Renukaswamy Case: ಶರಣಾಗಲು ಆಪ್ತರಿಗೆ ತಿಳಿಸಿದ್ದ ದರ್ಶನ್‌

ಠಾಣೆಗೆ ತೆರಳಿ ಶರಣಾಗಲು ಮೈಸೂರಿನ ರಾಡಿಸನ್‌ ಹೋಟೆಲ್‌ನಲ್ಲಿ ನಡೆದಿತ್ತು ಪ್ಲ್ಯಾನ್‌

Team Udayavani, Jun 21, 2024, 11:51 AM IST

Darshan

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮೊದಲಿಗೆ ಠಾಣೆಗೆ ಹೋಗಿ ಕೆಲವರನ್ನು ಶರಣಾಗಿಸಲು ಮೈಸೂರಿನ ರ್ಯಾಡಿಸನ್‌ ಹೋಟೆಲ್‌ನಲ್ಲೇ ಸಂಚು ರೂಪಿ ಸಲಾಗಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಜೂನ್‌ 9ರಂದು ಸುಮನಹಳ್ಳಿ ರಾಜಕಾಲುವೆ ಬಳಿ ರೇಣುಕಸ್ವಾಮಿ ಮೃತ ದೇಹ ಪತ್ತೆಯಾಗುತ್ತಿದ್ದಂತೆ ಗಾಬರಿಗೊಂಡು ದರ್ಶನ್‌, ವಿನಯ್‌ ಹಾಗೂ ಇತರರು, ಪ್ರಕರಣದಲ್ಲೇ ಯಾರನ್ನಾ ದರೂ ಶರಣಾಗುವಂತೆ ಸೂಚಿಸಲು ಯೋಚನೆ ರೂಪಿಸಿದ್ದರು. ಆಗ ದರ್ಶನ್‌, ಮೈಸೂರಿನ ರಾಡಿಸನ್‌ ಹೋಟೆಲ್‌ನಲ್ಲಿ ವಾಸವಾಗಿದ್ದ. ಅಲ್ಲಿಂದಲೇ ದರ್ಶನ್‌, ತನ್ನ ಗೆಳತಿ ಆಪ್ತ ಪವನ್‌, ನಂದೀಶ್‌, ವಿನಯ್‌, ದೀಪಕ್‌ ಮತ್ತು ಪ್ರದೂಶ್‌ ಜತೆ ಚರ್ಚಿಸಿ, ರಾಘ ವೇಂದ್ರ, ನಂದೀಶ್‌, ದೀಪಕ್‌, ಕಾರ್ತಿಕ್‌, ಕೇಶವ ಮೂರ್ತಿ ಹಾಗೂ ನಿಖೀಲ್‌ ನಾಯಕ್‌ ಅವರನ್ನು ಪೊಲೀಸ್‌ ಠಾಣೆಗೆ ಹೋಗಿ ಶರಣಾಗಲು ಸೂಚಿಸಿದ್ದ. ಕೆಲ ಹೊತ್ತಿನ ಬಳಿಕ ರಾಘವೇಂದ್ರ, ಕಾರ್ತಿಕ್‌, ಕೇಶವಮೂರ್ತಿ ಮತ್ತು ನಿಖೀಲ್‌ ನಾಯಕ್‌ಗೆ ಪೊಲೀಸ್‌ ಠಾಣೆಗೆ ಹೋಗಿ ಕೊಲೆ ಮಾಡಿದ್ದಾಗಿ ಶರಣಾಗುವಂತೆ ಸೂಚಿಸಿದ್ದ ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಚಾಲಕ ರವಿಗೆ ಒತ್ತಾಯಿಸಿದ್ದ ಆರೋಪಿಗಳು: ಇನ್ನು ರೇಣುಕಸ್ವಾಮಿಯನ್ನು ಚಿತ್ರದುರ್ಗದಿಂದ ರಾಘ ವೇಂದ್ರನ ಸೂಚನೆ ಮೇರೆಗೆ ಕರೆತಂದಿದ್ದ ಕಾರು ಚಾಲಕ ರವಿಗೆ ಕೊಲೆ ಕೃತ್ಯ ಒಪ್ಪಿಕೊಂಡು, ಪೊಲೀಸ್‌ ಠಾಣೆಗೆ ಶರಣಾಗುವಂತೆ ಆರೋಪಿಗಳ ಪೈಕಿ ವಿನಯ್‌, ಪ್ರದೂಶ್‌ ಹಾಗೂ ಇತರರು ಕೇಳಿಕೊಂಡಿದ್ದರು. ಆದರೆ, ರವಿ ಅದಕ್ಕೆ ಒಪ್ಪಿಕೊಳ್ಳಲು ನಿರಾಕರಿಸಿ ನೇರ ವಾಗಿ ಚಿತ್ರದುರ್ಗಕ್ಕೆ ತೆರಳಿದ್ದ. ಬಳಿಕ ತನ್ನ ಪರಿಚಯಸ್ಥರ ಬಳಿ ಹೇಳಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

