Desi Swara: ಊರು ಟೂರು ಅಂಕಣಗಳು ಈಗ ಪುಸ್ತಕವಾಗಿ ಪ್ರಕಟಣೆ


Team Udayavani, Jun 22, 2024, 1:15 PM IST

Desi Swara: ಊರು ಟೂರು ಅಂಕಣಗಳು ಈಗ ಪುಸ್ತಕವಾಗಿ ಪ್ರಕಟಣೆ

ಉದಯವಾಣಿಯ ಎನ್‌ಆರ್‌ಐ ಸಂಚಿಕೆ ದೇಸಿಸ್ವರಕ್ಕೆ ಹದಿನೈದು ದಿನಕೊಮ್ಮೆ ಅಂಕಣಗಳನ್ನು ಬರೆಯುತ್ತೀರಾ ಎಂದು ಕೇಳಿದಾಗ ನಾನು ಹಿಂಜರಿಕೆಯಲ್ಲಿಯೇ ಒಪ್ಪಿಕೊಂಡಿದ್ದೆ. ನಾನು ನೋಡಿದ ಪ್ರವಾಸಿ ತಾಣಗಳ ಬಗ್ಗೆ ಬರೆಯಬೇಕು ಎಂಬ ಇರಾದೆ ಇತ್ತಾದರೂ ಅದು ಕಾರ್ಯರೂಪಕ್ಕೆ ಅಲ್ಲಿಯವರೆಗೂ ಬಂದಿರಲಿಲ್ಲ. ಅಂಕಣ ಬರೆಯುವುದು ನಿಯಮಬದ್ಧವಾದ ಕೆಲಸ. ಒಂದು ಅಂಕಣ ಬರೆದ ಕೂಡಲೇ ಮುಂದಿನದ್ದರ ಬಗ್ಗೆ ಯೋಚನೆ ಶುರುವಾಗಬೇಕು. ಹೀಗೆ ಶುರುವಾದ “ಊರು ಟೂರು’ ಅಂಕಣಗಳು ಒಂದರ ಅನಂತರ ಮತ್ತೂಂದರಂತೆ ಬಂದು ಒಟ್ಟು 35 ಅಂಕಣಗಳಾದವು. ನಾನು ಕಂಡಿದ್ದೆಲ್ಲವನ್ನು ದಾಖಲಿಸುತ್ತ ಹೋದೆ.

ನೋಡಿದ ಸ್ಥಳಗಳು ಇನ್ನೂ ಪಟ್ಟಿಯಲ್ಲಿ ಇವೆಯಾದರೂ ಸದ್ಯಕ್ಕೆ ಇಷ್ಟು ಸಾಕೆನ್ನಿಸಿತು. ಈಗ ಈ ಎಲ್ಲ ಅಂಕಣಗಳು ಜತೆಗೆ ಇಲ್ಲಿ ಬಂದಿರದ ಒಂದಿಷ್ಟು ವೈಯಕ್ತಿಕ ಅನುಭವಗಳನ್ನ ಸೇರಿಸಿ ಪುಸ್ತಕದಲ್ಲಿ ಬಂದಿವೆ.

ಊರು ಟೂರು – Journey Beyond The Borders. ಊರು ಬಿಟ್ಟು ಹಾರಿ ಬಂದಿರುವ ನಾನು ಅಮೆರಿಕದಲ್ಲಿ ಗುಬ್ಬಚ್ಚಿಯಂತೆ ಅಲೆಯುತ್ತಿರುತ್ತೇನೆ. ಇದು ನನಗೆ ಸಂತೃಪ್ತಿ ನೀಡುವ ಕಾಯಕ. ಪ್ರವಾಸದಿಂದ ಮರಳಿ ಬಂದು ದಣಿವೆಂದು ಕಾಲು ಚಾಚಿ ಮಲಗುವಾಗಿನ ಸುಖ ಬೇರೊಂದಿಲ್ಲ ಎಂದು ನನಗನ್ನಿಸುತ್ತದೆ. ಬಾಲ್ಯ, ಓದು, ಸೈನ್ಸ್‌ ಎಂಜಿನಿಯರಿಂಗ್‌ ಪದವಿ, ಜವಾಬ್ದಾರಿ ಎಂದು ಕಳೆದು ಹೋಗಿದ್ದ ನನಗೆ ಕೆಲಸದ ಮೂಲಕ ಬೇರೆ ದೇಶಕ್ಕೆ ಹೋಗುವ ಅವಕಾಶ ಸಿಕ್ಕಿದ್ದು ಸುಕೃತವೇ. ಇಲ್ಲದೇ ಇದ್ದಿದ್ದರೆ ಈ ತಿರುಗಾಟದ ಆಸಕ್ತಿ ನನ್ನೊಳಗೆ ಬೆಳೆಯುತ್ತಿತ್ತೋ ಇಲ್ಲವೋ ಗೊತ್ತಿಲ್ಲ.

