![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Jun 22, 2024, 6:45 AM IST
ದುಶಾನ್ಬೆ: ಮುಸ್ಲಿಂ ರಾಷ್ಟ್ರವಾದ ತಜಕಿಸ್ಥಾನದಲ್ಲಿ ಶೀಘ್ರವೇ ಹಿಜಾಬ್ ನಿಷೇಧದ ಕಾನೂನು ಜಾರಿಯಾಗಲಿದೆ. ಅಲ್ಲಿನ ಸಂಸತ್ತು ಈ ಕುರಿತ ಮಸೂದೆಯನ್ನು ಇತ್ತೀಚೆಗೆ ಅಂಗೀಕರಿಸಿದೆ. ಈ ಮೂಲಕ 2007ರಿಂದಲೂ ಚರ್ಚೆಯಲ್ಲಿದ್ದ ವಿವಾದಕ್ಕೆ ಶೀಘ್ರವೇ ತೆರೆ ಬೀಳಲಿದೆ.
ಸಂಸತ್ತಿನ ಮೇಲ್ಮನೆಯಾದ ಮಜಿಲಿ ಮಿಲ್ಲಿಯಲ್ಲಿ ಸ್ಪೀಕರ್ ರುಸ್ತುಮ್ ಎಮೋಮಲಿ ಅವರ ಅಧ್ಯಕ್ಷತೆಯಲ್ಲಿ ನಡೆದ 18ನೇ ಅಧಿವೇಶನದಲ್ಲಿ ಹಿಜಾಬ್ ನಿಷೇಧ ಕುರಿತಾದ ಮಸೂದೆಯನ್ನು ಅಂಗೀಕರಿಸಲಾಗಿದೆ. ನಿಯಮ ಗಳನ್ನು ಉಲ್ಲಂ ಸಿ ಹಿಜಾಬ್ ಧರಿಸಿದರೆ ಅದಕ್ಕೆ ಭಾರೀ ದಂಡವನ್ನು ವಿಧಿಸುವ ಬಗ್ಗೆ ಮಸೂದೆ ಪ್ರಸ್ತಾವಿಸಿದೆ.
ಅಲ್ಲದೆ ಮಕ್ಕಳ ಶಿಕ್ಷಣ ಹಾಗೂ ರಕ್ಷಣೆಯ ಹಿತದೃಷ್ಟಿಯಿಂದ ಮುಸ್ಲಿಂ ಹಬ್ಬಗಳಾದ ಈದ್ ಉಲ್ ಫಿತರ್ (ರಮ್ಜಾನ್) ಹಾಗೂ ಈದ್ ಅಲ್ ಅಧಾ (ಬಕ್ರೀದ್) ಹಬ್ಬಗಳಲ್ಲಿ ಮಕ್ಕಳು ಭಾಗಿಯಾಗುವುದಕ್ಕೂ ಮಸೂದೆ ನಿರ್ಬಂಧ ವಿಧಿಸಿದ್ದು, ಅದಕ್ಕೂ ಅನುಮೋದನೆ ದೊರೆತಿದೆ. ಈ ಮಸೂದೆಗೆ ಮೇ 8ರಂದು ಸಂಸತ್ತಿನ ಕೆಳಮನೆ ಮಜಿÉಸಿ ನಮೋ ಯಂಡಗೋನ್ನಲ್ಲಿ ಅನುಮೋದನೆ ದೊರೆತಿತ್ತು. ಮಸೂದೆಯಲ್ಲಿ ಹಿಜಾಬ್ ಅನ್ನು “ಅನ್ಯಗ್ರಹ ಜೀವಿಗಳ ಉಡುಗೆ’ ಎಂದೇ ಉಲ್ಲೇಖೀಸಲಾಗಿದೆ.
ಏನಿದು ನಿಷೇಧ?
2007ರಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದಕ್ಕೆ ನಿಷೇಧ
ಆ ಬಳಿಕ ಸಾರ್ವಜನಿಕ ಸಂಸ್ಥೆಗಳಿಗೂ ನಿಷೇಧ ವಿಸ್ತರಣೆ
ಸರಕಾರದ ವಿರುದ್ಧ ಅನೇಕ ಪ್ರತಿಭಟನೆಗಳು, ಮುಸ್ಲಿಂ ಸಂಸ್ಥೆಗಳ ಆಕ್ಷೇಪ
ವಿರೋಧದ ನಡುವೆಯೂ ಹಿಜಾಬ್ ನಿಷೇಧ ಜಾರಿ
2017ರಲ್ಲಿ ಹಿಜಾಬ್ ವಿರುದ್ಧ ದೇಶಾದ್ಯಂತ ಅಭಿಯಾನಗಳು ಆರಂಭ
ಹಿಜಾಬ್ ತೀವ್ರಗಾಮಿ ವಾದದ ಪ್ರತೀಕ, ವಿದೇಶಿ ಉಡುಗೆ ಎಂದು ಬಣ್ಣನೆ
ತಜಕಿಸ್ಥಾನದ ಸಾಂಪ್ರದಾಯಿಕ ಉಡುಗೆಗೆ ಮಾನ್ಯತೆ ನೀಡಲು ಒತ್ತಾಯ
ಕಾನೂನಿನ ಮೂಲಕವೇ ಹಿಜಾಬ್ ನಿಷೇಧಿಸಲು ಮಸೂದೆ ಮಂಡನೆ
ಹಿಜಾಬ್ “ಅನ್ಯಗ್ರಹ ಜೀವಿಗಳ ಉಡುಗೆ’ ಎಂದೇ ಮಸೂದೆಯಲ್ಲಿ ಉಲ್ಲೇಖ
ಮೇ 8ರಂದು ಮಸೂದೆಗೆ ಸಮ್ಮತಿ, ಜೂ. 19ರಂದು ಸಂಸತ್ತಿನಲ್ಲಿ ಅಂಗೀಕಾರ
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.