Yoga Day; ಜಾಗತಿಕ ಒಳಿತಿಗೆ ಯೋಗವೇ ಮಾರ್ಗ: ಮೋದಿ


Team Udayavani, Jun 22, 2024, 1:24 AM IST

1-asdsad

ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಮಳೆಯ ಅಡ್ಡಿಯ ನಡುವೆಯೇ 10ನೇ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ಶುಕ್ರ ವಾರ ಯಶಸ್ವಿಯಾಗಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ನೇತೃ ತ್ವ ದಲ್ಲಿ ನಡೆದ ಪ್ರಧಾನ ಕಾರ್ಯಕ್ರಮ ನಿಗದಿಯಂತೆ ಬೆಳಗ್ಗೆ 6.30ಕ್ಕೆ ಆರಂಭವಾಗಬೇಕಿತ್ತು. ಆದರೆ ಭಾರೀ ಮಳೆ ಸುರಿದ ಕಾರಣ ಎಸ್‌ಕೆಐಸಿಸಿ ಸಭಾಂಗಣದೊಳಕ್ಕೆ ಸ್ಥಳಾಂತರವಾಯಿತು.

ಮಳೆ ಸುರಿದರೂ ತಲೆಕೆಡಿಸಿಕೊಳ್ಳದೇ, ತಾವು ಹಾಸಿಕೊಂಡಿದ್ದ ಮ್ಯಾಟನ್ನೇ ರಕ್ಷಣೆಗೆ ಬಳಸಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರ ಸ್ಫೂರ್ತಿ ಯನ್ನು ಪ್ರಧಾನಿ ಪ್ರಶಂಸಿಸಿದರು. ಶ್ರೀನಗರ ಮಾತ್ರ ವಲ್ಲ, ಇಡೀ ಜಮ್ಮು-ಕಾಶ್ಮೀರದಲ್ಲಿ ಶುಕ್ರವಾರ 50,000 ರಿಂದ 60,000 ಮಂದಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಮೋದಿ ಹೇಳಿದರು.

ಜನರೊಂದಿಗೆ ಸಾಮೂಹಿಕ ಯೋಗಾಸನಗಳನ್ನು ಮುಗಿಸಿದ ಮೇಲೆ ಪ್ರಧಾನಿ ಸಭಿಕರನ್ನುದ್ದೇಶಿಸಿ ಮಾತನಾ ಡಿದರು. “ಜನ ಯೋಗದ ಬಗ್ಗೆ ಮಾತನಾಡುವಾಗ ಬಹುತೇಕರು ಅದನ್ನು ಆಧ್ಯಾತ್ಮಿಕ ಕ್ರಿಯೆ, ಅಲ್ಲಾಹ ನನ್ನೋ, ಈಶ್ವರನನ್ನೋ ಕಂಡುಕೊಳ್ಳುವ ಮಾರ್ಗ ಅಂದುಕೊಳ್ಳುತ್ತಾರೆ. ಸದ್ಯ ಅದನ್ನೆಲ್ಲ ಪಕ್ಕಕ್ಕಿಡಿ. ಈಗ ನಿಮ್ಮ ವೈಯ ಕ್ತಿಕ ಬೆಳವಣಿಗೆ ಬಗ್ಗೆ ಗಮನಹರಿಸಿ. ಯೋಗದಿಂದ ನಮ್ಮ ವಿಕಾಸ ಆಗುತ್ತದೆ. ಅದು ಸಮಾಜದ ವಿಕಾಸಕ್ಕೆ, ಅದರಿಂದ ಇಡೀ ಮಾನವ ಜನಾಂಗದ ಹಿತಸಾಧನೆ ಯಾಗುತ್ತದೆ. ಯೋಗ ಕೇವಲ ಜ್ಞಾನ ವಲ್ಲ, ಅದು ವಿಜ್ಞಾ ನವೂ ಹೌದು’ ಎಂದು ಮೋದಿ ಹೇಳಿದರು.

“ಯೋಗದಿಂದ ಬಹಳ ಉಪಯೋಗಳಿವೆ. ಪ್ರಸ್ತುತ ಇಡೀ ಪ್ರಪಂಚವೇ, ಜಾಗತಿಕ ಹಿತಸಾಧನೆಗೆ ಯೋಗ ವನ್ನು ಪ್ರಬಲ ಸಾಧನವೆಂದು ನಂಬಿ ದೆ. ಯೋಗ ಹಿಂದಿನ ಹೊರೆಯನ್ನು ಕಳೆದುಕೊಂಡು ವರ್ತಮಾನದಲ್ಲಿ ಬದುಕಲು ನೆರವಾಗುತ್ತದೆ. ಹಾಗಾಗಿಯೇ ಸೈನಿಕರಿಂದ ಹಿಡಿದು ಕ್ರೀಡಾಪಟುಗಳವರೆಗೆ ಎಲ್ಲ ರೂ ಯೋಗವನ್ನು ತಮ್ಮ ದಿನಚರಿಯಲ್ಲಿ ಜೋಡಿಸಿಕೊಂಡಿದ್ದಾರೆ’ ಎಂದು ಮೋದಿ ಹೇಳಿದರು.

