![Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು](https://www.udayavani.com/wp-content/uploads/2024/07/11-1-415x249.jpg)
Video: ಬುರ್ಖಾ ಧರಿಸಿ ಆಭರಣದಂಗಡಿ ದೋಚಲು ಯತ್ನ; ಕಳ್ಳರನ್ನು ತಡೆದ ಮಾಲಕ
Team Udayavani, Jun 21, 2024, 5:53 PM IST
![Man Dressed In Burqa Robs Hyderabad Jewellery Shop](https://www.udayavani.com/wp-content/uploads/2024/06/burq-620x342.jpg)
ಹೈದರಾಬಾದ್: ಬುರ್ಖಾ ಧರಿಸಿ ಆಭರಣದ ಮಳಿಗೆಗೆ ಬಂದ ಇಬ್ಬರು ಡಕಾಯಿತರು ದೋಚಲು ವಿಫಲ ಯತ್ನ ನಡೆಸಿದ ಘಟನೆ ಹೈದರಾಬಾದ್ ಹೊರವಲಯದ ಮೆದಾಚಲ್ ನಲ್ಲಿ ನಡೆದಿದೆ. ಜುವೆಲ್ಲರಿ ಶಾಪ್ ಮಾಲಕ ಮತ್ತು ಆತನ ಮಗ ಸೇರಿ ದರೋಡೆಕೋರರ ಸಂಚನ್ನು ವಿಫಲಗೊಳಿಸಿದ್ದಾರೆ.
ಚೂರಿಯೊಂದಿಗೆ ದೋಚಲು ಬಂದಿದ್ದ ಇಬ್ಬರು ಭಾರಿ ಪ್ರಯತ್ನ ನಡೆಸಿದರೂ ಖಾಲಿ ಕೈಯಲ್ಲಿ ಹೋಗಿದ್ದಾರೆ. ಘಟನೆಯಲ್ಲಿ ಮಳಿಗೆ ಮಾಲಕ ಗಾಯಗೊಂಡಿದ್ದಾರೆ.
ಮಧ್ಯಾಹ್ನ 1:45 ರ ಸುಮಾರಿಗೆ ಇಬ್ಬರು ವ್ಯಕ್ತಿಗಳು ತಮ್ಮ ಗುರುತುಗಳನ್ನು ಮರೆಮಾಚಿಕೊಂಡು ಅಂಗಡಿಗೆ ನುಗ್ಗಿ ದರೋಡೆ ಯತ್ನ ನಡೆಸಿದ್ದಾರೆ. ಬುರ್ಖಾ ಧರಿಸಿದ್ದ ವ್ಯಕ್ತಿ ತಕ್ಷಣ ಅಂಗಡಿ ಮಾಲೀಕ ಶೇಷಾರಾಮ್ ಮೇಲೆ ಹಲ್ಲೆ ನಡೆಸಿ ಭುಜಕ್ಕೆ ಚಾಕುವಿನಿಂದ ಇರಿದಿದ್ದಾನೆ., ಹೆಲ್ಮೆಟ್ ಧರಿಸಿದ್ದ ಆತನ ಸಹಚರ ಆಭರಣ ಮತ್ತು ನಗದು ಸಂಗ್ರಹಿಸಲು ಪ್ರಾರಂಭಿಸಿದನು.
ಗಾಯಗೊಂಡರೂ ಶೇಷಾರಾಮ್ ಕೂಡಲೇ ಎಚ್ಚೆತ್ತುಕೊಂಡರು. ಅಲ್ಲದೆ ಅವರ ಪುತ್ರ ಸುರೇಶ್ ಕೂಡಲೇ ಮಧ್ಯಪ್ರವೇಶಿಸಿದ ಕಾರಣ ದೊಡ್ಡ ದರೋಡೆಯೊಂದು ತಪ್ಪಿದೆ.
ಸಹಾಯಕ್ಕಾಗಿ ಜೋರಾಗಿ ಕೂಗಿದ ಸುರೇಶ್ ಅವರು ದರೋಡೆಕೋರರ ಮೇಲೆ ಕುರ್ಚಿಗಳನ್ನು ಎಸೆದರು. ಇದರಿಂದ ದರೋಡೆಕೋರರು ಕದ್ದ ಮಾಲನ್ನು ಬಿಟ್ಟು ಓಡಿಹೋಗುವಂತೆ ಮಾಡಿದರು. ಪೊಲೀಸರು ಸ್ಥಳಕ್ಕಾಗಮಿಸುವ ಮುನ್ನವೇ ಕಳ್ಳರು ಮೋಟಾರು ಬೈಕ್ ನಲ್ಲಿ ಪರಾರಿಯಾಗಿದ್ದು, ನಾಪತ್ತೆಯಾಗಿದ್ದಾರೆ.