ಮನೆಯವರನ್ನು, ಅಮ್ಮನನ್ನು ಬಿಟ್ಟು ದೂರದೇಶಕ್ಕೆ ಬಂದಾಗ ಹುಟ್ಟುವ ಅನಾಥ ಭಾವವನ್ನು, ಒಂಟಿತನವನ್ನು ಕಳೆಯಲು ಸಹಾಯ ಮಾಡಿದ್ದು ಈ ತಿರುಗಾಟ. ಈ ತಿರುಗಾಟದಲ್ಲಿ ನಾನು ಹಲವು ವಿಸ್ಮಯಗಳನ್ನು ಕಂಡಿದ್ದೇನೆ. ಅಮೆರಿಕದಲ್ಲಿರುವ ಒಟ್ಟು 63 ರಾಷ್ಟ್ರೀಯ ಉದ್ಯಾನವನಗಳಲ್ಲಿ ಹನ್ನೊಂದನ್ನು ನೋಡಿದ್ದೇನೆ. ಮಧ್ಯರಾತ್ರಿಯಲ್ಲಿ ನಾದರ್ನ್ ಲೈಟ್ಸ್‌ ಆಕಾಶದಲ್ಲಿ ಹೊಳೆಯುವುದನ್ನು ಕಂಡಿದ್ದೇನೆ. ಎರಡು ಸಾವಿರ ವರ್ಷಗಳಿಗಿಂತಲೂ ಹಳೆಯದಾದ ಮರವನ್ನು ನೋಡಿ ಬೆರಗಾಗಿದ್ದೇನೆ. ಬಣ್ಣವಿಲ್ಲದ ನದಿಯ ನೀರು ಹಸುರಾಗುವುದಕ್ಕೆ ಸಾಕ್ಷಿಯಾಗಿದ್ದೇನೆ. 18,000 ಎಕ್ರೆಗಳಷ್ಟು ದೊಡ್ಡದಾದ ಕಾಡು ಬೆಂಕಿಯಲ್ಲಿ ಸುಟ್ಟು ಹೋಗಿರುವುದನ್ನೂ, ಅಳಿದುಳಿದ ಮರಗಳ ತುದಿಯಲ್ಲಿ ಮತ್ತೆ ಚಿಗುರು ಹುಟ್ಟಿರುವುದನ್ನೂ ನೋಡಿ ಸ್ಫೂರ್ತಿಗೊಂಡಿದ್ದೇನೆ. ಅನ್ಯ ನೆಲದಲ್ಲಿ ನಮ್ಮ ದೇವರನ್ನು, ದೇವಸ್ಥಾನವನ್ನು ಕಂಡು ಭಾವಪರವಶಳಾಗಿದ್ದೇನೆ. ಭೂಮಿಯ ಆಳದಲ್ಲಿರುವ ಕಣಿವೆಯೊಳಗೆ ಸುತ್ತಾಡಿದ್ದೇನೆ.

ಹೆಲಿಕಾಪ್ಟ್ ರ್‌ ನಲ್ಲಿ ಕೂತು ನಗರದ ಥಳುಕನ್ನು ಕಣ್ಣು ತುಂಬಿಸಿಕೊಂಡಿದ್ದೇನೆ. ಚಳಿಯಲ್ಲಿ ಹಿಮಗಟ್ಟಿದ ಕೆರೆಯ ಮೇಲೆ ಓಡಾಡಿದ್ದೇನೆ. ಕಾಡಿನಲ್ಲಿ ದಿಕ್ಕೆಟ್ಟು ಕಂಗೆಟ್ಟಿದ್ದಾಗ ಕಣ್ಣಿಗೆ ಬಿದ್ದ ಬೆಳಕನ್ನು ನೋಡಿ ಧನ್ಯಳಾಗಿದ್ದೇನೆ. ಈ ಎಲ್ಲವೂ ನನ್ನ ಪಾಲಿನ ಅದ್ಭುತಗಳು. ಇವೆಲ್ಲವನ್ನು ದಾಖಲಿಸುವ ಸಣ್ಣ ಪ್ರಯತ್ನವೇ ಈ “ಊರುಟೂರು’ ಸಂಗ್ರಹ. ನಾನು ಕಂಡಿದ್ದನ್ನು ಅಕ್ಷರಗಳಲ್ಲಿ ಸೆರೆಹಿಡಿದು ಆ ವಿಸ್ಮಯವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಸದ್ಯಕ್ಕೆ ಎರಡು ದೊಡ್ಡ ಸಮುದ್ರಗಳನ್ನು ಹಾರಿರುವ ಈ ಗುಬ್ಬಚ್ಚಿಯ ಹಾರಾಟ ರೆಕ್ಕೆಗಳಲ್ಲಿ ಶಕ್ತಿಯಿರುವವರೆಗೂ ಅನವರತವಾಗಿರುತ್ತದೆ.

