ಚುನಾವಣಾಯುಕ್ತರ ಅವಧಿ ಕೊನೆ: ಇನ್ನೂ ಆಗದ ನೇಮಕ
ಹಾಲಿ ಆಯುಕ್ತ ಬಿ. ಬಸವರಾಜು ಇಂದು ನಿವೃತ್ತಿ
Team Udayavani, Jun 23, 2024, 6:19 AM IST
ಬೆಂಗಳೂರು: ರಾಜ್ಯ ಚುನಾವಣ ಆಯೋಗದ ಆಯುಕ್ತ ಡಾ| ಬಿ. ಬಸವರಾಜು ಅಧಿಕಾರವಧಿ ಜೂ. 23ರಂದು ಕೊನೆಗೊಳ್ಳಲಿದೆ. ಆದರೆ ಈವರೆಗೆ ನೂತನ ಆಯುಕ್ತರ ನೇಮಕ ಆಗಿಲ್ಲ.
ನಿಯಮದಂತೆ ಹಾಲಿ ಆಯುಕ್ತರ ಅವಧಿ ಮುಗಿಯುವ ಕೆಲವು ದಿನಗಳ ಮುಂಚಿತವಾಗಿ ನೂತನ ಆಯುಕ್ತರ ನೇಮಕಕ್ಕೆ ಪ್ರಸ್ತಾವನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯು ಮುಖ್ಯಮಂತ್ರಿಗೆ ಕಳುಹಿಸಿಕೊಡಬೇಕು. ಬಳಿಕ ಅದನ್ನು ರಾಜ್ಯಪಾಲರು ಅನುಮೋದಿಸಿ ನೇಮಕಾತಿ ಆದೇಶ ಹೊರಡಿಸುತ್ತಾರೆ. ಇಲ್ಲಿಯವರೆಗೆ ಪ್ರಕ್ರಿಯೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಚುನಾವಣ ಆಯುಕ್ತರ ಅಧಿಕಾರವಧಿ 5 ವರ್ಷ ಇರುತ್ತದೆ. ಈಗ ಹಾಲಿ ಆಯುಕ್ತ ಡಾ| ಬಿ.ಬಸವರಾಜು ಅವಧಿ ಜೂನ್ 23ಕ್ಕೆ ಕೊನೆಗಳ್ಳಲಿದೆ. ಡಾ| ಬಸವರಾಜು ತಮ್ಮ ಅವಧಿಯಲ್ಲಿ 2020ರಲ್ಲಿ ಗ್ರಾ.ಪಂ.ಗಳಿಗೆ ಸಾರ್ವತ್ರಿಕ ಚುನಾವಣೆ, 2021, 2022 ಹಾಗೂ 2023ರಲ್ಲಿ 7 ನಗರಪಾಲಿಕೆಗಳು ಸೇರಿದಂತೆ 100ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ 1,485 ಸ್ಥಾನಗಳಿಗೆ ಚುನಾವಣೆ ನಡೆಸಿದ್ದಾರೆ. ಬಿಬಿಎಂಪಿ ಹಾಗೂ ಜಿ.ಪಂ., ತಾ.ಪಂ. ಚುನಾವಣೆಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಅದು ನನೆಗುದಿಗೆ ಬಿದ್ದಿದೆ.