ದರೋಡೆಕೋರರು ಬೈಕ್ ನಲ್ಲಿ ಪರಾರಿಯಾಗಲು ಪ್ರಯತ್ನಿಸುತ್ತಿರುವಾಗ ಅಂಗಡಿಯ ಹೊರಗೆ ಶೇಷಾರಾಮ್ ಅವರನ್ನು ಹಿಂಬಾಲಿಸುತ್ತಿರುವುದನ್ನು ಘಟನೆಯ ವೀಡಿಯೊಗಳು ತೋರಿಸುತ್ತವೆ. ಸುರೇಶ್ ಕೂಡ ಕುರ್ಚಿಯನ್ನು ಹಿಡಿದುಕೊಂಡು ಅಂಗಡಿಯಿಂದ ದರೋಡೆಕೋರನತ್ತ ಓಡುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Hyderabad, two miscreants wearing burqa looted the jewellery shop, video captured in CCTV
pic.twitter.com/VcIIvMoHQN— Ghar Ke Kalesh (@gharkekalesh) June 21, 2024
ಸ್ಥಳೀಯ ಪೊಲೀಸ್ ಠಾಣೆಯಿಂದ ಕೇವಲ 25 ಮೀಟರ್ ದೂರದಲ್ಲಿ ದರೋಡೆ ನಡೆದಿದೆ. ಅಲ್ಲದೆ, ಸಮೀಪದಲ್ಲಿ ನಡೆಯುತ್ತಿರುವ ಮೇಲ್ಸೇತುವೆಯ ನಿರ್ಮಾಣ ಕಾರ್ಯದಿಂದ ಸುತ್ತಮುತ್ತಲಿನ ಸುಮಾರು 25 ಸಿಸಿಟಿವಿ ಕ್ಯಾಮೆರಾಗಳನ್ನು ತೆಗೆದುಹಾಕಲಾಗಿದೆ. ದರೋಡೆಕೋರರು ಕೈಗವಸುಗಳನ್ನು ಧರಿಸಿದ್ದರಿಂದ ಯಾವುದೇ ಬೆರಳಚ್ಚು ಬಿಟ್ಟು ಹೋಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
![Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು](https://www.udayavani.com/wp-content/uploads/2024/07/11-1-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Tragedy: ಯುವಕನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ… ಆರನೇ ಮಹಡಿಯಿಂದ ಬಿದ್ದು ಮೃತಪಟ್ಟ](https://www.udayavani.com/wp-content/uploads/2024/07/mumbai-1-150x100.jpg)
Tragedy: ಯುವಕನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ… ಆರನೇ ಮಹಡಿಯಿಂದ ಬಿದ್ದು ಮೃತ್ಯು
![ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್](https://www.udayavani.com/wp-content/uploads/2024/07/pawan-kalyan-150x84.jpg)
ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್
![1-LOP](https://www.udayavani.com/wp-content/uploads/2024/07/1-LOP-150x85.jpg)
Leader of the Opposition; ಚೊಚ್ಚಲ ಭಾಷಣದಲ್ಲೇ ಅಬ್ಬರ! ; ರಾಹುಲ್ ವಿರುದ್ಧ ಕ್ರಮ?
![1-weww](https://www.udayavani.com/wp-content/uploads/2024/07/1-weww-1-150x84.jpg)
Bhojshala; ಪೂಜೆ ಅವಕಾಶಕ್ಕಾಗಿ ಜೈನರ ಅರ್ಜಿ
![NIA](https://www.udayavani.com/wp-content/uploads/2024/07/NIA-150x100.jpg)
MP ಎಂಜಿನಿಯರ್ ರಶೀದ್ ಪ್ರಮಾಣ ವಚನ ಸ್ವೀಕಾರಕ್ಕೆ ಕೊನೆಗೂ ಎನ್ಐಎ ಅಸ್ತು
MUST WATCH
ಹೊಸ ಸೇರ್ಪಡೆ
![Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು](https://www.udayavani.com/wp-content/uploads/2024/07/11-1-150x90.jpg)
Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು
![Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್ ವಂಚನೆ, ಹೂಡಿಕೆದಾರರು ಕಂಗಾಲು!](https://www.udayavani.com/wp-content/uploads/2024/07/America-150x92.jpg)
Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್ ವಂಚನೆ, ಹೂಡಿಕೆದಾರರು ಕಂಗಾಲು!
![10](https://www.udayavani.com/wp-content/uploads/2024/07/10-1-150x90.jpg)
Bengaluru: ನಿಮ್ಮ ಮನೆ ಬಳಿ ಸಸಿ ನೆಡಬೇಕಾ? ಹಸಿರು ತೇರು ಸಂಪರ್ಕಿಸಿ
![Kidnap Case: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್; ಯುವಕನ ವಿರುದ್ಧ ಎಫ್ಐಆರ್](https://www.udayavani.com/wp-content/uploads/2024/07/9-1-150x90.jpg)
Kidnap Case: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್; ಯುವಕನ ವಿರುದ್ಧ ಎಫ್ಐಆರ್
![BBMP: ಪಾಲಿಕೆಯಲ್ಲಿ ಬಹುಕೋಟಿ ಅವ್ಯವಹಾರ; ಅಧಿಕಾರಿಗಳ ತನಿಖೆಗೆ ಆಯುಕ್ತರ ಸಮ್ಮತಿ](https://www.udayavani.com/wp-content/uploads/2024/07/8-1-150x90.jpg)
BBMP: ಪಾಲಿಕೆಯಲ್ಲಿ ಬಹುಕೋಟಿ ಅವ್ಯವಹಾರ; ಅಧಿಕಾರಿಗಳ ತನಿಖೆಗೆ ಆಯುಕ್ತರ ಸಮ್ಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.