Super 8; ಮೊದಲ ಪಂದ್ಯದಲ್ಲಿ ಅಫ್ಘಾನ್ ವಿರುದ್ಧ ಭಾರತ ಜಯಭೇರಿ


Team Udayavani, Jun 20, 2024, 11:39 PM IST

1-aaaawee

ಬ್ರಿಜ್‌ಟೌನ್‌: ಟಿ20 ವಿಶ್ವಕಪ್‌ನ ಸೂಪರ್‌ 8 ಹಂತದ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ಥಾನ ವಿರುದ್ಧ
47 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಸೂರ್ಯಕುಮಾರ್‌ ಯಾದವ್‌ ಅವರ ಅರ್ಧಶತಕ, ಹಾರ್ದಿಕ್ ಪಂದ್ಯ ಅವರ 32 ರನ್ ನೆರವಿನಿಂದ ಭಾರತೀಯ ತಂಡವುಎಂಟು ವಿಕೆಟಿಗೆ 181 ರನ್ನುಗಳ ಸಾಧಾರಣ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಅಫ್ಘಾನ್ 20 ಓವರ್ ಗಳಲ್ಲಿ 134 ರನ್ ಗಳಿಗೆ ಆಲೌಟಾಯಿತು. ಅಜ್ಮತುಲ್ಲಾ ಒಮರ್ಜಾಯ್ 26 ರನ್ ಗರಿಷ್ಠ ಗಳಿಕೆ.

ಬುಮ್ರಾ ಬಿಗಿ ದಾಳಿ ನಡೆಸಿದ ಬುಮ್ರಾ 3 ವಿಕೆಟ್ ಕಬಳಿಸಿದರು(4-1-7-3). ಅರ್ಶದೀಪ್ ಕೂಡ ದುಬಾರಿ ಎನಿಸಿದರೂ 3 ವಿಕೆಟ್ ಪಡೆದರು. ಕುಲದೀಪ್ ಯಾದವ್ 2, ಜಡೇಜ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

ನಾಯಕ ರೋಹಿತ್‌ ಶರ್ಮ ಔಟಾದ ಬಳಿಕ ವಿರಾಟ್‌ ಕೊಹ್ಲಿ ಮತ್ತು ರಿಷಭ್‌ ಪಂತ್‌ ಎಚ್ಚರಿಕೆಯಿಂದ ಆಡಿದರು. ಇವರಿಬ್ಬರು ದ್ವಿತೀಯ ವಿಕೆಟಿಗೆ 43 ರನ್‌ ಪೇರಿಸಿ ಬೇರ್ಪಟ್ಟರು. 20 ರನ್‌ ಗಳಿಸಿದ ರಿಷಭ್‌ ಅವರು ರಶೀದ್‌ಗೆ ವಿಕೆಟ್‌ ಒಪ್ಪಿಸಿದರು. ಸ್ವಲ್ಪ ಹೊತ್ತಿನಲ್ಲಿಯೇ ಕೊಹ್ಲಿ ಕೂಡ ಪೆವಿಲಿಯನ್‌ ಸೇರಿಕೊಂಡರು.

ಈ ನಡುವೆ ಸೂರ್ಯಕುಮಾರ್‌ ಯಾದವ್‌ ಅಫ್ಘಾನಿಸ್ಥಾನದ ದಾಳಿಯನ್ನು ದಿಟ್ಟವಾಗಿ ಎದುರಿಸಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಅವರು ಹಾರ್ದಿಕ್‌ ಪಾಂಡ್ಯ ಜತೆ ಐದನೇ ವಿಕೆಟಿಗೆ 60 ರನ್‌ ಪೇರಿಸಿದರು. ರನ್‌ ಗಳಿಸಲು ಕಷ್ಟವಾಗುತ್ತಿದ್ದ ಈ ಪಿಚ್‌ನಲ್ಲಿ ಎಚ್ಚರಿಕೆಯ ಆಟವಾಡಿದ ಸೂರ್ಯ 28 ಎಸೆತಗಳಿಂದ 53 ರನ್‌ ಗಳಿಸಿ ಐದನೆಯವರಾಗಿ ಔಟಾದರು. 5 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದರು.

ಬಿಗು ದಾಳಿ ಸಂಘಟಿಸಿದ ರಶೀದ್‌ ಖಾನ್‌ 26 ರನ್ನಿಗೆ ಮೂರು ವಿಕೆಟ್‌ ಉರುಳಿಸಿದರೆ ಫಾಜಲ್‌ಹಕ್‌ ಫಾರೂಖಿ 33 ರನ್ನಿಗೆ 3 ವಿಕೆಟ್‌ ಪಡೆದರು.

