರ ಕಾರ್ಯ ಸಾಧನೆ ಯಾಗುತ್ತದೆ. ದೇಹದ ಆರೋಗ್ಯ ಕಾಪಾಡಲು ಯೋಗಾಭ್ಯಾಸದ ಶುದ್ಧೀಕರಣ ಕ್ರಿಯೆ, ಯೋಗಾ ಸನಗಳು, ಬಂಧ, ಮುದ್ರಾಗಳು ಸಹಕಾರಿ. ಮಾನಸಿಕ ಸ್ಥಿರತೆಯನ್ನು ಹೊಂದಲು ಪ್ರಾಣಾ ಯಾಮವನ್ನು ಪರಿಣಾಮಕಾರಿಯಾಗಿ ಬಳಸಿ ಕೊಳ್ಳಬಹುದು.

ಸೌಂದರ್ಯ ಪ್ರಜ್ಞೆಗೆ ಯೋಗ: ಮಹಿಳೆಯರು ಸೌಂದರ್ಯ ಪ್ರಿಯರು. ಅವರ ಸೌಂದರ್ಯ ಪ್ರಜ್ಞೆಗೆ ಯೋಗವು ಒಂದು ಸಾಧನವಾಗಬಲ್ಲುದು. ಮಹಿಳೆಯರಲ್ಲಿ ಎರಡು ರೀತಿಯ ಸೌಂದರ್ಯ ಕಾಣಬಹುದು. ಒಂದು ಆಂತರಿಕ ಸೌಂದರ್ಯ ಗಳಾದ ತಾಳ್ಮೆ, ಸಹನೆ, ಸಹಾನುಭೂತಿ, ಮಮಕಾರ, ಪ್ರೀತಿ, ವಾತ್ಸಲ್ಯ ಇತ್ಯಾದಿ ಗುಣಗಳು; ಇನ್ನೊಂದು ಬಾಹ್ಯ ಸೌಂದರ್ಯ ಎಂದರೆ, ದೇಹದ ಮೈಕಟ್ಟು, ಮುಖದ ಹೊಳಪು ಮತ್ತು ಅಂಗಾಗಳ ಕ್ಷಮತೆಯೂ ಸೌಂದರ್ಯದ ಭಾಗವಾಗುತ್ತದೆ. ನಿತ್ಯ ಸೂರ್ಯ ನಮಸ್ಕಾರ ಮಾಡುವುದು, ಹಲವಾರು ಯೋಗಾ ಸನಗಳನ್ನು ನಿತ್ಯ ಅಭ್ಯಾಸ ಮಾಡಿದರೆ, ದೇಹದ ಮಾಂಸಖಂಡಗಳು ಸದೃಢವಾಗಿದ್ದು, ಮುಖ ಚರ್ಯೆ ಹೊಳಪಿನಿಂದ ಕೂಡಿದ್ದು, ಅಂಗಾಂಗಗಳು ಸುಸ್ಥಿತಿಯಲ್ಲಿರುತ್ತವೆ.

ಉದ್ಯೋಗಸ್ಥೆಯರಿಗೆ ಯೋಗ: ಗೃಹಿಣಿಯ ರಿಂದ ಪ್ರಾರಂಭವಾಗಿ ಉನ್ನತ ಅಧಿಕಾರಿಣಿಯ ರಾಗಿ ಮಹಿಳೆಯರೆಲ್ಲರೂ ಉದ್ಯೋಗಸ್ಥರೇ. ಇಂತಹ ಮಹಿಳೆಯರು ಮೂರು ರೀತಿಯ ಒತ್ತಡದಲ್ಲಿರುತ್ತಾರೆ. ಒಂದನೆಯದು ಕುಟುಂಬದ ಜವಾಬ್ದಾರಿ, ಎರಡನೆಯದು ಕೆಲಸದ ನಿರ್ವಹಣೆ, ಮೂರನೆಯದ್ದು ಆರೋಗ್ಯ ನಿರ್ವಹಣೆ. ಈ ಮೂರು ವಿಷಯವನ್ನು ಕೌಶಲಯುಕ್ತವಾಗಿ ನಿರ್ವಹಿಸಿದಾಗ ಮಹಿಳೆಯರು ಸಾರ್ಥಕವಾಗಿ ಬದುಕಬಲ್ಲರು. ನಿತ್ಯ ಯೋಗಾಭ್ಯಾಸದ ಅನುಷ್ಠಾನ ಮಾಡಿದಾಗ ಮಹಿಳೆಯರು ಉದ್ಯೋಗದೊಂದಿಗೆ ತಮ್ಮ ಆರೋಗ್ಯ ಕಾಪಾಡುವುದರ ಜತೆಯಲ್ಲಿ ಸಾಂಸಾರಿಕ ಜವಾಬ್ದಾರಿಯನ್ನು ನಿರ್ವಹಿಸಬಲ್ಲರು.

