Udayavani Campaign: ಬಸ್‌ ಬೇಕೇ, ಬೇಕು- ಕುಂದಾಪುರಕ್ಕಷ್ಟೇ ಅಲ್ಲ, ಭಟ್ಕಳಕ್ಕೂ ಬೇಕು!

ಬೈಂದೂರು, ಉಪ್ಪುಂದವರೆಗೂ ಭಟ್ಕಳದ ವಿದ್ಯಾರ್ಥಿಗಳಿದ್ದಾರೆ.

Team Udayavani, Jun 21, 2024, 2:41 PM IST

Udayavani Campaign: ಬಸ್‌ ಬೇಕೇ, ಬೇಕು- ಕುಂದಾಪುರಕ್ಕಷ್ಟೇ ಅಲ್ಲ, ಭಟ್ಕಳಕ್ಕೂ ಬೇಕು!

ಬೈಂದೂರು: ಬೈಂದೂರು ತಾಲೂಕಿನ ಗ್ರಾಮೀಣ ಭಾಗಗಳಿಂದ ಬೈಂದೂರು, ಕುಂದಾಪುರದ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಗೋಳೇ ಹೇಳ ತೀರದಾಗಿದೆ. ಅದರ ಜತೆಗೆ ಈ ಭಾಗದಿಂದ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಟ್ಕಳ, ಮುರ್ಡ್ವೇಶ್ವರಕ್ಕೂ ಹೋಗುತ್ತಿದ್ದು, ಅವರೂ ಸಮಸ್ಯೆ ಎದುರಿಸುತ್ತಿದ್ದಾರೆ. ಅಂದರೆ ಬೈಂದೂರಿನ ಬಸ್‌ ಸಮಸ್ಯೆ ದಕ್ಷಿಣ ಧ್ರುವದಿಂ ಉತ್ತರ ಧ್ರುವಕೂ ಹರಡಿಕೊಂಡಿದೆ.

ಶಿರೂರು, ಬೈಂದೂರು, ಕರಾವಳಿ, ದೊಂಬೆ, ಉಪ್ಪುಂದ, ಪಡುವರಿ ಮುಂತಾದ ಭಾಗಗಳ ವಿದ್ಯಾರ್ಥಿಗಳು ಕುಂದಾಪುರ ಕಾಲೇಜುಗಳಿಗೆ ಹೋಗುವವಂತೆಯೇ ಉತ್ತರ ಕನ್ನಡ ಜಿಲ್ಲೆಯ ಕಾಲೇಜುಗಳಿಗೂ ಹೋಗುತ್ತಾರೆ. ನಿಜ ವೆಂದರೆ ಕುಂದಾಪುರ ಭಾಗಕ್ಕೇ ಬಸ್ಸಿನ ವ್ಯವಸ್ಥೆ ಕಡಿಮೆ ಇದೆ. ಭಟ್ಕಳ ಕಡೆಗೆ ಹೋಗುವವರಿಗೆ ಇದಕ್ಕಿಂತಲೂ ಕಡಿಮೆ ವ್ಯವಸ್ಥೆ ಇದೆ. ಸಕಾಲದಲ್ಲಿ ಬಸ್‌ ಇಲ್ಲದೆ ಪಡಬಾರದ ಪಾಡು ಪಡುತ್ತಾರೆ.

ಈ ಭಾಗದ ವಿದ್ಯಾರ್ಥಿಗಳು ಮುಖ್ಯವಾಗಿ ಭಟ್ಕಳದ ಸುಧೀಂದ್ರ ಕಾಲೇಜು, ಅಂಜುಮಾನ್‌ ಡಿಗ್ರಿ ಕಾಲೇಜು ಮತ್ತು ಮುರ್ಡ್ವೇಶ್ವರದ
ಆರ್‌ಎನ್‌ ಎಸ್‌‌ ಐಟಿಐಗೆ ಹೋಗುತ್ತಾರೆ. ಗಡಿ ಭಾಗವಾದ ಶಿರೂರಿನಿಂದ ಭಟ್ಕಳಕ್ಕೆ ಕೇವಲ 8 ಕಿ.ಮೀ. ಇದ್ದರೆ, ಮುರ್ಡ್ವೇಶ್ವರಕ್ಕೆ 22 ಕಿ.ಮೀ. ಇದೆ. ಅದೇ ಶಿರೂರಿನಿಂದ ಕುಂದಾಪು ರಕ್ಕೆ 40 ಕಿ.ಮೀ. ಇದೆ. ಶಿರೂರಿನಿಂದ ಕುಂದಾಪು ರಕ್ಕೆ ಬಸ್‌ ಪ್ರಯಾಣವೇ ಕೆಲವೊಮ್ಮೆ ಒಂದೂವರೆ ಗಂಟೆ ಆಗುವುದುಂಟು. ಹೀಗಾಗಿ ಕೆಲವರು ಶಿಕ್ಷಣಕ್ಕಾಗಿ ಭಟ್ಕಳವನ್ನು ನೆಚ್ಚಿ ಕೊಂಡಿದ್ದಾರೆ. ಶಿರೂರು ಮಾತ್ರವಲ್ಲ, ಬೈಂದೂರು, ಉಪ್ಪುಂದವರೆಗೂ ಭಟ್ಕಳದ ವಿದ್ಯಾರ್ಥಿಗಳಿದ್ದಾರೆ.