ಭಾರತೀಯ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ವೇಗಿ ಮೊಹಮ್ಮದ್‌ ಸಿರಾಜ್‌ ಅವರ ಬದಲಿಗೆ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು. ಅಫ್ಘಾನಿಸ್ಥಾನ ಕೂಡ ಒಂದು ಬದಲಾವಣೆ ಮಾಡಿದ್ದು ಕರೀಮ್‌ ಜನತ್‌ ಅವರ ಬದಲಿಗೆ ಹಜ್ರತುಲ್ಲ ಜಜಾರಿ ಅವರನ್ನು ಸೇರಿಸಿಕೊಂಡಿತ್ತು.

200 ಬೌಂಡರಿ ಸೂರ್ಯ ದಾಖಲೆ

ಟಿ20 ರ್‍ಯಾಂಕಿಂಗ್‌ನ ನಂ. 1 ಬ್ಯಾಟರ್‌, ಸೂರ್ಯಕುಮಾರ್‌ ಯಾದವ್‌, ಟಿ20 ಕ್ರಿಕೆಟ್‌ನಲ್ಲಿ 200 ಬೌಂಡರಿಗಳ ದಾಖಲೆ ನಿರ್ಮಿಸಿದ್ದಾರೆ. ಗುರುವಾರದ ಪಂದ್ಯದಲ್ಲಿ 53 ರನ್‌ ಸಿಡಿಸುವ ಮೂಲಕ ಸೂರ್ಯ, ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಸೂರ್ಯಕುಮಾರ್‌ ಯಾದವ್‌ 64 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 200 ಬೌಂಡರಿಗಳ ಸಾಧನೆ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬೌಂಡರಿಗಳನ್ನು ಬಾರಿಸಿರುವ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪಾಕಿಸ್ಥಾನ ತಂಡದ ಬಾಬರ್‌ ಆಜಮ್‌, 123 ಪಂದ್ಯಗಳಲ್ಲಿ 440 ಬೌಂಡರಿ ಬಾರಿಸಿದ್ದಾರೆ. ದ್ವಿತೀಯ ಸ್ಥಾನಿ ಐರ್ಲೆಂಡ್‌ನ‌ ಪೌಲ್‌ ಸ್ಟರ್ಲಿಂಗ್‌, 418 ಬೌಂಡರಿ ಬಾರಿಸಿದ್ದರೆ, ತೃತೀಯ ಸ್ಥಾನಿ ಭಾರತದ ನಾಯಕ ರೋಹಿತ್‌ ಶರ್ಮ, 365 ಬೌಂಡರಿ ಬಾರಿಸಿದ್ದಾರೆ.

33 ವರ್ಷದ ಸೂರ್ಯಕುಮಾರ್‌, ಒಟ್ಟು 284 ಟಿ20 ಪಂದ್ಯಗಳಲ್ಲಿ 7,373 ರನ್‌ ಬಾರಿಸಿದ್ದಾರೆ. ಇದರಲ್ಲಿ 6 ಶತಕ, 50 ಅರ್ಧಶತಕಗಳು ಸೇರಿವೆ.

ಕಪ್ಪುಪಟ್ಟಿ ಧರಿಸಿ ಆಟ

ಗುರುವಾರ ನಿಧನ ಹೊಂದಿದ ಮಾಜಿ ವೇಗಿ ಡೇವಿಡ್‌ ಜಾನ್ಸನ್‌ ಅವರ ಗೌರವಾರ್ಥ ಭಾರತೀಯ ಕ್ರಿಕೆಟ್‌ ತಂಡದ ಸದಸ್ಯರು ಅಫ್ಘಾನಿಸ್ಥಾನ ತಂಡದೆದುರಿನ ಸೂಪರ್‌ 8 ಪಂದ್ಯದ ವೇಳೆ ಕಪ್ಪು ಪಟ್ಟಿ ಧರಿಸಿ ಆಟವಾಡಿದರು.

ಜಾನ್ಸನ್‌ ಅವರ ಗೌರವಾರ್ಥ ಭಾರತೀಯ ತಂಡದ ಸದಸ್ಯರು ಕಪ್ಪುಪಟ್ಟಿ ಧರಿಸಿ ಆಡಲಿದ್ದಾರೆ ಎಂದು ಪಂದ್ಯ ಆರಂಭಕ್ಕಿಂತ ಮೊದಲು ಭಾರತೀಯ ಕ್ರಿಕೆಟ್‌ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

ಸಚಿನ್‌ ತೆಂಡುಲ್ಕರ್‌, ವೆಂಕಟೇಶ್‌ ಪ್ರಸಾದ್‌, ಅನಿಲ್‌ ಕುಂಬ್ಳೆ ಸಹಿತ ಮಾಜಿ ಕ್ರಿಕೆಟಿಗರು ಜಾನ್ಸನ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

 

ಟಾಪ್ ನ್ಯೂಸ್

1-lo

Police; ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಯತೀಶ್ ಎನ್.

