![Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ](https://www.udayavani.com/wp-content/uploads/2024/07/sagara-415x270.jpg)
5 ಕೋ.ರೂ.ಗೆ ಬ್ಲ್ಯಾಕ್ಮೇಲ್ : ಪ್ರತಿದೂರು: ಚೇತನ್ರಿಂದ ಕೆಲಸಕ್ಕೆ ಕೋರಿಕೆ, ಸೂರಜ್ ನಕಾರ?
Team Udayavani, Jun 22, 2024, 7:12 AM IST
![5 ಕೋ.ರೂ.ಗೆ ಬ್ಲ್ಯಾಕ್ಮೇಲ್ : ಪ್ರತಿದೂರು: ಚೇತನ್ರಿಂದ ಕೆಲಸಕ್ಕೆ ಕೋರಿಕೆ, ಸೂರಜ್ ನಕಾರ?](https://www.udayavani.com/wp-content/uploads/2024/06/Suraj-Revanna-620x350.jpg)
ಹಾಸನ: ಎಚ್.ಡಿ. ರೇವಣ್ಣ ಕುಟುಂಬದ ಮತ್ತೊಬ್ಬ ಸದಸ್ಯ, ವಿಧಾನ ಪರಿಷತ್ ಡಾ| ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸುವ ಮೂಲಕ ಬ್ಲ್ಯಾಕ್ಮೇಲ್ ಮಾಡಲು ಯತ್ನಿಸಲಾಗಿದೆ. 5 ಕೋಟಿ ರೂ. ವಸೂಲಿಯ ಪ್ರಯತ್ನ ನಡೆದಿದೆ. ಈ ಸಂಬಂಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯ ವಿರುದ್ದ ಶುಕ್ರವಾರ ಪ್ರಕರಣ ದಾಖಲಾಗಿದೆ.
ಅರಕಲಗೂಡು ತಾಲೂಕಿನ ಕೆ.ಎಸ್. ಚೇತನ್, ಆತನ ಭಾವ ಚೇತನ್ ವಿರುದ್ಧ ಡಾ| ಸೂರಜ್ ರೇವಣ್ಣ ಬ್ರಿಗೇಡ್ನ ಖಜಾಂಚಿ ಶಿವಕುಮಾರ್ ದೂರು ದಾಖಲಿಸಿದ್ದಾರೆ.
ಪ್ರಕರಣದ ವಿವರ
ಹನುಮನಹಳ್ಳಿಯ ಶಿವಕುಮಾರ್ ಈ ಹಿಂದೆ ಅರಕಲ ಗೂಡಿನಲ್ಲಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಕೊಳ್ಳಂಗಿ ಗ್ರಾಮದ ಕೆ.ಎಸ್. ಚೇತನ್ ಪರಿಚಯವಾಗಿದ್ದ. ಕೆಲವು ದಿನಗಳ ಕಾಲ ಇಬ್ಬರೂ ಒಟ್ಟಿಗೇ ಕೆಲಸ ಮಾಡಿದ್ದರು. ಶಿವಕುಮಾರ್ ಅವರು ಡಾ| ಸೂರಜ್ ಬ್ರಿಗೇಡ್ ಖಜಾಂಚಿಯಾಗಿ ಅವರ ಒಡನಾಡಿಯಾಗಿದ್ದರಿಂದ ತನಗೂ ಡಾ| ಸೂರಜ್ ಪರಿಚಯ ಮಾಡಿಸಿಕೊಡು, ಅವರಿಗೆ ಹೇಳಿ ಯಾವುದಾದರೂ ಕೆಲಸವನ್ನು ನನಗೆ ಕೊಡಿಸಿ ಸಹಾಯ ಮಾಡು ಎಂದು ಶಿವಕುಮಾರ್ಗೆ 6 ತಿಂಗಳ ಹಿಂದೆ ಚೇತನ್ ದುಂಬಾಲು ಬಿದ್ದಿದ್ದ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಡಾ| ಸೂರಜ್ ಅವರಿಗೆ ಚೇತನ್ನನ್ನು ಪರಿಚಯವನ್ನೂ ಮಾಡಿಕೊಟ್ಟ ಸಂದರ್ಭದಲ್ಲಿ ಸೂರಜ್ ಅವರ ಫೋನ್ ನಂಬರನ್ನೂ ಚೇತನ್ ಪಡೆದುಕೊಂಡಿದ್ದ ಎಂದು ಶಿವಕುಮಾರ್ ಅವರು ದೂರಿನಲ್ಲಿ ವಿವರ ನೀಡಿದ್ದಾರೆ.
