![Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?](https://www.udayavani.com/wp-content/uploads/2024/07/Crude-415x229.jpg)
Sullia ಮಗ ಮತ್ತು ಸೊಸೆ ವಿರುದ್ಧ ವೃದ್ಧೆ ದೂರು: ಸಹಾಯಕ ಆಯುಕ್ತರಿಂದ ಮಾತುಕತೆ
Team Udayavani, Jun 22, 2024, 12:15 AM IST
![Sullia ಮಗ ಮತ್ತು ಸೊಸೆ ವಿರುದ್ಧ ವೃದ್ಧೆ ದೂರು: ಸಹಾಯಕ ಆಯುಕ್ತರಿಂದ ಮಾತುಕತೆ](https://www.udayavani.com/wp-content/uploads/2024/06/SULLIA-A-1-620x279.jpg)
ಸುಳ್ಯ: ಮಗ ಮತ್ತು ಸೊಸೆ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ವೃದ್ಧೆಯೋರ್ವರು ತನ್ನ ಪುತ್ರಿಯರ ಜತೆಗೆ ಸುಳ್ಯ ತಾಲೂಕು ಕಚೇರಿಗೆ ಆಗಮಿಸಿ ಧರಣಿ ಕುಳಿತ ಘಟನೆ ಸುಳ್ಯದಲ್ಲಿ ನಡೆದಿದೆ.
ಮಂಡೆಕೋಲು ಗ್ರಾಮದ ಕಲ್ಲಡ್ಕದ ಪೆರಾಜೆಯ ಶೇಷಮ್ಮ ಅವರು ಕೆಲವು ವಾರಗಳ ಹಿಂದೆ ಸುಳ್ಯ ತಹಶೀಲ್ದಾರ್ಗೆ ಮಗನ ವಿರುದ್ಧ ದೂರು ನೀಡಿ ದ್ದರು. ಅಂದು ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ಸಮಾಲೋಚಿಸಿ ಮಗನಿಗೆ ಹಿತವಚನ ನೀಡಿ ಮಂಡೆ ಕೋಲಿನ ಮನೆಗೆ ಬಿಟ್ಟು ಬಂದಿದ್ದರು. ಅಂದಿನಿಂದ ವೃದ್ಧೆ ಅದೇ ಮನೆಯಲ್ಲಿದ್ದು, ಮದುವೆ ಮಾಡಲಾಗಿರುವ ಪುತ್ರಿಯರು ಒಬ್ಬರಂತೆ ಇದ್ದು ನೋಡಿಕೊಳ್ಳುತ್ತಿದ್ದರು. ಆದರೂ ಮಗ ಮತ್ತು ಸೊಸೆ ವರ್ತನೆ ಬದಲಾಗಲಿಲ್ಲ ಎಂದು ವೃದ್ಧೆಯು ಗುರು ವಾರ ತನ್ನ ಮೂವರು ಪುತ್ರಿ ಯರ ಜತೆಗೆ ಬಂದು ಧರಣಿ ಕುಳಿತು, ಸಹಾಯಕ ಆಯುಕ್ತರು ಆಗಮಿಸಿ ನಮ್ಮ ಸಮಸ್ಯೆಯನ್ನು ಪರಿಹರಿಸ ಬೇಕು ಎಂದು ಪಟ್ಟು ಹಿಡಿದಿದ್ದರು.
ಎಸಿಯಿಂದ ಮಾತುಕತೆ
ಸಂಜೆ ವೇಳೆಗೆ ಮಂಗಳೂರಿನಿಂದ ಆಗಮಿಸಿದ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು, ವೃದ್ಧೆಯ ಆರೋಗ್ಯ ವಿಚಾ ರಿಸಿದರು. ವೃದ್ಧೆಯ ಪುತ್ರ ಹಾಗೂ ಪುತ್ರಿಯರ ಅಹವಾಲನ್ನೂ ಆಲಿ ಸಿ ದರು. ತಹಶೀಲ್ದಾರ್, ಸಿಡಿಪಿಒ ಅವರಿಂದಲೂ ಮಾಹಿತಿ ಪಡೆ ದರು. ಕಾನೂನು ರೀತಿಯಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ತಾಯಿಯನ್ನು ಮಕ್ಕಳು ನೋಡಿ ಕೊಳ್ಳಬೇಕು. ಅಲ್ಲದೇ ಅವರ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿ ಆರೋಗ್ಯ ವಿಚಾರಿಸಬೇಕಾದುದು ಮಕ್ಕಳ ಕರ್ತವ್ಯ ಎಂದು ಬುದ್ಧಿಮಾತು ಹೇಳಿದರು. ಘಟನೆ ಬಗ್ಗೆ ಮನೆಗೆ ತೆರಳಿ ವರದಿ ನೀಡುವಂತೆ ತಹಶೀಲ್ದಾರ್ ಹಾಗೂ ಸಿಡಿಪಿಒಗೆ ಸೂಚಿಸಿದರು. ರಾತ್ರಿ ವರೆಗೂ ಮನೆಗೆ ತೆರಳದೇ ಕಚೇರಿ ಹೊರಾಂಗಣದಲ್ಲೇ ಇದ್ದ ವೃದ್ಧೆ ಹಾಗೂ ಅವರ ಪುತ್ರಿಯರನ್ನು ಅಧಿಕಾರಿಗಳು ಸಮಾಧಾನಪಡಿಸಿ, ಒಂದು ವಾರದೊಳಗೆ ಸಮಸ್ಯೆಗೆ ಪರಿಹಾರ ಕೊಡಿಸುವ ಭರವಸೆ ನೀಡಿ ದರು. ಬಳಿಕ ಪ್ರತಿಭಟನೆ ಹಿಂಪಡೆದು ಅಲ್ಲಿಂದ ತೆರಳಿದರು.
ಟಾಪ್ ನ್ಯೂಸ್
![Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?](https://www.udayavani.com/wp-content/uploads/2024/07/Crude-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![12](https://www.udayavani.com/wp-content/uploads/2024/07/12-1-150x90.jpg)
Chowkidar Movie: ಚೌಕಿದಾರ್ಗೆ ಮುಹೂರ್ತ ಇಟ್ರಾ!
![Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?](https://www.udayavani.com/wp-content/uploads/2024/07/Crude-150x83.jpg)
Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?
![Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್](https://www.udayavani.com/wp-content/uploads/2024/07/salman-150x84.jpg)
Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್
![Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು](https://www.udayavani.com/wp-content/uploads/2024/07/11-1-150x90.jpg)
Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು
![Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್ ವಂಚನೆ, ಹೂಡಿಕೆದಾರರು ಕಂಗಾಲು!](https://www.udayavani.com/wp-content/uploads/2024/07/America-150x92.jpg)
Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್ ವಂಚನೆ, ಹೂಡಿಕೆದಾರರು ಕಂಗಾಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.