ಯೋಗದ ಬಗ್ಗೆ ಕೇಳದವರೇ ಇಲ್ಲ: ಪ್ರಸ್ತುತ ಇಡೀ ವಿಶ್ವದಲ್ಲಿ ಯೋಗದ ಬಗ್ಗೆ ಆಸಕ್ತಿ ಹೆಚ್ಚಿರುವುದನ್ನು ಪ್ರಸ್ತಾವಿಸಿದ ಮೋದಿ, ಯೋಗಾಭ್ಯಾಸಿಗಳು ಜಗತ್ತಿನಾದ್ಯಂತ ಹೆಚ್ಚುತ್ತಿದ್ದಾರೆ. ನಾನು ಎಲ್ಲೇ ಹೋದರೂ ಯೋಗದ ಬಗ್ಗೆ ಕೇಳದ, ಮಾತನಾಡದ ನಾಯಕರು ಅತ್ಯಪರೂಪಕ್ಕೆ ಕಾಣಿಸಿದ್ದಾರೆ ಎಂದಿದ್ದಾರೆ.

ಪ್ರವಾಸೋದ್ಯಮ ವೃದ್ಧಿಗೆ ಯೋಗ ನೆರವು
ಪ್ರಸ್ತುತ ಉತ್ತರಾಖಂಡ, ಕೇರಳದಲ್ಲಿ ಯೋಗ ಪ್ರವಾಸೋದ್ಯಮವೇ ನಡೆಯುತ್ತಿದೆ. ಜನ ಖಾಸಗಿಯಾಗಿ ಯೋಗಶಿಕ್ಷಕರನ್ನು ನೇಮಿಸಿ ಕೊಳ್ಳುತ್ತಿದ್ದಾರೆ ಎಂದ ಪ್ರಧಾನಿ ನರೇಂದ್ರ ಮೋದಿ ಅವ ರು, ಜಮ್ಮು-ಕಾಶ್ಮೀರದಲ್ಲೂ ಇತ್ತೀ ಚಿನ ದಿನ ಗ ಳಲ್ಲಿ ಯೋಗ ಜನಪ್ರಿಯ ವಾಗುತ್ತಿದೆ. ಇಲ್ಲಿ ಯೋಗದ ಮೂಲಕ ಪ್ರವಾಸೋದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಬಹುದು, ಜನರ ದಿನನಿತ್ಯದ ಜೀವನೋಪಾಯಕ್ಕೂ ದಾರಿಯಾಗುತ್ತದೆ ಎಂದು ಹೇಳಿದ್ದಾರೆ.

ಯೋಗಾಸಕ್ತರೊಂದಿಗೆ 40 ನಿಮಿಷ ಸಂವಾದ
ಯೋಗಾಸನದ ಬಳಿಕ ಎಸ್‌ಕೆಐಸಿಸಿ ಹೊರಾಂಗಣದ ಹುಲ್ಲುಹಾಸಿನಲ್ಲಿ ಮೋದಿ ಜನರೊಂದಿಗೆ 40 ನಿಮಿಷ ಸಂವಾದ ನಡೆಸಿದರು. ಜನರ ನಡುವೆಯೇ ನಡೆದು ಹೋದ ಮೋದಿ ಹರ್ಷೋದ್ಗಾರಕ್ಕೆ ಕಾರಣವಾದರು. ಆರಂಭದಲ್ಲಿ ತುಸು ಹೊತ್ತು ಪಾಲ್ಗೊಂಡಿದ್ದ ಜನರ ಕುಶಲೋಪರಿ ವಿಚಾರಿಸಿದರು.