ಈ ಪುಸ್ತಕ ಹರಿವು ಪ್ರಕಾಶನದಿಂದ ಹೊರಬಂದಿದ್ದು ಈಗ ಪುಸ್ತಕ ಮಳಿಗೆಗಳಲ್ಲಿ ಮತ್ತು ಆನ್‌ಲೈನ್‌ ಮೂಲಕ ಕೊಳ್ಳಬಹುದಾಗಿದೆ. ಈ ಅಂಕಣಗಳನ್ನು ನಿಯಮಿತವಾಗಿ ಪ್ರಕಟಿಸಿದ ಉದಯವಾಣಿ ತಂಡಕ್ಕೆ ಆಭಾರಿ.

ಸಂಜೋತಾ ಪುರೋಹಿತ್‌, ಸ್ಯಾನ್‌ಫ್ರಾನ್ಸಿಸ್ಕೋ

ಟಾಪ್ ನ್ಯೂಸ್

Arrested: ನಕಲಿ ಎ.ಕೆ.47 ಗನ್‌ ಬಳಸಿದ್ದ ರೀಲ್‌ ಶೋಕಿಲಾಲ ಬಂಧನ

Arrested: ನಕಲಿ ಎ.ಕೆ.47 ಗನ್‌ ಬಳಸಿದ್ದ ರೀಲ್‌ ಶೋಕಿಲಾಲ ಬಂಧನ

ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್

ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ

Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ

CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್‌ ನೋಟಿಸ್‌: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ

CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್‌ ನೋಟಿಸ್‌: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ

Exam

Australia;ಇನ್ನು ವಿದ್ಯಾರ್ಥಿ ಶುಲ್ಕ ದುಪ್ಪಟ್ಟು: ಭಾರತೀಯರಿಗೂ ಸಂಕಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UAE ರಾಸ್‌ ಅಲ್‌ ಖೈಮಾ-ಪ್ರತಿಭಾನ್ವೇಷಣೆ ಸ್ಪರ್ಧೆ: ಮಿಂಚಿದ ಪ್ರತಿಭೆಗಳು

UAE ರಾಸ್‌ ಅಲ್‌ ಖೈಮಾ-ಪ್ರತಿಭಾನ್ವೇಷಣೆ ಸ್ಪರ್ಧೆ: ಮಿಂಚಿದ ಪ್ರತಿಭೆಗಳು

Desi Swara: ವೀರಶೈವವು ಬಸವಪೂರ್ವ ಯುಗದ ಸನಾತನ ಧರ್ಮ

Desi Swara: ವೀರಶೈವವು ಬಸವಪೂರ್ವ ಯುಗದ ಸನಾತನ ಧರ್ಮ

Desi Swara: ಏನೂ ಇಲ್ಲದೆಯೂ ಸಂತೋಷವಾಗಿರಿ!

Desi Swara: ಏನೂ ಇಲ್ಲದೆಯೂ ಸಂತೋಷವಾಗಿರಿ!

Desi Swara: ಗಾದೆ ಮಾತು ಹೇಳಿದರೆ ಕೇಳಬೇಕಮ್ಮಾ…

Desi Swara: ಗಾದೆ ಮಾತು ಹೇಳಿದರೆ ಕೇಳಬೇಕಮ್ಮಾ…

Desi Swara: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

Desi Swara: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

Arrested: ನಕಲಿ ಎ.ಕೆ.47 ಗನ್‌ ಬಳಸಿದ್ದ ರೀಲ್‌ ಶೋಕಿಲಾಲ ಬಂಧನ

Arrested: ನಕಲಿ ಎ.ಕೆ.47 ಗನ್‌ ಬಳಸಿದ್ದ ರೀಲ್‌ ಶೋಕಿಲಾಲ ಬಂಧನ

ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್

ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್

3

Golden Star Ganesh: ಕ್ಷಮಿಸಿ, ಮುಂದಿನ ಸಲ ಸಿಗೋಣ..

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.