ಎಕ್ಸ್‌ಪ್ರೆಸ್‌ ಬಸ್‌ ಗಳ ಕೊರತೆ
ಶಿರೂರು ಭಾಗದಿಂದ ಕುಂದಾಪುರಕ್ಕೆ ಬರುವ ವರ ಇನ್ನೊಂದು ಸಮಸ್ಯೆ ಏನೆಂದರೆ ಎಕ್ಸ್‌ ಪ್ರಸ್‌ ಬಸ್‌. ಒಳರೂಟಿನಿಂದ ಬಂದು ಹೆದ್ದಾರಿ ಸೇರುವ ವಿದ್ಯಾರ್ಥಿಗಳಿಗೆ ಸಮಯದ ಅಭಾವ ಇರುತ್ತದೆ. ಹೀಗಾಗಿ ಅವರಿಗೆ ತ್ವರಿತವಾಗಿ ಕುಂದಾಪುರ ತಲು ಪಲು ಎಕ್ಸ್‌ ಪ್ರಸ್‌ ಬಸ್‌ಗಳ ಅಗತ್ಯತೆ ಇದೆ. ಆದರೆ, ಈ ಮಾರ್ಗದಲ್ಲಿ ಸ್ಥಳೀಯವಾಗಿ ಲೋಕಲ್‌ ಬಸ್‌ ಗಳೇ ಹೆಚ್ಚು. ಎಕ್ಸ್‌ ಪ್ರೆಸ್‌ ಬಸ್‌ ಗಳ
ಸಂಖ್ಯೆ ಕಡಿಮೆ. ಹೀಗಾಗಿ ಎಕ್ಸ್‌ ಪ್ರೆಸ್‌ ಬಸ್‌ ನಲ್ಲಿ 50 ನಿಮಿಷದಲ್ಲಿ ಕ್ರಮಿಸಬಹುದಾದ ಹಾದಿಗೆ ಇಲ್ಲಿ ಒಂದೂವರೆ ಗಂಟೆಯೂ ಆಗುತ್ತದೆ.

ಕನೆಕ್ಟಿಂಗ್‌ ಬಸ್‌ ಗಳ ಸಮಸ್ಯೆ
ಭಟ್ಕಳ ಕಡೆಗೆ ಹೋಗುವವರು ಶಿರೂರು, ಬೈಂದೂರು, ಉಪ್ಪುಂದಗಳಲ್ಲಿ ಬಸ್‌ ಹತ್ತುತ್ತಾ ರಾದರೂ ಅದಕ್ಕಿಂತ ಮೊದಲು ಅವರು ಒಳ ಭಾಗದಿಂದ ಪ್ರಧಾನ ರಸ್ತೆಗೆ ಬರಲು ಬೇರೆ ಬಸ್‌ ಅವಲಂಬಿಸಿರುತ್ತಾರೆ, ಇಲ್ಲವೇ ನಾಲ್ಕೈದು ಕಿ.ಮೀ. ನಡೆದುಕೊಂಡು ಬರಬೇ ಕಾಗುತ್ತದೆ. ಹೆದ್ದಾರಿಗೆ ಬಂದ ಬಳಿಕವೂ ಅವರಿಗೆ ಸಕಾಲದಲ್ಲಿ ಬಸ್‌ ಸಿಗದೆ ತೊಂದರೆಯಾಗುತ್ತದೆ. ಸಂಜೆ ಮರಳಿ ಬರುವಾಗಲೂ ಅದೇ ಸಮಸ್ಯೆ. ಇಲ್ಲಿ ಕನೆಕ್ಟಿಂಗ್‌ ಬಸ್‌ ಗಳ ಕೊರತೆ ಕಾಡುತ್ತದೆ.