ಕೆ.ಎಸ್. ಚೇತನ್ಗೆ ಸದ್ಯ ಉದ್ಯೋಗವಿಲ್ಲ, ಮುಂದೆ ನೋಡೋಣ ಎಂದು ಸೂರಜ್ ಹೇಳಿದ್ದರು. ಇದರಿಂದ ಆತ ಸಿಟ್ಟಿಗೆದ್ದು ಸಹಾಯ ಮಾಡದಿದ್ದರೆ ಸೂರಜ್ ರೇವಣ್ಣ ಮತ್ತು ನಿಮ್ಮ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸುತ್ತೇನೆ. ಕೇಸು ದಾಖಲಿಸಬಾರದು ಎಂದಿದ್ದರೆ 5 ಕೋ. ರೂ. ಕೊಡಬೇಕು ಎಂದು ಫೋನ್ ಮೂಲಕ ತಿಳಿಸಿದ್ದ ಎಂದು ಶಿವಕುಮಾರ್ ಅವರು ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ಟಾಪ್ ನ್ಯೂಸ್
![Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ](https://www.udayavani.com/wp-content/uploads/2024/07/sagara-415x270.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ](https://www.udayavani.com/wp-content/uploads/2024/07/sagara-150x98.jpg)
Sagara: ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ
![Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ](https://www.udayavani.com/wp-content/uploads/2024/07/charmadi-150x83.jpg)
Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ
![Transfer of four IPS officers; New SP for Raichur, Koppal](https://www.udayavani.com/wp-content/uploads/2024/07/IPS-150x83.jpg)
IPS Transfer: ಮತ್ತೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ; ರಾಯಚೂರು, ಕೊಪ್ಪಳಕ್ಕೆ ಹೊಸ ಎಸ್.ಪಿ
![Thirthahalli: ಗಾಳಿ ಮಳೆಯ ಅಬ್ಬರಕ್ಕೆ ಕುಸಿದು ಬಿತ್ತು ಯಕ್ಷಗಾನ ಕಲಾವಿದನ ಮನೆ](https://www.udayavani.com/wp-content/uploads/2024/07/yakshagana-150x84.jpg)
Thirthahalli: ಗಾಳಿ ಮಳೆಯ ಅಬ್ಬರಕ್ಕೆ ಕುಸಿದು ಬಿತ್ತು ಯಕ್ಷಗಾನ ಕಲಾವಿದನ ಮನೆ
![Kumata: ಭಾರಿ ಮಳೆಗೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆ… ನೆರೆ ಭೀತಿ](https://www.udayavani.com/wp-content/uploads/2024/07/kumata-150x93.jpg)
Kumata: ಭಾರಿ ಮಳೆಗೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆ… ನೆರೆ ಭೀತಿ
MUST WATCH
ಹೊಸ ಸೇರ್ಪಡೆ
![Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ](https://www.udayavani.com/wp-content/uploads/2024/07/sagara-150x98.jpg)
Sagara: ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ
![Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್](https://www.udayavani.com/wp-content/uploads/2024/07/alok-1-150x83.jpg)
Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್
![11-honnavara](https://www.udayavani.com/wp-content/uploads/2024/07/11-honnavara-150x90.jpg)
Honnavara: ಭಾರೀ ಮಳೆ; ಹಲವು ಮನೆಗಳಿಗೆ ನೆರೆ ನೀರು
![Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್ ರಾಜೀನಾಮೆ!](https://www.udayavani.com/wp-content/uploads/2024/07/Meena-150x84.jpg)
Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್ ರಾಜೀನಾಮೆ!
![Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ](https://www.udayavani.com/wp-content/uploads/2024/07/charmadi-150x83.jpg)
Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.