![police crime](https://www.udayavani.com/wp-content/uploads/2024/07/police-crime-2-415x256.jpg)
Zambia: ಸಫಾರಿ ವಾಹನದಿಂದ ಮಹಿಳೆಯನ್ನು ಹೊರಗೆಳೆದು ಹತ್ಯೆ ಮಾಡಿದ ಆನೆ!
Team Udayavani, Jun 23, 2024, 10:52 AM IST
![Elephant In Zambia Pulls US Tourist Out Of Safari Vehicle](https://www.udayavani.com/wp-content/uploads/2024/06/zambia-620x342.jpg)
ಜಾಂಬಿಯಾ: ಭಯಾನಕ ಘಟನೆಯೊಂದರಲ್ಲಿ, ಆನೆಯೊಂದು ಸಫಾರಿ ಡ್ರೈವ್ ನಲ್ಲಿದ್ದ ನ್ಯೂ ಮೆಕ್ಸಿಕೋದ ಯುಎಸ್ ಪ್ರವಾಸಿಯೊಬ್ಬರ ಮೇಲೆ ದಾಳಿ ಮಾಡಿದ ಘಟನೆ ಜಾಂಬಿಯಾದಲ್ಲಿ ನಡೆದಿದೆ. ಘಟನೆಯಲ್ಲಿ ಆನೆ ದಾಳಿಗೊಳಗಾದ ಮಹಿಳೆ ಸಾವನ್ನಪ್ಪಿದ್ದಾರೆ.
ಆನೆಯು ಜೂಲಿಯಾನಾ ಗ್ಲೆ ಟೂರ್ನೊ (64) ಅವರನ್ನು ವಾಹನದಿಂದ ಹೊರಗೆಳೆದು ತುಳಿದಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಲಿವಿಂಗ್ಸ್ಟೋನ್ ನ ಮರಾಂಬ ಸಾಂಸ್ಕೃತಿಕ ಸೇತುವೆ ಬಳಿ ಆನೆ ಹಿಂಡಿನ ಕಾರಣದಿಂದ ಸಫಾರಿ ಗುಂಪು ವಾಹನ ನಿಲ್ಲಿಸಿದಾಗ ಘಟನೆ ಸಂಭವಿಸಿದೆ.
ಗಾಯಗೊಂಡ ಮೋಸಿ-ಓ-ತುನ್ಯಾ ರಾಷ್ಟ್ರೀಯ ಉದ್ಯಾನವನದ ಕ್ಲಿನಿಕ್ ಗೆ ಕರೆದೊಯ್ಯಲಾಯಿತು. ಆದರೆ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಪೊಲೀಸ್ ಹೇಳಿಕೆಯ ಪ್ರಕಾರ, ಆಕೆಯ ಬಲ ಭುಜ ಮತ್ತು ಹಣೆಯ ಮೇಲೆ ಆಳವಾದ ಗಾಯಗಳಾಗಿದೆ, ಎಡ ಪಾದ ಮುರಿತವಾಗಿದೆ.
ಉಗ್ರಗೊಂಡ ಆನೆಯ ದಾಳಿಯಿಂದ ಬೇರೆ ಯಾವುದೇ ಪ್ರವಾಸಿಗರು ಗಾಯಗೊಂಡಿದ್ದಾರೆಯೇ ಎನ್ನುವ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.
ಈ ದುರಂತ ಘಟನೆಯು ಈ ವರ್ಷ ಜಾಂಬಿಯಾದಲ್ಲಿ ಯುಎಸ್ ಪ್ರವಾಸಿಗರ ಮೇಲೆ ಎರಡನೇ ಮಾರಣಾಂತಿಕ ಆನೆ ದಾಳಿಯಾಗಿದೆ. ಮಾರ್ಚ್ ನಲ್ಲಿ ಮಿನ್ನೇಸೋಟದ ಗೇಲ್ ಮ್ಯಾಟ್ಸನ್ ಎಂಬ 79 ವರ್ಷದ ಮಹಿಳೆ ಜಾಂಬಿಯಾದ ಕಾಫ್ಯೂ ನ್ಯಾಷನಲ್ ಪಾರ್ಕ್ನಲ್ಲಿ ಗೇಮ್ ಡ್ರೈವ್ ನಲ್ಲಿ ಇದೇ ರೀತಿಯ ಘಟನೆಯಲ್ಲಿ ಸಾವನ್ನಪ್ಪಿದ್ದರು. ಆನೆಯೊಂದು ದಾಳಿ ಮಾಡಿ ಟ್ರಕನ್ನು ಉರುಳಿಸಿತ್ತು.
ಟಾಪ್ ನ್ಯೂಸ್
![police crime](https://www.udayavani.com/wp-content/uploads/2024/07/police-crime-2-415x256.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![police crime](https://www.udayavani.com/wp-content/uploads/2024/07/police-crime-2-150x92.jpg)
Jammu; ಶಿವನ ದೇವಾಲಯ ಧ್ವಂಸ: 43 ಆರೋಪಿಗಳ ಬಂಧನ
![1-dssd](https://www.udayavani.com/wp-content/uploads/2024/07/1-dssd-150x101.jpg)
Heavy Rain; ಜುಲೈ 5 ರಂದು ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ
![1-wewqewqe](https://www.udayavani.com/wp-content/uploads/2024/07/1-wewqewqe-150x101.jpg)
Rajasthan; ಮೋದಿಗೆ ಕೊಟ್ಟ ಭರವಸೆ ಈಡೇರದ್ದಕ್ಕೆ ಪ್ರಭಾವಿ ಸಚಿವ ರಾಜೀನಾಮೆ
![1-sa-dsadsa](https://www.udayavani.com/wp-content/uploads/2024/07/1-sa-dsadsa-150x84.jpg)
Mangaluru; ಮಣ್ಣುಕುಸಿತದಿಂದ ಸಾವನ್ನಪ್ಪಿದ ಕಾರ್ಮಿಕನ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ
![Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು](https://www.udayavani.com/wp-content/uploads/2024/07/kollur-150x93.jpg)
Kollur: ಸೊಸೈಟಿಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.