Ant: ಇರುವೆ ಇರುವೆ ಎಲ್ಲೆಲ್ಲೂ ಇರುವೆ


Team Udayavani, Jun 22, 2024, 3:30 PM IST

9-ants

ಇರುವೆ ಇರುವೆ ಎಲ್ಲಿರುವೆ? ಎಂದರೆ ಎಲ್ಲೆಲ್ಲೂ ನಾನಿರುವೆ ಎಂದು ಹೇಳುವ ಪುಟ್ಟ ಜೀವ. ಮನುಷ್ಯನಂತೆ ಸಂಘ ಜೀವಿಯಾಗಿದ್ದು, ತನ್ನ ಸಮುದಾಯದ ಒಳಿತಿಗಾಗಿ ಶಿಸ್ತಿನಿಂದ ದುಡಿಯುವ ಪ್ರಾಣಿಯೆಂದರೆ ಇರುವೆಯೊಂದೇ. ಜೀವಸಂಕುಲದಲ್ಲಿ ಮತ್ತೆ ಬೇರಾವ ಜೀವಿಯಿಂದಲೂ ಇಂತಹ ಒಗ್ಗಟ್ಟು ಕಾಣಸಿಗಲಾರದು.

ಮೇಲ್ನೋಟಕ್ಕೆ ಇವುಗಳ ವಾಸಸ್ಥಾನ ಒಂದು ಸಣ್ಣ ಗುಡ್ಡೆಯಂತೆ ಕಂಡರೂ, ನೆಲದಡಿಯಲ್ಲಿ ಇವುಗಳ ವಿಸ್ತಾರ ಮೀಟರ್‌, ಕಿಲೋಮೀರ್‌ಗಳಷ್ಟು ಹಬ್ಬಿರುತ್ತವೆ ಎಂದರೆ ನಂಬಲೇಬೇಕು. ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇರುವೆಗಳು ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತವೆ. ಪ್ರತ್ಯೇಕ ಕೋಣೆಗಳು, ಗ್ಯಾಲರಿಗಳ ನಿರ್ಮಾಣ ಮಾಡಿಕೊಂಡು ನಿರಂತರವಾಗಿ ತಮಗೆ ನಿಯೋಜಿಸಿದ ಕೆಲಸದಲ್ಲಿ ನಿರತರಾಗಿರುತ್ತವೆ.

ರಾಣಿ ಇರುವೆ ಈ ಸಾಮ್ರಾಜ್ಯದ ಕೇಂದ್ರ ಬಿಂದು. ಅವಳೊಬ್ಬಳೇ ಮುಂದಿನ ಪೀಳಿಗೆಗಾಗುವಷ್ಟು ಮೊಟ್ಟೆಯನ್ನು ಇಡುತ್ತಾಳೆ. ಈ ಮೊಟ್ಟೆಗಳನ್ನು ಕೆಲಸಗಾರರು ಹೊತ್ತೂಯ್ದು ಕಾಪಾಡಿಕೊಳ್ಳುತ್ತವೆ, ದಾದಿಯರು ಮೊಟ್ಟೆಗಳನ್ನು ಶುಚಿಗೊಳಿಸಿ, ಅವುಗಳ ಸಂಪೂರ್ಣ ಬೆಳವಣಿಗೆಗೆ ಶ್ರಮಿಸುತ್ತವೆ.

ಬೆಳೆದ ಮೊಟ್ಟೆಗಳನ್ನು ದಾದಿಗಳೇ ಕಕೂನ್‌ ಛೇಂಬರ್‌ಗೆ ವರ್ಗಾಯಿಸಿ ಅಲ್ಲೂ ಅವುಗಳ ಆರೈಕೆ ಮಾಡುತ್ತವೆ. ಮರಿ ಇರುವೆಗಳು ನಿದ್ರಾವಸ್ಥೆಯಲ್ಲಿರುವಾಗ ದಾದಿ ಇರುವೆಗಳು ಅವುಗಳನ್ನು ಗೂಡಿನ ಹೊರಭಾಗಕ್ಕೆ ಹೊತ್ತೂಯ್ಯುತ್ತವೆ. ಸೂರ್ಯನ ಶಾಖದಿಂದ ಕಕೂನ್‌ಗಳು ಒಡೆದು ಮರಿಗಳು ಹೊರ ಬರುತ್ತವೆ. ಹೊರ ಬಂದ ಅನಂತರ ತಮ್ಮ ತಮ್ಮ ಕೆಲಸಕ್ಕೆ ಹಾಜರ್‌. ಇಲ್ಲಿ ಸೋಂಬೇರಿಗಳು ಎಂಬ ಶಬ್ದವೇ ಇಲ್ಲ! ದಾದಿ ಇರುವೆಗಳು ಮರಿಗಳ ಶುಶ್ರೂಷೆ ಮಾಡಿದರೆ, ಸೈನಿಕ ಇರುವೆಗಳು ಗೂಡಿನ ಹೊರಭಾಗದಲ್ಲಿ ಕಾವಲು ಕಾಯುತ್ತವೆ. ಇನ್ನುಳಿದ ಇರುವೆಗಳು ಗೂಡನ್ನು ರಿಪೇರಿ ಮಾಡುವುದು, ಆಹಾರ ಸಂಗ್ರಹಿಸುವುದು ಹೀಗೆ ಸತತವಾಗಿ ತಮ್ಮನ್ನು ತೊಡಗಿಸಿಕೊಂಡಿರುತ್ತವೆ.