ದಿನಕ್ಕೆರಡು ಗಂಟೆ ಬಸ್‌ ಪ್ರಯಾಣ
ಬೈಂದೂರಿನಿಂದ ಕುಂದಾಪುರಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಬಸ್‌ ಸಂಖ್ಯೆ ಕಡಿಮೆ ಇದೆ. ಇರುವ ಬಸ್ಸಿನಲ್ಲಿ ಉಸಿರು ತೆಗೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಿದೆ. ಲೋಕಲ್‌ ಬಸ್‌ ಗಳಲ್ಲಿ ಬಂದರೆ ಮನೆಯಿಂದ ಕುಂದಾಪುರಕ್ಕೆ ಕೆಲವರಿಗೆ ಎರಡು ಗಂಟೆ ಹಿಡಿಯುತ್ತದೆ.
-ಶುಭಾ, ಬಿ.ಕಾಂ. ವಿದ್ಯಾರ್ಥಿನಿ , ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ

ದಿನಕ್ಕೊಂದೇ ಬಸ್‌ ನಮಗೆ
ಕಾಲೇಜು ಮುಗಿಸಿ ಮನೆಗೆ ಬರಲು ಇರುವುದೊಂದೆ ಬಸ್‌ ಮಳೆಗಾಲದಲ್ಲಂತೂ ವಿದ್ಯಾರ್ಥಿಗಳ ಸಮಸ್ಯೆ ಹೇಳತೀರದು.ಕನಿಷ್ಟ
ಪಕ್ಷ ಬಸ್‌ ಸಂಖ್ಯೆ ಹೆಚ್ಚಿಸಿದರೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಅನುಕೂಲವಾಗುತ್ತಿತ್ತು.
-ಖುಷಿ ಬಿಲ್ಲವ, ಎಸೆಸೆಲ್ಸಿ ವಿದ್ಯಾರ್ಥಿ, ಸ.ಪ.ಪೂ. ಕಾಲೇಜು ಬೈಂದೂರು

*ಅರುಣಕುಮಾರ್‌ ಶಿರೂರು

ಟಾಪ್ ನ್ಯೂಸ್

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್…  25 ಲಕ್ಷಕ್ಕೆ ಡೀಲ್

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

10

Bengaluru: ನಿಮ್ಮ ಮನೆ ಬಳಿ ಸಸಿ ನೆಡಬೇಕಾ? ಹಸಿರು ತೇರು ಸಂಪರ್ಕಿಸಿ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಂಗೊಳ್ಳಿ: ಕೋಡಿ ಬ್ರೇಕ್‌ವಾಟರ್‌ ಬಳಿಕ ಗಂಗೊಳ್ಳಿ ಸರದಿ

ಗಂಗೊಳ್ಳಿ: ಕೋಡಿ ಬ್ರೇಕ್‌ವಾಟರ್‌ ಬಳಿಕ ಗಂಗೊಳ್ಳಿ ಸರದಿ

Vandseಬೆಳ್ಳಾಲ ದುರಂತ: ಮಕ್ಕಳಿಬ್ಬರ ಅಂತ್ಯಸಂಸ್ಕಾರ: ತಾಯಿ ಚೇತರಿಕೆ,ಆಸ್ಪತ್ರೆಯಿಂದ ಬಿಡುಗಡೆ

Vandseಬೆಳ್ಳಾಲ ದುರಂತ: ಮಕ್ಕಳಿಬ್ಬರ ಅಂತ್ಯಸಂಸ್ಕಾರ: ತಾಯಿ ಚೇತರಿಕೆ,ಆಸ್ಪತ್ರೆಯಿಂದ ಬಿಡುಗಡೆ

1-kota

MP ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

Heavy Rain ಕೋಟೇಶ್ವರ: ಭಾರೀ ಮಳೆಗೆ ಬಾವಿ ಕುಸಿತ

Heavy Rain ಕೋಟೇಶ್ವರ: ಭಾರೀ ಮಳೆಗೆ ಬಾವಿ ಕುಸಿತ

Shankaranarayana: ಕಾರಿನಲ್ಲಿ ಬಂದು ದನ ಕಳ್ಳತನ; ಸಿಸಿ ಕೆಮರಾದಲ್ಲಿ ದಾಖಲು

Shankaranarayana ದನ ಕಳ್ಳತನ ಪ್ರಕರಣ; ಆರೋಪಿಗಳ ಬಂಧನ

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

12

Chowkidar Movie: ಚೌಕಿದಾರ್‌ಗೆ ಮುಹೂರ್ತ ಇಟ್ರಾ!

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್…  25 ಲಕ್ಷಕ್ಕೆ ಡೀಲ್

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.