Relax.. ಸ್ಪೀಕರ್ ನಿರ್ಧರಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ: ಬಿಜೆಪಿ!
Team Udayavani, Jun 22, 2024, 6:45 AM IST
ಹೊಸದಿಲ್ಲಿ: ಲೋಕಸಭೆ ಹಂಗಾಮಿ ಸ್ಪೀಕರ್ ನೇಮ ಕವು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. 8 ಬಾರಿ ಸಂಸದರಾಗಿರುವ ಕಾಂಗ್ರೆಸ್ನ ಕೆ. ಸುರೇಶ್ ಅವರನ್ನು ಬಿಟ್ಟು 7 ಬಾರಿ ಸಂಸದರಾಗಿರುವ ಒಡಿಶಾದ ಭ್ರತೃಹರಿ ಮಹ್ತಾಬ್ ಅವರನ್ನು ಬಿಜೆಪಿ ಸರಕಾರ ನೇಮಕ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ನ ಕೆ.ಸಿ.ವೇಣುಗೋಪಾಲ್ ಅವರು, ಹಂಗಾಮಿ ಸ್ಪೀಕರ್ ನೇಮಕದಲ್ಲಿ ಬಿಜೆಪಿ ಸರಕಾರವು ಸಂಸದೀಯ ವ್ಯವಸ್ಥೆಯ ಮತ್ತೂಂದು ನಿಯಮವನ್ನು ಉಲ್ಲಂ ಸುವ ಪ್ರಯತ್ನ ಮಾಡಿದೆ. ಕಾಂಗ್ರೆಸ್ನ ಅತ್ಯಂತ ಹಿರಿಯ ಸದಸ್ಯ ಕೆ.ಸುರೇಶ್ ಅವರನ್ನು ಕೈ ಬಿಟ್ಟಿದ್ದೇಕೆ ಎಂದೂ ಅವರು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, 98 ಸೀಟು ಗೆದ್ದಿರುವ ಕಾಂಗ್ರೆಸ್, ಯಾರು ಹಂಗಾಮಿ ಸ್ಪೀಕರ್ ಆಗಬೇಕೆಂದು ನಿರ್ಧ ರಿಸುವ ಹಂತದಲ್ಲಿ ಇಲ್ಲ. ಇದು ಅವರ ಸಾಮರ್ಥ್ಯಕ್ಕೆ ಮೀರಿದ್ದು. ರಿಲ್ಯಾಕ್ಸ್ ಆಗಿರಿ ಎಂದು ಕಾಲೆಳೆದಿದ್ದಾರೆ. ಕೆ.ಸಿ. ವೇಣುಗೋಪಾಲ್ ಜತೆಗೆ, ಕಾಂಗ್ರೆಸ್ನ ಜೈರಾಂ ರಮೇಶ್, ಮಾಣಿಕಂ ಠಾಗೋರ್ ಕೂಡ ಬಿಜೆಪಿ ಸರಕಾರದ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.