![police crime](https://www.udayavani.com/wp-content/uploads/2024/07/police-crime-2-415x256.jpg)
Hubli; ಆಕಾಶ್ ಕೊಲೆಯ ಸತ್ಯಾಸತ್ಯತೆ ಪೊಲೀಸರು ಹೊರತರಲಿ: ಮಹೇಶ ಟೆಂಗಿನಕಾಯಿ
Team Udayavani, Jun 23, 2024, 1:23 PM IST
![Hubli; Let the police bring out the truth about Akash case: Mahesh Tenginakai](https://www.udayavani.com/wp-content/uploads/2024/06/mahesh-1-620x342.jpg)
ಹುಬ್ಬಳ್ಳಿ: ಆಟೋ ರಿಕ್ಷಾ ಸಂಘದ ಅಧ್ಯಕ್ಷನ ಮಗನ ಕೊಲೆ ನಿನ್ನೆ ನಡೆದಿದೆ. ಆದರೆ ಪೊಲೀಸರು ಕೊಲೆಯ ಬಗ್ಗೆ ಇನ್ನೂ ಸ್ಪಷ್ಟತೆ ಪಡಿಸಿಲ್ಲ. ಆದರೆ ಶೇಖರಯ್ಯ ಮಠಪತಿ ತನ್ನ ಮಗನ ಕೊಲೆಯಾಗಿದೆ ಎಂದು ದೂರು ನೀಡಿದ್ದಾರೆ. ಈ ಕುರಿತ ಸತ್ಯಾಸತ್ಯೆಯನ್ನು ಪೊಲೀಸರು ಹೊರತರಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಕಿಮ್ಸ್ ಶವಾಗಾರಕ್ಕೆ ಭೇಟಿಕೊಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ ಪೊಲೀಸರ ಜೊತೆಗೆ ಮಾತನಾಡಿದಾಗ ತಲೆ ಭಾಗಕ್ಕೆ ಗಾಯವಾಗಿದೆ ಎಂದು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ನಿಜಾಂಶ ಹೊರಬರಲಿದೆ. ಕೊಲೆ ಆಗಿದ್ದರೆ ಪೊಲೀಸ್ ಇಲಾಖೆ ಸಂಪೂರ್ಣ ತನಿಖೆ ಮಾಡಬೇಕು. ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಅವರೆಲ್ಲರನ್ನು ಬಂಧಿಸಬೇಕು. ಈ ರೀತಿಯ ಘಟನೆಗಳು ನಡೆಯಬಾರದು ಎಂದರು.
ಹುಬ್ಬಳ್ಳಿ-ಧಾರವಾಡದಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ಮರುಕಳಿಸುತ್ತಿವೆ. ಕಾನೂನು ಸುವ್ಯವಸ್ಥೆ ತಹಬದಿಗೆ ತರುವ ಕಾರ್ಯ ಪೊಲೀಸರು ಮಾಡಬೇಕು. ಅವಳಿ ನಗರದಲ್ಲಿ ಮಾದಕವಸ್ತು ಹಾವಳಿ ಹೆಚ್ಚಾಗಿದೆ. ಇದನ್ನು ತಡೆಗಟ್ಟಬೇಕೆಂದು ನಾವು ಎರಡು ತಿಂಗಳ ಹಿಂದೆಯೇ ಅಭಿಯಾನ ಆರಂಭಿಸಿದ್ದೇವೆ ಎಂದರು.
ಪ್ರತಿಭಟನೆ: ಆಕಾಶ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಿಮ್ಸ್ನ ಶವಾಗಾರ ಮುಂಭಾಗ ಆಟೋರಿಕ್ಷಾ ಚಾಲಕರ ಸಂಘದವರು ಪ್ರತಿಭಟನೆ ನಡೆಸಲು ಮುಂದಾದರು. ಆಕಾಶನ ಸಾವಿಗೆ ನ್ಯಾಯ ಕೊಡಿಸುವಂತೆ ಶವಾಗಾರದ ಮುಂದೆ ಜಮಾಯಿಸಿದ ನೂರಾರು ಆಟೋ ಚಾಲಕರು ಘೋಷಣೆ ಕೂಗಿದರು.
ಈ ವೇಳೆ ಪ್ರತಿಭಟನೆ ಕೈಬಿಡುವಂತೆ ಪ್ರತಿಭಟನಾಕಾರರಿಗೆ ಪೊಲೀಸರು ಮನವಿ ಮಾಡಿದರು. ಆಗ ನ್ಯಾಯ ದೊರಕಿಸಿಕೊಡಿ ಎಂದು ಆಟೋರಿಕ್ಷಾ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಹನಮಂತಪ್ಪ ಪವಾಡಿ ಪೊಲೀಸ್ ಇನ್ಸಪೆಕ್ಟರ್ ಕಾಲಿಗೆ ಬಿದ್ದು ಅಂಗಲಾಚಿದರು.
ಘಟನೆ ನಡೆದಿರುವ ಸುದ್ದಿ ತಿಳಿದ ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ನಮ್ಮ ಮೇಲೆ ಭರವಸೆ ಇಡಿ. ಅವನು ನಮ್ಮ ಮಗನಿದ್ದಂತೆ. ಸಾವಿಗೆ ಸೂಕ್ತ ನ್ಯಾಯ ಕೊಡಿಸುವುದಾಗಿ ಎಸಿಪಿಗಳಾದ ವಿನೋದ ಮುಕ್ತೆದಾರ ಮತ್ತು ಶಿವಪ್ರಕಾಶ ನಾಯ್ಕ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆದುಕೊಂಡರು.
ಟಾಪ್ ನ್ಯೂಸ್
![police crime](https://www.udayavani.com/wp-content/uploads/2024/07/police-crime-2-415x256.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-sa-dsadsa](https://www.udayavani.com/wp-content/uploads/2024/07/1-sa-dsadsa-150x84.jpg)
Mangaluru; ಮಣ್ಣುಕುಸಿತದಿಂದ ಸಾವನ್ನಪ್ಪಿದ ಕಾರ್ಮಿಕನ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ
![ಎಕ್ಕಾರು ಪಂಚಾಯತ್ ಸ್ಥಿತಿ ; ಗ್ರಾಪಂ ಕಟ್ಟಡವೇ ಸೋರಿಕೆ, ಪ್ಲಾಸಿಕ್ ಹೊದಿಕೆ!](https://www.udayavani.com/wp-content/uploads/2024/07/Bajape-1-150x69.jpg)
ಎಕ್ಕಾರು ಪಂಚಾಯತ್ ಸ್ಥಿತಿ ; ಗ್ರಾಪಂ ಕಟ್ಟಡವೇ ಸೋರಿಕೆ, ಪ್ಲಾಸಿಕ್ ಹೊದಿಕೆ!
![9-Bantwala](https://www.udayavani.com/wp-content/uploads/2024/07/9-Bantwala-150x90.jpg)
Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್
![6-belthangady](https://www.udayavani.com/wp-content/uploads/2024/07/6-belthangady-150x90.jpg)
Belthangady: ಉತ್ತಮ ಮಳೆ; ತೆಂಕಾರಂದೂರು ದೇವಸ್ಥಾನದ ಆವರಣದ ತಡೆ ಗೋಡೆ ಕುಸಿತ
![3-holiday](https://www.udayavani.com/wp-content/uploads/2024/07/3-holiday-150x90.jpg)
Heavy Rain: ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.