ಯೋಗದಲ್ಲಿನ ಉದ್ಯೋಗಾವಕಾಶ: ಇಂದು ಯೋಗ ವಿಜ್ಞಾನದ ಅಧ್ಯಯನ ಪೂರೈಸಿಕೊಂಡು ಯೋಗ ಶಿಕ್ಷಕಿ, ಯೋಗ ತರಬೇತುದಾರರು, ಯೋಗ ಚಿಕಿತ್ಸಕರು, ಯೋಗ ಉಪನ್ಯಾಸಕಿಯರು, ಯೋಗ ಸಂಶೋಧಕರಾಗಿ ಮಹಿಳೆಯರು ತೊಡಗಿ ಸಿಕೊಂಡಿರುವುದು ಗಮನಾರ್ಹ ಸಂಗತಿ. ಅತೀ ಕಡಿಮೆ ಬಂಡವಾಳದಲ್ಲಿ ತಮ್ಮದೇ ಸ್ವಂತ ಯೋಗ ತರಬೇತಿ ಯಾ ಚಿಕಿತ್ಸಾ ಕೇಂದ್ರ ಪ್ರಾರಂಭಿಸಿ ಉತ್ತಮ ಸಂಪಾದನೆ ಮಾಡಬಹುದಾದ ಒಂದು ವೃತ್ತಿ ಯೋಗವಾಗಿದೆ. ಒಟ್ಟಿನಲ್ಲಿ ಯೋಗ ವೃತ್ತಿಯೂ ಮಹಿಳೆಯರಿಗೆ ವೈಯಕ್ತಿಕ ಮತ್ತು ಸಂಪಾದನೆಗೆ ಒಂದು ಉಪಯುಕ್ತ ಕ್ಷೇತ್ರವಾಗಿದೆ.

ಗರ್ಭಿಣಿಯರಿಗೆ ಯೋಗದ ಪ್ರಯೋಜನ: ಸರಳವಾದ ಆಯ್ದ ಯೋಗಾಸನಗಳು, ಪ್ರಾಣಾ ಯಾಮ, ಧ್ಯಾನದ ಅಭ್ಯಾಸ ಗರ್ಭಿಣಿಯರಿಗೆ ತುಂಬಾ ಪ್ರಯೋಜನ ನೀಡುವುದರೊಂದಿಗೆ ಮಗುವಿನ ಬೆಳವಣಿಗೆಗೂ ಸಹಕಾರಿಯಾಗುತ್ತದೆ. ದೇಹ ತೂಕ ನಿರ್ವಹಣೆಯಿಂದ ಸಾಮಾನ್ಯ ಹೆರಿಗೆ ಸಾಧ್ಯ. ಪ್ರಸವಾನಂತರದ  ಸಮಸ್ಯೆಗಳಿಗೂ ಯೋಗ ಪರಿಹಾರ ನೀಡಬಲ್ಲದು. ಅಷ್ಠಾಂಗ ಯೋಗದ ಯಮ, ನಿಯಮದ ಅನುಷ್ಠಾನ ಮಗುವಿನಲ್ಲಿ ಧನಾತ್ಮಕ ಗುಣಗಳನ್ನು ಮೂಡಿಸಬಲ್ಲದು.

ಮಹಿಳೆಯರಲ್ಲಿ ಕಂಡುಬರುವ ಮತ್ತೂಂದು ಸಮಸ್ಯೆಯೆಂದರೆ ಮೆನೋಪಾಸ್‌. ದೇಹದ ತಾಪಮಾನದಲ್ಲಿ ವ್ಯತ್ಯಾಸ, ಶೀತ, ತಲೆನೋವು, ರಾತ್ರಿ ಬೆವರುವಿಕೆ, ದೇಹ ತೂಕ ಹೆಚ್ಚಳ, ಜೀರ್ಣ‌ ಕ್ರಿಯೆ ನಿಧಾನವಾಗುವುದು ಮತ್ತು ಮಾನಸಿಕ ವೇದ ನೆಗಳಿಗೆ ಯೋಗಾಭ್ಯಾಸ ಒಂದು ಪರಿಣಾ ಮಕಾರಿ ಚಿಕಿತ್ಸಾ ಕ್ರಮ. ಒಟ್ಟಿನಲ್ಲಿ ಮಹಿಳೆಯರ ಆರೋಗ್ಯವು ಕುಟುಂಬದ ಆರೋಗ್ಯಕ್ಕೆ ಮಾದರಿ.