ಮೋಹನ್‌ರಾಜ್‌ ಎಂಬಾತನಿಂದ 40 ಲಕ್ಷ ರೂ. ಪಡೆದಿದ್ದ ದರ್ಶನ್‌

ತನ್ನ ವಿರುದ್ಧ ಎದುರಾಗುವ ವ್ಯತಿರಿಕ್ತ ಕಾನೂನು ಕ್ರಮಗಳಿಂದ ಪಾರಾಗಲು ಹಾಗೂ ಆರೋಪಿಗಳ ಒಳಸಂಚು ಮತ್ತು ಸಾಕ್ಷ್ಯ ನಾಶದ ವಿಷಯ ಮುಚ್ಚಿ ಹಾಕಲು ನಟ ದರ್ಶನ್‌, ತನ್ನ ಸ್ನೇಹಿತ ಮೋಹನ್‌ರಾಜ್‌ ಎಂಬಾತನಿಂದ 40 ಲಕ್ಷ ರೂ. ಪಡೆದುಕೊಂಡಿದ್ದ. ಈ ಪೈಕಿ 3 ಲಕ್ಷ ರೂ. ಅನ್ನು ಪತ್ನಿ ವಿಜಯಲಕ್ಷ್ಮಿ ಮನೆಗೆ ತನ್ನ ಆಪ್ತರ ಮೂಲಕ ಕಳುಹಿಸಿದ್ದ. ಇದೀಗ 40 ಲಕ್ಷ ರೂ. ಅನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ದರ್ಶನ್‌ ಹಿಂದಿನ ಕೇಸ್‌ಗಳ ಬಗ್ಗೆಯೂ ಕೋರ್ಟ್‌ಗೆ ಮಾಹಿತಿ

ಇದೇ ವೇಳೆ ದರ್ಶನ್‌ ವಿರುದ್ಧ ಈ ಹಿಂದೆ ದಾಖಲಾಗಿದ್ದ ಕೆಲ ಪ್ರಕರಣಗಳ ಬಗ್ಗೆಯೂ ತನಿಖಾಧಿಕಾರಿಗಳು ಕೋರ್ಟ್‌ಗೆ ತಿಳಿಸಿದ್ದಾರೆ. 2021ರಲ್ಲಿ ವಿಜಯನಗರ ಠಾಣೆಯಲ್ಲಿ ವರದಕ್ಷಿಣಿ ಕಿರುಕುಳ, 2024ರಲ್ಲಿ ಆರ್‌.ಆರ್‌. ನಗರ ಠಾಣೆಯಲ್ಲಿ ಮಹಿಳೆಯೊಬ್ಬರಿಗೆ ತನ್ನ ಮನೆಯ ನಾಯಿ ಕಚ್ಚಿದ ಪ್ರಕರಣ ದಾಖಲಾಗಿತ್ತು. ಟಿ.ನರಸೀಪುರದಲ್ಲಿ ಅರಣ್ಯ ಇಲಾಖೆ ದರ್ಶನ್‌ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ.

ದರ್ಶನ್‌ ಗ್ಯಾಂಗ್‌ ವಿರುದ್ಧ ಕೋಕಾಸ್ತ್ರ?