ಇರುವೆಗಳು ಶಿಸ್ತಿನ ಸಿಪಾಯಿಗಳು, ಇಲ್ಲಿ ಯಾರೊಬ್ಬರೂ ಸೋಂಬೇರಿಗಳಲ್ಲ. ತಮಗೆ ನಿಯೋಜಿಸಿದ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತವೆ. ತಮ್ಮ ಗುಂಪಿನ ಯಾವುದೇ ಇರುವೆ ಆರೋಗ್ಯ ತಪ್ಪಿದರೆ ಇರುವೆ ಶುಶ್ರೂಷೆ ಮಾಡುತ್ತವೆ. ಸತ್ತ ಇರುವೆಗಳನ್ನು ನೆಲದಲ್ಲಿ ಹುಗಿದು ಅದರ ಕೆಲಸವನ್ನು ಹಂಚಿಕೊಳ್ಳುತ್ತವೆ. ಇರುವೆಗಳು ಎಲ್ಲೇ ಹೋದರೂ, ಎಲ್ಲೇ ಬಂದರೂ ಒಂದು ಇನ್ನೊಂದಕ್ಕೆ “ನೀನೆಲ್ಲೊ ನಾನಲ್ಲೇ’ ಎಂದು ಹೇಳುತ್ತಾ ಒಂದಾಗಿಯೇ ಇರುತ್ತವೆ.

ಇನ್ನು ಯಾವುದಾದರೂಂದು ಇರುವೆ ಸತ್ತು ಹೋದರೆ ಅದನ್ನು ನೋಡಲು ಅದರ ಎಲ್ಲ ಕುಟುಂಬಸ್ಥ ಇರುವೆಗಳು ಬರುತ್ತವೆ. ಅವುಗಳನ್ನು ಹಾಗೆಯೇ ಬಿಡದೆ ಸತ್ತಿರುವ ಇರುವೆಯನ್ನು ಹೊತ್ತುಕೊಂಡು ಹೋಗುತ್ತವೆ.

ಇವೇನು, ಶವಸಂಸ್ಕಾರವನ್ನು ಮಾಡಿಬಿಡುವಂತೆ ಅನಿಸುತ್ತದೆ. ಇದನ್ನೆಲ್ಲ ನೋಡಿದರೆ ಒಗ್ಗಟ್ಟಿಗೆ ಇನ್ನೊಂದು ಹೆಸರೇ ಇರುವೆಗಳು ಎನ್ನಬಹುದು.

ಇರುವೆಗಳನ್ನು ನೋಡಿ ಕಲಿಯುವುದು ಬಹಳಷ್ಟಿದೆ. ಅವುಗಳ ಶಿಸ್ತು, ಒಗ್ಗಟ್ಟು ಮುಂತಾದ ಗುಣಗಳು ಮನುಷ್ಯರಲ್ಲಿ ಕಡಿಮೆ ಎನ್ನುವುದೇ ಬೇಸರದ ಸಂಗತಿ. ಇವುಗಳನ್ನೆಲ್ಲ ಬದುಕಿನಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಸುಂದರವಾಗಿರುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ದೀಕ್ಷಾ ಮಚ್ಚಂಡಿ

ವಿಜಯಪುರ

ಟಾಪ್ ನ್ಯೂಸ್

Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Transfer of four IPS officers; New SP for Raichur, Koppal

IPS Transfer: ಮತ್ತೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ; ರಾಯಚೂರು, ಕೊಪ್ಪಳಕ್ಕೆ ಹೊಸ ಎಸ್.ಪಿ

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

11-honnavara

Honnavara: ಭಾರೀ ಮಳೆ; ಹಲವು ಮನೆಗಳಿಗೆ ನೆರೆ ನೀರು

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.