-ಕುಶಾಲಪ್ಪ ಗೌಡ ಎನ್‌,ಮಂಗಳೂರು

ಟಾಪ್ ನ್ಯೂಸ್

yogi

Hathras Stampede:  ಹಾಥರಸ್‌ ಕಾಲ್ತುಳಿತ ನ್ಯಾಯಾಂಗ ತನಿಖೆಗೆ: ಯೋಗಿ

UK Election 2024: ಇಂದು ಬ್ರಿಟನ್‌ನಲ್ಲಿ ಸಂಸತ್‌ ಚುನಾವಣೆ… ನಾಳೆ ಫ‌ಲಿತಾಂಶ

UK Election 2024: ಇಂದು ಬ್ರಿಟನ್‌ನಲ್ಲಿ ಸಂಸತ್‌ ಚುನಾವಣೆ… ನಾಳೆ ಫ‌ಲಿತಾಂಶ

CISF Constable: ಕಂಗನಾ ಮೇಲೆ ಹಲ್ಲೆ ನಡೆಸಿದ್ದ ಸಿಬಂದಿ ಬೆಂಗಳೂರಿಗೆ ವರ್ಗ

CISF Constable: ಕಂಗನಾ ಮೇಲೆ ಹಲ್ಲೆ ನಡೆಸಿದ್ದ ಸಿಬಂದಿ ಬೆಂಗಳೂರಿಗೆ ವರ್ಗ

LK Advani: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು

LK Advani: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು

5-byndoor

Heavy Rain: ಬೈಂದೂರು ವಲಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ

Vijayapura: ಕೃಷ್ಣಾ ನದಿ ತೆಪ್ಪ ದುರಂತ… ರಫೀಕ್ ಶವ ಪತ್ತೆ, ರಕ್ಷಣಾ ಕಾರ್ಯಾಚರಣೆ ಮುಕ್ತಾಯ

Vijayapura: ಕೃಷ್ಣಾ ನದಿ ತೆಪ್ಪ ದುರಂತ… ರಫೀಕ್ ಶವ ಪತ್ತೆ, ರಕ್ಷಣಾ ಕಾರ್ಯಾಚರಣೆ ಮುಕ್ತಾಯ

T20 World Cup ಗೆದ್ದು ತಾಯ್ನಾಡಿಗೆ ಮರಳಿದ ಟೀಮ್ ಇಂಡಿಯಾ… ಅದ್ಧೂರಿ ಸ್ವಾಗತ

T20 World Cup ಗೆದ್ದು ತಾಯ್ನಾಡಿಗೆ ಮರಳಿದ ಟೀಮ್ ಇಂಡಿಯಾ… ಅದ್ಧೂರಿ ಸ್ವಾಗತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರುಚಿ ಹೆಚ್ಚಿಸುವ ವಿಷ: ತಿಂಡಿಗಳಿಗೆ ಬಳಸುವ ಕೃತಕ ಬಣ್ಣ, ರುಚಿಕಾರಕಗಳಿಂದ ಪ್ರಾಣಕ್ಕೆ ಕುತ್ತು

ರುಚಿ ಹೆಚ್ಚಿಸುವ ವಿಷ: ತಿಂಡಿಗಳಿಗೆ ಬಳಸುವ ಕೃತಕ ಬಣ್ಣ, ರುಚಿಕಾರಕಗಳಿಂದ ಪ್ರಾಣಕ್ಕೆ ಕುತ್ತು

When will American astronauts return from space?

NASA; ಅಂತರಿಕ್ಷದಲ್ಲೇ ಅತಂತ್ರ! ಬಾಹ್ಯಾಕಾಶದಿಂದ ಅಮೆರಿಕದ ಗಗನಯಾತ್ರಿಗಳು ಮರಳೋದು ಯಾವಾಗ?

Bajaj Bruzer is the world’s first CNG bike

Bajaj Bruzer; ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಬಜಾಜ್‌ ಬ್ರೂಝರ್‌

ಸಾಂಪ್ರದಾಯಿಕ ಪ್ರಯೋಗಾಲಯ ಮೀರಿ ಬಹು-ಶಿಸ್ತಿನ ವಿದ್ಯಾಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ರಾಂತಿ

ಸಾಂಪ್ರದಾಯಿಕ ಪ್ರಯೋಗಾಲಯ ಮೀರಿ ಬಹು-ಶಿಸ್ತಿನ ವಿದ್ಯಾಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ರಾಂತಿ

Ajit Doval is India’s James Bond!

Spy Master; ಅಜಿತ್‌ ದೋವಲ್‌ ಭಾರತದ ಜೇಮ್ಸ್‌ಬಾಂಡ್‌!

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

yogi

Hathras Stampede:  ಹಾಥರಸ್‌ ಕಾಲ್ತುಳಿತ ನ್ಯಾಯಾಂಗ ತನಿಖೆಗೆ: ಯೋಗಿ

UK Election 2024: ಇಂದು ಬ್ರಿಟನ್‌ನಲ್ಲಿ ಸಂಸತ್‌ ಚುನಾವಣೆ… ನಾಳೆ ಫ‌ಲಿತಾಂಶ

UK Election 2024: ಇಂದು ಬ್ರಿಟನ್‌ನಲ್ಲಿ ಸಂಸತ್‌ ಚುನಾವಣೆ… ನಾಳೆ ಫ‌ಲಿತಾಂಶ

CISF Constable: ಕಂಗನಾ ಮೇಲೆ ಹಲ್ಲೆ ನಡೆಸಿದ್ದ ಸಿಬಂದಿ ಬೆಂಗಳೂರಿಗೆ ವರ್ಗ

CISF Constable: ಕಂಗನಾ ಮೇಲೆ ಹಲ್ಲೆ ನಡೆಸಿದ್ದ ಸಿಬಂದಿ ಬೆಂಗಳೂರಿಗೆ ವರ್ಗ

LK Advani: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು

LK Advani: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು

5-byndoor

Heavy Rain: ಬೈಂದೂರು ವಲಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.