ಬೆಂಗಳೂರು: ರೇಣುಕಸ್ವಾಮಿ ಭೀಕರ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ ವಿರುದ್ಧ ಪೊಲೀಸರು ಕೋಕಾ ಕಾಯ್ದೆ(ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಅಳವಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ತಮ್ಮದೇ ತಂಡ ಕಟ್ಟಿಕೊಂಡು ಪದೇ ಪದೇ ಅಪರಾಧ ಎಸಗುವ ರೂಢಿಗತ ಅಪರಾಧಿಗಳ ವಿರುದ್ಧ ಕೋಕಾ ಆಸ್ತ್ರ ಪ್ರಯೋಗಿಸಲಾಗುತ್ತದೆ. ನಿರ್ದಿಷ್ಟ ತಂಡದ ಒಬ್ಬ ವ್ಯಕ್ತಿ ವಿರುದ್ಧ ಕನಿಷ್ಠ ಎರಡು ಪ್ರಕರಣವಾದರೂ ದಾಖಲಾಗಿ, ಆರೋಪ ಪಟ್ಟಿ ಸಲ್ಲಿಸಿರಬೇಕಾಗುತ್ತದೆ. ಆದರೆ, ನಟ ದರ್ಶನ್‌ ರೂಢಿಗತ ಅಪರಾಧಿ ಅಲ್ಲ. ಆದರೆ, ಅದೇ ಮಾದರಿಯಲ್ಲಿ ನಟ ದರ್ಶನ್‌ ತನ್ನದೇ ತಂಡ ಕಟ್ಟಿಕೊಂಡು ರೇಣುಕಸ್ವಾಮಿ ಹತ್ಯೆಗೈದಿದ್ದಾನೆ. ಜತೆಗೆ, ಈ ಹಿಂದೆ ದರ್ಶನ್‌ ವಿರುದ್ಧ ದಾಖಲಾಗಿರುವ ಕೆಲ ಪ್ರಕರಣಗಳಲ್ಲಿ ಆತ ಮತ್ತು ಆತನ ತಂಡದ ಪಾತ್ರಗಳೇನು ಎಂಬ ಬಗ್ಗೆ ಪರಿಶೀಲಿಸಿಕೊಂಡು ಕೋಕಾ ಕಾಯ್ದೆ ಅಳವಡಿಸುವ ಬಗ್ಗೆ ತನಿಖಾಧಿಕಾರಿಗಳು ಕಾನೂನು ತಜ್ಞರ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಕೋಕಾ ಕಾಯ್ದೆ ಅಳವಡಿಸಿದರೆ, ಆರೋಪಿಗಳಿಗೆ ಜಾಮೀನು ಕಷ್ಟ ಸಾಧ್ಯವಾಗಿದೆ.

ಟಾಪ್ ನ್ಯೂಸ್

Shivaraj-Thangadagi

Government: ಗಟ್ಟಿತನ ಇದ್ದುದರಿಂದಲೇ ಜಾತಿಗಣತಿ ವರದಿ ಸ್ವೀಕಾರ- ತಂಗಡಗಿ

Dr.Sudhakar

Lokasabha: ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಪುಷ್ಪ ಮಂಡಳಿ; ಡಾ.ಕೆ.ಸುಧಾಕರ್‌ ಪ್ರಸ್ತಾಪ

Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ

Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

B. Y. Vijayendra ಹಿಂದೂಗಳ ತೇಜೋವಧೆ ಮಾಡಿರುವ ರಾಹುಲ್‌ ಕ್ಷಮೆ ಕೇಳಲಿ

B. Y. Vijayendra ಹಿಂದೂಗಳ ತೇಜೋವಧೆ ಮಾಡಿರುವ ರಾಹುಲ್‌ ಕ್ಷಮೆ ಕೇಳಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivaraj-Thangadagi

Government: ಗಟ್ಟಿತನ ಇದ್ದುದರಿಂದಲೇ ಜಾತಿಗಣತಿ ವರದಿ ಸ್ವೀಕಾರ- ತಂಗಡಗಿ

Dr.Sudhakar

Lokasabha: ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಪುಷ್ಪ ಮಂಡಳಿ; ಡಾ.ಕೆ.ಸುಧಾಕರ್‌ ಪ್ರಸ್ತಾಪ

Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ

Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

Shivaraj-Thangadagi

Government: ಗಟ್ಟಿತನ ಇದ್ದುದರಿಂದಲೇ ಜಾತಿಗಣತಿ ವರದಿ ಸ್ವೀಕಾರ- ತಂಗಡಗಿ

Will not believe EVMs says akhilesh yadav

ಉ.ಪ್ರ.ದ 80 ಕ್ಷೇತ್ರ ಗೆದ್ದರೂ EVM ನಂಬಲ್ಲ: ಅಖೀಲೇಶ್‌

Dr.Sudhakar

Lokasabha: ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಪುಷ್ಪ ಮಂಡಳಿ; ಡಾ.ಕೆ.ಸುಧಾಕರ್‌ ಪ್ರಸ್ತಾಪ

Question paper ready 2 hours before NEET-PG exam start?

NEET-PG ಪರೀಕ್ಷೆ ಆರಂಭಕ್ಕಿಂತ 2 ಗಂಟೆ ಮುಂಚೆ ಪ್ರಶ್ನೆಪತ್ರಿಕೆ ಸಿದ್ಧ?

Indian Prime Minister visits Austria after 41 years!

Narendra Modi; 41 ವರ್ಷಗಳ ಬಳಿಕ ಆಸ್ಟ್ರಿಯಾಗೆ ಭಾರತದ ಪ್ರಧಾನಿ ಭೇಟಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.