ನಿವೃತ್ತ ಐಎಎಸ್ ನೇಮಕ
ಸಾಮಾನ್ಯವಾಗಿ ಕರ್ನಾಟಕದ ಮೂಲದ ನಿವೃತ್ತ ಐಎಎಸ್ ಅಧಿಕಾರಿಗಳನ್ನು ರಾಜ್ಯ ಚುನಾವಣ ಆಯುಕ್ತರನ್ನಾಗಿ ನೇಮಿಸಲಾಗುತ್ತದೆ. ಅವಧಿ ಮುಕ್ತಾಯಗೊಳ್ಳುವುದೊರಳಗೆ ಮತ್ತೂಬ್ಬರ ನೇಮಕವಾಗುತ್ತದೆ. ಆದರೆ ಕೆಲವೊಮ್ಮೆ ಆಯುಕ್ತರ ಹುದ್ದೆಯನ್ನು ಖಾಲಿ ಇಟ್ಟದ್ದೂ ಇದೆ. ಈ ಹಿಂದಿನ ಆಯುಕ್ತರ ಅವಧಿ ಮುಗಿದು 5 ತಿಂಗಳ ಬಳಿಕ ಡಾ| ಬಸವರಾಜು ಅವರನ್ನು ಸರಕಾರ ನೇಮಿಸಿತ್ತು. ಅವರಿಲ್ಲದೆ ದೈನಂದಿನ ಆಡಳಿತಾತ್ಮಕ ವಿಷಯಗಳನ್ನು ಆಯೋಗದ ಕಾರ್ಯದರ್ಶಿ ನಿರ್ವಹಿಸಬಹುದು. ಆದರೆ ಚುನಾವಣೆಗಳ ಘೋಷಣೆ ಮತ್ತು ನಿರ್ವಹಣೆಗೆ ಆಯುಕ್ತರು ಇರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pen Drive Case 4 ತಿಂಗಳಿಗೊಮ್ಮೆ ಎಚ್ಐವಿ ಟೆಸ್ಟ್ ಮಾಡಿಸುತ್ತಿದ್ದ ಪ್ರಜ್ವಲ್?
Private Hospital ಡೆಂಗ್ಯೂ ಪರೀಕ್ಷೆಗೆ ಶುಲ್ಕ ನಿಗದಿ: ಸಚಿವ ದಿನೇಶ್
ಡಿಕೆಶಿ ಕಾಂಗ್ರೆಸ್ಗೆ ಕಾಲಿಡುವ ಮೊದಲೇ ನೋಟಿಸ್, ಉಚ್ಚಾಟನೆ ಎಲ್ಲಾ ನೋಡಿದ್ದೀನಿ…; ರಾಜಣ್ಣ
CM Siddaramaiah ರೈತರಿಗೆ ನಿತ್ಯ 5 ಕೋಟಿ ರೂ. ಪ್ರೋತ್ಸಾಹ ಧನ
KMF ಹಾಲಿನ ಹೊಳೆ: ನಿತ್ಯ 1 ಕೋಟಿ ಲೀಟರ್!-ಕೆಎಂಎಫ್ ಇತಿಹಾಸದಲ್ಲೇ ದಾಖಲೆ ಕ್ಷೀರ ಸರಬರಾಜು
MUST WATCH
ಹೊಸ ಸೇರ್ಪಡೆ
Hathras stampede;‘ಸತ್ಸಂಗ’ದ ವೇಳೆ ಕಾಲ್ತುಳಿತ : ಮೃತರ ಸಂಖ್ಯೆ 116ಕ್ಕೆ
Barbados; ಮತ್ತೊಂದು ಚಂಡಮಾರುತದ ಸೂಚನೆ; ಭಾರತ ತಂಡ ಇಂದು ರಾತ್ರಿ ಆಗಮನ?
Dakshina Kannada: ಅಕ್ರಮ ಆಸ್ತಿ ಗಳಿಕೆ ಪ್ರಕರಣ; ನಿವೃತ್ತ ಕಮಾಂಡೆಂಟ್ ದೋಷಮುಕ್ತ
Agriculture: ಭತ್ತದ ಕೃಷಿಗೆ ಯಂತ್ರವೂ ಸಿಗುತ್ತಿಲ್ಲ, ಕಾರ್ಮಿಕರೂ ಬರುತ್ತಿಲ್ಲ
Manipal: ಅನಾಮಧೇಯ ಆ್ಯಪ್ ಡೌನ್ಲೋಡ್ ಮಾಡಿ ವಂಚನೆಗೊಳಗಾದ ಮಹಿಳೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.