1-anurag

Constitution ನಲ್ಲಿ ಎಷ್ಟು ಪುಟಗಳಿವೆ?: ವಿಪಕ್ಷಗಳಿಗೆ ಅನುರಾಗ್ ಠಾಕೂರ್ ಪ್ರಶ್ನೆ ವೈರಲ್

1-qe

Hathras stampede; ಸ್ವಯಂ ಘೋಷಿತ ದೇವಮಾನವ ‘ಭೋಲೆ ಬಾಬಾ’ ಯಾರು?

1-a-baaba

Hathras stampede;‘ಸತ್ಸಂಗ’ದ ವೇಳೆ ಕಾಲ್ತುಳಿತ : ಮೃತರ ಸಂಖ್ಯೆ 116ಕ್ಕೆ

Barbados

Barbados; ಮತ್ತೊಂದು ಚಂಡಮಾರುತದ ಸೂಚನೆ; ಭಾರತ ತಂಡ ಇಂದು ರಾತ್ರಿ ಆಗಮನ?

Court-Symbol

Dakshina Kannada: ಅಕ್ರಮ ಆಸ್ತಿ ಗಳಿಕೆ ಪ್ರಕರಣ; ನಿವೃತ್ತ ಕಮಾಂಡೆಂಟ್‌ ದೋಷಮುಕ್ತ

Agriculture-Tracator

Agriculture: ಭತ್ತದ ಕೃಷಿಗೆ ಯಂತ್ರವೂ ಸಿಗುತ್ತಿಲ್ಲ, ಕಾರ್ಮಿಕರೂ ಬರುತ್ತಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Barbados

Barbados; ಮತ್ತೊಂದು ಚಂಡಮಾರುತದ ಸೂಚನೆ; ಭಾರತ ತಂಡ ಇಂದು ರಾತ್ರಿ ಆಗಮನ?

India will play 34 matches till 2026 T20 World Cup

T20 Cricket; 2026ರ ಟಿ20 ವಿಶ್ವಕಪ್‌ ತನಕ ಭಾರತ ಆಡಲಿದೆ 34 ಪಂದ್ಯ

david miller gave clarification on his retirement news

South Africa; ಟಿ20ಯಿಂದ ನಿವೃತ್ತಿ? ಸ್ಪಷ್ಟನೆ ನೀಡಿದ ಡೇವಿಡ್‌ ಮಿಲ್ಲರ್‌

T20 WC; The emotion of the moment is the reason for eating the pitch sand: Rohit

T20 WC; ಪಿಚ್ ಮಣ್ಣು ತಿನ್ನಲು ಆ ಕ್ಷಣದ ಭಾವನೆಗಳೇ ಕಾರಣ: ರೋಹಿತ್‌

Wimbledon-2024: Shock for champion Vondrousova

Wimbledon-2024: ಚಾಂಪಿಯನ್‌ ವೊಂಡ್ರೂಸೋವಾಗೆ ಆಘಾತ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

1-lo

Police; ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಯತೀಶ್ ಎನ್.

1-anurag

Constitution ನಲ್ಲಿ ಎಷ್ಟು ಪುಟಗಳಿವೆ?: ವಿಪಕ್ಷಗಳಿಗೆ ಅನುರಾಗ್ ಠಾಕೂರ್ ಪ್ರಶ್ನೆ ವೈರಲ್

1-qe

Hathras stampede; ಸ್ವಯಂ ಘೋಷಿತ ದೇವಮಾನವ ‘ಭೋಲೆ ಬಾಬಾ’ ಯಾರು?

1-a-baaba

Hathras stampede;‘ಸತ್ಸಂಗ’ದ ವೇಳೆ ಕಾಲ್ತುಳಿತ : ಮೃತರ ಸಂಖ್ಯೆ 116ಕ್ಕೆ

Barbados

Barbados; ಮತ್ತೊಂದು ಚಂಡಮಾರುತದ ಸೂಚನೆ; ಭಾರತ ತಂಡ ಇಂದು ರಾತ್ರಿ ಆಗಮನ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.