ಸಿಯಾಚಿನ್‌ನಿಂದ ಅಂಡಮಾನ್‌ವರೆಗೆ…
ಸಿಯಾಚಿನ್‌ನಿಂದ ಹಿಡಿದು ಪೂರ್ವ ಸಮುದ್ರದ ತೀರದವರೆಗೆ, ಲೋಂಗೇವಾಲಾದಿಂದ ಅಂಡಮಾನ್‌ವರೆಗೆ ದೇಶದ ವಿವಿಧೆಡೆ ಯೋಧರು ಯೋಗ ದಿನ ಆಚರಿಸಿದರು. ಐಎನ್‌ಎಸ್‌ ವಿಕ್ರಮಾದಿತ್ಯ ಸೇರಿದಂತೆ ನೌಕಾಪಡೆಯ ಹಲವು ಹಡಗುಗಳಲ್ಲಿ ನೌಕಾ ಸಿಬಂದಿ ಯೋಗ ಪ್ರದರ್ಶಿಸಿದ್ದಾರೆ. ಐಎಎಫ್ನ ವಾಯು ನೆಲೆಯಲ್ಲಿ, ಸಿಯಾಚಿನ್‌ನ ಹಿಮ ನೆತ್ತಿಯಲ್ಲಿ, ಚೀನ ಗಡಿ ಬಳಿಯ ಪ್ಯಾಂಗಾಂಗ್‌ ಸರೋ ವ ರದ ದಡದಲ್ಲೂ ಯೋಧರು ಯೋಗ ಮಾಡಿದ್ದಾರೆ.

ವಿಶ್ವಾದ್ಯಂತ ಸಂಭ್ರಮದ ದಶಮಾನೋತ್ಸವ
ಅಮೆರಿಕ, ನೇಪಾಳ, ಚೀನ, ಶ್ರೀಲಂಕಾ, ಸಿಂಗಾ ಪುರದ ಸೇರಿದಂತೆ ವಿಶ್ವಾದ್ಯಂತ ಹಲವು ದೇಶಗಳ ವಿವಿಧ ಭಾಗದಲ್ಲಿ ಶುಕ್ರವಾರ 10ನೇ ಅಂತಾ ರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಅಮೆರಿಕದ ಟೈಮ್ಸ್‌ ಸ್ಕ್ವೇರ್‌ನಲ್ಲಿ ಯೋಗ ಶಿಕ್ಷಕರ ನೇತೃತ್ವದಲ್ಲಿ ನೂರಾರು ಮಂದಿ ಧ್ಯಾನ ಹಾಗೂ ಯೋಗಾಭ್ಯಾಸ ಮಾಡಿದ್ದಾರೆ. ಇನ್ನೂ ಹಲವೆಡೆ ಭಾರತದ ಶಾಸ್ತ್ರೀಯ ನೃತ್ಯಗಳ ಮೂಲಕ ದಿನಾ ಚರಣೆ ಆರಂಭಿಸಲಾಗಿದೆ. ಇಸ್ರೇಲ್‌ನ ಟೆಲ್‌ ಅವಿವ್‌ನಲ್ಲಿಯೂ ಕಾರ್ಯಕ್ರಮ ನಡೆದಿದ್ದು, ಸಿಂಗಾಪುರದಲ್ಲಿ ಭಾರತೀಯ ಹೈ ಕಮಿಷನ್‌ ಸಹ ಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾ ಗಿತ್ತು. ನೇಪಾಲದ ಪೋಖಾÅ, ಶ್ರೀಲಂಕಾದ ಜಾಫಾ° ದಲ್ಲೂ ಯೋಗ ಪ್ರದರ್ಶನಗಳು ನಡೆದಿವೆ. ರೋಮ್‌, ಬ್ರಿಟನ್‌, ಮಾಲ್ದೀವ್ಸ್‌, ಸೌದಿ ಅರೇ ಬಿಯಾ, ಕುವೈಟ್‌, ಮಲೇಷ್ಯಾ, ಇಂಡೋನೇಷ್ಯಾ, ಫ್ರಾನ್ಸ್‌ ಹಾಗೂ ಸ್ವೀಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೂ ಕೂಡ ಯೋಗ ಕಾರ್ಯ ಕ್ರಮ ಆಯೋಜಿಸಿದ್ದವು.

ಟಾಪ್ ನ್ಯೂಸ್

Don’t act like Rahul, answer with facts: Modi

Lok Sabha; ರಾಹುಲ್‌ ರೀತಿ ವರ್ತಿಸಬೇಡಿ, ಸತ್ಯ ಸಂಗತಿ ಮೂಲಕ ಉತ್ತರಿಸಿ: ಮೋದಿ

India will play 34 matches till 2026 T20 World Cup

T20 Cricket; 2026ರ ಟಿ20 ವಿಶ್ವಕಪ್‌ ತನಕ ಭಾರತ ಆಡಲಿದೆ 34 ಪಂದ್ಯ

Bajaj Bruzer is the world’s first CNG bike

Bajaj Bruzer; ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಬಜಾಜ್‌ ಬ್ರೂಝರ್‌

CM Siddaramaiah ರೈತರಿಗೆ ನಿತ್ಯ 5 ಕೋಟಿ ರೂ. ಪ್ರೋತ್ಸಾಹ ಧನ

CM Siddaramaiah ರೈತರಿಗೆ ನಿತ್ಯ 5 ಕೋಟಿ ರೂ. ಪ್ರೋತ್ಸಾಹ ಧನ

Mangaluru ಸಮವಸ್ತ್ರದಲ್ಲೇ ಹಾರೆ ಹಿಡಿದು ಗುಂಡಿ ಮುಚ್ಚಿದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌

Mangaluru ಸಮವಸ್ತ್ರದಲ್ಲೇ ಹಾರೆ ಹಿಡಿದು ಗುಂಡಿ ಮುಚ್ಚಿದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌

KMF ಹಾಲಿನ ಹೊಳೆ: ನಿತ್ಯ 1 ಕೋಟಿ ಲೀಟರ್‌!-ಕೆಎಂಎಫ್ ಇತಿಹಾಸದಲ್ಲೇ ದಾಖಲೆ ಕ್ಷೀರ ಸರಬರಾಜು

KMF ಹಾಲಿನ ಹೊಳೆ: ನಿತ್ಯ 1 ಕೋಟಿ ಲೀಟರ್‌!-ಕೆಎಂಎಫ್ ಇತಿಹಾಸದಲ್ಲೇ ದಾಖಲೆ ಕ್ಷೀರ ಸರಬರಾಜು

Mangaluru ಅಡಿಕೆಯ ಮೇಲಿನ ಜಿಎಸ್‌ಟಿ ಇಳಿಸಲು ಕ್ಯಾಂಪ್ಕೊ ಆಗ್ರಹ

Mangaluru ಅಡಿಕೆಯ ಮೇಲಿನ ಜಿಎಸ್‌ಟಿ ಇಳಿಸಲು ಕ್ಯಾಂಪ್ಕೊ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Don’t act like Rahul, answer with facts: Modi

Lok Sabha; ರಾಹುಲ್‌ ರೀತಿ ವರ್ತಿಸಬೇಡಿ, ಸತ್ಯ ಸಂಗತಿ ಮೂಲಕ ಉತ್ತರಿಸಿ: ಮೋದಿ

Lok Sabha; Many parts of Rahul Gandhi’s speech deducted from file

Lok Sabha; ರಾಹುಲ್‌ ಗಾಂಧಿ ಭಾಷಣದ ಹಲವು ಭಾಗಗಳಿಗೆ ಕಡತದಿಂದ ಕೊಕ್‌!

Fragment of rocks discovered by Pragyan at Moon Shivashakti Point!

Shivashakti: ಚಂದ್ರನ ಶಿವಶಕ್ತಿ ಪಾಯಿಂಟ್‌ನಲ್ಲಿ ಪ್ರಜ್ಞಾನ್‌ನಿಂದ ಶಿಲೆಗಳ ತುಣುಕು ಪತ್ತೆ!

Young couple who ready to fly Canada captured in delhi

ಕೆನಡಾಗೆ ಹೊರಟಿದ್ದ ಯುವ ದಂಪತಿ ಸೆರೆ!

Government should promote prevention of uterine cancer: Sudha Murthy

Rajyasabha; ಗರ್ಭಕೋಶ ಕ್ಯಾನ್ಸರ್‌ ತಡೆಗಟ್ಟಲು ಸರ್ಕಾರ ಉತ್ತೇಜಿಸಬೇಕು: ಸುಧಾಮೂರ್ತಿ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

Don’t act like Rahul, answer with facts: Modi

Lok Sabha; ರಾಹುಲ್‌ ರೀತಿ ವರ್ತಿಸಬೇಡಿ, ಸತ್ಯ ಸಂಗತಿ ಮೂಲಕ ಉತ್ತರಿಸಿ: ಮೋದಿ

India will play 34 matches till 2026 T20 World Cup

T20 Cricket; 2026ರ ಟಿ20 ವಿಶ್ವಕಪ್‌ ತನಕ ಭಾರತ ಆಡಲಿದೆ 34 ಪಂದ್ಯ

Bajaj Bruzer is the world’s first CNG bike

Bajaj Bruzer; ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಬಜಾಜ್‌ ಬ್ರೂಝರ್‌

CM Siddaramaiah ರೈತರಿಗೆ ನಿತ್ಯ 5 ಕೋಟಿ ರೂ. ಪ್ರೋತ್ಸಾಹ ಧನ

CM Siddaramaiah ರೈತರಿಗೆ ನಿತ್ಯ 5 ಕೋಟಿ ರೂ. ಪ್ರೋತ್ಸಾಹ ಧನ

Mangaluru ಸಮವಸ್ತ್ರದಲ್ಲೇ ಹಾರೆ ಹಿಡಿದು ಗುಂಡಿ ಮುಚ್ಚಿದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌

Mangaluru ಸಮವಸ್ತ್ರದಲ್ಲೇ ಹಾರೆ ಹಿಡಿದು ಗುಂಡಿ ಮುಚ್ಚಿದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.